Ferns: ಜರೀಗಿಡಗಳೆಂದು ಜರಿಯಬೇಡಿ


Team Udayavani, Aug 6, 2024, 5:57 PM IST

11-uv-fusion

ಮಳೆಗಾಲದ ಬಣ್ಣ ಹಸುರು. ಮಳೆಯಿಂದ ವಾತಾವರಣವೆಲ್ಲವೂ ತೇವಾಂಶಸಂಭೂತ. ಮಳೆಗೆ ಪ್ರತಿಕ್ರಿಯಿಸಿ ಸಸ್ಯರಾಶಿಗಳೆಲ್ಲವೂ ನಳನಳಿಸುವ ಕಾಲವಿದು. ಹೂಬಿಡುವ ಮರ ಗಿಡಗಳ ನಡುವೆ ಹಸುರಿನಲ್ಲಿ ಮಿಂದು ಬಿಡುವ ಸಸ್ಯಗಳಲ್ಲಿ ಜರೀಗಿಡಗಳೂ ಮುಖ್ಯವಾದವು. ನೆಲ, ಗೋಡೆ, ಮರ, ಛಾವಣಿ ಹೀಗೆ ಸಿಕ್ಕ ಎಲ್ಲೆಂದರಲ್ಲಿ ಜರೀಗಿಡಗಳು ನಿಂತು ಬೆಳೆದುಬಿಡುತ್ತವೆ. ಹೂಬಿಡಲು ಶಕ್ತವಿಲ್ಲದ ಪ್ರಭೇದವಾಗಿದ್ದರೂ ಜರೀಗಿಡಗಳು ಹಸುರಿನಿಂದ ಎಲ್ಲರನ್ನೂ ಆಕರ್ಷಿಸುತ್ತವೆ.

ಜರೀಗಿಡಗಳು ತಮ್ಮ ಉಳಿಯುವಿಕೆಗಾಗಿ ಪರಿಸರದೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತವೆ. ಕೆಲವು ಜರೀಗಿಡಗಳು ವರ್ಷವಿಡೀ ತನ್ನ ಎಲೆಗಳನ್ನು ಉಳಿಸಿಕೊಳ್ಳುತ್ತವೆ. ತದನಂತರ ಬೇಸಗೆಯು ಇವುಗಳಿಗೆ ಸುಪ್ತ ಅವಧಿ. ಅಲ್ಲೂ ಹಸುರನ್ನು ಕಳೆದುಕೊಳ್ಳದಿದ್ದರೆ ಅದನ್ನು ನಿತ್ಯಹರಿದ್ವರ್ಣ ಎಂದು ಪರಿಗಣಿಸಲಾಗುತ್ತದೆ.

ಇವುಗಳ ಇನ್ನೊಂದು ಜಾತಿ ಋತುವಿನ ಕೊನೆಯಲ್ಲಿ ತಮ್ಮ ಎಲೆಗಳನ್ನು ಕಳೆದುಕೊಳ್ಳುತ್ತವೆ ಮತ್ತು ಮುಂದಿನ ವರ್ಷದವರೆಗೆ ಸುಪ್ತವಾಗುತ್ತವೆ. ಕೆಲವು ಜರೀಗಿಡಗಳು ಸ್ಥಿರವಾದ ತಾಪಮಾನ ಮತ್ತು ತೇವಾಂಶದ ಮಟ್ಟವನ್ನು ಹೊಂದಿರುವ ಪರಿಸರದಲ್ಲಿ ಬೆಳೆಯಲು ತಮ್ಮನ್ನು ಬೇಗ ಹೊಂದಿಸಿಕೊಳ್ಳುತ್ತವೆ. ಹೂಗಳ ಜತೆಗೆ ಅಲಂಕಾರಕ್ಕೆ ಇವುಗಳನ್ನು ಬಳಸುವುದುಂಟು.

ಅಡಿಯಂಟಮ್‌ ಎಂಬ ಜರೀಗಿಡ ಪ್ರಜಾತಿಯು 200ಕ್ಕೂ ಹೆಚ್ಚು ಜಾತಿಯ ನೆರಳು ಪ್ರಿಯ ವೈವಿಧ್ಯಗಳನ್ನು ಒಳಗೊಂಡಿದೆ. ಈ ಗಿಡಗಳನ್ನು ಎÇÉೆಂದರಲ್ಲಿ ನೋಡಬಹುದು. ಒಂದು ತರಹದ ಕಾಸ್ಮೋಪಾಲಿಟನ್‌ ಜರೀಗಿಡಗಳ ಗುತ್ಛ. ಕಾಡು ನೇರಳೆ ಅಥವಾ ಕಪ್ಪು ಕಾಂಡದ ಇಕ್ಕೆಲಗಳಲ್ಲಿ ಎಲೆಹಸುರ ಎಲೆಗಳಂತಹ ಬ್ಲೇಡ್‌ -ಫ್ರಾಂಡ್‌ಗಳು. ನೀರಿಗೆ ತೊನೆಯದೇ ನಿಲ್ಲುವ ಈ ಗಿಡಗಳು ಅದುರಿದರೆ ನೋಡಲು ಚೆಂದ.

ಖಡ್ಗದಂತಹ ಎಲೆಗಳನ್ನು ಹೊಂದಿರುವ ಇನ್ನೊಂದು ಕ್ರೋಟನ್‌ ಜರೀಗಿಡ ಸೊÌàರ್ಡ್‌ ಫ‌ರ್ನ್. ಅಡಿಗಳಷ್ಟು ಬೆಳೆಯುವ ಇದರ ಗರಿಯಂತಹ ಎಲೆಗಳು ಆಕರ್ಷಕ. ಅಲಂಕಾರಕ್ಕಾಗಿ ಹೂದಾನಿಗಳಲ್ಲಿ ಇವುಗಳನ್ನು ಬೆಳೆಸುವುದಿದೆ. ಮನೆಯ ಒಳಾಂಗಣದಲ್ಲಿ ಬೆಳೆಯುವ ಅಥವಾ ಬೆಳೆಸುವ ಜರೀಗಿಡ- ಆಸ್ಪೆನಿಯಂ ನಿಡಸ್‌. ಇದು ನೋಡಲು ಪಕ್ಷಿಯ ಗೂಡಿನಂತೆ ಇರುವುದು.

ಅದಕ್ಕೋಸ್ಕರ ಬರ್ಡ್ಸ್‌ ನೆಸ್ಟ್‌ ಫ‌ರ್ನ್ ಎಂಬ ಉಪನಾಮ. ವ್ಯಾಪಕ ಪ್ರಭೇದದ ಈ ಸಸ್ಯವು ಬಾಳೆ ಎಲೆಗಳನ್ನು ಹೋಲುವ ಉದ್ದವಾದ, ದಪ್ಪವಾದ ಫ್ರಾಂಡ್‌-ಎಲೆಗಳನ್ನು ಹೊಂದಿದೆ. ಇದು ಸಾಮಾನ್ಯವಾಗಿ ಮರದ ಕಾಂಡಗಳು ಅಥವಾ ಕಟ್ಟಡಗಳ ಮೇಲೂ ಬೆಳೆಯುತ್ತದೆ. ಇದನ್ನು ಕಂಟೇನರ್‌ನಲ್ಲಿ ನೆಡಬಹುದು, ಹಲಗೆಗಳಿಗೆ ಅಂಟಿಸಬಹುದು ಮತ್ತು ಗೋಡೆಯ ಮೇಲೆ ನೇತುಹಾಕಬಹುದು. ಪಾಚಿ ಎಂದೇ ಪರಿಭಾವಿಸಲಾದ ಆದರೆ ಜರೀಗಿಡವಾಗಿರುವ ಅಜೋಲಾವನ್ನು ಕನಿಷ್ಠ ಒಂದು ಸಾವಿರ ವರ್ಷಗಳಿಂದ ಭತ್ತದ ಗದ್ದೆಗಳಲ್ಲಿ ಸಹವರ್ತಿ ಸಸ್ಯವಾಗಿ ಬಳಸಲಾಗುತ್ತಿದೆ.

ಜರೀಗಿಡಗಳನ್ನು ಆಹಾರ, ಔಷಧ, ಜೈವಿಕ ಗೊಬ್ಬರ, ಅಲಂಕಾರಿಕ ಸಸ್ಯಗಳಾಗಿ ಮತ್ತು ಕಲುಷಿತ ಮಣ್ಣನ್ನು ಸರಿಪಡಿಸಲು ಬಳಸಲಾಗುತ್ತದೆ. ಅಜೋಲಾವನ್ನು ಭತ್ತದ ಗದ್ದೆಗಳಲ್ಲಿ ಮಣ್ಣಿಗೆ ಸಾರಜನಕ ಸ್ಥಿರೀಕರಿಸಲು ಬಳಸಲಾಗುತ್ತದೆ. ಬರ್ಡ್ಸ್‌ ನೆಸ್ಟ್‌ ಫ‌ರ್ನ್ ಗಳು ಗಾಳಿಯನ್ನು ಶುದ್ಧೀಕರಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿವೆ. ಅಡಿಯಂಟಂ ಜರೀಗಿಡವು ಔಷಧೀಯ ಗುಣಗಳಿಗೂ ಖ್ಯಾತವಾಗಿದೆ. ಜರೀಗಿಡಗಳು ಸ್ವಲ್ಪಮಟ್ಟಿಗೆ ಮಣ್ಣನ್ನು ಹಿಡಿದಿಟ್ಟುಕೊಳ್ಳುವಲ್ಲೂ ಸಮರ್ಥವಾಗಿವೆ. ಪರಿಸರದ ಸಮತೋಲನವನ್ನು ತೂಗಿಸುವಲ್ಲಿ ಜರೀಗಿಡಗಳ ಪಾತ್ರವೂ ಹಿರಿದೇ. ಬಗೆಬಗೆಯ ವಿವಿಧಾಕಾರಗಳ ಜರೀಗಿಡಗಳನ್ನು ಮಳೆ ಗಾಲದಲ್ಲಿ ನೋಡಿ ಕಣ್ತುಂಬಿಕೊಳ್ಳಿ.

-ವಿಶ್ವನಾಥ ಭಟ್

ಧಾರವಾಡ

ಟಾಪ್ ನ್ಯೂಸ್

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುವ ರೈತರಿಗೆ ಪೊಲೀಸ್ ಬ್ರೆಕ್

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುತ್ತಿದ್ದ ರೈತರಿಗೆ ಪೊಲೀಸ್ ಬ್ರೇಕ್

ಕಲ್ಯಾಣ ಕರ್ನಾಟಕ ಉತ್ಸವ: ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ತಳಿಗೆ ಸಿಎಂ ಮಾಲಾರ್ಪಣೆ

Kalaburagi: ಕಲ್ಯಾಣ ಕರ್ನಾಟಕ ಉತ್ಸವ… ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

3

Bantwal: ಬಿ.ಸಿ.ರೋಡು ಪ್ರಕರಣ; ಎರಡು ಪ್ರತ್ಯೇಕ ಪ್ರಕರಣ ದಾಖಲು

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

6

Crime: ಏಕಮುಖ ರಸ್ತೆಯಲ್ಲಿ ಬಂದಿದ್ದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಧಮ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.