Life: ಬದುಕು ಕಟ್ಟಿಕೊಳ್ಳುವುದೇ ಸಾಧನೆಯೇ?


Team Udayavani, Jun 24, 2024, 3:01 PM IST

16-uv-fusion

ಚಿಕ್ಕ ವಯಸ್ಸಿನಿಂದ ದೊಡ್ಡವರಾಗುವ ತನಕ ಅಪ್ಪ ಅಮ್ಮನ ಹೊಣೆ ಮಕ್ಕಳು. ಆದರೆ, ಸ್ವತಂತ್ರ ರಾಗಿ ಬದುಕುವ ಹಂತಕ್ಕೆ ಬಂದ ಮೇಲೆ ಮಕ್ಕಳೇ ಸ್ವತಃ ಬದುಕು ಕಟ್ಟಿಕೊಳ್ಳುವುದು ಸ್ವಾವಲಂಬನೆ. ಕೆಲಸ ಹುಡುಕ ಬೇಕು, ತಮಗೆ ಒಪ್ಪುವ  ಕೆಲಸ ಸಿಗುವುದೇ ದೊಡ್ಡ ಸಾಧನೆ. ಸಮಾಜದ ಮುಂದೆ ಗೌರವಯುತವಾಗಿ ಮತ್ತು ಸ್ವಾವಲಂಬನಿಯಾಗಿ ಬದುಕಲು ಕೆಲಸ ಬೇಕು. ಆ ಕೆಲಸಕ್ಕಾಗಿ ಪಡುವ ಪಾಡು ಅವರು ಎದುರಿಸುವ ಸಮಸ್ಯೆಗಳು ಸವಾಲುಗಳು ಸಾಕಷ್ಟು. ಶಿಫಾರಸ್ಸಿನ ಹಾವಳಿ ಮತ್ತು ಅನುಭವದ ಕೊರತೆ.

ಸ್ವಾವಲಂಬನೆಯಾಗಿ ಬದುಕಲು ಹಪಹಪಿಸುವ ನಿರುದ್ಯೋಗಿಗಳ ದೊಡ್ಡ ಸಮಸ್ಯೆಯೆ ಕೆಲಸ. ಬದುಕಿನ ಪರಿಸ್ಥಿತಿಗೆ ರಾಜಿಮಾಡಿಕೊಂಡು ಸಿಕ್ಕಿದ ಕೆಲಸದಲ್ಲೂ ಭಾವ ಪ್ರಾಪ್ತಿಯಾಗದೇ, ಅಂದುಕೊಂಡತೆ ಕೆಲಸ ಸಿಕ್ಕಿಲ್ಲ? ಹಾಗಿರಬೇಕಿತ್ತು? ಹೀಗಿರಬೇಕಿತ್ತು ? ಎನ್ನುವ ಭಾವವೇ ಕಾಡುವಂತದ್ದು?  ಸಿಕ್ಕಿದ್ದೇ ಕೆಲಸ ಬದುಕು ಸಾಗಿದರೆ ಸಾಕು ಅದೇ ಬಾಳಿಗೆ ಪಂಚಾಮೃತ ಎಂದು ಸ್ವೀಕರಿಸುವ ಅದೆಷ್ಟೋ ನೊಂದ ಮನಸುಗಳು. ಅಪೂರ್ಣ ಶಿಕ್ಷಣದ ಕೊರತೆ ಸರಿಯಾಗಿ ಬದುಕು ಕಟ್ಟಿಕೊಳ್ಳಲು ಆಗದೆ ಪರದಾಟ ಪಡುವ ಒಂದಷ್ಟು ಮಂದಿ.

ಬದುಕು ಹೀಗೇಕೆ? ನಾವು ಅಂದುಕೊಂಡಂತೆ ಬದುಕಲು ಸಾಧ್ಯವಾಗುತ್ತಿಲ್ಲ? ನಮಗೆ ಹೀಗೆ ಬೇಕು ಹಾಗೆ ಬೇಕು ಎಂದು ಕುಳಿತರೆ ಏನನ್ನು ಸಾಧಿಸಲು ಸಾಧ್ಯವಾಗದು. ಸತತವಾಗಿ ಪಡುವ ಪ್ರಯತ್ನವು ನಾವು ಅಂದುಕೊಂಡ ದಾರಿಗೆ ಕರೆದೊಯ್ಯುತ್ತದೆ.. ಕಷ್ಟವೇ ಆಗಲಿ ಸ್ವೀಕರಿಸಿ ಸವಾಲಾಗಿ ತೆಗೆದುಕೊಂಡಾಗಲೇ ಯಶಸ್ಸಿನ ಗುರಿ ತಲುಪಲು ಸಾಧ್ಯ.

ಬಡ ಕುಟುಂಬ ಮತ್ತು ಮಧ್ಯಮ ವರ್ಗದವರಿಗೆ ಸ್ವಂತ ಉದ್ಯೋಗ ಕ್ಲಿಷ್ಟಕರವೇ ಮತ್ತು ಕನಸೇ ? ಏಕೆಂದರೆ, ಆರ್ಥಿಕ ಪರಿಸ್ಥಿತಿ ಅಭಾವ. ಸ್ವಂತ ಉದ್ಯೋಗ ಮಾಡಲು ಹಣವಿರಬೇಕು ಸ್ವಂತ ಉದ್ಯೋಗ ಒಂದು ಹಂತಕ್ಕೆ ಬರುವವರೆಗೂ ತಡೆದುಕೊಳ್ಳುವ ಹಣಕಾಸಿನ ವ್ಯವಸ್ಥೆಯ ಭದ್ರತೆ ಬೇಕು. ಆ ಭದ್ರತೆಯ ಬುನಾದಿಗೆ ಆರ್ಥಿಕ ಸಹಾಯವಿಲ್ಲದೆ ವಂಚಿತರಾಗಿ ಕಟ್ಟಿಕೊಳ್ಳುವ ಕನಸುಗಳ ಭಗ್ನವೇ? ಹೇಗೋ ಬದುಕಿದರೆ ಸಾಕು ಸಣ್ಣ ಪುಟ್ಟ ಕೆಲಸದಲ್ಲೇ ಜೀವನ ಕಳೆಯುವಂತೆ ಮನಸು ಮಾಡುವ ಪರಿಸ್ಥಿತಿ.

ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವಂತದಲ್ಲ ನಾವೇ ಅವಕಾಶಗಳ ಬೆನ್ನತ್ತಿ ಹೊರಟಾಗಲೇ ನಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಂಡು ಛಲದಿಂದ ಬದುಕಲು ಸಾಧ್ಯ. ಶ್ರಮವಿಲ್ಲದೆ ಫಲ ಸಿಗದು. ಯಶಸ್ಸು ಶ್ರಮದ ಜತೆಗೆ ಇರುವ ಬೆಟ್ಟ . ಆ ಬೆಟ್ಟವನ್ನು ಹಠ ಛಲ ಪರಿಶ್ರಮದಿಂದ ಹತ್ತಿದಾಗಲೇ ಉನ್ನತ್ತಿ ಸಿಗುವುದು. ಪರಿಶ್ರಮದ ತ್ಯಾಗವೇ ಯಶಸ್ಸಿನ ಸುಂದರ ಹೂಗಳಾಗಿ ಅರಳುವುದು ಮತ್ತು ಬದುಕಿಗೆ ಬಣ್ಣ ತುಂಬುವುದು.  ವಾಣಿ ಮೈಸೂರು

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

12

Uv Fusion: ತ್ಯಾಗಜೀವಿಗಳಾಗೋಣ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.