Ashadha Month: ಆಷಾಢ ಮಾಸದ ವಿಶೇಷತೆ


Team Udayavani, Sep 7, 2024, 12:15 PM IST

4-uv-fusion

ಚಾಂದ್ರಮಾನದ 12 ಮಾಸಗಳಲ್ಲಿ ಆಷಾಢ ನಾಲ್ಕನೆಯದ್ದು. ಆಷಾಢ ಎಂಬ ಹೆಸರು ಪೂರ್ವಾಷಾಢ ಮತ್ತು ಉತ್ತರಾಷಾಢ ಎಂಬ ನಕ್ಷತ್ರಗಳಿಂದ ಬಂದಿದೆ ಎನ್ನಲಾಗುತ್ತದೆ.

ಪುರಾಣ ಕತೆಗಳ ಪ್ರಕಾರ ಆಷಾಢಳು ಇಂದ್ರ ಲೋಕದ ದೇವತೆಯಾಗಿದ್ದು, ಒಂದು ಬಾರಿ ನಾಗಕನ್ಯೆಯ ರೂಪವನ್ನು ಧರಿಸಿ ಶಿವನನ್ನು ನೋಡುವ ಸಲುವಾಗಿ ಕೈಲಾಸಕ್ಕೆ ಬರುತ್ತಾಲೆ. ಅಲ್ಲಿ ಧ್ಯಾನಮಗ್ನನಾಗಿದ್ದ ಶಿವನನ್ನು ಕಂಡು ಆಷಾಢಳು ಪಾರ್ವತಿಯ ರೂಪವನ್ನು ಧಾರಣೆ ಮಾಡಿ ಶಿವನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾಳೆ. ಇದನ್ನು ಅರಿತ ಶಿವ ಕ್ರೋಧಗೊಂಡು ತನ್ನ ತ್ರಿಶೂಲದಿಂದ ಆಕೆಯನ್ನು ದೂರಸರಿಸಿ ಭೂಲೋಕದಲ್ಲಿ ಕಹಿಯಾದ ಬೇವಿನ ಮರವಾಗಿ ಹುಟ್ಟು ಎಂದು ಶಾಪ ಕೊಡುತ್ತಾನೆ. ಬಳಿಕ ಆಷಾಢಳಿಗೆ ತನ್ನ ತಪ್ಪಿನ ಅರಿವಾಗಿದ್ದು, ಇದನ್ನು ಗಮನಿಸಿದ ಶಿವನು ಆಕೆಗೆ ಬೇವಿನ ಮರವಾದರೂ ಭೂಲೋಕದಲ್ಲಿ ಪೂಜೆಗೆ ಅರ್ಹಳಾಗು ಎಂದು ಆಶೀರ್ವಾದ ನೀಡುತ್ತಾನೆ. ಈ ರೀತಿಯಾಗಿ ಆಕೆ ಭೂಮಿಯಲ್ಲಿ ಪೂಜೆಗೆ ಅರ್ಹಳಾದಳು ಎಂಬ ಪ್ರತೀತಿಯಿದೆ.

ಇನ್ನೊಂದು ಕಥೆಯ ಪ್ರಕಾರ ಹಿಂದೊಮ್ಮೆ ಇಂದ್ರದೇವನು ಋಷಿ ಗೌತಮನಿಂದ ಶಾಪಕ್ಕೆ ಒಳಗಾದಗ ಆಷಾಢದ ನಾಲ್ಕು ಸೋಮವಾರ ಸೋಮೇಶ್ವರನ ವ್ರತವನ್ನು ಕೈಗೊಂಡು ಶಾಪ ಮುಕ್ತನಾದ ಎಂಬ ಪ್ರತಿತಿಯಿದೆ. ಇಷ್ಟು ಮಾತ್ರವಲ್ಲದೇ ಶಿವನು ಪಾರ್ವತಿಗೆ ಅಮರತ್ವದ ರಹಸ್ಯವನ್ನು ಇದೇ ಮಾಸದಲ್ಲಿ ಹೇಳಿದ್ದ ಎಂದೂ, ಗಂಗೆಯು ಭೂಮಿಗೆ ಇದೇ ಮಾಸದಲ್ಲಿ ಹರಿದು ಬಂದಳು ಎಂಬ ಪ್ರತೀತಿ ಇದೆ. ಮಹಾ ಪತಿವ್ರತೆಯಾದ ಅನುಸೂಯ ದೇವಿಯು ಈ ಮಾಸದ ನಾಲ್ಕು ಸೋಮವಾರ ಶಿವನ ವ್ರತ ಕೈಗೊಂಡಿದ್ದಳು ಎನ್ನಲಾಗುತ್ತದೆ.

ಆಷಾಢ ಮಾಸದಲ್ಲಿ ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ತನ್ನ ಪಥವನ್ನು ಬದಲಾವಣೆ ಮಾಡಿ ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ. ಹೀಗಾಗಿ ಈ ಮಾಸವು ದಕ್ಷಿಣಾಯಣದ ಪ್ರಾರಂಭವನ್ನು ಸೂಚಿಸುತ್ತದೆ. ಇದನ್ನು ಶೂನ್ಯಮಾಸ ಎಂದೂ ಕರೆಯಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ದೇವಾನುದೇವತೆಗಳು ಉತ್ತರಾಯಣದಲ್ಲಿ ಎಚ್ಚರವಿದ್ದು, ದಕ್ಷಿಣಾಯಣದಲ್ಲಿ ನಿದ್ರೆಗೆ ಜಾರುತ್ತಾರೆ.

ಸನಾತನ ಧರ್ಮದಲ್ಲಿ ಎಲ್ಲ ಶುಭ ಕೈಂಕರ್ಯಗಳು ದೇವರ ಉಪಸ್ಥಿತಿಯಲ್ಲಿ ನಡೆಯುತ್ತವೆ, ಆದರೆ ಈ ಮಾಸದಲ್ಲಿ ದೇವರು ನಿದ್ರೆಗೆ ಜಾರುವುದರಿಂದ ಯಾವುದೇ ಶುಭಕಾರ್ಯಗಳು ನಡೆಯುವುದಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣವನ್ನು ನೋಡುವುದಾದರೆ ಈ ಮಾಸದಲ್ಲಿ ಭಾರೀ ಮಳೆಯಾಗುವುದರಿಂದ ಮತ್ತು ಜನರು ಹೆಚ್ಚಾಗಿ ಕೃಷಿ ಕೆಲಸಗಳಲ್ಲಿ ತೊಡಗುವುದರಿಂದ ಬೇರೆ ಕೆಲಸಗಳಿಗೆ ಅಷ್ಟೊಂದು ಗಮನಹರಿಸುವುದಿಲ್ಲ ಎನ್ನುಲಾಗುತ್ತದೆ.

ಈ ಆಷಾಢ ಮಾಸದಲ್ಲಿ ಗುಪ್ತ ನವರಾತ್ರಿ, ಭೀಮನ ಅಮವಾಸ್ಯೆ ಹಬ್ಬಗಳು ಪ್ರಮುಖವಾದವು. ಪುರಿ ಜಗನ್ನಾಥ ಯಾತ್ರೆಯು ಈ ಮಾಸದ ವಿಶೇಷವಾಗಿದೆ. ಯತಿಗಳು ಈ ಮಾಸದಲ್ಲಿ ಚಾತುರ್ಮಾಸಕ್ಕೆ ಕೂರುತ್ತಾರೆ, ಇದೇ ಮಾಸದಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಅಲ್ಲದೆ ಪ್ರಥಮ ಏಕಾದಶಿ ವ್ರತ, ಅಮರನಾಥ ಶಿವಲಿಂಗ ದರ್ಶನವೂ ಪ್ರತಿವರ್ಷ ಈ ಸಮಯದಲ್ಲೇ ನಡೆಯುತ್ತದೆ.

ಕರ್ನಾಟಕದ ಕರಾವಳಿ ಭಾಗ ಅಥವಾ ತುಳುನಾಡಿನಲ್ಲೂ ಈ ಮಾಸ ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ತುಳುವಿನಲ್ಲಿ ಈ ಮಾಸವನ್ನು “ಆಟಿ ತಿಂಗೊಲ್‌’ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ಆಟಿದ ಅಮಾವಾಸ್ಯೆ ಒಂದು ವಿಶೇಷ ಆಚರಣೆಯಾಗಿದೆ. ಈ ದಿನ ಹಾಳೆ ಅಥವಾ ಸಪ್ತಪರ್ಣೀಯ ಮರದ ಕೆತ್ತೆಯನ್ನು ಸೂರ್ಯೋದಯಕ್ಕೆ ಮುಂಚಿತವಾಗಿ ಕಲ್ಲಲ್ಲಿ ಕೆತ್ತಿ ತಂದು ಕಷಾಯ ಮಾಡಿ ದೇವರಿಗೆ ಸಮರ್ಪಣೆ ಮಾಡಿ ಸೇವಿಸಲಾಗುತ್ತದೆ.

ಇದರೊಂದಿಗೆ ಮೆತ್ತೆದ ಗಂಜಿ, ಪತ್ರೋಡೆ ಇತ್ಯಾದಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದೇ ರೀತಿ “ಕೆಸರ್‌ ಕಂಡೊದ ಗೊಬ್ಬು’, “ಆಟಿಡೊಂಜಿ ದಿನ’ ಮುಂತಾದ ಕಾರ್ಯಕ್ರಮಗಳನ್ನು ಈ ತಿಂಗಳಿನಲ್ಲೇ ಹಮ್ಮಿಕೊಳ್ಳಲಾಗುತ್ತದೆ. ಈ ಮಾಸದಲ್ಲಿ ಮಾಡುವಂತಹ ಅಡುಗೆಗಳು ಕೂಡ ವಿಶೇಷವೇ ಹೌದು. ಹಾಗೆಯೇ ಊರಿಗೆ ಬಂದ ಮಾರಿಯನ್ನು ದೂರ ಮಾಡಲು ಆಟಿ ಕಳೆಂಜೆ ಮನೆ ಮನೆಗೆ ಬರುವುದು ಕೂಡ ಇದೇ ತಿಂಗಳಿನಲ್ಲಿ.

ಹೀಗೆ ಆಷಾಢ ಮಾಸವು ಶ್ರೇಷ್ಠವಾದ ಮಹತ್ವವನ್ನು ಹೊಂದಿರುವ ಮಾಸ ಎನ್ನಬಹುದಾಗಿದೆ.

-ಶ್ರಾವ್ಯಾ ಆಚಾರ್ಯ

-ಎಂ.ಎಸ್‌.ಆರ್‌.ಎಸ್‌. ಕಾಲೇಜು

ಶಿರ್ವ

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.