Tulunadu Culture: ಕಣ್ಮರೆಯಾಗುತ್ತಿರುವ ತುಳುನಾಡಿನ ದೈವಾರಾಧನೆ ಸಂಸ್ಕೃತಿ
Team Udayavani, Jun 5, 2024, 5:15 PM IST
ಕರಾವಳಿ ಭಾಗದಲ್ಲಿರುವ ದೈವಾರಾಧನೆಗೆ ಅನೇಕ ವರ್ಷಗಳ ಇತಿಹಾಸವಿದ್ದು, ಅದರದೇ ಆದ ಅನೇಕ ವಿಚಾರಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇದು ತುಳುನಾಡಿನ ಜನರ ಸಂಪ್ರದಾಯವಾಗಿದ್ದು, ಎಲ್ಲ ಭಕ್ತರಿಗೂ ನಂಬಿಕೆ, ಭಕ್ತಿ, ಗೌರವ ಅವರ ಮುಗ್ಧ ಮನಸಿನಲ್ಲಿ ಕಣ್ಣನೋಟದಲ್ಲಿ ಕಾಣಿಸುತ್ತದೆ.
ತುಳುನಾಡಿನ ಜನರು ಸಮಸ್ಯೆ ಅಥವಾ ಇತರ ಯಾವುದೇ ತೊಂದರೆಗಳು ಎದುರಾದರೆ ಅದನ್ನು ಪರಿಹರಿಸಲು ಮೊದಲು ಬೇಡುವುದು ದೈವ- ದೇವರನ್ನು.
ಇತ್ತೀಚಿನ ದಿನಗಳಲ್ಲಿ ನಮ್ಮ ಈ ಒಂದು ಸಂಸ್ಕೃತಿ ನಶಿಸಿ ಹೋಗುತ್ತಿದೆ. ನಮ್ಮವರೇ ನಮ್ಮ ಸಂಸ್ಕೃತಿಯನ್ನು ಹಾಳುಮಾಡುತ್ತಿದ್ದು, ತುಳುನಾಡಿನ ಜನತೆಗೆ ಇದು ಬೇಸರ ಹಾಗೂ ಅವಮಾನವನ್ನು ಉಂಟುಮಾಡಿದೆ. ಒಂದಾನೊಂದು ಕಾಲದಲ್ಲಿ ದೈವದ ಹೆಸರನ್ನು ಹೇಳಲು ಭಯಪಡುತ್ತಿದ್ದೆವು.
ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ದೈವರಾಧನೆ ಯಾವ ಮಟ್ಟಕ್ಕೆ ಹೋಗಿದೆಯೆಂದರೆ ರಸ್ತೆಯ ಮೆರವಣಿಗೆಯಲ್ಲಿ, ಶಾಲಾ-ಕಾಲೇಜುಗಳಲ್ಲಿ ಛದ್ಮವೇಷ ಹಾಕುವುದರ ಮೂಲಕ, ಕೆಲವು ನಾಟಕ, ಸಿನೆಮಾಗಳು ಹಾಗೂ ದೈವಾರಾಧನೆಯ ವಿಷಯದಲ್ಲಿ ಅಪಪ್ರಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಕಂಡುಬರುತ್ತಿವೆ. ಕೇವಲ ಅಷ್ಟಲ್ಲದೇ ರಿಮೋಟ್ ಕಂಟ್ರೊಲ್ ಗೊಂಬೆಯಾಗಿ ಮಾಡಿ ಪ್ರದರ್ಶಿಸುವ ಮಟ್ಟಿಗೆ ತುಳುನಾಡಿನ ದೈವಾರಾಧನೆ ಸಂಸ್ಕೃತಿಯು ನಾಶವಾಗುವ ಪರಿಸ್ಥಿತಿಯನ್ನು ತಲುಪುತ್ತಾ ಇದೆ.
ಉದಾಹರಣೆಯ ಮೂಲಕ ಹೇಳುವುದಾದರೆ ಕಾಂತಾರ ಸಿನೆಮಾದಲ್ಲಿ ತುಳುನಾಡಿನ ದೈವಾರಾಧನೆ ಬಗ್ಗೆ ತಿಳಿಯಲಿ, ಜನರಿಗೂ ಮಾಹಿತಿ ಸಿಗಲೆಂಬ ಕಾರಣಕ್ಕೆ ಸಿನೆಮಾವನ್ನು ಮಾಡಿದ್ದಾರೆ. ಆದರೆ ಇದರ ಅನಂತರ ರೀಲ್ಸ್, ವೀಡಿಯೋ, ದೈವಗಳ ಪೇಜ್ಗಳನ್ನು ಬಳಸುತ್ತಿದ್ದಾರೆ.
ಹೀಗೆ ಮುಂದುವರಿದರೆ ದೈವಾರಾಧನೆ ಸಂಸ್ಕೃತಿಯು ಯುವಪೀಳಿಗೆಗೆ ಅರಿವಿಗೆ ಬಾರದೆ ಹೋಗಬಹುದು. ಇನ್ನಾದರು ಎಚ್ಚೆತ್ತುಕೊಳ್ಳೋಣ. ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಗೌರವ ನೀಡಿ. ತುಳುನಾಡಿನ ದೈವಾರಾಧನೆಯನ್ನು ಉಳಿಸುವ ಪ್ರಯತ್ನ ಮಾಡೋಣ.
-ರಶ್ಮಿತಾ ಎನ್.
ಎಂ.ಪಿ.ಎಂ. ಕಾಲೇಜು ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
MUDA; ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್
Hubli: ರಾಡ್ ಬಿದ್ದು ಎಎಸ್ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.