UV Fusion: ಅರಣ್ಯ, ವನ್ಯಜೀವಿ ಸಂಪತ್ತಿನ ಉಳಿವು ನಮ್ಮೆಲ್ಲರ ಹೊಣೆ


Team Udayavani, Aug 28, 2024, 3:52 PM IST

19-uv-fusion

ನಾವೆಲ್ಲ ಪತ್ರಿಕೆಗಳಲ್ಲಿ ಇಲೆಕ್ಟ್ರಾನಿಕ್‌ ಮಿಡಿಯಾಗಳಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ಕೇಳುವ ಒಂದೇ ಸುದ್ದಿ ಅದುವೇ ಊರಿಗೆ ಆನೆ ದಾಳಿ, ಚಿರತೆ ದಾಳಿ, ಹುಲಿ ದಾಳಿ, ಎನ್ನುವ ಸುದ್ದಿಗಳು. ಇವೆಲ್ಲ ನಮಗೆ ದೊಡ್ಡ ಆಘಾತಕಾರಿ ಸುದ್ದಿ ಅಂತ ಅನ್ನಿಸಿ ಅದನ್ನ ದೊಡ್ಡದಾಗಿ ಬಿಂಬಿಸಿ ಹೈಲೇಟ್‌ ಮಾಡುತ್ತೇವೆ. ಆದರೆ ಶತ ಶತಮಾನಗಳಿಂದ ಅರಣ್ಯ ಮತ್ತು ವನ್ಯಜೀವಿ ಸಂಪತ್ತಿನ ಮೇಲೆ ನಡೆಯುತ್ತಿರುವ ಮಾನವನ ಕ್ರೌರ್ಯದ ಕೆಲಸಕ್ಕೆ ಮಿತಿ ಎಂಬುದಿಲ್ಲ.

ಮೊದಲು ಹೊಟ್ಟೆಪಾಡುಗಳಿಗೆ ಸಾಮಾನ್ಯರು ಜೀವನವನ್ನು ಕಟ್ಟಿಕೊಳ್ಳಲು ಮಾನವ ಕಾಡುಗಳನ್ನು ಕಡಿದು ತನ್ನ ವಿಸ್ತರಣೆ ನೀತಿಯನ್ನು ಅನುಸರಿಸುತ್ತ ಸಾಗುತ್ತಿದ್ದ, ಇಂದು ಮೊದಲಿನ ಸಾಮನ್ಯ ಜೀವನ ಶೈಲಿಯು ಮರೆತು ಹೋಗಿ ಅಸಾಮಾನ್ಯ ಜೀವನ ಶೈಲಿ,ಅತಿಯಾದ ಅಭಿವೃದ್ಧಿ ತುಡಿತ, ಕೈಗಾರೀಕರಣ, ಆಧುನೀಕರಣ, ಜನಸಂಖ್ಯೆ ಸ್ಫೋಟ, ರಿಯಲ್‌ ಎಸ್ಟೇಟ್‌ ನಂತಹ ಉದ್ಯಮ, ರೆಸಾರ್ಟ್‌ ಸಂಸ್ಕೃತಿಗಳಂತಹ ಅನುಪಯುಕ್ತ ಕೆಲಸಗಳು ಹೀಗೆ ಹತ್ತಾರು ಪ್ರಮುಖ ಕಾರಣಗಳಿಂದಾಗಿ ಕಾಡು ನಾಶವಾಗತೊಡಗಿ ಅರಣ್ಯದಲ್ಲಿ ನಿರ್ಭಿತಿಯಿಂದ ಇರಬೇಕಿದ್ದ  ವನ್ಯಜೀವಿಗಳು ನರಕ ಯಾತನೆ ಅನುಭವಿಸಿ ನಾಡಿನತ್ತ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಇದೆಲ್ಲವನ್ನು ಹತೋಟಿಯಲ್ಲಿ ಇಡಬೇಕಿದ್ದ ಅರಣ್ಯ ಸಂರಕ್ಷಣಾ ಕಾಯ್ದೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಾಗಿವೆ ಇನ್ನೂ ಅರಣ್ಯ ಇಲಾಖೆಗಳು ಅಲ್ಲಿರುವ ಅಧಿಕಾರಿಗಳು ಅದೆಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವರೊ ದೇವರೆ ಬಲ್ಲ.

ಈಗಾಗಲೇ ಅನೇಕ ಡೈನೊಸಾರ್‌ ಗಳಂತಹ ಅನೇಕ ಸಂಕುಲಗಳು ನಾಶವಾಗಿವೆ ಮತ್ತು ಅನೇಕ ವನ್ಯಜೀವಿಗಳ ಸಂಕುಲ ಅವನತಿಯ ಹಂತದಲ್ಲಿವೆ. ಇನ್ನೂ ವರ್ಷದಿಂದ ವರ್ಷಕ್ಕೆ ಅರಣ್ಯ ಸಂಪತ್ತಿನ ಪ್ರಮಾಣ ಕುಸಿಯುತ್ತ ಹೋರಟಿದೆ ಅಂದಮೇಲೆ ವನ್ಯಜೀವಿಗಳ ಪಾಡು ಏನು?

ಬರುವ ದಿನಗಳಲ್ಲಿ ಹೀಗೆ ಮುಂದುವರಿದರೆ ಕಾಡುಪ್ರಾಣಿಗಳು ನಾಡಿಗೆ ಲಗ್ಗೆಯಿಡುವ ಪ್ರಕರಣಗಳು ಘನನೀಯವಾಗಿ ಏರುತ್ತಾ ಹೋಗಿ ಜನರನ್ನ ಆತಂಕಕ್ಕೆ ಒಳಗಾಗುವಂತೆ ಮಾಡುವುದರಲ್ಲಿ ಸಂಶಯವಿಲ್ಲ!? ಇನ್ನಾದರು ನಮ್ಮನ್ನಾಳುವ ಸರಕಾರಗಳು ಎದುರಾಗಿರುವ ಸಮಸ್ಯೆಗಳ ಮೂಲವನ್ನ ಹುಡುಕಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನ ಉಳಿಸಿ ಮುಂಬರುವ ಪೀಳಿಗೆಗೆ ಅರಣ್ಯ ವನ್ಯಜೀವಿ ಸಂಪತ್ತು ಉಳಿಯುವಂತೆ ಮಾಡಬೇಕಿದೆ.

-ಮಲ್ಲಿಕಾರ್ಜುನ

ಹುಬ್ಬಳ್ಳಿ

ಟಾಪ್ ನ್ಯೂಸ್

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.