Guru Purnima 2024: ಗುರುಭ್ಯೊ ನಮಃ


Team Udayavani, Aug 6, 2024, 4:40 PM IST

4-uv-fusion

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’. ಹೌದು ಅಕ್ಷರಶಃ ಸತ್ಯವಾದ ಮಾತು, ನಾವು ಗುರುವಿಗೆ ಗುಲಾಮರಾಗುವ ತನಕವೂ ಮುಕ್ತಿ ದೊರೆಯದು.

ನಾವು ಜೀವನದಲ್ಲಿ ಏನೆÇÉಾ ಸಾಧಿಸಿರಬಹುದು, ಉತ್ತಮ ಬದುಕು ಕಟ್ಟಿಕೊಂಡಿರಬಹುದು, ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದಿರಬಹುದು, ನಾವು ಒಳ್ಳೆಯದೆಂದು ಜೀವನದಲ್ಲಿ ಏನೆÇÉಾ ಕಂಡಿದ್ದೇವೆಯೋ ಅನುಭವಿಸಿದ್ದೇವೋ ಅದೆಲ್ಲವೂ ಗುರುಗಳ ಆಶೀರ್ವಾದ ಮಾರ್ಗದರ್ಶನದ ಫ‌ಲವಾಗಿರುತ್ತದೆ. ಗುರುಗಳ ಆಶೀರ್ವಾದ ಮಾರ್ಗದರ್ಶನ ಇಲ್ಲದೆ ನಾವು ಏನನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ.

ತಂದೆ ತಾಯಿ ನಮಗೆ ಜನುಮ ನೀಡುತ್ತಾರೆ ಆದರೆ ಮಣ್ಣಿನ ಮುದ್ದೆಯಂತಿರುವ ಮಕ್ಕಳನ್ನು ತಿದ್ದಿ ತೀಡಿ, ವಿದ್ಯೆ ವಿನಯ ಬುದ್ದಿ ಕಲಿಸಿ ಅವರನ್ನು ಜೀವನದಲ್ಲಿ ದಡ ಸೇರುವಂತೆ ಮಾಡುವವರು ಗುರುಗಳು. ಮಕ್ಕಳ ಎಲ್ಲ ಸಾಧನೆಗೂ ಮಕ್ಕಳ ಹಿಂದಿರುವ ಗುರುಗಳೇ ಕಾರಣರಾಗುತ್ತಾರೆ.

ಮಾತೇ ಇದೆ ಮುಂದೆ ಗುರಿಯಿರಬೇಕು ಹಿಂದೆ ಗುರುವಿರಬೇಕು ಎಂದು. ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು, ಮುಂದೆ ಏನಾಗಬೇಕೆಂಬ ಗುರಿ ನಮ್ಮಲ್ಲಿರಬೇಕು. ಆಗ ಆ ಗುರಿಯನ್ನು ಹೇಗೆ ತಲುಪಬೇಕು, ಯಾವ ವಿಧಾನ, ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ಗುರುಗಳು ಮಾರ್ಗದರ್ಶನ ಮಾಡುತ್ತಾರೆ. ಗುರುವಿನ ಮಾರ್ಗದರ್ಶನದ ಮೇರೆಗೆ ಮುಂದಿನ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.

ಗುರುಗಳು ನಮ್ಮ ಪಾಲಿಗೆ ಕೇವಲ ವಿದ್ಯೆ ಬುದ್ದಿ ಕಲಿಸುವವರು ಮಾತ್ರ ಆಗಿರುವುದಿಲ್ಲ, ಬದಲಿಗೆ ತಾಯಿಯ ಪ್ರೀತಿಯನ್ನು ತಂದೆಯ ಪ್ರೇಮವನ್ನು, ಗೆಳೆಯನ ಸ್ನೇಹವನ್ನು ನೀಡುವ ಕರುಣಾಮಯಿ. ದುಃಖದಲ್ಲಿ ಕಣ್ಣೀರ ಒರೆಸಿ ಗುರುತರವಾದ ಮಾರ್ಗ ತೋರುವ ಆತ್ಮಸ್ಥೆçರ್ಯ ತುಂಬುವ, ಗೆಲ್ಲಲೇಬೇಕು ಸಾಧಿಸಲೇಬೇಕು ಎಂಬ ಅಛಲ ವಿಶ್ವಾಸ ತುಂಬುವವರು ಗುರುವಾಗಿರುತ್ತಾರೆ. ಇಂತಹ ಗುರುಗಳು ಜೀವನದಲ್ಲಿ ನಮ್ಮಯ ಜತೆಯಿರೆ ನಾವೇ ಪುಣ್ಯಜೀವಿಗಳು ಅಲ್ಲವೇ.

ಗುರುಗಳು ಎಂದಿಗೂ ತಮ್ಮ ಶಿಷ್ಯಂದಿರ ಏಳಿಗೆಯನ್ನೇ ಬಯಸುತ್ತಾರೆ. ನಮ್ಮ ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು, ಸಮಾಜದಲ್ಲಿ ಗುರುತರವಾದ ಸಾಧನೆಯನ್ನು ಮಾಡಬೇಕು, ಒಳ್ಳೆಯ ಸ್ಥಾನಕ್ಕೇರಬೇಕು ಎಂಬ ಭಾವ ಗುರುವರ್ಯರದಾಗಿರುತ್ತದೆ. ವಿದ್ಯಾರ್ಥಿಗಳು ಸಾಧಿಸಿದಾಗ ಮೊದಲು ಖುಷಿಪಡುವ ಜೀವ ಎಂದರೆ ಅದು ಗುರುಗಳು ಮಾತ್ರ.

ಗುರುಗಳು ತಮ್ಮ ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಮೊದಲು ಶಾಲೆಗೆ ಓಡಿ ಬರುತ್ತಾರೆ ಕಾರಣ ಶಾಲೆಯಲ್ಲಿ ತನಗಾಗಿ ಕಾದಿರುವ ಜೀವಗಳಿವೆ ಎಂದು. ಮಕ್ಕಳಿಗೆ ಕಲಿಸುತ್ತಾ ತನ್ನಯ ದುಃಖವನ್ನೆÇÉಾ ಮರೆಯುವಾತ ಗುರು. ಹಾಗೆಯೇ ಗುರುವು ತನ್ನ ಸ್ವಂತ ಮಗುವಿಗೇ ಅನಾರೋಗ್ಯ ಉಂಟಾದರೂ ಸಹ ತನ್ನ ಮನೆಯಲ್ಲಿ ಮಗುವಿನ ಜವಾಬ್ದಾರಿಯನ್ನು ಯಾರಿಗಾದರೂ ವಹಿಸಿ ಶಾಲೆಗೆ ಬರುತ್ತಾನೆ ಕಾರಣ ಶಾಲೆಯಲ್ಲಿ ತನ್ನನ್ನು ನಂಬಿರುವ ಮಕ್ಕಳಿದ್ದಾರೆ ಎಂದು. ಅಂತಹ ಹೃದಯವಂತರು ನಮ್ಮ ಗುರುಗಳು.

ಇಂತಹ ಗುರುಗಳಿಗೆ ನಾವು ವಂದನೆಗಳನ್ನು ಗೌರವವನ್ನು ಸಲ್ಲಿಸಬೇಕು. ಎಷ್ಟು ಜನುಮ ಪಡೆದರೂ ತಂದೆತಾಯಿಯ, ಗುರುವಿನ ಋಣವನ್ನು ತೀರಿಸಲಾಗದು ಆದರೂ ಅವರಿಗೆ ಧನ್ಯವಾದವನ್ನು ತಿಳಿಸುವ ಮನೋಭಾವ ನಮ್ಮಲ್ಲಿರಬೇಕು.

ಗುರುಗಳಿಗೆ ವಂದನೆಯನ್ನು ತಿಳಿಸುವ ಸಲುವಾಗಿಯೇ ಪ್ರತಿ ವರುಷವೂ ಆಷಾಡ ಮಾಸದಲ್ಲಿ ಗುರುಪೂರ್ಣಿಮೆಯು ಬರುತ್ತದೆ. ಅಂದು ನಾವೆಲ್ಲರೂ ನಮ್ಮ ನಮ್ಮ ಗುರುಗಳನ್ನು ನೆನೆದು ಅವರಿಗೆ ಭಕ್ತಿಪೂರ್ವಕವಾದ ಗೌರವಯುತವಾದ ಧನ್ಯವಾದಗಳನ್ನು ಅರ್ಪಿಸೋಣ. ಗುರುಗಳ ಜೀವ ಏನನ್ನೂ ಬಯಸದು ಅಂದಿನ ದಿನ ಅವರ ನೆನೆದು ಧನ್ಯವಾದ ಹೇಳಿದರೆ ಅದರಿಂದಲೇ ಸಂತಸಪಡುವ ಮಾತೃ ಹೃದಯಿ ಮನಸು ಅವರದು.

ಗುರುಗಳಿಗೆ ವಂದಿಸುವುದು, ನೆನೆಯುವುದು ಅವರ ಸೇವೆಯನ್ನು ನೆನೆದು ಧನ್ಯವಾದಗಳನ್ನು ಸಲ್ಲಿಸುವುದು ಹಿಂದಿನಿಂದಲೂ ನಡೆದುಬಂದ ನಮ್ಮ ಸಂಸ್ಕೃತಿಯಾಗಿದೆ. ಈ ಆಚಾರ ವಿಚಾರಗಳನ್ನು ನಾವು ತಿಳಿಯುವುದರೊಂದಿಗೆ ನಮ್ಮ ಮಕ್ಕಳಿಗೂ ತಿಳಿಸೋಣ ಕಲಿಸೋಣ ಮನವರಿಕೆ ಮಾಡಿಕೊಡೋಣ.

-ಭಾಗ್ಯ ಜೆ. ಬೋಗಾದಿ

ಮೈಸೂರು

ಟಾಪ್ ನ್ಯೂಸ್

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುವ ರೈತರಿಗೆ ಪೊಲೀಸ್ ಬ್ರೆಕ್

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುತ್ತಿದ್ದ ರೈತರಿಗೆ ಪೊಲೀಸ್ ಬ್ರೇಕ್

ಕಲ್ಯಾಣ ಕರ್ನಾಟಕ ಉತ್ಸವ: ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ತಳಿಗೆ ಸಿಎಂ ಮಾಲಾರ್ಪಣೆ

Kalaburagi: ಕಲ್ಯಾಣ ಕರ್ನಾಟಕ ಉತ್ಸವ… ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

3

Bantwal: ಬಿ.ಸಿ.ರೋಡು ಪ್ರಕರಣ; ಎರಡು ಪ್ರತ್ಯೇಕ ಪ್ರಕರಣ ದಾಖಲು

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

6

Crime: ಏಕಮುಖ ರಸ್ತೆಯಲ್ಲಿ ಬಂದಿದ್ದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಧಮ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.