Tour Circle: ಕೈಬೀಸಿ ಕರೆಯುವ ಬೇಕಲಕೋಟೆ


Team Udayavani, Aug 6, 2024, 5:00 PM IST

7-bekal-fort

ಕೇರಳ ರಾಜ್ಯದ ಸ್ವರ್ಣ ಕಿರೀಟದಂತೆ, ಗಜರಾಜನಂತೆ, ಸಪ್ತ ಭಾಷೆಯ ಸಂಗಮ ನಾಡು, ತುಳು, ಮಲಯಾಳಂ, ಕನ್ನಡ, ಮರಾಠಿ, ಬ್ಯಾರಿ, ಕೊಂಕಣಿ, ಉರ್ದು ಭಾಷೆಗಳ ಪೊರೆಯುವ ತೊಟ್ಟಿಲು ಈ ಕಾಸರಗೋಡು. ಚರಿತ್ರೆಯ ಪುಟಗಳನ್ನು ಒಮ್ಮೆ ಇಣುಕಿ ನೋಡಿದರೆ ಇಲ್ಲಿ ಇಕ್ಕೇರಿ ನಾಯಕರು ಕಟ್ಟಿದ ಭವ್ಯವಾದ ಬೇಕಲ ಕೋಟೆ ಮತ್ತು ಅದರ ಅಕ್ಕಪಕ್ಕದ ನೆಲೆಗಳು ಪುಳಕಿಸುವಂತದ್ದು.

ಸರ್ವ ಧರ್ಮದ ಶಾಂತಿಯ ತೋಟವಾಗಿರುವ, ದೈವಗಳ ಆರಾಧನೆಯ ಬೀಡಾಗಿರುವ ಕಾಸರಗೋಡು ದೇವಾಲಯ, ಮಂದಿರ, ಪಳ್ಳಿಗಳಿಗೆ ಹೆಸರುವಾಸಿ. ಉದಾಹರಣೆಗೆ ಮಧೂರು, ಅಡೂರು, ಅನಂತಪುರ, ಮಾಲಿಕ್‌ ದಿನಾರ್‌ ಹೀಗೆ ಅನೇಕ ಆರಾಧನಾಲಯಗಳು ಇಲ್ಲಿವೆ. ಇದರಿಂದಾಗಿಯೇ ಕಾಸರಗೋಡಿಗೆ ವಾಸ್ತುಶಿಲ್ಪದ ತೊಟ್ಟಿಲ ತೂಗುವ ನಾಡೆಂಬ ಹೆಸರು ಕೂಡ ಬಂದಿದೆ.

ಬೇಕಲಕೋಟೆ ಮತ್ತು ನನ್ನ ಅನುಬಂಧ ಕಿರಿ ವಯಸ್ಸಿನಿಂದಲೇ ಶುರುವಾಗಿದ್ದು, ಇಂದಿಗೂ ಈ ಒಡನಾಟ ಹಸನಾಗಿದೆ. ಕಾಸರಗೋಡು ಮೂಲದವನೇ ಆದ ನನಗೆ ಈ ಕೋಟೆಯ ಸವಿಯ ನೆನೆಯುವುದೆಂದರೆ ಹರುಷ. ದಕ್ಷಿಣದಿ ಅರಬ್ಬಿ ಸಮುದ್ರದ ಅಲೆಗಳ ಝೇಂಕಾರದ ಸದ್ದು ಕಿವಿಗೆ ಇಂಪು, ತಂಗಾಳಿಯ ತಂಪು, ಗರಿಗೆದರಿದ ಕಿರು ಓಲೆಯ ಮಡಲಿನ ತೆಂಗಿನ ಸಾಲು, ಕೊನೆಯಿಲ್ಲದ ನೀಲಾಕಾಶದ ಒಡಲು, ಹಾರಾಡುವ ಹಕ್ಕಿಗಳ ಸಾಲು ಹೀಗೆ ಇಲ್ಲಿನ ಸೌದರ್ಯವನ್ನು ಬಣ್ಣಿಸಲು ಶಬ್ದಗಳು ಸಾಲವು.

40 ಎಕರೆಯ ಕೋಟೆ

ಸೂರ್ಯಾಸ್ತಮಾನದ ಸುಂದರ ದೃಶ್ಯವನ್ನು ಕಣ್ಣಲ್ಲಿ ಸೆರೆ ಹಿಡಿದು ಅದನ್ನು ನೆನಪಿನ ಬುತ್ತಿಯಲ್ಲಿ ಭದ್ರಮಾಡಿ ಇಟ್ಟುಕೊಳ್ಳುವಂತಹ ತಾಣ ಯಾವುದಾದರೂ ಇದ್ದರೆ ಅದು ಕಾಸರಗೋಡು ಜಿಲ್ಲೆಯಲ್ಲಿರುವ ಬೇಕಲಕೋಟೆ. ಬೇಕಲಕೋಟೆಯ ಐತಿಹ್ಯ ನೋಡುವುದಾದರೆ ಸೇನಾ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಲು ಹಾಗೂ ರಕ್ಷಣಾ ಕಾರ್ಯದ ಉದ್ದೇಶದಿಂದ ಕೆಳದಿಯ ನಾಯಕರು ಕಟ್ಟಿದ ಸುಂದರ ಕೋಟೆಯಿದು.

ಇದು ಕೇರಳ ರಾಜ್ಯದ ಅತೀ ದೊಡ್ಡ ಕೋಟೆಯೂ ಹೌದು. ಸರಿ ಸುಮಾರು 40 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕೋಟೆ ಹರಡಿಕೊಂಡಿದೆ. ಬತ್ತೇರಿ, ಉದ್ದನೆಯ ಸಮುದ್ರ ಕಿನಾರೆಗೆ ಮುಖಮಾಡಿರುವ ಹಾದಿ, ರಕ್ಷಣೆಗಾಗಿ ಕೋಟೆಯಲ್ಲಿ ಕಾಣುವಂತಹ ಕಿಂಡಿ, ಸಾಗರ ವೀಕ್ಷಣಾ ಗೋಪುರವನ್ನು ನಾವಿಲ್ಲಿ ಕಾಣಬಹುದು.

ಹಿರಿಯ ವೆಂಕಟಪ್ಪನಾಯಕ ಕೋಟೆಯ ನಿರ್ಮಾಣಕ್ಕೆ ಶಿಲನ್ಯಾಸ ಹಾಕಿದರು. ಶಿವಪ್ಪ ನಾಯಕ ನಿರ್ಮಾಣಕಾರ್ಯವನ್ನು ಪೂರ್ಣಗೊ ಳಿಸಿದರು. ಕಾಲಾನಂತರದಲ್ಲಿ ಈ ಕೋಟೆ ಟಿಪ್ಪುವಿನ ವಶವಾಯಿತು. ಟಿಪ್ಪು ಮರಣದ ಬಳಿಕ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿಯ ವಶವಾ ಯಿತು. ಕೋಟೆಯಲ್ಲಿ ಯಾವುದೇ ಅರಮನೆಗಳು ಇದ್ದ ಕುರುಹುಗಳಿಲ್ಲ. ಈ ಕೋಟೆ ಶಸ್ತಾಸ್ತಗಳ ರಕ್ಷಣೆ ಹೆಸರುವಾಸಿಯಾಗಿತ್ತೆಂದು ಇತಿಹಾಸಕಾರರು ಹೇಳುತ್ತಾರೆ. ಕೋಟೆಯ ಮುಖ್ಯದ್ವಾರದ ಬಳಿ ಮುಖ್ಯಪ್ರಾಣ ದೇವಾಲಯವಿದೆ. ಬೇಕಲ ಕೋಟೆಯಂತೆ ಕಾಸರಗೋಡು ಜಿಲ್ಲೆಯಲ್ಲಿ ಕುಂಬ್ಳೆ ಕೋಟೆ, ಚಂದ್ರಗಿರಿ ಕೋಟೆ, ಹೊಸದುರ್ಗ ಕೋಟೆ ಎಂಬ ಕೋಟೆಗಳಿವೆ.

ಬೇಕಲ ಕೋಟೆಯು ಕಾಸರಗೋಡು-ಕನ್ನೂರು ಮುಖ್ಯ ರಸ್ತೆಯಲ್ಲಿದ್ದು, ಕೋಟೆಗೆ ಕಾಸರಗೋಡಿನಿಂದ 15 ಕಿ.ಮೀ., ಮಂಗಳೂರು ನಗರದಿಂದ 68 ಕಿ.ಮೀ., ಹಾಗೂ ಬೆಂಗಳೂರಿನಿಂದ ಸುಮಾರು 369 ಕಿ.ಮೀ. ದೂರದಲ್ಲಿದೆ. ಕೋಟೆಯ ಸಮೀಪದಲ್ಲೇ ಬೇಕಲ್‌ ಫೋರ್ಟ್‌ ರೈಲು ನಿಲ್ದಾಣವಿದ್ದು, ಪ್ರವಾಸಿಗರಿಗೆ ಅನುಕೂಲವಾಗಿದೆ. ಇದಲ್ಲದೆ ಕೋಟೆಯ ಬಳಿ ಬೇಕಲ ಬೀಚ್‌ ಮತ್ತು ರೆಡ್‌ ಮೂನ್‌ ಬೀಚ್‌ ಎಂಬ ಅವಳಿ ಬೀಚ್‌ಗಳಿದ್ದು, ಒಟ್ಟಿನಲ್ಲಿ ಉತ್ತಮವಾದ ಪ್ರವಾಸಿ ತಾಣವಾಗಿದೆ.

 -ಗಿರೀಶ್‌ ಪಿ.ಎಂ.

ವಿವಿ ಕಾಲೇಜು ಮಂಗಳೂರು

ಟಾಪ್ ನ್ಯೂಸ್

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

uUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22-food

UV Fusion: ಬನ್ನಿ ಅಡುಗೆ ಮಾಡೋಣ!

21-uv-fusion

UV Fusion: ನೆನಪುಗಳನ್ನು ಹಸಿರಾಗಿಸುವ ಮಳೆ

20-uk

UV Fusion: ಗುಡ್ಡದ ಭೂತದಲ್ಲಿ ಸಿಲುಕಿದ ಉತ್ತರಕನ್ನಡ

19-uv-fusion

Protect Environment: ಪ್ರಕೃತಿ ರಕ್ಷತಿ ರಕ್ಷಿತಃ

15-alarm-clock

Alarm Clock: ಟಿಕ್‌ ಟಿಕ್‌ ಅಲಾರಾಂ ಗಡಿಯಾರ ಎಲ್ಲಿಗೆ ಹೋಯಿತು ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿPilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.