UV Fusion: ತೇರು ಬೀದಿಗೆ ಬಂದಿದೆ


Team Udayavani, Apr 27, 2024, 3:41 PM IST

18-

ಚಕ್ರದ ಅನ್ವೇಷಣೆಯನ್ನು ಮಾಡಿದ ಆದಿಮಾನವ ಅನುಕೂಲಕ್ಕೆ ಬಂಡಿಗಳನ್ನು ಬಳಸತೊಡಗಿದ. ಅನಂತರ ಬಳಕೆಗೆ ಬಂದದ್ದು ರಥ. ಪರಿಕಲ್ಪನೆ ನಾಗರಿಕತೆಯಷ್ಟೇ ಪುರಾತನ. ಯುದ್ಧ‌, ಕ್ರೀಡೆ, ಯಾತ್ರೆ, ಪ್ರವಾಸಕ್ಕೆ, ಮೆರವಣಿಗೆಗೆ ರಥದ ಬಳಕೆಯಾಗತೊಡಗಿತು. ಸದ್ಯಕ್ಕೆ ಉತ್ಸವಾದಿಗಳ ಆಚರಣೆಯಲ್ಲಿ ರಥವು ಬಳಕೆಯಲ್ಲಿದೆ. ರಥಬೀದಿಯಲ್ಲಿ ಸಿಂಗಾರಗೊಂಡ ತೇರು ಉತ್ಸವಮೂರ್ತಿಯನ್ನು ಹೊತ್ತು ಸಾಗುವಾಗ ಹೊಮ್ಮುವ ಭಗವನ್ನಾಮದ ವಿದ್ಯುತ್‌ ಸಂಚಾರ ಜಾತ್ರೆಯ ಅಮೋಘ ಕ್ಷಣಗಳಲ್ಲೊಂದು.

ದೇವಾಲಯಗಳ ಉತ್ಸವ ಬೇಸಗೆಗೆ ಸಾಲುಸಾಲಾಗಿ ಬರುತ್ತಿವೆ. ರಥಗುಡ್ಡೆಗಳು ತೇರಮನೆಯಿಂದ ನೇರವಾಗಿ ರಥಬೀದಿಯ ಮೂಲೆ ಯಲ್ಲಿ ನಿಂತು ಸಿಂಗರಿಸಲು ಅಣಿಯಾಗಿವೆ. ರಥ ನಿರ್ಮಾಣ ವೈಶಿಷ್ಟ್ಯವನ್ನು ಹೊಂದಿರುವ ಗಾಂಭೀರ್ಯದ ಶಾಸ್ತ್ರ. ತೇರಿಗೆ ಗಾಲಿಗಳು, ಗಾಲಿಗಳು ರಥಗಡ್ಡೆಗೆ ಅಂಟಿಕೊಂಡರೆ, ಗಡ್ಡೆಯಮೇಲೆ ಅಟ್ಟೆಯ ಮಂಟಪ, ಮಂಟಪದ ಮೇಲೆ ಪತಾಕೆಯ ಗುಂಡನೆಯ ಗೋಪುರ, ಅದರ ಮೇಲೆ ಮುಕುಟ. ಇವಿಷ್ಟು ರಥವನ್ನು ಕಲ್ಪಿಸಿಕೊಂಡರೆ ಕಣ್ಣಿಗೆ ಕಟ್ಟುವ ಆಕೃತಿಗಳು.

ರಥಶಾಲೆಯಿಂದ ಹೊರಬಂದ ರಥಕಟ್ಟೆ-ಗುಡ್ಡೆಗೆ ಉದ್ದನೆಯ ಕಂಬಗಳನ್ನು ಹುಗಿದು ಬಿದಿರಿನ ಸಹಾಯದಿಂದ ಗೂಡನ್ನು ನಿರ್ಮಿಸುತ್ತಾರೆ. ದಿನ ಸಾಗುತ್ತಿದ್ದಂತೆ ಗೋಲಾಕಾರದ ಗೂಡು ಸಿದ್ಧವಾಗುತ್ತದೆ. ಇದಕ್ಕೆ ಅಡ್ಡಡ್ಡವಾಗಿ ಜಂತಿಗಳನ್ನು ಕಟ್ಟಿ ದರೆ ಪಂಜರದಂತಹ ಅಟ್ಟೆ ಸಿದ್ಧ. ಬಿದಿರಿನ ಕೋಲಿಗೆ ಸಿಕ್ಕಿಸಿದ ಪತಾಕೆಗಳನ್ನು ಈ ವರ್ತುಲದ ಪಂಜರಕ್ಕೆ ಕ್ರಮವಾಗಿ ಜೋಡಿಸಿ ಗೋಪುರವನ್ನು ಸಿಂಗರಿಸುತ್ತಾರೆ. ಇಂತಹ ಸಾವಿರಾರು ಪತಾಕೆ ಗಳನ್ನು ಜತನ-ಜಾಗರೂಕತೆಯಿಂದ ಕಟ್ಟುವುದು ಬಹಳ ನಾಜೂಕಿನ ಕೆಲಸ. ಪತಾಕೆಗಳು ಕೆಂಪು, ಬಿಳಿಯ ವಸ್ತ್ರದವುಗಳು.

ತೇರಿನ ಗೋಪುರವು ಕೆಂಪು-ಬಿಳಿಯ ಕ್ರಮಬದ್ಧ ವರ್ಣದಿಂದ ನೋಡುಗರನ್ನು ಸೆಳೆಯುತ್ತದೆ. ಕೆಲಕಡೆಗಳಲ್ಲಿ ಗೋಪುರದ ಪಂಜರಕ್ಕೆ ಬಟ್ಟೆಯನ್ನು ಹೊಡೆಸುವ ವಿಧಾನವೂ ಬಳಕೆಯಲ್ಲಿದೆ. ದಿನಕಳೆದಂತೆ ಕಾಷ್ಠ ಗುಡ್ಡೆಯು ಬ್ರಹ್ಮರಥವಾಗಿ ಮೈದಳೆಯುವ ವಿಧಾನ ಬಹು ರೋಮಾಂಚಕ.

ತೇರಿನ ಗಡ್ಡೆ ಸಾಮಾನ್ಯವಾಗಿ ಚೌಕ,  ನಕ್ಷತ್ರ, ಕಮಲ, ದ್ವಾದಶ, ವರ್ತುಲಾಕೃತಿಯಲ್ಲಿರುತ್ತವೆ.  ಗಡ್ಡೆಯ ಹೊರಮೈಸುತ್ತಲೂ ನವಗ್ರಹ, ದಶಾವತಾರ, ಕಿನ್ನರ, ದ್ವಾರಪಾಲಕ, ಗಂಧರ್ವ, ದೇವತೆ, ಗಜಸಿಂಹ, ಕುಂಜರ, ಮಕರ, ನಾಗ, ಹನುಮಂತ, ಗರುಡ, ಪ್ರಾಣಿಪಕ್ಷಿ, ಹೀಗೆ ಹಲವಾರು ಬಗೆಯ ಕುಸುರಿ ಕೆತ್ತನೆ ಕಂಡು ಬರುತ್ತದೆ. ತೇರಿಗೆ ನಾಲ್ಕು, ಆರು ಚಕ್ರಗಳ ಬಳಕೆಯಿದೆ. ಪುರಿಯ ಜಗನ್ನಾಥನ ರಥಕ್ಕೆ ಹದಿನಾರು ಚಕ್ರಗಳು.

ರಥಕಟ್ಟುವ ಕೆಲಸ ಬಹಳ ನಾಜೂಕಿನ ಕೆಲಸ. ಕೌಶಲಯುಕ್ತ ಕಾರ್ಯವೂ ಹೌದು. ಕೆಲವು ಕಡೆ ಕೇವಲ ಹಗ್ಗದಿಂದ, ಬೆತ್ತದಿಂದ ರಥಕಟ್ಟುವ ಕಾಯಕ ಚಾಲ್ತಿಯಲ್ಲಿದೆ.  ಕಾರ್ಮಿಕರ ಅಭಾವದಿಂದ ಬಹಳ ಕಡೆಗಳಲ್ಲಿ ಕಬ್ಬಿಣದ ಗ್ರಿಲ್ಸ್‌ಗಳು ಶಿಖರದ ಬಿದಿರನ್ನು ಆಕ್ರಮಿಸಿಕೊಂಡಿವೆ. ಬೋಲ್ಟಾಗಳ ಜೋಡಣೆಯಲ್ಲಿ ಅರ್ಧದಿನಕ್ಕೇ ರಥ ಶಿಖರದ ಮೆರುಗನ್ನು ಹೊಂದುತ್ತದೆ. ರಜತ-ಸ್ವರ್ಣ ರಥಗಳ ನಡುವೆಯೂ ಮರದ ಗಡ್ಡೆಯ ರಥಗಳು ಜಾತ್ರೆಯ ಸೊಬಗನ್ನು, ವಿಜೃಂಭಣೆಯ ಮೆರುಗನ್ನು, ಆರಾಧನೆಯ ಉತ್ಸಾಹವನ್ನು ಹೆಚ್ಚಿಸಿವೆ.

- ವಿಶ್ವನಾಥ ಭಟ್‌

ಧಾರವಾಡ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

Ganesh Chaturthi: ಗಣೇಶ ಬಂದ

14-wayanad

Wayanad: ವಯನಾಡಿನ ಪ್ರಕೃತಿ ವಿಕೋಪ ಮತ್ತು ಮಾನವೀಯತೆ

13-

UV Fusion: ಅನಾಹುತಕಾರಿ ಮಾನವ

11

UV Fusion: ನಮ್ಮ ಔನ್ನತ್ಯವನ್ನು ನಾವೇ ನಿರ್ಧರಿಸಬೇಕಲ್ಲವೇ?

10-

Childhood: ಈ ಬಾಲ್ಯ ಮತ್ತೊಮ್ಮೆ ಮರುಕಳಿಸಬಾರದೇ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.