Father: ಅಪ್ಪನೆಂಬ ಆಕಾಶ


Team Udayavani, Jul 5, 2024, 3:45 PM IST

15-

ಅಪ್ಪ ಎಂದರೆ ಅವ್ಯಕ್ತ ಭಾವಗಳ ಆಗರ. ಮೌನದಲ್ಲೇ ಹೊತ್ತು ಸಾಗುವನು ಬದುಕಿನ ಭಾರ.ತನ್ನ ಆಸೆ ಕನಸುಗಳನ್ನು ತನ್ನೊಡಲ ಕುಡಿಗಳ ಶ್ರೇಯಸ್ಸಿನಲ್ಲಿ ಕಾಣುತ್ತಾ ದಡ ಸೇರುವವರೆಗೂ ಅವರೊಂದಿಗೆ ಇರುವ ಶಕ್ತಿ. ಅಪ್ಪನೆಂದರೆ ಆಪ್ತಮಿತ್ರ.

ಗೆದ್ದಾಗ ಬೆನ್ನು ತಟ್ಟುವಂತೆ ಸೋತಾಗ ಕೈ ಹಿಡಿದು ಮುನ್ನಡೆಸುವವ.ಅಪ್ಪ ಜೊತೆಗಿದ್ದರೆ ಬದುಕಿಗೊಂದು ಭರವಸೆ.ಅವನ ಅವಿರತ ಪರಿಶ್ರಮದ ಫ‌ಲ ಸದಾ ಕುಟುಂಬದ ಸುಖಕ್ಕಾಗಿಯೇ ಮೀಸಲು.ತನ್ನ ಕೊರತೆಗಳನ್ನು ಬಚ್ಚಿಡುತ್ತಾನೆ ಅದೆಷ್ಟು ಜಾಣತನದಿಂದ. ಮಕ್ಕಳ ನಗುವಿಗಾಗಿ ಅವನ ಕಂಗಳು ಹಂಬಲಿಸುತ್ತಲೇ ಇರುತ್ತವೆ. ಮಕ್ಕಳ ನೋವನ್ನು ಸಹಿಸದ ಶುದ್ಧ ಅಂತಃಕರಣ ಅಪ್ಪನದ್ದು.

ನನಗೆ ಅಪ್ಪನೆಂದರೆ ನನ್ನ ಚೈತನ್ಯ. ನಾನು ಸಹ ಅಪ್ಪನಂತೆ ಮೌನಿ.ಭಾವನೆಗಳನ್ನು ವ್ಯಕ್ತಪಡಿಸಲಾರೆವು.ಆದರೆ ಎಲ್ಲರ ಬಗ್ಗೆ ಸಾಗರದಷ್ಟು ಪ್ರೀತಿ.ಅಪ್ಪ ಮತ್ತು ನನ್ನ ನಡುವೆ ಇನ್ನೊಂದು ಸಾಮ್ಯತೆಯೆಂದರೆ ಕಷ್ಟ ಸಹಿಷ್ಣುತೆ ಮತ್ತು ತಾಳ್ಮೆ.ಅಪ್ಪನ ಮನದಾಳ ಅರಿತವರಷ್ಟೇ ಬಲ್ಲರು.ಅವನ ಹೃದಯ ಪ್ರೀತಿಯ ಅರಮನೆ.ಮದುವೆಯಾಗಿ ಹೋಗುವ ಹೆಣ್ಣುಮಗಳ ಬೀಳ್ಕೊಡುವಾಗ ತುಂಬಿ ಬರುವ ಅವನ ಕಣ್ಣುಗಳಲ್ಲಿ ಅವನ ಹೆಗಲೇರಿ ಕುಣಿದ ಪುಟ್ಟಿಯ ನೆನಪುಗಳು.

ಮದುವೆಗೆ ಒಂದು ವಾರ ಇರುವಾಗಲೇ ಅವನೆದೆಯಲ್ಲಿ ಚಡಪಡಿಕೆ.ಪುಟ್ಟಿಯಿಲ್ಲದ ಮನೆಯಲ್ಲಿ ಇನ್ನು ಮುಂದೆ ಸಂಜೆಗಳನ್ನು ಹೇಗೆ ಕಳೆಯಲಿ ಎಂಬ ಪ್ರಶ್ನೆ.ಅತ್ತು ಗೋಳಾಡಲಾರದೆ ಮೌನವಾಗಿ ಕುಳಿತು ಅವಳ ಫೋಟೋಗಳನ್ನು ನೋಡಿ ಯಾರಿಗೂ ಗೊತ್ತಾಗದಂತೆ ಕಣ್ಣೊರೆಸಿಕೊಂಡು ಮದುವೆ ಕೆಲಸಗಳಲ್ಲಿ ತೊಡಗಿಕೊಳ್ಳುವ ಅಪ್ಪನ ಅಂತರಂಗ ಅವನನ್ನು ಅಷ್ಟೇ ಹಚ್ಚಿಕೊಂಡ ಮಗಳಿಗೆ ಮಾತ್ರ ಗೊತ್ತು.

ಮೊಮ್ಮಕ್ಕಳು ಬಂದ ಮೇಲೆ ಅಪ್ಪ ಮತ್ತೆ ಮಗುವಾಗುವನು.ಮಕ್ಕಳ ಓದು,ಉದ್ಯೋಗ,ಮದುವೆಯ ಜವಾಬ್ದಾರಿಗಳಿಂದ ಮುಕ್ತನಾಗಿ ಸ್ವಲ್ಪ ಹಗುರೆನಿಸುವ ಸಮಯದಲ್ಲಿ ಮಗಳು ಬಾಣಂತನಕ್ಕಾಗಿ ತವರಿಗೆ ಬಂದರೆ ಅಪ್ಪನ ಸಂಭ್ರಮ ಮೇರೆ ಮೀರುತ್ತದೆ.

ಬೆಳಿಗ್ಗೆ ಎದ್ದು ಮೊಮ್ಮಗುವಿನ ಮುದ್ದು ಮುಖ ನೋಡಿ ತೋಟದ ಕೆಲಸಕ್ಕೆ ಹೋಗಿ ಮತ್ತೆ ಸಂಜೆ ಬಂದ ಕೂಡಲೇ ಮೊಮ್ಮಗುವಿನೊಂದಿಗೆ ಆಡಬೇಕು.ಮಗಳಿಗೆ ಏನು ಇಷ್ಟ ಎಲ್ಲ ತಂದುಕೊಡಬೇಕು.ಮಗಳು ಮೊಮ್ಮಗು ತವರಿನಲ್ಲಿ ಇದ್ದಷ್ಟು ದಿನ ಅವನೆದೆಯೊಳಗೆ ಬೆಚ್ಚಗಿನ ಭಾವ.

ಮೊಮ್ಮಕ್ಕಳು ಶಾಲೆಗೆ ಹೋಗುವವರಾದರೆ ರಜೆಯಲ್ಲಿ ಬರುವ ಅವರಿಗಾಗಿ ಕಾಯುತ್ತಾನೆ. ಬಗೆಬಗೆಯ ಸಿಹಿಗಳನ್ನು ಅವರಿಗೆಂದು ತಂದುಕೊಟ್ಟು ಕೀಟಲೆ ಮಾಡುತ್ತಾ ಮಗುವೇ ಆಗುತ್ತಾನೆ ಅಪ್ಪ. ದುಡಿಯುವ ಮಕ್ಕಳು ಮನೆಗೆ ಬಂದು ಹೋಗುವಾಗ ಅವರು ತಂದುಕೊಟ್ಟ ಹೊಸ ಬಟ್ಟೆ, ವಾಚ್‌ ಎಲ್ಲವನ್ನೂ ತೊಟ್ಟು ಕನ್ನಡಿ ಮುಂದೆ ನಿಂತು ಹೆಮ್ಮೆಯಿಂದ ಬೀಗುವನು.

ಅದೊಂದು ಸಾರ್ಥಕ ಭಾವ ಅವನೊಳಗೆ. ಮಗ ಹೊಸ ಕಾರ್‌ ಖರೀದಿಸಿ ಮನೆ ಮುಂದೆ ತಂದು ನಿಲ್ಲಿಸಿದಾಗ ತಾನು ಅವನನ್ನು ಓದಿಸಲು ಬಸ್‌,ಆಟೋಗಳಲ್ಲಿ ಓಡಾಡಿದ ದಿನಗಳನ್ನು ನೆನಪಿಸಿಕೊಳ್ಳುತ್ತಾನೆ.ಮಗನೋ ಮಗಳ್ಳೋ ಕಾರ್‌ ನಲ್ಲಿ ಕೂರಿಸಿಕೊಂಡು ಅವನಿಷ್ಟದ ಸ್ಥಳಗಳಿಗೆ ಕರೆದುಕೊಂಡು ಹೋದರೆ ಮನದೊಳಗೆ ಸಂಭ್ರಮಿಸುತ್ತಾನೆ.

ವರ್ಷ ಅರವತ್ತಾದರೂ ಇನ್ನೂ ಪಾದರಸದಂತೆ ಚುರುಕಾಗಿ ಹಳ್ಳಿಮನೆಯ ಕೆಲಸಗಳಲ್ಲಿ ತೊಡಗುವ ಅಪ್ಪನಿಗೆ ಸುಮ್ಮನೆ ಕೂರುವುದೆಂದರೆ ಆಗದು.ಈ ಕ್ರಿಯಾಶೀಲತೆಯೇ ಅವನ ಜೀವಂತಿಕೆ.ತೋಟದ ಗಿಡಗಳು, ಕೊಟ್ಟಿಗೆಯ ಹಸುಗಳು, ಕೆಲಸಕ್ಕೆ ಬರುವ ಆಳುಗಳು ಅವನ ಬದುಕಿನ ಅವಿಭಾಜ್ಯ ಅಂಗಗಳು. ಕಾಯಕನಿಷ್ಠೆಯೆಂದರೆ ಅಪ್ಪ.

ಆಯಾಸವನ್ನು ಗಣಿಸದೆ ದುಡಿಮೆಯಲ್ಲಿ ಸಂತೋಷ ಕಾಣುವುದನ್ನು ಅಪ್ಪನಿಂದಲೇ ಕಲಿಯಬೇಕು.ಅರವತ್ತಾದರೂ ಯುವಕನಂತೆ ಕಾಣುವ ಅಪ್ಪನ ಜೀವನೋತ್ಸಾಹಕ್ಕೆ ಅಪ್ಪನೇ ಸರಿಸಾಟಿ. ಅಪ್ಪನೆಂದರೆ ಆಕಾಶ.ಅವನಿಲ್ಲದ ಮನೆಮನಗಳು ಶೂನ್ಯ. ಅಪ್ಪನೆಂದರೆ ಅದಮ್ಯ ಚೈತನ್ಯ.

ಚೈತನ್ಯ ಸೂಸುವ ಕಂಗಳಲ್ಲಿ ಆಡದ ನೂರು ಮಾತುಗಳು ಮೌನವ ಹೊದ್ದು ಮಲಗಿವೆ ತನ್ನ ಬೆವರು ಅಮೃತವಾಗಿ ಒಡಲ ಕುಡಿಗಳ ಪೊರೆಯುತಿರಲು ಪ್ರೀತಿ ತುಳುಕುವ ಹೃದಯವದುಮುಗುಳು ನಗುತಿದೆ ಅವ್ಯಕ್ತ ಭಾವಗಳ ಆಗರವದು ಮನ ನಂಬಿದವರ ದಡ ಸೇರಿಸುವ ಗುರಿಯನೊಂದೆ ನಂಬಿದೆ ಸುಖದಪೇಕ್ಷೆ ಇಲ್ಲದವನಿಗೆ ಎಲ್ಲರ ನಗಿಸುವ ಹಂಬಲವಿದೆ.

ನಿದ್ದೆ ತೊರೆದ ಕಂಗಳಲ್ಲಿ ಸುಖದಿ ಮಲಗುವ ಮನೆಯೇ ನಿತ್ಯದ ಕನಸಾಗಿದೆ ತಾನುಣ್ಣದೆ ಉಡದೆ ದುಡಿವ ಕಾರ್ಪಣ್ಯಗಳ ಮರೆಯಲ್ಲಿ ಮುಂದಿನ ಚಿಗುರುಗಳ ಹೆಮ್ಮರವಾಗಿಸುವ ಹೆಬ್ಬಯಕೆಯಿದೆ.

-ಭವ್ಯಾಟಿ.ಎಸ್‌.

ಶಿಕ್ಷಕರು, ಸ.ಪ್ರೌ. ಶಾಲೆ, ಕಾನುಗೋಡು, ಶಿವಮೊಗ್ಗ

ಟಾಪ್ ನ್ಯೂಸ್

14

ಪ್ರಭಾಸ್‌ – ಸಂದೀಪ್‌ ವಂಗಾ ʼಸ್ಪಿರಿಟ್‌ʼನಲ್ಲಿ ವಿಲನ್‌ ಪಾತ್ರಕ್ಕೆ ಕೊರಿಯಾದ ಖ್ಯಾತ ನಟ?

Father in Sindh arrested for burying 15-day-old daughter alive

Sindh; 15 ದಿನದ ಮಗಳನ್ನು ಜೀವಂತ ಸಮಾಧಿ ಮಾಡಿದ ತಂದೆ! ಬಂಧನ

Shimoga; ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಶಿವಣ್ಣ; ತಲಾ 1 ಲಕ್ಷ ಪರಿಹಾರ ನೀಡಿದ ದಂಪತಿ

Shimoga; ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಶಿವಣ್ಣ; ತಲಾ 1 ಲಕ್ಷ ಪರಿಹಾರ ನೀಡಿದ ದಂಪತಿ

‌Kollywood: ವಿಜಯ್‌ ಸೇತುಪತಿ 50ನೇ ಚಿತ್ರ ʼಮಹಾರಾಜʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

‌Kollywood: ವಿಜಯ್‌ ಸೇತುಪತಿ 50ನೇ ಚಿತ್ರ ʼಮಹಾರಾಜʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ

Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ

12

Bigg Boss: ಪತ್ನಿ ಬಗ್ಗೆ ಮಾತನಾಡಿದ್ದಕ್ಕೆ ಕಪಾಳಮೋಕ್ಷ; ಬಿಗ್‌ ಬಾಸ್‌ ಮನೆಯಲ್ಲಿ ಹೈಡ್ರಾಮಾ

Karachi: ಪಾಕಿಸ್ತಾನ್‌ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ

Karachi: ಪಾಕಿಸ್ತಾನ್‌ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-father

Father: ಅಪ್ಪನ ನೀತಿ ನಮ್ಮ ಬದುಕಿನ ರೀತಿ

18-uv-fusion

Blood Group: ಚಿನ್ನದ ರಕ್ತದ ಗುಂಪಿನ ಬಗ್ಗೆ ನಿಮಗಿದು ಗೊತ್ತೆ?

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

13-uv-fusion

Terrace Garden: ಮನೆಗೊಂದು ತಾರಸಿ ತೋಟ

12-uv-fusion

UV Fusion: ಕಾಲೆಳೆಯುವ ಕೈಗಳು ನಮ್ಮದಾಗದಿರಲಿ…

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

14

ಪ್ರಭಾಸ್‌ – ಸಂದೀಪ್‌ ವಂಗಾ ʼಸ್ಪಿರಿಟ್‌ʼನಲ್ಲಿ ವಿಲನ್‌ ಪಾತ್ರಕ್ಕೆ ಕೊರಿಯಾದ ಖ್ಯಾತ ನಟ?

forest

Forest; ಕಾಡಿನಲ್ಲಿ ಹಾಡಿನ ಸದ್ದು; ಫಾರೆಸ್ಟ್‌ ಒಳಗೆ ಚಿಕ್ಕಣ್ಣ- ಟೀಂ

Father in Sindh arrested for burying 15-day-old daughter alive

Sindh; 15 ದಿನದ ಮಗಳನ್ನು ಜೀವಂತ ಸಮಾಧಿ ಮಾಡಿದ ತಂದೆ! ಬಂಧನ

ಮಹಾರಾಷ್ಟ್ರದಲ್ಲಿ ಭಾರಿ ಮಳೆ; ಕೃಷ್ಣಾ, ದೂಧಗಂಗಾ, ಮಲಪ್ರಭಾ ಒಳಹರಿವು ಹೆಚ್ಚಳ

Rain: ಮಹಾರಾಷ್ಟ್ರದಲ್ಲಿ ಭಾರಿ ಮಳೆ; ಕೃಷ್ಣಾ, ದೂಧಗಂಗಾ, ಮಲಪ್ರಭಾ ಒಳಹರಿವು ಹೆಚ್ಚಳ

ಹುಬ್ಬಳ್ಳಿ: ಗಾರ್ಮೆಂಟ್‌ನಲ್ಲಿ ತೆರೆದುಕೊಳ್ಳುತ್ತಿವೆ ದೊಡ್ಡ ಅವಕಾಶಗಳು-ಜೋಶಿ

ಹುಬ್ಬಳ್ಳಿ: ಗಾರ್ಮೆಂಟ್‌ನಲ್ಲಿ ತೆರೆದುಕೊಳ್ಳುತ್ತಿವೆ ದೊಡ್ಡ ಅವಕಾಶಗಳು-ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.