ನಿಮ್ಮೊಂದಿಗೆ ಎಂದಾದರೂ ಮಾತನಾಡಿದ್ದೀರಾ?


Team Udayavani, Jun 8, 2020, 6:31 AM IST

Self-Realization

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಇಲ್ಲಪ್ಪ, ನನ್ನೊಂದಿಗೆ ನಾನು ಮಾತಾಡಿಕೊಳ್ಳಲು ಶುರು ಮಾಡಿದರೆ ನೋಡಿದವರು ಹುಚ್ಚು ಎಂದುಕೊಂಡಾರು ಎಂಬುದು ಬಹುತೇಕರ ಉತ್ತರ.

ಅವರು ಹೀಗೆ ಹೇಳಲೂ ಒಂದು ಕಾರಣವಿದೆ. ಮಾನವ ಒಬ್ಬ ಸಂಘಜೀವಿ. ಹೀಗಾಗಿಯೇ ಪ್ರತಿನಿತ್ಯ ನಮ್ಮ ನೆರೆಹೊರೆಯವರೊಂದಿಗೆ ಒಂದಿಲ್ಲೊಂದು ಕಾರಣಕ್ಕಾಗಿ ಮಾತನಾಡುತ್ತಲೇ ಬಂದಿದ್ದೇವೆ.

ನಮ್ಮ ಅಗತ್ಯತೆಗಳ ಪೂರೈಸಿಕೊಳ್ಳಲು ಇರುವ ಮಾರ್ಗಗಳಲ್ಲಿ ಸಂವಹನವೂ ಒಂದಾಗಿರುವ ಕಾರಣ ನಮಗದು ಅನಿವಾರ್ಯವೂ ಹೌದು.

ಆದರೆ ಬೇರೆಯವರೊಂದಿಗೆ ಮಾತನಾಡುವುದನ್ನು ಬಿಟ್ಟು ನಮ್ಮೊಡನೆ ನಾವೇ ಮಾತನಾಡಿಕೊಳ್ಳುವ ಸಂವಹನವೊಂದಿದೆ. ಅದೇ ಅಂತರ್ ವ್ಯಕ್ತೀಯ ಸಂವಹನ. ನಮ್ಮೊಡನೆ ನಾವೇಕೆ ಮಾತಾಡಬೇಕು. ಇದರಿಂದ ನಮಗೇನು ಲಾಭ ಎಂಬ ಪ್ರಶ್ನೆ ಈಗ ನಿಮ್ಮನ್ನು ಕಾಡದೆ ಇರದು.

ಯಾವುದೇ ವಿಷಯವಾಗಲಿ ನಮಗೆ ಸ್ಪಷ್ಟತೆ ಇದ್ದಾಗ ಮಾತ್ರ ಮತ್ತೂಬ್ಬರಿಗೆ ಅದನ್ನು ವಾರ್ಗಯಿಸಲು ಅಥವಾ ಅದಕ್ಕೆ ಪೂರಕ ಮಾಹಿತಿಯನ್ನು ನಾವೇ ಪಡೆಯಲು ಸಾಧ್ಯವಾಗುತ್ತದೆ. ನಮ್ಮಲ್ಲೇ ಗೊಂದಲಗಳು ಜಾಸ್ತಿಯಾದಾಗ, ಹಿಂಜರಿಕೆ ಉಂಟಾದಾಗ ನಮ್ಮೊಡನೆ ನಾವೇ ನಡೆಸುವ ಸಂವಹನ ಬಹಳಷ್ಟು ಪ್ರಯೋಜನಕಾರಿ.

ನಾನು ಇತರರಿಗಿಂತ ಭಿನ್ನವಾ?, ನನ್ನನ್ನೇಕೆ ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ?, ಯೋಚಿಸಿದ್ದನ್ನು ಹೇಳಿಕೊಳ್ಳಲು ನನ್ನಿಂದೇಕೆ ಆಗುತ್ತಿಲ್ಲ? ಎಂಬಿತ್ಯಾದಿ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲ ಯುವಜನರನ್ನೂ ಕಾಡುತ್ತವೆ. ಎಲ್ಲರೂ ನಮ್ಮನ್ನು ಆತ್ಮೀಯತೆಯಿಂದ ಕಾಣಬೇಕು, ಪ್ರೀತಿಸಬೇಕೆ ಎಂದು ಎಲ್ಲರೂ ಭಾವಿಸುತ್ತಿದ್ದಾರೆಯೇ ಹೊರತು ಆ ಕೆಲಸವನ್ನು ನಾವೆಷ್ಟು ಮಾಡುತ್ತಿದ್ದೇವೆ ಎಂದು ಒಮ್ಮೆಯೂ ತಮ್ಮನ್ನು ತಾವು ಪ್ರಶ್ನಿಸಿಕೊಂಡಿಲ್ಲ. ಒಂದೊಮ್ಮೆ ಆ ಕೆಲಸ ಸರಿಯಾಗಿ ನಡೆಯುತ್ತಿದ್ದರೆ ಅದೆಷ್ಟೋ ಸಂಬಂಧಗಳು ಇಂದು ಮುರಿದುಬೀಳುವ ಹಂತಕ್ಕೆ ತಲುಪುತ್ತಿರಲಿಲ್ಲವೇನೋ.

ನಮ್ಮೊಡನೆ ನಾವೇ ನಡೆಸುವ ಸಂವಹನಕ್ಕೆ ಬಹಳ ಶಕ್ತಿಯಿದೆ. ಬೇರೆಯವರನ್ನು ಪ್ರಶ್ನಿಸುವುದು ಬಹಳ ಸುಲಭ. ಆದರೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವುದಿದೆಯಲ್ಲ ಅದು ಎಲ್ಲರಿಗೂ ಬಹಳ ಕಷ್ಟ. ದಿನದ ಆರಂಭ ಅಥವಾ ಅಂತ್ಯದಲ್ಲಿ ನಿಮ್ಮೊಡನೆ ನೀವೇ ಮಾತಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಈ ದಿನ ನಾನೇನು ಮಾಡಬಹುದು ಅಥವಾ ಈ ದಿನ ನಾನು ಏನೇನು ಮಾಡಿದೆ.

ಅದರಲ್ಲಿ ಸರಿ ತಪ್ಪುಗಳೆಷ್ಟಿದ್ದವು ಎಂಬುದನ್ನು ಪ್ರಶ್ನಿಸಿಕೊಳ್ಳಿ. ಇದರಿಂದ ನಿಮ್ಮ ತಪ್ಪಿನ ಅರಿವಾಗುವುದರ ಜತೆಗೆ ಅದನ್ನು ತಿದ್ದಿಕೊಳ್ಳಲೂ ಅವಕಾಶ ದೊರೆಯುತ್ತದೆ. ನಿಮ್ಮ ವ್ಯಕ್ತಿತ್ವವೂ ಉತ್ತಮವಾಗಲು ಸಾಧ್ಯವಾಗುತ್ತದೆ. ನೆನಪಿರಲಿ ನಿಮ್ಮ ಉತ್ತಮ ಸ್ನೇಹಿತ ಯಾವತ್ತಿದ್ದರೂ ನೀವೇ. ಹಾಗಾಗಿಯೇ ಆ ಸ್ನೇಹಿತನ ಬಳಿ ಎಲ್ಲರಿಗಿಂತ ತುಸು ಜಾಸ್ತಿಯೇ ಮಾತನಾಡಿ.

– ಪ್ರಸನ್ನ ಹೆಗಡೆ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.