UV Fusion: ಏಕಾಂಗಿ ಪಯಣ


Team Udayavani, Sep 17, 2024, 2:25 PM IST

2-uv-fusion

ನನ್ನ ಶೈಕ್ಷಣಿಕ ಕಲಿಕೆ, ಹಾಗೂ ಸಂದರ್ಶನ ನಡೆಸುವ ಉದ್ದೇಶದಿಂದ ನನ್ನ ಜೀವನದಲ್ಲಿಯೇ ಮೊದಲ ಬಾರಿಗೆ ಒಬ್ಬಂಟಿಯಾಗಿ ರಾಜ್ಯದ ರಾಜಧಾನಿ ಬೆಂಗಳೂರಿಗೆ ಪಯಣ ಬೆಳಿಸಿದೆ.

ಆತುರವಾಗಿ ಶುರುವಾದ ನನ್ನ ಪಯಣ ಅಷ್ಟೊಂದು ಸುಸಜ್ಜಿತವಾಗಿ ಏರ್ಪಾಡಾಗಿರಲಿಲ್ಲ. ಆದರೂ ನನ್ನ ಕುಟುಂಬದವರ ಸಹಾಯ ಪಡೆದುಕೊಂಡು ಹೋದೆ. ಆದರೆ ನನಗೆ ಏನು ಒಂದು ದೈರ್ಯ, ಕೈಯಲ್ಲಿ ದುಡ್ಡು ಒಂದಿದ್ರೆ ಎಲ್ಲಿಗೆ ಬೇಕಾದರೂ ಹೋಗಿ ಬರಬಹುದು ಎಂದು.

ಪಯಣದುದ್ದಕ್ಕೂ ನನ್ನ ಜೀವನದಲ್ಲಿ ಇದುವರೆಗೂ ನಾನು ಸರಿ ತಪ್ಪುಗಳನ್ನು ಯೋಚಿಸುತ್ತಾ ಕುಳಿತಾಗ, ನನಗೆ ಅರಿವಾದದ್ದು ಎಂದರೆ ನನ್ನ ಜೀವನದಲ್ಲಿ ಇದುವರೆಗೆ ತೆಗೆದುಕೊಂಡ ನಿರ್ಧಾರಗಳಲ್ಲಿ ಯಾವ ಒಂದು ನಿರ್ಧಾರವು ಸರಿಯಾಗಿಲ್ಲ ಏಕೆಂದರೆ ತೆಗೆದುಕೊಂಡ ನಿರ್ಧಾರಗಳ ಮೇಲೆ ನನ್ನ ಜೀವನ ಪಯಣ ಸಾಗೆಯಿಲ್ಲ.

ಜೀವನದಲ್ಲಿ ನಾನು ಯೋಚಿಸಿದ್ದೆ ಬೇರೆ ಸಾಗಿದ ರೀತಿಯೇ ಬೇರೆ. ಮೂಲತಃ ನಾನು ಕಡಿಮೆ ಸ್ನೇಹಿತರನ್ನು ಹೊಂದಿದ್ದು, ಕೊನೆವರೆಗೂ ಸ್ನೇಹವನ್ನು ಉಳಿಸಿಕೊಳ್ಳಬೇಕೆಂಬ ಬಯಕೆ. ಪಯಣದುದಕ್ಕೂ ಯೋಚಿಸಿದಾಗ ನನಗೆ ಅರಿವಾಗಿದ್ದು ಆ ಒಂದು ಬಯಕೆಗೆ ನಾನು ಅರ್ಹನಲ್ಲ.

ಅದೇರೀತಿ ವಿದ್ಯಾಭ್ಯಾಸ ಕುರಿತು ತೆಗೆದುಕೊಂಡ ನಿರ್ಧಾರಗಳು, ನನ್ನ ಪದವಿ ಮುಗಿಯುವವರೆಗೂ ಯಾವುದೇ ರೀತಿಯ ಭವಿಷ್ಯದ ಕುರಿತು ಆಲೋಚನೆ ಮಾಡದೇ ಕಲಿಕೆ ಮುಗಿಸಿದೆ. ನಂತರ ಅರಿವಾದದ್ದು ನನ್ನ ಪದವಿಯಿಂದ ಏನು ಪ್ರಯೋಜನ ಇಲ್ಲ ಎಂದು.

ನಂತರ ಹೇಗಾದರೂ ಮಾಡಿ ಉದ್ಯೋಗ ಹುಡುಕಬೇಕೆಂಬ ಆಸೆಯಿಂದ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಲು ಮುಂದಾದೆ, ಆದರೆ ಅಲ್ಲಿಯೂ ಕೂಡ ದಿಟ್ಟ ನಿರ್ಧಾರವಿಲ್ಲದೆ ಮತ್ತೆ ವಿಫ‌ಲನಾಗಿ ಕೊನೆಗೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆಯಲು ಮುಂದಾದೆ. ಇದೆಲ್ಲವನ್ನೂ ಪಯಣದುದಕ್ಕೂ ಯೋಚಿಸಿದಾಗ ಅರಿವಾದದ್ದು ಯಾಕೆ ನನ್ನ ವಿದ್ಯಾಭ್ಯಾಸದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲವೆಂದು.

ಒಂದು ವೇಳೆ ಒಳ್ಳೆಯ ಪದವಿ ಅಥವಾ ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದರೆ ಅಂದುಕೊಂಡ ಹಾಗೆ ಇಷ್ಟೊತ್ತಿಗೆ ಒಂದು ಒಳ್ಳೆಯ ಉದ್ಯೋಗದಲ್ಲಿ ಇರುತ್ತಿದ್ದೆ. ಇದೆಲ್ಲವನ್ನೂ ಯೋಚಿಸಿಕೊಂಡು ಸಾಗುವಾಗ ಇದಕ್ಕೆ ಮೂಲ ಕಾರಣ ಹುಡುಕುವ ತವಕ ಹೆಚ್ಚಿತ್ತು. ಈ ರೀತಿಯಾಗಲು ನನ್ನ ಸೋಮಾರಿತನ ಕಾರಣವೋ, ನನ್ನ ಕುಟುಂಬದ ಜವಾಬ್ದಾರಿಗಳು ಕಾರಣವೋ ಯಾವುದು ಎಂಬುದು ತಿಳಿಯದಂತಾಗಿ ಮುಖವಿಶ್ಮಿತನಾದೆ.

ಆದರೆ ನನ್ನ ಏಕಾಂಗಿ ಪಯಣವು ನಾನು ಮಾಡಿದ ಎಲ್ಲ ಸರಿತಪ್ಪುಗಳನ್ನು ನನಗೆ ಅರಿವು ಮಾಡಿಕೊಟ್ಟು, ಜೀವನದಲ್ಲಿ ಬಂದ ಯಾವ ಸಂಬಂಧವನ್ನು ಕಳೆದುಕೊಳ್ಳಬೇಡ  ಹಾಗೂ ತೆಗೆದುಕೊಂಡ ನಿರ್ಧಾರಗಳ ಮೇಲೆ ನಿರಂತರ ಪರಿಶ್ರಮ ಕಾರ್ಯನಿರ್ವಹಿಸಬೇಕು ಎಂದು ಮನವರಿಕೆ ಮಾಡಿಕೊಟ್ಟಿತು. ಜೀವನದಲ್ಲಿ ಪ್ರತಿಯೊಬ್ಬರೂ ಏಕಾಂಗಿಯಾಗಿ ಹೋರಾಟ ನಡೆಸುವುದು ಅತ್ಯವಶ್ಯಕ ಮತ್ತು ಅನಿವಾರ್ಯ ಕೂಡ.

-ಮಡು ಮೂಲಿಮನಿ

ಧಾರವಾಡ

ಟಾಪ್ ನ್ಯೂಸ್

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.