UV Fusion-Cinema: ಕಜಕಿಸ್ತಾನ ಸಿನಿಮಾ-ಓಲ್ಡ್‌ ಮ್ಯಾನ್‌


Team Udayavani, Jul 10, 2024, 5:15 PM IST

15-old-man

ಇದು ಕಜಕ್ತಿಸ್ತಾನದ ಸಿನಿಮಾ.

ಕಜಕಿಸ್ತಾನದ ಭಾಷೆ ಹಾಗೂ ರಷ್ಯನ್‌ ಭಾಷೆಯಲ್ಲೂ 2012 ರಲ್ಲಿ ರೂಪಿತವಾದ ಸಿನಿಮಾ. ಅರ್ಮೆಕ್‌ ತಸ್ರುನೊವ ಇದರ ನಿರ್ದೇಶಕ.

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ ಅರ್ನೆಸ್ಟ್‌ ಹೆಮ್ಮಿಂಗ್ವೆ ನ ದಿ ಓಲ್ಡ್‌ ಮ್ಯಾನ್‌ ಆ್ಯಂಡ್‌ ದಿ ಸೀ ಕಾದಂಬರಿಯಿಂದ ಪ್ರಭಾವಿತವಾಗಿರುವಂಥದ್ದು. ಅದರಲ್ಲಿನ ಪಾತ್ರಗಳಿಗೂ ಈ ಸಿನಿಮಾದ ಪಾತ್ರಗಳಿಗೂ ಸಾಕಷ್ಟು ಸಾಮ್ಯತೆಗಳಿವೆ.

ಒಬ್ಬ ಇಳಿ ವಯಸ್ಸಿನವ ಕಾಸಿನ್‌ (ಎರ್ಬುಲಟ್‌ ತೊಗೊಜೊಕೊವ), ತನ್ನ ಮಗಳು ಹಾಗೂ ಮೊಮ್ಮಗನೊಂದಿಗೆ ಒಂದು ಹಳ್ಳಿಯಲ್ಲಿ ವಾಸಿಸುತ್ತಿರುತ್ತಾನೆ. ಆದರೆ ಈತ ಮೀನುಗಾರನಲ್ಲ, ಸಮುದ್ರವೂ ಇಲ್ಲ. ಬದಲಾಗಿ ಒಬ್ಬ ಕುರಿಗಾಹಿ. ಕುದುರೆಯೊಂದಿಗೆ ಬದುಕುತ್ತಿರುತ್ತಾನೆ. ಫ‌ುಟ್‌ ಬಾಲ್‌ ಪ್ರೇಮಿ.

ಅಜ್ಜ ಮತ್ತು ಮೊಮ್ಮಗನೊಂದಿಗಿನ ಆತ್ಮೀಯತೆ ದಿನೇದಿನೆ ಗಟ್ಟಿಯಾಗುತ್ತಾ ಹೋಗುತ್ತದೆ. ಒಮ್ಮೆ ಸಂದರ್ಭಗಳೆಂಬ ಸಂಕಷ್ಟಗಳು ಬಿರುಗಾಳಿಯಂತೆ ತೋಳದ ರೂಪದಲ್ಲಿ ಅವನ ಮೇಲೆ ಎರಗಿದಾಗ ಅದನ್ನು ಎದುರಿಸುವ ಕಾಸಿನ್‌ ಗೆ ಬದುಕು ದೊಡ್ಡದಾಗಿ ಕಾಣುತ್ತದೆ. ಹಾಗೆಯೇ ತನ್ನ ಮೂಲ ಸಂಸ್ಕೃತಿ-ಸಂಗತಿಗಳನ್ನು ತನ್ನ ಮುಂದಿನ ತಲೆಮಾರಿಗೆ ವರ್ಗಾಯಿಸುವ ಕಾರ್ಯವನ್ನೂ ಯಶಸ್ವಿಯಾಗಿ ಮಾಡುತ್ತಾನೆ. ಇದೊಂದು ಸಾಹಸಮಯ ಹಾಗೂ ಜೀವನ ಪ್ರೀತಿಯನ್ನು ಹೆಚ್ಚಿಸುವಂಥ ಸಿನಿಮಾ.

ಇದೂ ಸಹ ಆಸ್ಕರ್‌ ಗೆ ವಿದೇಶಿ ಭಾಷೆಯ ಚಲನಚಿತ್ರಗಳ ವಿಭಾಗದಲ್ಲಿ ಕಜಕಿಸ್ತಾನದಿಂದ ನಾಮ ನಿರ್ದೇಶನಗೊಂಡಿತ್ತು. ಪ್ರಶಸ್ತಿ ಗೆಲ್ಲುವಲ್ಲಿ ಸಫ‌ಲವಾಗಲಿಲ್ಲ. ಆದರೆ ಇದರ ನಿರ್ದೇಶಕ ಆರ್ಮೆಕ್‌ ಬಹಳ ಸುದ್ದಿ ಮಾಡಿದ್ದರು. ವಿವಿಧ ಪ್ರಶಸ್ತಿಗಳನ್ನು ಪಡೆಯಿತಲ್ಲದೇ ಸಿನಿಮಾ ಪ್ರಿಯರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಜಕಿಸ್ತಾನದ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ಇದೂ ಸಹ ಸ್ಥಾನ ಪಡೆದಿದೆ.

-ಅಪ್ರಮೇಯ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

Ganesh Chaturthi: ಗಣೇಶ ಬಂದ

14-wayanad

Wayanad: ವಯನಾಡಿನ ಪ್ರಕೃತಿ ವಿಕೋಪ ಮತ್ತು ಮಾನವೀಯತೆ

13-

UV Fusion: ಅನಾಹುತಕಾರಿ ಮಾನವ

11

UV Fusion: ನಮ್ಮ ಔನ್ನತ್ಯವನ್ನು ನಾವೇ ನಿರ್ಧರಿಸಬೇಕಲ್ಲವೇ?

10-

Childhood: ಈ ಬಾಲ್ಯ ಮತ್ತೊಮ್ಮೆ ಮರುಕಳಿಸಬಾರದೇ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.