UV Fusion: ಬದುಕಿನ ಸಂತೆಯೊಳಗೆ ನಾನಾ ಮುಖಗಳ ಬೇಗೆ..


Team Udayavani, Aug 21, 2024, 2:22 PM IST

5-uv-fusion

ಬದುಕಿನ ಸಂತೆಯೊಳಗೆ ಅನೇಕರು ಎದುರಾಗುತ್ತಾರೆ. ಸಮಾಜದ ಒಂದು ಭಾಗವಾದ ನಾವು ವಿಭಿನ್ನ ವ್ಯಕ್ತಿತ್ವ, ವಿವಿಧ ಅಭಿರುಚಿ, ವಿಚಿತ್ರ ಭಾವಗಳು.. ಹೀಗೆ ನಾನಾತರದ ವೈಚಿತ್ಯದಿಂದ ಕೂಡಿದ ಪರಿಸರದೊಳಗೆ ಇಷ್ಟವಿಧ್ದೋ ಇಲ್ಲದೆಯೋ ಬದುಕಲೇಬೇಕಾಗುತ್ತದೆ. ಅನಿವಾರ್ಯತೆ ಮತ್ತು ಅವಶ್ಯಕತೆಗಳು ಕೆಲವೊಂದಕ್ಕೆ ಹೊಂದಿಕೊಳ್ಳಲೆ ಬೇಕಾದ ಸಂಧರ್ಭ ಸೃಷ್ಟಿಸುತ್ತವೆ. ಹೀಗೆ ಸಾಗುವ ಹಾದಿಯಲ್ಲಿ ಕೆಲವರು ಪರಿಚಿತರಾಗುತ್ತಾರೆ, ಕೆಲವು ಪರಿಚಿತರು ಅಪರಿಚಿತರಾಗಿ ಕಣ್ಮರೆಯಾಗುತ್ತಾರೆ. ಒಂದಷ್ಟು ಮನಗಳು, ಗುಣಗಳು ಹೃದಯಕ್ಕೆ ಬೇಗನೆ ಹತ್ತಿರವಾಗಿಬಿಡುತ್ತವೆ. ಮತ್ತೆ ಕೆಲವು ಹೊಸ್ತಿಲಲ್ಲೇ ಉಳಿದುಬಿಡುತ್ತವೆ. ಮತ್ತೂಂದಷ್ಟು ಸಂಬಂಧಗಳು ಪರಿವಾರವೆಂದೊ ಅಥವಾ ಮತ್ಯಾವುದೋ ಹೆಸರಿನಲ್ಲಿಕಾರಣ ನಿಮಿತ್ತ ಬದುಕಿನೊಳಗೆ ತೂರಿಕೊಂಡಿರುತ್ತವೆ.

“ಅಯ್ಯೋ ವಯಸ್ಸಾಯ್ತುಇನ್ಯಾವಾಗ ಮದುವೆ ? ಜೀವನದಲ್ಲಿ ಏನು ಸಾಧಿಸಬೇಕೆಂದಿದ್ದಿ ಇನ್ನೂ ? ನೀನ್ಯಾಕೆ ಹೀಗೆ ಯಾರೊಂದಿಗೂ ಮಾತನಾಡದೆ ಮೂಲೆ ಹಿಡಿದು ಕೂರುತ್ತಿ..? ಮಕ್ಕಳಾಯ್ತಾ ? ನನ್ನ ಮಗ ಪರೀಕ್ಷೆಲಿ ಫಸ್ಟ್ ರ್ಯಂಕ್‌ ಬಂದಾಯ್ತು. ನಿಮ್ಮ ಮಗ ಪಾಸ್‌ ಆದ್ನ? ” ಹೀಗೆ ಅರ್ಥವಿಲ್ಲದ ಪ್ರಶ್ನೆಗಳನ್ನು ಕೇಳಿ ನೆಮ್ಮದಿ ಕೆಡಿಸುವ ಮನಸ್ಥಿತಿಗಳು ಎದುರಾಗುತ್ತವೆ.

ಕೆಲವೊಮ್ಮೆ ಎದುರಾಗುವ ಇಂತ ಪ್ರಶ್ನೆಗಳು ನಮ್ಮೊಳಗಿನ ಉತ್ಸಾಹ ಮತ್ತು ಆತ್ಮವಿಶ್ವಾಸ ಕುಂದಿಸುವ ಕೆಲಸ ಮಾಡುತ್ತವೆ. “ಹಾಗೆ ಇನ್ನೊಬ್ಬರ ಮಾತಿಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಪಾಡಿಗೆ ನಾವು ಮುಂದೆ ಸಾಗೋಣ ” ಎನ್ನುವ ಗಟ್ಟಿ ಮನಸ್ಥಿತಿ ಎಲ್ಲೋ ಕೆಲವರಿಗೆ ಮಾತ್ರ ಇರುತ್ತದೆ. ಇನ್ನ ಎಷ್ಟೋ ಜನ ಸಮಾಜದ ಬಿರುನುಡಿಗಳಿಗೆ ಸೋತು, ಏನೋ ಕಳೆದುಕೊಂಡವರಂತೆ ಜೀವನವನ್ನೇ ಅವಸಾನದ ಹಾದಿಗೆ ಇಳಿಸಿಕೊಂಡವರಿದ್ದಾರೆ.

ಕೆಲವರಿಗೆ ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರು ಕಂಡವರ ತಟ್ಟೆಯಲ್ಲಿ ನೊಣ ಹುಡುಕುವ ಚಾಳಿ. ಅಂತವರ ಮಾತನ್ನು ಅತಿಯಾಗೆ ಹಚ್ಚಿಕೊಂಡರೆ ನಾವು ಹುಚ್ಚಾಸ್ಪತ್ರೆಯಲ್ಲಿ ಬೆಡ್‌ ರಿಸರ್ವ್‌ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದನ್ನು ಅರಿಯಬೇಕಾದದ್ದು ಇಲ್ಲಿ ಅತೀ ಜರೂರಿನ ವಿಷಯ..!

ಎಲ್ಲರಿಗೂ ನಾವು ನಮ್ಮ ಮರುಉತ್ತರದ ಮೂಲಕವೇ ಅಥವಾ ನಮ್ಮನ್ನ ಸಮರ್ಥಿಸಿಕೊಂಡು ಎದುರಿನವರಿನ ಬಾಯಿ ಮುಚ್ಚಿಸುವ ಅವಶ್ಯಕತೆ ಇಲ್ಲ. ಅಂದುಆಡುವವರಿಗೆ ನಾವು ಪಾಸಿಟಿವ್‌ ಎನ್ನಿಸುವ ಅತ್ಯದ್ಭುತ ಜೀವನ ಶೈಲಿ ರೂಢಿಸಿಕೊಂಡು ಜೀವಿಸುವುದ ಕಲಿತರೆ ಸಾಕು. ಅದೇ ಎಲ್ಲರನ್ನು ಸುಮ್ಮನಾಗಿಸುತ್ತದೆ. ನಮ್ಮದೇ ವೈಯಕ್ತಿಕ ಸಮಸ್ಯೆ ಗೊಂದಲಗಳ ಜೊತೆ ಸೆಣೆಸುತ್ತ ಬದುಕಿನ ಗಮ್ಯದ ಹುಡುಕಾಟದ ಜತೆಗೆ ಒಂದಷ್ಟು ಮಾನಸಿಕ ನೆಮ್ಮದಿ ಸ್ಥಾಪಿಸಿಕೊಳ್ಳಲು ಹೋರಾಡುತ್ತಿರುತ್ತೇವೆ.

ಆ ಹೋರಾಟದ ನಡುವೆಯೂ ದಕ್ಕುವ ಸಣ್ಣ ಸಣ್ಣ ಖುಷಿಗಳನ್ನು ಆಸ್ವಾದಿಸುತ್ತ, ಸಿಹಿ ಕ್ಷಣಗಳನ್ನು ಹೃದಯದ ಜೋಳಿಗೆಗೆ ಪೇರಿಸಿಕೊಳ್ಳುವ, ಬೇಸರವೆನಿಸಿದಾಗ ಮೆಲುಕು ಹಾಕುತ್ತ ಮುಂದೆ ಮುಂದೆ ಸಾಗುವತ್ತ ಗಮನವಿಟ್ಟರೆ ಬದುಕು ಖಂಡಿತ ಆಪ್ಯಾಯವಾಗುವುದರಲ್ಲಿ ಸಂದೇಹವಿಲ್ಲ.

ಮಲಗಿದೋದುಗನ ಕೈಹೊತ್ತಗೆಯು ನಿದ್ದೆಯಲಿ ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು ಸಡಿಲವುವು ಬಾಳ್‌ ಮಾಗೆ ಮಂಕುತಿಮ್ಮ- ಎಂಬ ಕಗ್ಗದ ಮಾತಿನಂತೆ ಇಲ್ಲಿ ಎಲ್ಲರೂ ಅವರವರ ನಿಲ್ದಾಣ ಬಂದಾಗ ಇಳಿದು ಹೋಗುತ್ತಾರೆ. ಜೀವನದ ಹಾದಿಯಿದು ನಿರಂತರ ಅನುಭವಗಳ ಪ್ರವಾಹ. ಆ ಅನುಭವಗಳಿಂದ ಪಾಠ ಕಲಿತು ಪಕ್ವವಾಗುತ್ತ ಸಾಗಿದರೆ, ದೇಹದ ಜೊತೆ ಮನವೂ ಮಾಗಿದರೆ ಬದುಕಿನ ಪಾಕ ದೇವನಿಗೆ ನೈವೇದ್ಯವಾಗೊ ಘಮಿಸುವ ಸಿಹಿ ರಸಾಯನವಾಗುತ್ತದೆ ಅಲ್ಲವೇ..?

-ಪಲ್ಲವಿ ಚೆನ್ನಬಸಪ್ಪ

ವಿಜಾಪುರ

ಟಾಪ್ ನ್ಯೂಸ್

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.