UV Fusion: ಅವರು ಹಾಗೆ, ಇವರು ಹೀಗೆ, ನಾವು ಹೇಗೆ?


Team Udayavani, May 11, 2024, 9:56 AM IST

4-uv-fusion

ಭೂಮಿಯ ಮೇಲಿರುವ ಸಕಲ ಜೀವರಾಶಿಗಳಲ್ಲಿ ಮನುಷ್ಯ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾನೆ. ಕಾರಣ ಮನುಷ್ಯನಿಗಿರುವ ವಾಕ್‌ ಸಾಮರ್ಥ್ಯ ಮತ್ತು ಯೋಚನಾ ಸಾಮಾರ್ಥ್ಯ. ಆದರೆ ಮಾನವರೆಂಬ ಬುದ್ಧಿಜೀವಿಗಳಾದ ನಾವು ನಮ್ಮ ಸಾಮರ್ಥ್ಯವನ್ನು ಹೇಗೆ ವ್ಯಯಿಸುತ್ತಿದ್ದೇವೆ ಎಂಬುದರ ಕುರಿತಾಗಿ ಒಂದಿನಿತು ಚಿಂತನ ಮಂಥನ ನಡೆಸುವುದು ಒಳಿತೆನಿಸುತ್ತಿದೆ.

ದಿನದ 24 ಗಂಟೆ ಅಂದರೆ 1,440 ನಿಮಿಷಗಳನ್ನು ನಾವು ಹೇಗೆ ಕಳೆಯತ್ತಿದ್ದೇವೆ ಎಂಬುದರ ಕುರಿತಾಗಿ ಅಂತರಾವಲೋಕನ ಮಾಡಿಕೊಂಡರೆ ಮನ ಮರಗುವುದು ಖಚಿತ.ಯಾಕೆಂದರೆ ನಮ್ಮ ದಿನದ ಬಹಳಷ್ಟು ಸಮಯ ನಾವು ಇತರರ ಬಗ್ಗೆ ಚಿಂತಿಸುವುದರಲ್ಲಿ,ಅರ್ಥ ಮಾಡಿಕೊಳ್ಳಲು ಹವಣಿಸುವಲ್ಲಿ,ಅಪಾರ್ಥ ಮಾಡಿಕೊಳ್ಳುವುದರಲ್ಲಿ ಮತ್ತು ನಮ್ಮ ಅಭಿಪ್ರಾಯಗಳನ್ನು ಇತರರಿಗೆ ಹಂಚುವುದರಲ್ಲಿಯೇ ಕಳೆಯುತ್ತಿರುತ್ತೇವೆ.

ಅವರು ತುಂಬಾ ಸೂಕ್ಷ್ಮ, ಇವರು ತುಂಬಾ ಒರಟು, ಇವ ಜಿಪುಣ,ಅವ ಉದಾರಿ,ಇವಳು ತುಂಬಾ ಸೌಮ್ಯ ಸ್ವಭಾವದವಳು,ಅವಳು ಸ್ವಲ್ಪ ಗಂಡುಬೀರಿ ಹೀಗೆ ಅವರಿವರ ಬಗ್ಗೆ ಸರ್ಟಿಫಿಕೇಟ್‌ ಕೊಡುವುದರಲ್ಲಿ ನಾವೆಷ್ಟು ಬುದ್ಧಿವಂತಿಕೆ ತೋರ್ಪಡಿಸುತ್ತೇವೆಯೋ ಅದರ 0.01%ನ್ನು ನಮ್ಮನ್ನು ನಾವು ಅರಿತುಕೊಳ್ಳುವಲ್ಲಿ ತೋರಿಸಿಕೊಳ್ಳದಿರುವುದೇ ಖೇದಕರ ಸಂಗತಿ.

ಬಹಳಷ್ಟು ಸಂದರ್ಭಗಳಲ್ಲಿ ನಾವು ಒಬ್ಬರ ಕುರಿತು ಕೊಡುವ ಸರ್ಟಿಫಿಕೇಟ್‌ ಗಳು ಅನೇಕ ಬಾರಿ ತಿದ್ದುಪಡಿ ಆಗುತ್ತಿರುತ್ತವೆ. ಯಾಕೆಂದರೆ ಮಾನವ ಜನ್ಮವೇ ಹಾಗೆ ಪ್ರತಿಯೊಬ್ಬರಿಗೂ ಇನ್ನೊಬ್ಬರ ಮೇಲೆ ಏನಾದರೊಂದು ಲೋಪ ದೋಷ ಇದ್ದೆ ಇರುತ್ತದೆ. ಅದನ್ನ ನಮ್ಮ ಮಿತಿಯಲ್ಲಿ ಇಟ್ಟುಕೊಂಡರೆ ಏನು ಸಮಸ್ಯೆ ಇಲ್ಲಾ. ನಾವು ಹೊಗಳಿ ಅಟ್ಟಕ್ಕೇರಿಸಿದವರನ್ನು ನಾವೇ ಕೆಲ ಕಾಲದ ಅನಂತರ ದೂರುತ್ತಾ ಪಾತಾಳಕ್ಕೆ ತಳ್ಳುವುದು ಇದೆ. ಕಾರಣ ನಾವು ಕೊಡುವ ಸರ್ಟಿಫಿಕೇಟ್‌ ಸಮಯ, ಸಂದರ್ಭ, ಪರಿಸ್ಥಿತಿ ಮತ್ತು ನಮ್ಮ ಆ ಕ್ಷಣದ ಮನಸ್ಥಿತಿಯನ್ನು ಆಧರಿಸಿರುತ್ತದೆ.

ಅವರಿವರ ಬಗ್ಗೆ ಅಳೆದು ತೂಗಲು ಗಂಟೆಗಟ್ಟಲೆ ಸವೆಸುವ ನಾವು ದಿನಕ್ಕೊಂದು ಬಾರಿ ಕೊಂಚ ಸಮಯ ನಮಗಾಗಿ ವಿನಿಯೋಗಿಸುವುದು ಅತೀ ಅವಶ್ಯಕವೆನಿಸುತ್ತದೆ. ಅವರು ಹಾಗೇ ಇವರು ಹೀಗೆ ಎಂದರಿಯಲು ತವಕಿಸುವ ನಾವು ದಿನಕ್ಕೊಂದು ಬಾರಿ ನಾವು ಹೇಗೆ? ಎಂದು ಪ್ರಶ್ನಿಸಿ ಉತ್ತರ ಕಂಡುಕೊಳ್ಳುವುದು ಉತ್ತಮವಲ್ಲವೇ?

ನಾವು ಮೊದಲು ಅರಿತುಕೊಳ್ಳಬೇಕಾದುದು ನಮ್ಮನ್ನು ಆಗ ನಮ್ಮ ವರ್ತನೆಯಲ್ಲಿ, ಬದುಕಿನಲ್ಲಿ ಅಗತ್ಯ ಪರಿವರ್ತನೆ ಸಾಕಾರಗೊಳಿಸಬಹುದು. ನಮ್ಮನ್ನು ನಾವು ತಿದ್ದಿಕೊಳ್ಳುವುದು ಇತರರನ್ನು ಬದಲಾಯಿಸುವುದಕ್ಕಿಂತ ಬಹಳ ಸರಳ ಹಾಗೂ ಈ ತಿದ್ದುಪದಿಯೇ ನಮ್ಮ ಜೀವನದ ಬಹಳ ದೊಡ್ಡ ಮಟ್ಟದ ಬದಲಾವನೇಗೆ ಕಾರಣವಾಗಬಹುದು ಯಾರಿಗೆ ಗೊತ್ತು! ಅಲ್ಲವೇ?

ಹಾಗಾದಾಗ ಮೇರು ವ್ಯಕ್ತಿತ್ವ ನಮ್ಮದಾಗಿಸಿಕೊಳ್ಳಲು ಸಾಧ್ಯ. ಅವರಿವರ ಬದುಕನ್ನು ಇಣುಕಿ ನೋಡುತ್ತಾ, ಅಣಕಿಸುತ್ತಾ, ಕೆಣಕುತ್ತಾ ಸಮಯ ಹಾಳು ಮಾಡಿಕೊಳ್ಳುವ ಬದಲಿಗೆ ನಾವು ನಮ್ಮನ್ನರಿತು ಬದುಕುವ ಗುರಿಯತ್ತ  ಚಿತ್ತ ಕೇಂದ್ರೀಕರಿಸಿ ಸಾರ್ಥಕ ಬಾಳು ನಮ್ಮದಾಗಿಸಿಕೊಂಡಾಗ ಮಾತ್ರ ಮಾನವ ಜನ್ಮ ಪಡೆದದ್ದು ಸಾರ್ಥಕ ವೆನಿಸಿಕೊಳ್ಳುತ್ತದೆ. ಅದಕ್ಕೆ ತಾನೇ ಅರಿತವರು ಹೇಳಿದ್ದು” ಮಾನವ ಜನ್ಮ ದೊಡ್ಡದು ಅದ ಹಾಳು ಮಾಡದಿರಿ ಹುಚ್ಚಪ್ಪಗಳಿರಾ..’ ಎಂದು.

ನಮ್ಮೊಳಗಿನ ನಮ್ಮನರಿತು ಮಾನವ ಜನ್ಮದ ಸದುಪಯೋಗ ಮಾಡಿಕೊಳ್ಳೋಣ ಅಲ್ಲವೇ..?

-ನಿಶ್ಮಿತಾ ಜಿ. ಎಚ್‌.

ಹಾರ ಮನೆ ಕೊಕ್ಕಡ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.