Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ


Team Udayavani, May 20, 2024, 3:12 PM IST

7-uv-fusion

ಪ್ರೇಕ್ಷಣೀಯ ಸ್ಥಳಗಳು ತನ್ನೊಳಗಿನ ವೈವಿಧ್ಯತೆಯಿಂದ ಎಲ್ಲರ ಕಣ್ಮನ ಸೆಳೆಯುತ್ತದೆ. ಪ್ರವಾಸಿ ತಾಣಗಳ  ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. ನಮ್ಮ ನಾಡಿನಲ್ಲಿ ಸಾಕಷ್ಟು  ಪ್ರೇಕ್ಷಣೀಯ ಸ್ಥಳಗಳಿವೆ. ಅದು ಮಾನವ ಸೃಷ್ಟಿಯಾಗಿದ್ದಿರಬಹುದು, ಇರದೆಯೂ ಇರಬಹುದು.

ಇಂತಹ ಸ್ಥಳಗಳು ಸಾವಿರಾರು ಜನರ ಮನಸ್ಸನ್ನು ಸೆಳೆಯುತ್ತದೆ. ಪ್ರಕೃತಿ ಸೃಷ್ಟಿಯಾಗಿರುವ ನದಿ, ಹೊಳೆ, ಜಲಪಾತಗಳು ನಮಗೆ ನೋಡಲು ಸಿಕ್ಕಂತ ವರವಾಗಿದೆ. ಆ ನೀರಿನ ರಭಸ, ಗಂಭೀರವಾದ ಸದ್ದು, ಹಾಲ್ನೊರೆಯಂತಹ ಬಣ್ಣ ಆಹಾ! ಭೂಮಿಯ ಮೇಲಿನ ಸ್ವರ್ಗ ವೀಕ್ಷಣೆಯೆಂದರೆ ತಪ್ಪಾಗಲ್ಲ.

ಆದರೆ ಆ ಪ್ರವಾಸಿ ತಾಣಗಳ ಸೌಂದರ್ಯತೆ ಹಾಳು ಮಾಡಬಾರದೆಂದು ಎಚ್ಚರಿಸುವ ನಾಮಫ‌ಲಕಗಳನ್ನು ಕಾಣುತ್ತೇವೆ. ಹೀಗಿದ್ದರೂ ಮೂಡರಂತೆ ವರ್ತಿಸುವ  ಕೆಲವರು ಇಂತಹ ಸ್ಥಳಗಳನ್ನು ಹಾಳು ಮಾಡುತ್ತಿದ್ದಾರೆ.

ಪ್ಲಾಸ್ಟಿಕ್‌ಗಳನ್ನು ಹಾಕಿ ಮಣ್ಣಿನ ಮಾಲಿನ್ಯವನ್ನು ಉಂಟು ಮಾಡುತ್ತಾರೆ. ಅರೆಬರೆಯಾಗಿ ಆಹಾರವನ್ನು ತಿಂದು ಮೀನುಗಳಿಗೆ ಹಾಕುತ್ತಾರೆ. ಮಾನವರು ತಿನ್ನುವ ಹಲವು ಆಹಾರಗಳನ್ನು ಮೀನುಗಳಿಗೆ ಅರಗಿಸಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಹಾಗೆಯೇ  ಜಲಪಾತದ ತಂಪಾದ ನೀರಿನ ಹನಿಗಳಿಂದ ಸೋಪು, ಶಾಂಪುವಿನಿಂದ  ಸ್ನಾನ ಮಾಡುತ್ತಾರೆ.

ರಾಸಾಯನಿಕ ಅಂಶಗಳು ಒಳಗೊಂಡಿರುವ ಈ ವಸ್ತುಗಳಿಂದ ನೀರಿನೊಳಗೆ ವಾಸವಾಗಿರುವ ಮೀನುಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ಹೀಗೆ ಮುಂದುವರೆದರೆ ಮತ್ಸ್ಯ ವರ್ಗವೇ ಅಳಿವಿನಂಚಿಗೆ ತಲುಪಲು ಮಾನವರೇ ಕಾರಣವಾಗುತ್ತಾನೆ.

ಒಂದು ರೀತಿಯಾಗಿ ನೋಡಿದರೆ ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯೇ ಮೇಲ್ನೋಟಕ್ಕೆ  ಕಾರಣವೆನ್ನಬಹುದು. ದೃಶ್ಯಗಳನ್ನು ಸೆರೆ ಹಿಡಿಯುವ ಮೂಲಕ ಇತರ ಜನರಿಗೆ ತಲುಪಿಸುತ್ತಾರೆ. ಸ್ಥಳದ  ಶ್ರೇಷ್ಠತೆಯನ್ನು ಹೆಚ್ಚಿಸುತ್ತಾರೆ. ಅದನ್ನು ನೋಡಿ ಬರುವ ಮಾನವರು ನೋಡುವ ಬದಲಿಗೆ ಮಾಲಿನ್ಯ ಮಾಡುವುದೇ ಹೆಚ್ಚು.  ಒಟ್ಟಾರೆಯಾಗಿ ಈ ಸುಂದರ ಪ್ರಕೃತಿಯ ವರವಾದ ಇಂಥ ಸ್ಥಳಗಳನ್ನು ಸ್ವಾರ್ಥಿಯಾದ ಮಾನವ ನಾಶಮಾಡುತ್ತಿದ್ದಾನೆ.

ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಪ್ರವಾಸಿ ತಾಣಗಳು ನೋಡಲು ಸಿಗುವುದೇ ಕಷ್ಟಕರವಾಗಬಹುದು.  ಮಾನವರಿಗೆ ಇಂಥ ಕೃತ್ಯಗಳನ್ನು ಮಾಡಬಾರದೆಂಬ ಮನವರಿಕೆ ಮೂಡಬೇಕಾಗಿದೆ. ತಮ್ಮಂತೆ ಇತರ ಜಲಚರಗಳಿಗೆ ಬದುಕುವ ಅರ್ಹತೆ ಇದೆ ಎಂಬ ಸತ್ಯ ಮನವರಿಕೆಗೆಯಾಗಬೇಕು. ನಮ್ಮೀ ಪ್ರಕೃತಿಯ ಸೌಂದರ್ಯ ಕಾಪಾಡಲು ಮಾನವರೇ ಮುಂದಾಗಬೇಕು. ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಡುವ ಜವಾಬ್ದಾರಿ ನಮ್ಮದ್ದಾಗಿದೆ. ಹಾಗಾಗಿ ಇನ್ನಾದರೂ ಪ್ರವಾಸಿ ತಾಣಗಳನ್ನು ಶುಚಿಯಿಂದಿರಿಸಿ.

-ತೃಪ್ತಿ ಗುಡಿಗಾರ್‌

ಎಂ. ಪಿ. ಎಂ. ಕಾಲೇಜು

ಕಾರ್ಕಳ

ಟಾಪ್ ನ್ಯೂಸ್

Uchila Shree Mahalaxmi temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

Uchila Shree Mahalaxmi Temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

1-saasdsdsa-d

Vikram Misri ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿ

Manjunath Bhandary ಪ್ರಾಕೃತಿಕ ವಿಕೋಪ ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರಕ್ಕೆ ಮನವಿ

Manjunath Bhandary ಪ್ರಾಕೃತಿಕ ವಿಕೋಪ ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರಕ್ಕೆ ಮನವಿ

Subrahmanya: ಕುಮಾರ ಧಾರೆಯಲ್ಲಿ ನೀರಿನ ಮಟ್ಟ ಇಳಿಕೆ

Subrahmanya: ಕುಮಾರ ಧಾರೆಯಲ್ಲಿ ನೀರಿನ ಮಟ್ಟ ಇಳಿಕೆ

Mangaluru ಬೀದಿದೀಪ ಕಂಬಗಳ ಫ್ಯೂಸ್‌ ಬಾಕ್ಸ್‌ಗಳಿಗೆ ಟ್ರಿಪ್ಪರ್‌ ಅಳವಡಿಕೆ

Mangaluru ಬೀದಿದೀಪ ಕಂಬಗಳ ಫ್ಯೂಸ್‌ ಬಾಕ್ಸ್‌ಗಳಿಗೆ ಟ್ರಿಪ್ಪರ್‌ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-uv-fusion

UV Fusion: ಸಿನೆಮಾ

10-mosquiotes

Mosquito: ಮಳೆಗಾಲದ ಸೊಳ್ಳೆಗಳು…!

9-uv-fusion

Love Letter: ನೆನಪಿನಲೆಯಲ್ಲಿ ಪ್ರೀತಿಯ ಪತ್ರ…!

8-uv-fusion

Father: ಬಾಳದಾರಿಯಲ್ಲಿ ಅಪ್ಪ ಎಂಬ ಭರವಸೆ

10-uv-fusion

Kottiyoor Temple: ಕೇರಳದ  ಶಕ್ತಿ ತಾಣ ಕೊಟ್ಟಿಯೂರು

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

ED

ED; ದಿಲ್ಲಿ ಅಬಕಾರಿ ನೀತಿ ಹಗರಣ: 9ನೇ ಆರೋಪಪಟ್ಟಿ ಸಲ್ಲಿಕೆ

Uchila Shree Mahalaxmi temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

Uchila Shree Mahalaxmi Temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

MONEY (2)

Small savings ಮೇಲಿನ ಬಡ್ಡಿದರದಲ್ಲಿ ಬದಲಾವಣೆ ಇಲ್ಲ

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.