Pills: ಮಾತ್ರೆ ಕತೆ


Team Udayavani, Jun 22, 2024, 4:15 PM IST

14-pills

“ನೀನು ಬೇಗ ಹುಷಾರಾಗಿ ಆಟ ಆಡೋಕೆ ಹೋಗಬೇಕಾ ಬೇಡವಾ? ಜಾಣೆ ಅಲ್ವಾ ನೀನು ಹಠ ಮಾಡಬೇಡ. ನನ್ನ ಬಂಗಾರಿ ಅಲ್ವಾ? ಮಾತ್ರೆ ತಿನ್ನು. ಈಗೇನು ತಿನ್ನುತ್ತೀಯೋ ಇಲ್ಲ ಪೆಟ್ಟು ಬೇಕಾ? ನೋಡು ನಾನು ಒಳಗೆ ಹೋಗಿ ನೀರು ತರುವುದರೊಳಗೆ ನೀನು ಮಾತ್ರೆ ತಿಂದಿರಬೇಕು. ಇಲ್ಲ ಅಂದ್ರೆ ಬೆನ್ನಿಗೆ ಬೀಳುತ್ತೆ.’

ಆರಂಭದಲ್ಲಿ ಸಮಾಧಾನದಿಂದ, ಅನಂತರದಲ್ಲಿ ಮುದ್ದಿನಿಂದ, ಅದಕ್ಕೂ ಬಗ್ಗದಿದ್ದಾಗ ಜೋರು ಮಾಡಿ, ಕೆಲವೊಮ್ಮೆ ಒಂದೆರಡು ಏಟು ಕೊಟ್ಟು ಹೀಗೆ ಚಿಕ್ಕ ವಯಸ್ಸಿನಲ್ಲಿ ಹುಷಾರು ತಪ್ಪಿದಾಗ ನಮ್ಮಮ್ಮ ನನಗೆ ಮಾತ್ರೆ ತಿನ್ನಿಸುತ್ತಿದ್ದರು. ಕೆಲವೊಮ್ಮೆ ಇದ್ಯಾವುದಕ್ಕೂ ಬಗ್ಗದೇ ಇದ್ದಾಗ ಅಣ್ಣಾನೋ, ಅಕ್ಕಾನೋ, ಇಲ್ಲ ಅಜ್ಜಿಯ ಬಳಿ ನನ್ನ ಕೈಕಾಲನ್ನು ಹಿಡಿದುಕೊಳ್ಳಲು ಹೇಳಿ ಮೂಗು ಒತ್ತಿಹಿಡಿದು ಮಾತ್ರೆ ತಿನ್ನಿಸುತ್ತಿದ್ದರು. ಈ ಮಾತ್ರೆಯನ್ನು ಪುಡಿ ಮಾಡಿ ನೀರಿನಲ್ಲಿ ಮಿಶ್ರಮಾಡಿ ಕುಡಿಯುವುದಿದೆಯಲ್ಲ ಅದನ್ನು ಈಗಲೂ ನೆನಪಿಸಿಕೊಂಡರು ನಾಲಿಗೆಗೆ ಕಹಿ ಅನುಭವವಾಗಿ ಮೈಕೊಡವಿಕೊಳ್ಳುತ್ತೀನಿ.

ನಿಮ್ಮಲ್ಲಿ ಹೆಚ್ಚಿನವರಂತೆ ನನಗೂ ಕೂಡ ಬಾಲ್ಯದಲ್ಲಿ ಈ ಮಾತ್ರೆ ತಿನ್ನೊದೆಂದರೇ ಆಗ್ತಾ ಇರಲಿಲ್ಲ. ಒಂದು ಮಾತ್ರೆ ತಿನ್ನೋಕೆ ಅರ್ಧಗಂಟೆ ತೆಗೆದುಕೊಂಡಿದ್ದೂ ಇದೆ. ಇಂಜೆಕ್ಷನ್ನಿಗೂ ಹೆದರದ ನಾನು ಮಾತ್ರೆ, ಕಹಿಯಾದ ಟಾನಿಕ್‌ಗೆà ಹೆದರುತ್ತಿದ್ದೆ. ಮಾತ್ರೆಯ ಕಹಿ ನಾಲಿಗೆಗೆ ತಗಲದಂತೆ ಗಂಟಲ ಸಮೀಪ ಮಾತ್ರೆಯಿಟ್ಟು ತತ್‌ಕ್ಷಣ ನೀರು ಕುಡಿದು ಮಾತ್ರೆಯನ್ನು ಹೊಟ್ಟೆಗೆ ಸೇರಿಸುವುದು ಒಂದು ಕಲೆ. ಅದಕ್ಕೆ ಚಾಣಾಕ್ಷತನ ಬೇಕು. ಇಲ್ಲದಿದ್ದರೇ, ಒಮ್ಮೊಮ್ಮೆ ನೀರು ಕುಡಿಯುವ ಸಂದರ್ಭದಲ್ಲಿ ನಾಲಿಗೆಗೆ ಕಹಿ ತಾಗಿ ನೀರಿನ ಜತೆ ಮಾತ್ರೆಯು ಹೊರಬಂದು ಅಮ್ಮನ ಏಟಿನೊಂದಿಗೆ ಮತ್ತೆ ಮಾತ್ರೆ ನುಂಗಬೇಕಾಗುತ್ತದೆ.

ಚಿಕ್ಕವಳಿದ್ದಾಗ ನಾನು ಮಾತ್ರೆ ತಿನ್ನುವುದನ್ನು ತಪ್ಪಿಸಿಕೊಳ್ಳಲು ಮಾಡುತ್ತಿದ್ದ ಪ್ರಯತ್ನಗಳು ಒಂದೆರಡಲ್ಲ. ಆದರೆ ಪತ್ರೀ ಬಾರಿಯೂ ಅಮ್ಮನ ಜಾಣತನದ ಮುಂದೆ ನನ್ನ ಪ್ರಯತ್ನಗಳೆಲ್ಲ ವಿಫ‌ಲವಾಗುತ್ತಿದ್ದವು. ನಾನು ಏನೇ ಮಾಡಿದರು ಹುಷಾರಾಗುವ ವರೆಗೂ  ಅಮ್ಮ ನನಗೆ ಮಾತ್ರೆ ನುಂಗಿಸದೇ ಬಿಡುತ್ತಿರಲಿಲ್ಲ.

ಈಗ ಮೂರು ಮೂರು ಮಾತ್ರೆಗಳನ್ನು ಒಮ್ಮೆಲೆ ಬಾಯಿಗೆ ಹಾಕಿಕೊಂಡು ನೀರು ಕುಡಿಯುವಾಗ ಇದೆಲ್ಲ ನೆನಪಾಗಿ ನಗು ಬರುತ್ತದೆ. ಬಾಲ್ಯದಂತೆ ಈಗಲೂ ನನಗೆ ಮಾತ್ರೆ ತಿನ್ನೋದು ಅಂದ್ರೆ ಆಗಲ್ಲ. ಆದರೂ ಹುಷಾರಾಗಬೇಕು ಅಂದರೆ ಮಾತ್ರೆ ಕುಡಿಲೇಬೇಕು. ಬಾಲ್ಯದಲ್ಲಿ ಮಾತ್ರೆ ತಿನ್ನಲಿಲ್ಲ ಅಂದರು ಹತ್ತಿರವೇ ಇದ್ದು ಅಮ್ಮ ತೋರುವ ಕಾಳಜಿಗೆ ನಾನು ಅರ್ಧ ಗುಣ ಆಗುತ್ತಿದ್ದೆ. ಅದಕ್ಕೆ ಮಾತ್ರೆ ತಿನ್ನದೆ ಅಮ್ಮನನ್ನು ಗೋಳಾಡಿಸುತ್ತಿದ್ದೆ. ಆದರೂ ಅಮ್ಮ ಬಿಡದೇ ಮಾತ್ರೆ ತಿನ್ನಿಸುತ್ತಿದ್ದಳು. ಈಗ ಕೆಲಸ ನಿಮಿತ್ತ ಅಮ್ಮನಿಂದ ದೂರ ಇರುವ ನನಗೆ ಹುಷಾರು ತಪ್ಪಿದಾಗ ಮಾತ್ರೆ ತಿನ್ನದೇ ಬೇರೆ ಆಯ್ಕೆಗಳೇ ಇಲ್ಲ. ಹುಷಾರಿಲ್ಲದೇ ಮಲಗಿದರೇ ಕಾಳಜಿ ಮಾಡುವವರು ಹತ್ತಿರವಿಲ್ಲ ಅನ್ನುವ ಭಯ ಮಾತ್ರೆಯ ಕಹಿಯನ್ನು ಮರೆಸಿದೆ.

-ಸುಶ್ಮಿತಾ ನೇರಳಕಟ್ಟೆ

ಟಾಪ್ ನ್ಯೂಸ್

1-eqwwewq

Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್

Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

1-qwewq-wq-ew

T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ

prahlad-joshi

Siddaramaiah ಸರಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಹ್ಲಾದ ಜೋಶಿ

6

ಯೂಟ್ಯೂಬ್‌ನಲ್ಲಿ IAS ಪಾಠ ಮಾಡಿ, 21ರ ಹರೆಯದಲ್ಲೇ 10 ಲಕ್ಷ ರೂ. ಕಾರು ಖರೀದಿಸಿದ ವಿದ್ಯಾರ್ಥಿ

1-qwewqewq

West Bengal; ನಡು ಬೀದಿಯಲ್ಲೇ ಮಹಿಳೆಗೆ ನಿರ್ದಯವಾಗಿ ಥಳಿತ:ವಿಡಿಯೋ ವೈರಲ್

MLA-Shivaganga

D.K. Shivakumar ಮುಖ್ಯಮಂತ್ರಿ ಆಗೋದು ನಿಶ್ಚಿತ : ಚನ್ನಗಿರಿ ಶಾಸಕ ಶಿವಗಂಗಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

1-eqwwewq

Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್

Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

1-sadasd

Harangi ಹಿನ್ನೀರಿನಲ್ಲಿ ಈಜಲು ತೆರಳಿದ್ದ ಪ್ರವಾಸಿಗ ನೀರು ಪಾಲು

1-qwewq-wq-ew

T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ

1-asdsad

Election; ಧಾರವಾಡ ಕೆಎಂಎಫ್ ಗೆ 9 ಮಂದಿ ನಿರ್ದೇಶಕರ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.