UV Fusion: ಮಾಯಾ ತಾಣ


Team Udayavani, May 11, 2024, 10:15 AM IST

5-uv-fusion

ಮಾಯಾ ತಾಣ ಎಂದ ತಕ್ಷಣವೇ ಬೇರೇನು ಯೋಚಿಸಬೇಡಿ ಇದೇನು ರಂಬೆ ಊರ್ವಶಿ ಮೇನಕೆಯವರು ನರ್ತಿಸುವ ಸ್ವರ್ಗವಲ್ಲ, ಆದರೂ ಇಂದಿನ ಕಾಲೇಜಿಗೆ ಹೋಗುವ ಯುವಕರಿಗೆ ಒಂದು ರೀತಿಯಲ್ಲಿ ಇದು ಸ್ವರ್ಗವೇ ಆಗಿದೆ ಅದೇ ಬಸ್‌ ತಂಗುದಾಣ.

ಬಸ್‌ ತಂಗುದಾಣವೆಂದರೆ ಕೇವಲವಾಗಿ ಯೋಚಿಸಬೇಡಿ. ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ನೋಡುವ ಹಾಗೆ ನಾವು ಕೂಡಾ ನಮ್ಮ ಮೂರನೇ ಕಣ್ಣನ್ನು ತೆರೆದು ನೋಡಿದರೆ ಇಲ್ಲಿ ನಡೆಯುವ ಸತ್ಯಾನುಸತ್ಯ ಘಟನೆಗಳನ್ನು ವೀಕ್ಷಿಸಬಹುದಾಗಿದೆ. ಪ್ರತಿಯೊಬ್ಬರೂ ಕೂಡ ತಂಗುದಾಣಕ್ಕೆ ಹೋಗಿಯೇ ಹೋಗಿರುತ್ತಾರೆ. ಆದರೆ ಯಾರು ಕೂಡ ತಂಗುದಾಣವನ್ನು ಸೂಕ್ಷ್ಮವಾಗಿ ಗಮನಿಸುವುದಿಲ್ಲ, ಎಲ್ಲರೂ ಕೂಡ ಅವರವರ ಗೋಜಿನಲ್ಲಿ ಇರುತ್ತಾರೆ. ಯಾವಾಗಾದರೂ ಮನೆ ಕಾಣುತ್ತೆ ಎಂಬ ಸಂದಿಗ್ಧ ಸ್ಥಿತಿಯಲ್ಲಿ ಇರುತ್ತಾರೆ.

ಆದರೆ ಇನ್ನೂ ಕೆಲವರಿಗೆ ತಂಗುದಾಣವೆಂದರೆ ಮೋಜು. ಅಂತವರಲ್ಲಿ ನಾನು ಕೂಡ ಒಬ್ಬ. ನಾವು ಕಾಲೇಜಿನಲ್ಲಿ ಕಾಲ ಕಳೆಯುವುದಕ್ಕಿಂತ ಹೆಚ್ಚಿನ ಕಾಲವನ್ನು ತಂಗುದಾಣದಲ್ಲಿ ಕಳೆಯುತ್ತೇವೆ. ಹಾಗೆಂದರೆ ಕಾಲೇಜಿಗೆ ಹೋಗದೆಯೇ ಬಂಕ್‌ ಹಾಕಿ ಬಸ್‌ ಸ್ಟ್ಯಾಂಡ್‌ ನಲ್ಲಿ ಇರುತ್ತೇವೆಂದು ಅರ್ಥವಲ್ಲ. ನಮ್ಮೂರಿಗೆ ತೆರಳುವ ಬಸ್ಸಿನ ಸಮಯದಲ್ಲಿ ಅಷ್ಟೊಂದು ಅಂತರವಿದೆಯೆಂದು. ಅದರಲ್ಲೂ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಮ್ಮೆ ನಿಲ್ದಾಣದ ಬಗ್ಗೆ ಕೇಳಿದರೆ ಗುಣಗಾನ ಮಾಡಿ ಹೇಳುವುದನ್ನು ಒಮ್ಮೆ ಕೇಳಬೇಕು.

ಈ ಬಸ್‌ ನಿಲ್ದಾಣದ ಒಂದು ಮೂಲೆಯಲ್ಲಿ ನಿಂತು ಸುತ್ತಲೂ ಗಮನಿಸಬೇಕು ಒಬ್ಬೊಬ್ಬರು ಒಂದೊಂದು ಪಾತ್ರದಲ್ಲಿ ಕಾಣುತ್ತಾರೆ. ಅದನ್ನು ನೋಡುವುದೇ ಒಂದು ತರನಾದ ಮಜ ಸಿಗುತ್ತದೆ. ಒಂದೆಡೆಗೆ ಈಗ ತಾನೇ ಪದವಿ ಪೂರ್ವ ತರಗತಿಗೆ ಬಂದಿರುವಂತಹ ಹುಡುಗರು ಗೇಲಿ ಮಾಡುತ್ತಿರುವಂತಹ ಸನ್ನಿವೇಶ. ಇನ್ನೊಂದೆಡೆಗೆ ಒಂದಿಷ್ಟು ಹದಿಹರೆಯದ ಹುಡುಗರ ಮನಸ್ಸು ಚಂಚಲವಾಗಿ ಅವರು ತಮ್ಮ ಪ್ರೇಯಸಿಯನ್ನು ಹುಡುಕುವ ಅಲೋಚನೆಯಲ್ಲಿಯೇ ಮುಳುಗಿರುತ್ತಾರೆ.  ಇನ್ನೊಂದು ಗುಂಪಿದೆ ಇದು ಗುಂಪಿಗೆ ಸೇರದ ಪದದ ತರನಾದ ಗುಂಪು ಇವರಿಗೆ ಯಾವುದೇ ರೀತಿಯ ಪ್ರಪಂಚದ ಮೇಲೆ ಅರಿವಿರುವುದಿಲ್ಲ ಹಾಗೆ ತಾವು ಇಹಲೋಕ ತ್ಯಜಿಸಿದ ಹಾಗೆ ಮೊಬೈಲ್‌ ಗೇಮಿಂಗ್‌ ನ ಒಳಗಡೆಯೇ ಹೊಕ್ಕಿ ಮುಳುಗಿರುತ್ತಾರೆ.

ಒಂದೆಡೆ ಯುವಕರ ಮೈ ರೋಮಾಂಚನಗೊಳಿಸುವ ಕಿತ್ತಾಟಗಳು  ನಡೆಯುತ್ತಿರುತ್ತದೆ. ಅದರೊಂದಿಗೆ ಸಾರ್ವಜನಿಕರು ಮತ್ತು ಬಸ್‌ ನಿರ್ವಾಹಕರೊಂದಿಗಿನ ಜಗಳವಂತು ಸರ್ವೇ ಸಾಮಾನ್ಯವಾಗಿದೆ.  ಇವೆಲ್ಲವನ್ನು ಒಂದೆಡೆ ನೋಡಲು ಸಿಕ್ಕಿರುವುದೇ ನಮ್ಮ ಭಾಗ್ಯ. ಸಿನಿಮಾದಲ್ಲೂ ಕೂಡ ಎಲ್ಲವನ್ನು ಒಂದೇ ಬಾರಿ ನೋಡಲು ಕಾಣುವುದಿಲ್ಲ ಆದರೆ ಇಂಥ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲವನ್ನು ಕಾಣಬಹುದಾಗಿದೆ ಕೆಲವರಿಗೆ ತಂಗುದಾಣವೆಂದರೆ ಕಿರಿಕಿರಿ ಅನ್ನಿಸುತ್ತದೆ. ಆದರೆ ನಮಗೆ ಒಂಥರ ಮನಸ್ಸಿಗೆ ಮುಂದ ನೀಡುವಂತಹ ಸ್ಥಳವಾಗಿದೆ. ಎಲ್ಲಿಯಾದರೂ ಒಬ್ಬಂಟಿಯಾಗಿ ದೂರ ಪ್ರಯಾಣಿಸಿದಲ್ಲಿ ಈ ತಂಗುದಾಣವೇ ಒಮ್ಮೊಮ್ಮೆ ನಮ್ಮ ಮನೆಯಾಗಿದ್ದು ಕೂಡ ಉಂಟು. ಇದು ಸಾರ್ವಜನಿಕ ಸ್ಥಳವಾಗಿದ್ದರಿಂದ ನಮ್ಮ ಮನೆಯನ್ನು ಹೀಗೆ ಸ್ವತ್ಛಂದವಾಗಿ ಇಟ್ಟುಕೊಳ್ಳುತ್ತೇವೋ ಹಾಗೆ ಸಾರ್ವಜನಿಕ ಸ್ಥಳ ಹಾಗೂ ಸಾರ್ವಜನಿಕ ವಸ್ತುಗಳನ್ನು ಕೂಡ ಜಾಗರೂಕತೆಯಿಂದ ಕಾಯ್ದುಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಾಗಿದೆ..

-ಸುದೀಪ ಮಾಳಿ

ಎಂ ಎಂ ಕಾಲೇಜು ಶಿರಸಿ.

ಟಾಪ್ ನ್ಯೂಸ್

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Transfer of four IPS officers; New SP for Raichur, Koppal

IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

SHIVAMOGGA

Shimoga; ಆರಿದ್ರಾ ಮಳೆ ಅಬ್ಬರ, ಮೈದುಂಬಿದ ತುಂಗೆ, ಶರಾವತಿ, ಭದ್ರೆ

ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ

ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Transfer of four IPS officers; New SP for Raichur, Koppal

IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.