ಸಹನೆಯಿಂದ ಸಾಗಿದರೆ ಮುಳ್ಳಿನ ಹಾದಿಯೂ ಹೂವಿನ ಹಾದಿ


Team Udayavani, Apr 15, 2021, 3:13 PM IST

thumbs-up

ಸುಖ ದುಃಖಗಳು ವ್ಯಕ್ತಿತ್ವದ ಮಾನಸಿಕ ಅನುಭೂತಿ. ಅವು ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತದೆ.

ಆದ್ದರಿಂದ ಅವು ಒಂದು ನಾಣ್ಯದ ಎರಡು ಮುಖಗಳಂತೆ. ಕಷ್ಟ ಸುಖಗಳ ಸಮ್ಮಿಲನವೇ ಬದುಕು. ಜೀವನದಲ್ಲಿ ಕಷ್ಟ ಸುಖಗಳು ಬರುತ್ತವೆ. ಹೋಗುತ್ತಲೂ ಇರುತ್ತವೆ. ಸುಖ ಮಾತ್ರ ಬರಬೇಕೆಂದರಾಗದು, ಅದೇ ರೀತಿ ಬಂದ ಕಷ್ಟಗಳು ತತ್‌ಕ್ಷಣ ಕರಗಬೇಕೆಂದರೂ ಸಹ ಸಾಧ್ಯವಿಲ್ಲ.

ವಾತಾವರಣದಲ್ಲಿ ಬೇಸಗೆ, ಮಳೆ, ಚಳಿಗಾಲ, ಒಂದರ ಅನಂತರ ಮತ್ತೂಂದು ಬದಲಾಗುತ್ತಲೆ ಇರುತ್ತದೆ. ಅದೇ ರೀತಿ ಜೀವನದಲ್ಲಿ ಕಷ್ಟ ಸುಖಗಳು ಸಾಮಾನ್ಯ.

ಓರ್ವ ಮಟ ಮಟ ಮಧ್ಯಾಹ್ನದಲ್ಲಿ ಕಾಲಿಗೆ ಪಾದರಕ್ಷೆ ಇಲ್ಲದೆ ನಡೆದ ಕಾಲು ಸುಡುವಾಗ ಅಯ್ಯೋ ನನಗೆ ಪಾದರಕ್ಷೆ ಇಲ್ಲವಲ್ಲ, ಎಲ್ಲರಿಗೂ ಇದೆ. ಆದರೆ ನನಗಿಲ್ಲ ಎಂದು ಬೇಸರಪಟ್ಟ. ಸ್ವಲ್ಪ ಸಮಯದ ಬಳಿಕ ದೇಗುಲವನ್ನು ತಲುಪಿದ. ಅಲ್ಲಿ ಕಾಲಿಲ್ಲದ ಭಿಕ್ಷುಕ ಭಿಕ್ಷೆ ಬೇಡುತ್ತಿದ್ದ. ಆಗ ತನಗೆ ಚಪ್ಪಲಿ ಇಲ್ಲದೇ ಇದ್ದರೂ ಕಾಲಿವೆ ಎಂದು ನೆಮ್ಮದಿ ಹೊಂದಿದ.

ಕಷ್ಟಗಳು ನಿನ್ನ ಶತ್ರುಗಳಲ್ಲಿ ನಿನ್ನ ಬಲ ಮತ್ತು ಬಲಹೀನತೆಗಳನ್ನು ತಿಳಿಸಿಕೊಡುವ ನಿಜವಾದ ಸ್ನೇಹಿತ. ಶ್ರಮ ದೇಹಕ್ಕೆ ಹೇಗೆ ಒಳಿತನ್ನು ಉಂಟು ಮಾಡುತ್ತದೆಯೋ ಅದೇ ರೀತಿ ಕಷ್ಟಗಳು ಬದುಕಿಗೆ ಬಲ ನೀಡುತ್ತದೆ. ಬಂಗಾರ ಕುಲುಮೆ ನೋಡಿ ಹೆದರದು ಬದಲಾಗಿ ಅದರಲ್ಲಿ ಬಿಸಿಯಾಗಿ, ಕರಗಿ ಮಾಲಿನ್ಯ ದೂರ ಮಾಡಿಕೊಂಡು ಹೊಳಪು ಹೆಚ್ಚಿಸಿಕೊಳ್ಳುತ್ತದೆ. ಅದೇ ರೀತಿ ಉತ್ತಮರು ಸಹ ಕಷ್ಟಕ್ಕೆ ಕುಗ್ಗರು.

ಆ ಅನುಭವದಿಂದ ಪಾಠ ಕಲಿತು, ನಮ್ಮಲ್ಲಿರುವ ಲೋಪಗಳನ್ನು ದೂರ ಮಾಡಿ, ಬದುಕು ಸರಿಪಡಿಸಿಕೊಂಡು ಮತ್ತಷ್ಟು ಉತ್ತಮವಾಗಿ ಜೀವನ ಕಟ್ಟಿಕೊಳ್ಳಬೇಕು. ಕಷ್ಟಗಳು ಸುತ್ತುವರೆದಾಗ ಧೈರ್ಯ ತೆಗೆದುಕೊಳ್ಳಬೇಕು. ರಸ್ತೆ ಮೇಲೆ ನಡೆಯುವಾಗ ನಾಯಿಗಳು ಹಿಂಬಾಲಿಸಿದಾಗ ನೀವು ಓಡಲು ಆರಂಭಿಸಿದರೆ ಅವುಗಳು ನಿಮ್ಮ ಹಿಂದೆ ಬರುತ್ತದೆ. ಆದರೆ ನೀವು ಅವುಗಳನ್ನು ಹೆದರಿಸಿದರೆ ಬೆದರಿ ಓಡಿ ಹೋಗುತ್ತದೆ.

ಕಷ್ಟ ಬಂದಾಗ, ನೋವಾದಾಗ ಅದರಿಂದ ದೂರ ಹೋಗುವ, ಊಹಿಸಿದ್ದು ನಡೆಯತ್ತದೆ ಎಂದು ಚಿಂತಿಸುತ್ತಾ ಪಲಾಯನವಾದಿಯಾಗಬಾರದು.

ಧೈರ್ಯದಿಂದ ಎದುರಿಸಬೇಕು. ಆಗ ಬಯಸಿದ್ದು, ಸಾಧಿಸಬಹುದು. ಜೀವನವನ್ನು ಖುಷಿಯಾಗಿ ಕಳೆಯಬಹುದು. ಶ್ರೀ ರಾಮಚಂದ್ರ ಅರಣ್ಯವಾಸದ ಕಷ್ಟಗಳನ್ನು ತೊಂದರೆ ಎಂದು ತಿಳಿಯದೆ ಇಷ್ಟಪಟ್ಟು ಅನುಭವಿಸಿದ್ದರಿಂದ ಗೆಲುವು ಸುಲಭವಾಗಿ ದೊರಕಿತು. ಇದರಿಂದ ವಿಜಯಲಕ್ಷ್ಮೀ, ಸೀತಾಮಹಾಲಕ್ಷ್ಮೀ, ರಾಜ್ಯ ಲಕ್ಷ್ಮೀಯನ್ನು ಹೊಂದಲು ಸಾಧ್ಯವಾಯಿತು.

ಪ್ರತಿಯೊಬ್ಬರ ಬದುಕು ಹೂವಿನ ಹಾಸಿಗೆಯಲ್ಲ, ಅಲೆಗಳಿಲ್ಲದೆ ಸಮುದ್ರವಿಲ್ಲ, ಮುಳ್ಳಿಲ್ಲದ ಗುಲಾಬಿಯಿಲ್ಲ,ಅದೇ ರೀತಿ ಸಮಸ್ಯೆಗಳಿಲ್ಲದೆ ಬದುಕಿಲ್ಲ ಜೀವನದಲ್ಲಿ ಸುಖ ಸಂತೋಷಗಳು ಮಾತ್ರವಲ್ಲ ದುಃಖ ಕಷ್ಟಗಳನ್ನು ಸಹಿತ ಆನಂದದಿಂದ ಸಹಿಸುವುದನ್ನು ಕಲಿತುಕೊಳ್ಳಬೇಕು. ಮರದ ರೆಂಬೆಗಳನ್ನು ಕತ್ತರಿಸಿದರೂ ಸಹ ಅವು ಯಾವ ರೀತಿ ಚಿಗುರುತ್ತದೆಯೋ ಅದೇ ರೀತಿ ಕಷ್ಟಗಳಿಗೆ ಹೆದರದೇ ಮುನ್ನುಗ್ಗಬೇಕು. ಕತ್ತಲು ಶಾಶ್ವತವಲ್ಲ ಬೆಳಕು ಬಂದೇ ಬರುತ್ತದೆ.

ಕಲ್ಲು ವರ್ಷಾನುಗಟ್ಟಲೇ ನೀರಿನಲ್ಲಿದ್ದರೂ ಸಹಿತ ಅದು ಮೆತ್ತಗೇ ಆಗುವುದೇ ಇಲ್ಲ, ಅದೇ ರೀತಿ ಕಷ್ಟಗಳೆಷ್ಟೆ ಬಂದರೂ ಸಹಿತ ಎದುರಿಸಿ ನಿಲ್ಲುವಂತವರಾಗಬೇಕು.ಯಾರು ಕಷ್ಟ-ಸುಖ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುತ್ತಾರೋ ಅವರೇ ಸ್ಥಿತ ಪ್ರಜ್ಞರು. ಬದುಕೆಂದರೆ ಕಲಿಯುವುದರ ಮೂಲಕ ಬದಲಾವಣೆ ಮಾಡಿಕೊಳ್ಳುವುದು. ನಾವು ಈ ಪ್ರಪಂಚವನ್ನು ಸ್ವರ್ಗವನ್ನಾಗಲಿ ನರಕವನ್ನಾಗಲಿ ಮಾಡಿಕೊಳ್ಳಬಹುದು.

ಒಂದು ವೇಳೆ ಬದುಕು ಮುಳ್ಳಿನ ಹಾದಿ ಆದರೂ ಸಹಿತ ಸಹನೆಯಿಂದ ಸಾಗಿದರೆ ಅದು ಹೂವಿನ ಹಾದಿ ಆಗುತ್ತದೆ. ಎಲ್ಲವೂ ನಮ್ಮ ಕೈಯಲ್ಲಿ ಇವೆ. ನಮ್ಮ ಬದುಕಿನ ಗಾಡಿ ನಡೆಸುವ ಚಕ್ರ ನಮ್ಮಲ್ಲೇ ಇದೆ.


ಪ್ರಥ್ವಿನಿ ಡಿ’ಸೋಜಾ, ಆಳ್ವಾಸ್‌ ಕಾಲೇಜು, ಮೂಡುಬಿದಿರೆ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.