ಅರಿವಿನ ಕಿಡಿ ಹಚ್ಚಿದ ಕರುಣಾಮಯಿ ಗುರು


Team Udayavani, Oct 28, 2020, 3:08 PM IST

Teacher

ಬದುಕು ಒಂದು ರೀತಿಯಲ್ಲಿ ಚಲಿಸುವ ಬಂಡಿ ಇದ್ದಂತೆ. ಬಂಡಿಗೆ ಚ‌ಕ್ರಗಳೂ ಹೇಗೆ ಮುಖ್ಯವೋ ಹಾಗೇ ಒಬ್ಬ ವ್ಯಕ್ತಿಯ ಬದುಕನ್ನು ನಿರ್ಮಿಸುವ ಕಾಯಕದಲ್ಲಿ ಗುರುವೂ ಅಷ್ಟೇ ಮುಖ್ಯ.

ಸಾಮಾನ್ಯವಾಗಿ ಮುಖ ಮತ್ತು ಕೈಗಳನ್ನು ನೋಡಿ ಭವಿಷ್ಯ ನುಡಿದವರನ್ನು ಹಲವಾರು ಮಠ-ಮಾನ್ಯಗ‌ಳಲ್ಲಿ ನಾವು, ನೀವು ಕಾಣುವುದು ಸಹಜ. ಆದರೆ ವಿದ್ಯಾ ಮಂದಿರದಲ್ಲಿ ಶಿಷ್ಯರ ಮನಸ್ಸಿನ ಅಂತರಾಳದಲ್ಲಿ ಇಣುಕಿ ನೋಡಿ ಭವಿಷ್ಯ ನುಡಿಯುವ ಏಕೈಕ ವ್ಯಕ್ತಿ ಎಂದರೆ ಗುರು.

ನಾವೆಯನ್ನು ನಡೆಸಲು ನಾವಿಕ ಹೇಗೆ ಅತೀ ಅವಶ್ಯವೋ ಹಾಗೆಯೇ ಶಿಷ್ಯನ ಬದುಕು ನಿರ್ಮಿಸಲೂ ಗುರುವು ಅತೀ ಮುಖ್ಯ. ಹರ ಮುನಿದರೂ ಗುರು ಕಾಯುವ ಎಂಬ ವಾಣಿಯನ್ನು ನಾವು ನೀವು ಎಲ್ಲೋ ಕೇಳಿದ್ದುಂಟು. ನಮ್ಮ ತಪ್ಪುಗಳನ್ನು ಶಿವ (ಹರ) ಒಂದು ಕ್ಷಣ ಮನ್ನಿಸಲಾರ ಆದರೆ ಗುರು ಎಂದೆಂದಿಗೂ ಮನ್ನಿಸುವಂತಹ ಮಹಾ ಕರುಣಾಮಯಿ ಎಂದು ಹೇಳಬಹುದು.

ಮಕ್ಕಳ ಕಲಿಕೆಯ ಹಸಿವನ್ನು ನೀಗಿಸಲು ಅರಿವೆಂಬ ಬೀಜವನ್ನು ತುತ್ತಿನ ಮುಖಾಂತರ ಉಣ ಬಡಿಸುವವನೆ ಗುರು ಆದುದರಿಂದ ಈ ನಾಡಿನಲ್ಲಿ ಗುರುವನ್ನು ಮಹಾದೇವ ಎಂದೂ ಕರೆಯುವುದುಂಟು.

“ಅರಿವೇ ಗುರು’ ಎಂಬ ಮಾತನ್ನ ಹಿಂದಿನಿಂದಲೂ ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ಆ ಮಾತಿನ ಮೂಲ ತಿರುಳು ಮನುಷ್ಯನ ಬದುಕಲ್ಲಿ ಅರಿವಿನ ಕಿಡಿ ಹಚ್ಚಿ ಬೋಧನೆ ಮಾಡುತ್ತಿರುವ ಏಕೈಕ ಕರುಣಾಮಯಿ ಅಂದರೆ ಗುರು. ಪ್ರತಿಯೊಬ್ಬನ ಯಶಸ್ಸಿನ ಹಿಂದೆ ಒಬ್ಬ ಗುರುವಿನ ಮಾರ್ಗದರ್ಶನ ಇದ್ದೆ ಇರುತ್ತದೆ ಎಂಬುದಕ್ಕೆ ನನ್ನ ಒಂದು ಉದಾಹರಣೆ ಸಾಕ್ಷಿ.

ಈ ಪ್ರಪಂಚದಲ್ಲಿ ವಿದ್ಯೆ ಕಲಿಸಿದ ಎಲ್ಲರನ್ನೂ ನಾವು ಗುರು ಎಂದೂ ಅಂದುಕೊಂಡಿದ್ದೇವೆ. ಆದರೆ ಅವರಲ್ಲೂ ಒಬ್ಬ ಆದರ್ಶ ಗುರು ಎಂದು ಆಯ್ಕೆ ಮಾಡಿ ಅವರನ್ನು ನಮ್ಮ ಜೀವನದ ರುವಾರಿ ಎಂದು ಸದಾ ಸ್ಮರಿಸುತ್ತೇವೆ ಅಲ್ಲವೇ…? ಅಂತವರಲ್ಲಿ ನನ್ನ ಜೀವನದ ಪುಟವನ್ನ ಓದಿದವರು ನಾನು ಕಲಿತ ಕಲಘಟಗಿಯ ಗುಡ್‌ ನ್ಯೂಸ್‌ ಮಹಾವಿದ್ಯಾಲಯದ ರಾಜ್ಯಶಾಸ್ತ್ರದ ಗುರು ಗಳು ಅವರ ಹೆಸರಿನಲ್ಲಿಯೇ ವಿದ್ಯಾರ್ಥಿಗಳು ವಿಜಯವನ್ನು ಕಂಡಿದ್ದುಂಟು. ಅವರೇ ಪ್ರೊ| ವಿಜಯ ಬೆಟಗಾರ.

ಅದೇನೋ ಗೊತ್ತಿಲ್ಲ, ಅವರ ಪರಿಚಯ ನನ್ನ ಜೀವನದ ಅದ್ಭುತ ದಿನಗಳೆಂದು ಹೇಳಬಹುದು. 2014ರಲ್ಲಿ ಅದೂ 3 ವರ್ಷಗಳ ಅಂತರದ ಬಳಿಕ ಮತ್ತೆ ವಿದ್ಯಾರ್ಜನೆಗಾಗಿ ನಾನು ಗುಡ್‌ನ್ಯೂಸ್‌‌ ಮಹಾವಿದ್ಯಾಲಯಕ್ಕೆ ಮೊದಲ ಪಾದಾರ್ಪಣೆ ಮಾಡಿದ ದಿನವದು. ಎಂದೂ ನಾನು ಕಾಣದ ವಿದ್ಯಾಲಯ ಹಿಂದೆಂದೂ ಕಾಣದ ಗುರುಗಳು. ಹೊಸ ಪರಿಚಯ, ಹೊಸ ಅನುಭವ. ಗುರು ಎಂದರೆ ಸಾಕು ಮಾರು ದೂರ ಇರುತ್ತಿದ್ದ ನನ್ನ ಮನಸ್ಸಿಗೆ ಹತ್ತಿರ ಆದವರು ವಿಜಯ ಬೆಟಗಾರ ಗುರುಗಳು.

ಅಂದೊಂದು ದಿನ ಡಿಗ್ರಿ ಮೊದಲ ವರ್ಷದಲ್ಲಿ ಮಾಡಿದ ಮೊದಲ ಪ್ರೊಜೆಕ್ಟ್ ವರ್ಕ್‌ ತೋರಿಸಲೆಂದು ಅವರ ಬಳಿಗೆ ತೆರಳಿದ್ದು ಇನ್ನೂ ನನಗೆ ನೆನಪಿದೆ. ಸಾಮಾನ್ಯವಾಗಿ ಮುಖ ಮತ್ತು ಕೈಗಳನ್ನ ನೋಡಿ ಭವಿಷ್ಯ ನುಡಿದವರನ್ನು ಹಲವಾರು ಮಠ-ಮಾನ್ಯಗ‌ಳಲ್ಲಿ ನಾವು ನೀವು ಕಾಣುವುದು ಸಹಜ. ಆದರೆ ವಿದ್ಯಾ ಮಂದಿರದಲ್ಲಿ ಶಿಷ್ಯರ ಮನಸ್ಸಿನ ಅಂತರಾಳದಲ್ಲಿ ಇಣುಕಿ ನೋಡಿ ಭವಿಷ್ಯವನ್ನು ನುಡಿಯುವ ಏಕೈಕ ವ್ಯಕ್ತಿ ಎಂದರೆ ಗುರು. ಅವರ ಮಾರ್ಗದರ್ಶನವೇ ನನ್ನ ಪತ್ರಿಕೋದ್ಯಮಕ್ಕೆ ದಾರಿ ಮಾಡಿಕೊಟ್ಟಿತು.

ಈ ಎಲ್ಲ ವಿಚಾರದನ್ವಯ ನನ್ನ ಜೀವನಕ್ಕೆ ಆದರ್ಶವನ್ನು ಬೋಧಿಸಿದ ಕಲ್ಪವೃಕ್ಷ ಎಂದರೆ ತಪ್ಪಾಗಲಾರದು. ಗೆಳೆಯರೇ ಸ್ವಾರ್ಥತೆಯನ್ನು ಹೊಂದಿರದ ಏಕೈಕ ವ್ಯಕ್ತಿ ಗುರು. ಆದುದರಿಂದ ನಿಮ್ಮ ಜೀವನದಲ್ಲಿ ಬಂದ ಅದೆಷ್ಟೋ ಗುರುಗಳಲ್ಲಿ ಆದರ್ಶ ಗುರುಗಳನ್ನು ಒಂದು ದಿನ ಸ್ಮರಿಸಲು ಮುಂದಾಗಿ ಮುಂಬರುವ ದಿನಗಳಲ್ಲಿ ನೀವು ಮತ್ತೂಬ್ಬರಿಗೆ ಗುರುವಾಗಿ ಅವರನ್ನು ಬದಲಾವಣೆಯ ಹಾದಿ ಹೋಗಲು ಮಾರ್ಗದರ್ಶನ ಮಾಡಿ.

 ವಿರೇಶ್‌ ಹಾರೊಗೇರಿ, ಧಾರವಾಡ ವಿಶ್ವವಿದ್ಯಾನಿಲಯ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.