UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ


Team Udayavani, Apr 19, 2024, 12:59 PM IST

10-fusion

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವಂತಹ ಅನೇಕ ಜಾತ್ರೆಗಳಲ್ಲಿ ವಿಶೇಷ ಸ್ಥಾನ ಪಡೆದ ಜಾತ್ರೆ ಅಂದರೆ ಅದು ಅನಂತಾಡಿ ಮೆಚ್ಚಿ ಜಾತ್ರೆ.

ಅನಂತಾಡಿ ಎಂಬ ಊರು ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ. 7 ಮಂದಿ ಅಕ್ಕ-ತಂಗಿ ಉಳ್ಳಾಲ್ತಿ ಅಮ್ಮನವರಲ್ಲಿ ಅನಂತಾಡಿಯ ಉಳ್ಳಾಲ್ತಿ ಅಮ್ಮನವರು ಕೂಡ ಒಬ್ಬರಾಗಿದ್ದಾರೆ. ಈ ಜಾತ್ರೆಯು ಫೆಬ್ರವರಿ – ಮಾರ್ಚ್‌ ತಿಂಗಳ ಮಾಯಿಯ ಹುಣ್ಣಿಮೆ ದಿನದಂದು ನಡೆಯುತ್ತದೆ. ಅನಂತಾಡಿ ಜಾತ್ರೆ ಬಂತು ಅಂದರೆ ಈ ಊರಿನ ಜನರಿಗೆ ಹಬ್ಬದ ವಾತಾವರಣವಿದ್ದಂತೆ, ಈ ಜಾತ್ರೆಗೆ ಹೊರ ರಾಜ್ಯ ಜಿಲ್ಲೆಯಿಂದಲೂ ಜನ ಬರುತ್ತಾರೆ, ಅನಂತಾಡಿಯ ಬಂಟ್ರಿಂಜ ಎಂಬಲ್ಲಿ ಈ ಜಾತ್ರೆ ನಡೆಯುತ್ತದೆ. ಇದು ಹೆಚ್ಚು ಜನ ಸೇರಿ ಆಚರಿಸುವಂತಹ ಜಾತ್ರೆಯಾಗಿದೆ. ಈ ಕ್ಷೇತ್ರಕ್ಕೆ ಜನರು ಹರಕೆ ಹಾಗೂ ಹರಕೆಯ ರೂಪದಲ್ಲಿ ವಸ್ತುಗಳನ್ನು ಕೊಡುತ್ತಾರೆ.

ಸಾಮಾನ್ಯವಾಗಿ ನಾವು ದೇವಸ್ಥಾನದಲ್ಲಿ ಒಂದು ಮೊಗ(ಮೂರ್ತಿ) ಇರುವ ದೇವರನ್ನು ನೋಡಿರುತ್ತೇವೆ. ಆದರೆ ಅನಂತಾಡಿ ಉಳ್ಳಾಲ್ತಿ ಅಮ್ಮನ ಮೆಚ್ಚಿ ಜಾತ್ರೆಯ ವಿಶೇಷ ಏನೆಂದರೆ ಇಲ್ಲಿ ಉಳ್ಳಾಲ್ತಿ ಅಮ್ಮನಿಗೆ 3 ಮೊಗಗಳಿವೆ  ಚಿನ್ನ, ಬೆಳ್ಳಿ, ಚಂದನದ ಮೊಗಗಳಿವೆ. ಚಂದನದ ಮೊಗವನ್ನು ಸಂಪೂರ್ಣ ರಕ್ತ ಚಂದನದಿಂದ ಮಾಡಲಾಗಿದೆ.

ಬೆಳ್ಳಿಯ ಮೊಗದ ದೇವಿಯ ದರ್ಶನದ ಬಲಿಯನ್ನು ಮಹಿಳೆಯರು ನೋಡಬಾರದೆಂದು ಹಿಂದಿನಿಂದಲೂ ಬಂದ ಸಂಪ್ರದಾಯವಿದೆ. ಹಿಂದೆ ಮಹಿಳೆ ಒಬ್ಬರು ಬೆಳ್ಳಿ ಮೊಗದ ಬಲಿ ನಡೆಯುವಾಗ ಕದ್ದು ನೋಡಿದ್ದರು. ಆಗ ಅವರು ಆ ಸ್ಥಳದಲ್ಲಿಯೇ ಕಲ್ಲಾಗಿದ್ದಾರೆ ಎಂಬ ಕಥೆಯೂ ಇದೆ. ಈ ಎಲ್ಲ ಮೊಗವನ್ನು ಜಾತ್ರೆಯ ದಿನ ಆರಾಧಿಸಲಾಗುತ್ತದೆ ಮತ್ತು ತ್ರಿಮೂರ್ತಿಗಳನ್ನು ಇಟ್ಟುಕೊಂಡು ಬಲಿ ಹೊರಡಲಾಗುತದೆ. ಉಳ್ಳಾಲ್ತಿ ಅಮ್ಮನ ಜಾತ್ರೆಯ ಬಳಿಕ ಇಲ್ಲಿ ಪರಿವಾರದ ದೈವಗಳಿಗೆ ನೇಮ ನಡೆಯುತ್ತದೆ. ಇದನ್ನು ನೋಡುವುದು ಕಣ್ಣಿಗೆ ಹಬ್ಬದಂತಿರುವುದು.

ಈ ಕ್ಷೇತ್ರದ ಇನ್ನೊಂದು ವಿಶೇಷ ಏನೆಂದರೆ ಅದು ಧರ್ಮ ಮೆಚ್ಚಿ ಜಾತ್ರೆ . ಇದು 12 ವರ್ಷಗಳಿಗೊಮ್ಮೆ ನಡೆಯುವ ಧರ್ಮ ಮೆಚ್ಚಿ ಜಾತ್ರೆಯಾಗಿದೆ. ಇದು ಅನಂತಾಡಿಯ ಚಿತ್ತರಿಗೆ ಎಂಬಲ್ಲಿ ನಡೆಯುತ್ತದೆ. ಈ ಧರ್ಮ ಮೆಚ್ಚಿ ನಡೆಯುವಾಗ ಇಲ್ಲಿ ಸಂಪೂರ್ಣ ಉಚಿತವಾಗಿರುತ್ತದೆ ಯಾವುದೇ ಹಣದ ವ್ಯಾಪಾರ ಇಲ್ಲಿ ನಡೆಯುದಿಲ್ಲ. 12 ವರ್ಷ ಕಾದು ಕುಳಿತು ಈ ಧರ್ಮ ಮೆಚ್ಚಿ ಜಾತ್ರೆ ನೋಡುವುದೇ ಒಂದು ಸಂತೋಷದ ವಿಷಯವಾಗಿದೆ.  ಈ ಸುಂದರ ಭಕ್ತಿಯ ಜಾತ್ರೆಯನ್ನು ನೋಡುವುದೇ ಚೆಂದ.

-ಮಲ್ಲಿಕಾ ಜೆ.ಬಿ.

ಅನಂತಾಡಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

Ganesh Chaturthi: ಗಣೇಶ ಬಂದ

14-wayanad

Wayanad: ವಯನಾಡಿನ ಪ್ರಕೃತಿ ವಿಕೋಪ ಮತ್ತು ಮಾನವೀಯತೆ

13-

UV Fusion: ಅನಾಹುತಕಾರಿ ಮಾನವ

11

UV Fusion: ನಮ್ಮ ಔನ್ನತ್ಯವನ್ನು ನಾವೇ ನಿರ್ಧರಿಸಬೇಕಲ್ಲವೇ?

10-

Childhood: ಈ ಬಾಲ್ಯ ಮತ್ತೊಮ್ಮೆ ಮರುಕಳಿಸಬಾರದೇ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.