![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 31, 2020, 11:20 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹಳ್ಳಿ ಎಂದರೆ ಎಲ್ಲರ ಮನಸ್ಸಲ್ಲೂ ಉಲ್ಲಾಸ ಮೂಡಿಸುವಂತಹ ವಾತಾವರಣ.
ನಾನು ಹುಟ್ಟಿ ಬೆಳೆದಿದ್ದು ಹಳ್ಳಿಯಲ್ಲಿಯೇ ಆದರೂ ನನ್ನ ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಬರುವ ಅನಿವಾರ್ಯವಾಗಿತ್ತು.
ಹಳ್ಳಿ ಜೀವನಕ್ಕೆ ಹೊಂದಿಕೊಂಡಿದ ನಾನು. ಹೊಸ ಪ್ರಪಂಚಕ್ಕೆ ಹೊಂದಿಕೂಳ್ಳುವುದು ಸ್ವಲ್ಪ ಕಷ್ಟವಾಗಿತ್ತು.
ನಾನು ಕಂಡ ಎಲ್ಲ ಸನ್ನಿವೇಶಗಳು ಒಂದು ಮಾಯ ಪ್ರಪಂಚವಾಗಿ ಕಾಣಿಸಿತ್ತು. ಅಲ್ಲಿನ ಜನರ ಜೀವನ ಶೈಲಿಯು ನೋಡಿ ನನಗೆ ಆಶ್ಚರ್ಯವಾಗಿತ್ತು.
ಸಾವಿರಾರು ಆಸೆಗಳ ಗೋಪುರ ಕಟ್ಟಿಕೊಂಡು ಕಾಲಿಟ್ಟೆ. ಯಾವುದೋ ಗೊತ್ತಿಲ್ಲದ ಪ್ರಪಂಚಕ್ಕೆ ಬಂದಿರುವನೆಂಬ ಭಾವ ಮೂಡಿತ್ತು.
ಮೊದಲ ದಿವಸ ಕಾಲೇಜಿಗೆ ಹೋಗಿದ್ದಾಗ ಸ್ನೇಹಿತರೆಲ್ಲರೂ ಅವರವರ ಲೋಕದಲ್ಲಿ ಮಗ್ನರಾಗಿದ್ದರು.ಅವರನ್ನು ನೋಡಿದರೆ ಯಾವುದೋ ಅನ್ಯ ಲೋಕದ ಪ್ರಾಣಿಗಳಂತೆ ಕಾಣತೊಡಗಿದ್ದರು. ಅವರನ್ನು ನೋಡುತ್ತಿದ್ದಂತೆ ಮುಂದೆ ಹೇಗೆ ಇವರೊಂದಿಗೆ ಸ್ನೇಹ ಬೆಸೆಯುವುದು ಎಂಬ ಆತಂಕ ಹುಟ್ಟಿತು. ದಿನಗಳು ಉರುಳುತ್ತಿದ್ದಂತೆ ಅವರೊಂದಿಗೆ ಸ್ನೇಹ ಬೆಳೆಯಿತು.
ನಾನು ಅವರ ಜೀವನ ಶೈಲಿಗೆ ಹೊಂದಿಕೊಳ್ಳಲು ಅಭ್ಯಾಸ ಮಾಡಿಕೊಂಡೆ. ಎಲ್ಲವೂ ಹೊಸದಾದರೂ ಮನಸ್ಸಿಗೆ ತಂಬಾ ಖುಷಿ ಯಾಗುತಿತ್ತು. ನಾನು ನನ್ನ ಗೆಳೆಯರು ಸೇರಿ ಸಿನೆಮಾ, ಲಾಂಗ್ ಡ್ರೈವ್ ಎಂದೆಲ್ಲ ಕಾಲಕಳೆಯುತ್ತಿದ್ದೆವು. ಅದರ ಜತೆಗೆ ಓದಿನ ಕಡೆಗೂ ಗಮನ ಹರಿಸುತ್ತಿದ್ದವು. ಜೀವನದ ನನ್ನ ಗುರಿ ತಲುಪಲು ಗುರುಗಳು ಮಾರ್ಗದರ್ಶಕರಾಗಿ ಸಲಹೆ ನೀಡುತ್ತಿದ್ದರು. ಇಂತಹ ಹೊಸ ಹೊಸ ಅನುಭವಗಳು ನನ್ನ ಜೀವನದಲ್ಲಿ ಹಲವಾರು ಬಣ್ಣಗಳ ರೂಪದಲ್ಲಿ ಪ್ರಭಾವ ಬೀರಿವೆ.
ಈ ಮುಗ್ಧ ಮನಸ್ಸಿನಲ್ಲಿ ಪ್ರತಿಯೊಬ್ಬರು ಕಾಮನ ಬಿಲ್ಲಿನ ಬಣ್ಣಗಳಂತೆ ಎಂದಿಗೂ ಮರೆಯಲಾಗದ ನೆನಪುಗಳನ್ನು ಚೆಲ್ಲಿದ್ದಾರೆ. ಇನ್ನೂ ನನ್ನ ಗೆಳೆಯರು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಬಂದು ಚಿರಪರಿಚಿತರಾಗಿ ಕೊನೆಯವರೆಗೂ ನಮ್ಮೊಂದಿಗೆ ಉಳಿಯುವ ಸುಂದರ ಸಂಬಂಧವೇ ಸ್ನೇಹ.
ಸವಿತಾ ಜಿ., ತುಮಕೂರು ವಿಶ್ವವಿದ್ಯಾನಿಲಯ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.