UV Fusion: ಸಿನೆಮಾ


Team Udayavani, Jun 28, 2024, 3:57 PM IST

11-uv-fusion

ಈ ಬಾರಿಯ ನಮ್ಮ ವಿಶ್ವ ಸಿನಿಮಾ ಪರ್ಯಟನೆಯಲ್ಲಿ ಉಲ್ಲೇಖಿಸಲಾದ ಎರಡು ಸಿನಿಮಾಗಳು ನಿಮಗೆ ಪರಿಚಯವೇ. ಆದರೆ ಈ ಎರಡೂ ಸಿನಿಮಾಗಳು ಬಹಳ ವಿಶಿಷ್ಟವಾದವು. ತೀರಾ ಅಪರೂಪದ್ದು ಎನಿಸುವಂಥವು. ಎರಡೂ ಬೇರೆ ಬೇರೆ ಪ್ರಾಂತ್ಯದ ಸಿನಿಮಾಗಳು ಎನ್ನುವುದು ವಿಶೇಷ.

ಶಿರಿನ್

ಈ ಸಿನಿಮಾವನ್ನು ಪ್ರಯೋ ಗಾತ್ಮಕ ಎನ್ನುವ ಕಾರಣಕ್ಕೂ ನೋಡಬೇಕು. ಬಹಳ ವಿಭಿನ್ನವಾದ ಆಲೋಚನೆಯ ಸಿನಿಮಾ. ಪರ್ಷಿಯನ್‌ ಭಾಷೆಯ ಇರಾನ್‌ ದೇಶದ ನಿರ್ದೇಶಕ ಅಬ್ಟಾಸ್‌ ಕೀರೋಸ್ತಮಿ ನಿರ್ದೇಶಿಸಿರುವ ಸಿನಿಮಾವಿದು. ಇದರ ಹೆಸರೇ ಶಿರಿನ್‌. 2008 ರಲ್ಲಿ ನಿರ್ಮಾಣವಾದುದು.

ಇದೊಂದು ಸಣ್ಣ ಕಥೆ. ಪರ್ಸಿಯಾದ ರಾಜಕುಮಾರ ಖೊಸ್ರೊ ಹಾಗೂ ಆರ್ಮೇನಿಯಾದ ರಾಜಕುಮಾರಿ ಶಿರಿನ್‌ ನಡುವಿನ ಪ್ರೇಮದ ಕುರಿತಾದದ್ದು.  ಈ ಸಿನಿಮಾದ ವಿಶೇಷವೇನೆಂದರೆ ಇಡೀ ಸಿನಿಮಾ ನಡೆಯುವುದು ಚಿತ್ರಮಂದಿರದಲ್ಲಿ. ಅಂದರೆ ಚಿತ್ರಮಂದಿರದೊಳಗೆ ಮತ್ತೂಂದು ಸಿನಿಮಾ. ಸುಮಾರು 110 ಕ್ಕೂ ಹೆಚ್ಚು ಮಂದಿ ಚಿತ್ರನಟಿಯರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‌

ಅಭಿನಯವೆಂದರೆ ಏನು ಗೊತ್ತೇ? ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡುತ್ತಾ ದೃಶ್ಯಗಳಲ್ಲಿನ ಭಾವನೆಗಳಿಗೆ ತಮ್ಮ ಮುಖ ಭಾವಗಳ ಮೂಲಕ ಪ್ರತಿ ಸ್ಪಂದಿಸು ವುದಷ್ಟೇ. ಸಿನಿಮಾ ಸಾಗುವಾಗ ಹಿನ್ನೆಲೆಯಲ್ಲಿ ಪರದೆಯ ಮೇಲಿನ ಪಾತ್ರಗಳ ಸಂಭಾಷಣೆ, ಸಂಗೀತ ಕೇಳಿಸುತ್ತದೆ. ಉಳಿದಂತೆ ಕ್ಯಾಮೆರಾ ಸಾಗುವುದು ಈ ಚಿತ್ರಮಂದಿರದೊಳಗೆ ಕುಳಿತ ಪ್ರೇಕ್ಷಕರು ಅಂದರೆ ನಟಿಯರ ಮುಖದ ಮೇಲೆ. ಆ ಮೂಲಕವೇ ನವರಸಗಳ ಭಾವನೆಯನ್ನು ಕಟ್ಟಿಕೊಡುವ ಪ್ರಯತ್ನ.

ಹಾಗಾಗಿ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರ ಮುಖದಿಂದ ಕದಲುವುದೇ ಇಲ್ಲ. ಬಹಳ ವಿಶಿಷ್ಟವೆನಿಸಿರುವ ಸಿನಿಮಾ. ಒಂದು ನಾಟಕವನ್ನು ನೋಡುತ್ತಿದ್ದೇವೆಂದುಕೊಂಡು ಕೇಳಿದರೆ ಹೇಗಿರಬಹುದು? ಅಥವಾ ರಂಗದ ಬದಲಿಗೆ ಪ್ರೇಕ್ಷಕರಿಗೆ ಅಭಿಮುಖವಾಗಿ ಕುಳಿತು ನಾಟಕವನ್ನು ಅನುಭವಿಸಿದರೆ (ಕೇವಲ ಸಂಭಾಷಣೆ, ಹಿನ್ನೆಲೆ ಸಂಗೀತ ಇತ್ಯಾದಿ ಮೂಲಕ ಶ್ರವಣ) ಹೇಗಿರಬಹುದು. ಅಂಥದೊಂದು ವಿಶಿಷ್ಟ ಅನುಭವ ನೀಡುವ ಸಿನಿಮಾವಿದು.

ಎ ಟ್ರೂಮನ್‌ ಷೋ

ಈ ಸಿನಿಮಾ ಬಗ್ಗೆ ಎಲ್ಲರಿಗೂ ತಿಳಿದಿರಬಹುದು. ಇದೂ ಸಹ ವಿಶಿಷ್ಟವಾದುದೇ. ಈಗ ಎಲ್ಲ ನೋಡ್ತೀವಲ್ಲ ಟಿವಿ ಗಳಲ್ಲಿ. ರಿಯಾಲಿಟಿ ಷೋಗಳ ಭರ್ಜರಿ ಜಮಾನಾದಲ್ಲಿದ್ದೇವಲ್ಲ. ಇದಕ್ಕೆಲ್ಲ ಮೂಲ ಎನ್ನುವಂತೆ ರೂಪುಗೊಂಡ ಸಿನಿಮಾ ಇದು ಎ ಟ್ರೂಮನ್‌ ಷೋ. ಇಂದು ಬಿಗ್‌ ಬಾಸ್‌ ರಿಯಾಲಿಟಿ ಷೋನಲ್ಲಿ ಏನೆಲ್ಲ ನಡೆಯುತ್ತೋ ಆದೇ ರೀತಿಯಲ್ಲಿ ಕಥಾ ನಾಯಕ‌ನ ನಿತ್ಯದ ಬದುಕಿನ ಪ್ರತಿ ಕ್ಷಣಗಳನ್ನೂ ಅವನಿಗೆ ಅರಿವಿಲ್ಲದೇ ದಾಖಲಿಸಿಕೊಳ್ಳುತ್ತಾ ಟಿವಿ ಗಳಲ್ಲಿ ಲೈವ್‌ ಪ್ರಸಾರ ಮಾಡುವಂಥ ಕಥಾವಸ್ತುವಿನದ್ದು.

ಇದೊಂದು ಸೈಕಲಾಜಿಕಲ್‌ ಕಾಮಿಡಿ ಸಿನಿಮಾ. ಪೀಟರ ವೇರ್‌ ಸಿನಿಮಾವನ್ನು ನಿರ್ದೇಶಿಸಿದ್ದರು. ಜಿಮ್‌ ಕೆರಿ ಕಥಾ ನಾಯಕನಾಗಿ ಅಭಿನಯಿಸಿದ್ದರು. ಇದರ ಮೂಲ ಚಿತ್ರಕಥೆ ಒಂದು ಸೈನ್ಸ್‌ ಫಿಕ್ಷನ್‌ ನದ್ದಾಗಿತ್ತು. ನ್ಯೂಯಾರ್ಕ್‌ ಸಿಟಿಯಲ್ಲಿ ನಡೆಯುವಂಥದ್ದು.

ಒಂದಿಷ್ಟು ಬದಲಾವಣೆಯೊಂದಿಗೆ ಸಿನಿಮಾ ತೆರೆ ಕಂಡದ್ದು 1998 ರಲ್ಲಿ. ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಯಶಸ್ವಿಯಾಯಿತು. ಆಸ್ಕರ್‌ ಸೇರಿದಂತೆ ಹಲವಾರು ಪ್ರಶಸ್ತಿಗಳೂ ಬಂದವು.

ಒಂದು ಆಸಕ್ತಿದಾಯಕ ಸಂಗತಿಯೆಂದರೆ ಈ ಸಿನಿಮಾಕ್ಕೆ ಬರೀ ನಾಯಕರನ್ನಷ್ಟೇ ಆಯ್ಕೆ ಮಾಡಿರಲಿಲ್ಲ, ನಿರ್ದೇಶಕರನ್ನೂ ಸಹ. ಅವರ್‌ ಬಿಟ್‌ ಇವರ್‌ ಬಿಟ್‌ ಮತ್ತೂಬ್ಬರು ಬೇಕು ಎಂದು ಹುಡುಕಿ ಹುಡುಕಿ ಕೊನೆಗೇ ಪೀಟರ್‌ ವೇರ್‌ಅನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕ ತನ್ನ ನಿರೂಪಣೆ ಶೈಲಿಗೆ ಚಿತ್ರಕಥೆಯನ್ನೂ ಬದಲಿಸಿಕೊಂಡರು. ಹಾಗಾಗಿ ಅದು ಸೈಕಲಾಜಿಕಲ್‌ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿತು. ಬಿಗ್‌ ಬಾಸ್‌ ಕ್ಕಿಂತ ಮೊದಲು ಇದನ್ನು ನೋಡಿ.

-ಅಪ್ರಮೇಯ

ಟಾಪ್ ನ್ಯೂಸ್

Udupi ಆಟೋ ರಿಕ್ಷಾ ಢಿಕ್ಕಿ: ಕಾರು ಜಖಂ

Udupi ಆಟೋ ರಿಕ್ಷಾ ಢಿಕ್ಕಿ: ಕಾರು ಜಖಂ

Manipal ಗಸ್ತು ನಿರತ ಪೊಲೀಸ್‌ ಸಿಬಂದಿಗೆ ಸ್ಕೂಟರ್‌ ಢಿಕ್ಕಿ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

1-eqwwewq

Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

10-mosquiotes

Mosquito: ಮಳೆಗಾಲದ ಸೊಳ್ಳೆಗಳು…!

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

Udupi ಆಟೋ ರಿಕ್ಷಾ ಢಿಕ್ಕಿ: ಕಾರು ಜಖಂ

Udupi ಆಟೋ ರಿಕ್ಷಾ ಢಿಕ್ಕಿ: ಕಾರು ಜಖಂ

Manipal ಗಸ್ತು ನಿರತ ಪೊಲೀಸ್‌ ಸಿಬಂದಿಗೆ ಸ್ಕೂಟರ್‌ ಢಿಕ್ಕಿ

pragyananda

Superbet Chess; 4ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗೆಲುವು

1-dsdsadasdas

Olympics ಆ್ಯತ್ಲೀಟ್ಸ್‌  ಸಿದ್ಧ:  ಪ್ರಧಾನಿ ಮೋದಿ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.