UV Fusion: ಬನ್ನಿ ಅಡುಗೆ ಮಾಡೋಣ!


Team Udayavani, Sep 8, 2024, 4:30 PM IST

22-food

ಇತ್ತೀಚಿಗೆ ಜಗತ್ತು ಸುಗಮ ಜೀವನಕ್ಕಾಗಿ ಹೊಸ ಹೊಸ ದಾರಿಗಳನ್ನು ಹಿಡಿಯುತ್ತಿದೆ. ಅದು ತಂತ್ರಜ್ಞಾನವೇ ಆಗಿರಬಹುದು ಅಥವಾ ಇನ್ಯಾವುದೋ. ಆದರೆ ಸುಗಮ ಜೀವನಕ್ಕಾಗಿ ಹಿಂದಿನ ಜೀವನದಲ್ಲಿದ್ದ ಕೆಲವೊಂದು ಖುಷಿ ಬಾಂಧವ್ಯವನ್ನು ನಾವುಗಳು ಎಲ್ಲೋ ಮರೆಯುತ್ತಿದ್ದೇವೆ. ಇದಕ್ಕೆ ಉದಾಹರಣೆ ಸಾವಿರ ಇರಬಹುದು. ನನ್ನ ಅನುಭವ ಮತ್ತು ನಾನು ಕಂಡ ಒಂದು ವಿಷಯ ಅಂದರೆ ಅದು ಮದುವೆ ಮನೆಯ ಅಡುಗೆ!

ಒಂದು ಮನೆಯಲ್ಲಿ ಮದುವೆ ಅಂದರೆ ಊರಿಗೆ ಊರೇ ಸಂಭ್ರಮದಲ್ಲಿರುತ್ತಿತ್ತು. ಗೆಳೆಯರು, ಸಂಬಂಧಿಕರು ಎಲ್ಲರೂ ಕೈ ಜೋಡಿಸಿ ತಯಾರಿ ನಡೆಯುತ್ತಿತ್ತು. ಇನ್ನು ಮದುವೆ ಮನೆಯವರ ಸಂಭ್ರಮ ಹೇಳಿ ಮುಗಿಯುವಂಥದ್ದಲ್ಲ ಬಿಡಿ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಮದುವೆ ಕಾರ್ಯಕ್ರಮ ನಡೆಸುವುದು ಎಂದರೆ ಸಣ್ಣ ವಿಚಾರ ಅಲ್ವೇ ಅಲ್ಲ. ಆರು ತಿಂಗಳ ಹಿಂದೆಯೇ ತಯಾರಿ ಶುರು. ಇನ್ನು ಮದುವೆಯ ದಿನ ಮನೆಯೊಳಗಡೆ ಹುಡುಗಿಯರೆಲ್ಲಾ ಒಂದು ದಿನಕ್ಕೆ ಕನ್ನಡಿ ಪ್ರೇಮಿಗಳಾಗಿರುತ್ತಾರೆ. ಹೊರಗಿನ ಜವಾಬ್ದಾರಿಯೆಲ್ಲಾ ಹುಡುಗರದ್ದೇ. ಎಲ್ಲ ಜವಾಬ್ದಾರಿಗಳಲ್ಲೂ ದೊಡ್ಡ ಜವಾಬ್ದಾರಿ ಎಂದರೆ ಅದು ಅಡುಗೆ. ಉಳಿದ ದಿನಗಳೆಲ್ಲಾ ಹೆಂಗಸರೇ ಅಡುಗೆ ಮಾಡಿದರೆ ಆ ಒಂದು ದಿನ ಮಾತ್ರ ಸಂಭ್ರಮದ ಅಡುಗೆ ಹುಡುಗರದ್ದು.

ಮುಂಜಾನೆ ನಾಲ್ಕು ಗಂಟೆಗೆ ಎದ್ದು ಶುಚಿಯಾಗಿ ಬಂದು ಗಣಪನಿಗೆ ಅಕ್ಕಿ ತೆಂಗಿನಕಾಯಿ ಇಟ್ಟು ಭಕ್ತಿಯಿಂದ ಪ್ರಾರ್ಥಿಸಿ ಒಲೆಗೆ ಬೆಂಕಿ ಹಚ್ಚಿದ ಅನಂತರ ಶುರು ಮಾಡಿದರೆ ಮತ್ತೆ ಆ ದಿನದ ಸಂಧ್ಯಾ ಸಮಯದವರೆಗೂ ಪಾತ್ರೆ ಸದ್ದೇ ಡೋಲು ವಾದ್ಯ, ಅಡುಗೆ ಪರಿಮಳವೇ ಸುಗಂಧ ದ್ರವ್ಯ, ಅಡುಗೆ ಮಾಡುವಾಗ ಆದ ಮಸಿಯೇ ಆ ದಿನದ ಬಟ್ಟೆಯ ಚಂದ. ತರಕಾರಿ ತುಂಡರಿಸುವವರು ಒಂದು ಗುಂಪಾದರೆ ಮಸಾಲೆ ಅರೆಯುವವರು ಇನ್ನೊಂದು ಗುಂಪು. ಹೀಗೆ ಪ್ರತಿಯೊಂದಕ್ಕೂ ಒಂದೊಂದು ಗುಂಪು. ಇದರ ನಡುವೆ ತಿನ್ನಲು ಏನಾದರು ಸಿಗುವುದಾ ಎಂದು ಬಾಯಿ ಚಪ್ಪರಿಸುತ್ತಾ ಬಿಸಿ ಪಾತ್ರೆಯ ನಡುವೆ ಬರುವ ಮಕ್ಕಳ ಗುಂಪು. ಮಕ್ಕಳಿಗೆ ಕೋಲು ಹಿಡಿದು ಗದರಿಸಲು ಹಿರಿಯರಲ್ಲೊಂದು ಗುಂಪು.

ಅಡುಗೆ ರುಚಿಯಾದಾಗ ಸಿಗುವ ಖುಷಿ, ಒಂಚೂರು ತಪ್ಪಾದಾಗ ಆಗುವ ಬೇಸರ, ಕೆಲಸ ತಡವಾದಾಗ ಕೆಲಸ ಕೇಳುವ ಹಾಸ್ಯ ಬೈಗುಳ, ಹೊರಗಿನ ನೆಂಟರು ಬಂದು ಮಾಡುವ ತಮಾಷೆಗೆ ಬರುವ ನಗು ಎಲ್ಲವೂ ಆ ದಿನ ಮನೆಯ ಹಿಂಬದಿಯಲ್ಲಿ ಸಿಗುತ್ತದೆ. ಹುಡುಗರೆಂದರೆ ಹಾಗೆ ತಾನೆ. ಸಾವಿರ ತಲೆನೋವಿದ್ದರೂ ಸಂಭ್ರಮ ಬಂದಾಗ ಎಲ್ಲವನ್ನೂ ಮರೆತು ಬಿಡುತ್ತಾರೆ. ಇಷ್ಟೇ ಅಲ್ಲ ಅಡುಗೆ ಮಾಡಿದ ಮೇಲೆ ಬಡಿಸುವವರಾರು? ಅದೂ ಹುಡುಗರೇ!

ಅರ್ಧ ದಿನ ಮನೆ ಹಿಂಭಾಗದಲ್ಲಿ ಕಳೆದ ನಮಗೆ ಅನ್ನ ಬಡಿಸಲು ನಿಲ್ಲುವಾಗಲೇ ಹೊಸ ಸಂಬಂಧಿಕರ ಪರಿಚಯವಾಗುವುದು. ಅದರಲ್ಲೂ ಕೆಲವೊಂದು ಹಿರಿಯರ ತಮಾಷೆ ಇರುತ್ತೆ. ಎಲ್ಲರಲ್ಲಾಯ್ತು ನಿಂದ್ಯಾವಾಗ ಮದುವೆ. ಅವರ ಮಾತಿಗೆ ಉತ್ತರ ಕೊಡೋದ ಬೇಡ್ವಾ ಎನ್ನೋ ಉಪ ಪ್ರಶ್ನೆ ನಮ್ಮಲ್ಲಿ.

ಎಲ್ಲ ಮುಗಿದ ಅನಂತರ ಮಗಳನ್ನು ಇನ್ನೊಂದು ಮನೆಗೆ ಕಳುಹಿಸುವಾಗ ತಾಯಿಗೆ ಎಷ್ಟು ನೋವಾಗುತ್ತೋ ಅಷ್ಟೇ ನೋವು ನಮಗೆ ಅಡುಗೆ ಪಾತ್ರೆ ತೊಳೆಯಬೇಕು ಅಂದಾಗ ಆಗುವುದು. ಅದಾದ ಅನಂತರ ಅಡುಗೆ ಮನೆಯ ಕಸ ಗುಡಿಸೋದು ಇನ್ನೊಂದು ತಲೆನೋವು. ಎಲ್ಲ ಮುಗಿದು ಊಟ ಮಾಡೋವಾಗ ಸೂರ್ಯನಿಗೂ ಸುಸ್ತಾಗಿರುತ್ತೆ. ಎಲ್ಲ ಆದ ಮೇಲೆ ರಾತ್ರಿ ಮಲಗಲು ಹುಡುಗರೆಲ್ಲರೂ ಅಂಗಳದಲ್ಲಿ ಚಾಪೆ ಹಾಕಿ ಮಲಗೋವಾಗ ಆ ದಿನದ ತಮಾಷೆ ಸಂದರ್ಭ ಹೇಳಿ ನಕ್ಕು ನಕ್ಕು ಹೊಟ್ಟೆ ನೋವು ಶುರುವಾಗಿಬಿಡುತ್ತೆ.

ಈ ಎಲ್ಲ ಅಡುಗೆ ಸಂಭ್ರಮ ಈಗ ಕ್ಯಾಟರಿಂಗ್‌ ಎಂಬ ಆಧುನಿಕತೆಯ ಪಾಲಾಗಿದೆ. ಹಾಗಂತ ಕ್ಯಾಟರಿಂಗ್‌ ತಪ್ಪು ಅಂತ ಹೇಳ್ಳೋದಲ್ಲ. ಒತ್ತಡ ಸುಧಾರಿಸಲು ಈ ರೀತಿ ಮಾಡುವುದೆಲ್ಲಾ ಅಗತ್ಯವೇ. ಆದರೆ ನಾವು ಎಲ್ಲೋ ಒಂದು ಕಡೆ ನಮ್ಮ ಹಿಂದಿನ ಸಂಸ್ಕೃತಿ ಅಡಗಿದ ಮನೆ ಅಡುಗೆಯನ್ನು ಮರೆಯುತ್ತಿದ್ದೇವೋ ಅನಿಸುತ್ತಿದೆ. ನಾವು ಸಣ್ಣ ವಯಸ್ಸಿನಲ್ಲಿ ಅಡುಗೆ ಎಂದಾಗ ಓಡೋಡಿ ಬರುತ್ತಿದ್ದ ಕಾಲ ನಿಧಾನವಾಗಿ ಇತಿಹಾಸ ಸೇರುತ್ತಿದೆ.

 -ದೀಪಕ್‌

ವಿ.ವಿ. ಕಾಲೇಜು, ಹಂಪನಕಟ್ಟೆ

ಟಾಪ್ ನ್ಯೂಸ್

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುವ ರೈತರಿಗೆ ಪೊಲೀಸ್ ಬ್ರೆಕ್

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುತ್ತಿದ್ದ ರೈತರಿಗೆ ಪೊಲೀಸ್ ಬ್ರೇಕ್

ಕಲ್ಯಾಣ ಕರ್ನಾಟಕ ಉತ್ಸವ: ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ತಳಿಗೆ ಸಿಎಂ ಮಾಲಾರ್ಪಣೆ

Kalaburagi: ಕಲ್ಯಾಣ ಕರ್ನಾಟಕ ಉತ್ಸವ… ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

3

Bantwal: ಬಿ.ಸಿ.ರೋಡು ಪ್ರಕರಣ; ಎರಡು ಪ್ರತ್ಯೇಕ ಪ್ರಕರಣ ದಾಖಲು

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು, 10 ಮಂದಿಗೆ ಗಾಯ

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು, 10 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

6

Crime: ಏಕಮುಖ ರಸ್ತೆಯಲ್ಲಿ ಬಂದಿದ್ದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಧಮ್ಕಿ

Bengaluru: ಪೊಲೀಸರ ಹಲ್ಲೆಯಿಂದ ಪತಿ ಸಾವು; ಪತ್ನಿ ದೂರು

Bengaluru: ಪೊಲೀಸರ ಹಲ್ಲೆಯಿಂದ ಪತಿ ಸಾವು; ಪತ್ನಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.