UV Fusion: ಆಸೆ ಗುಲಾಮನಾಗಿಸಿದರೆ ತಾಳ್ಮೆ ರಾಜನನ್ನಾಗಿಸುತ್ತದೆ


Team Udayavani, May 29, 2024, 3:06 PM IST

12-

ಎಂದಿನಂತೆ ಸೂರ್ಯ ಕತ್ತಲನ್ನು ಸರಿಸಿ ಬೆಳಕನ್ನು ಚೆಲ್ಲುತ್ತಾ ಭೂಮಿ ಕಡೆಗೆ ಬಂದ. ಭೂಮಿಗೆ ಬಂದ ಸೂರ್ಯ ನಮ್ಮ ಮನೆಗೆ ಬಾರದಿರುವನೇ, ಅವನು ಆಗಲೇ ಮನೆಯ ಮುಂದೆ ಬಂದು ನಿಂತಿದ್ದನು, ಅವನ ಕೇಶರಾಶಿಯಂತಿರುವ ಕಿರಣಗಳು ನನ್ನನ್ನು ಸ್ಪರ್ಶಿಸಿ ಬೆಳಕಿನ ಲೋಕಕ್ಕೆ ಬರ ಮಾಡಿಕೊಂಡವು. ಹಾಸಿಗೆಯಿಂದ ಎದ್ದು ನಾನು ನನ್ನೆಲ್ಲ ನಿತ್ಯ ಕರ್ಮವನ್ನು ಮುಗಿಸಿ ಚಾ ಕುಡಿಯಲೆಂದು ಅಡುಗೆ ಮನೆಯ ಕಡೆ ಪಯಣ ಬೆಳೆಸಿದೆ.

ಬೆಳಗಿನ ತಂಪಾದ ವಾತಾವರಣದಲ್ಲಿ ಬಿಸಿ ಬಿಸಿ ಚಹಾದಿಂದ ನನ್ನ ತುಟಿಗಳಿಗೆ ಶಾಖ ಕೊಡುತ್ತಾ ನನ್ನನ್ನು ನಾನು ನಿದ್ದೆಯಿಂದ ಎಬ್ಬಿಸುತ್ತಿದ್ದೆ. ಆ ಸಮಯದಲ್ಲಿ ಎಲ್ಲೋ ಸ್ವಲ್ಪ ದೂರದಲ್ಲಿ ಮಧುರವಾದ ಧ್ವನಿಯಲ್ಲಿ ಕನ್ನಡ ಚಲನಚಿತ್ರದ ಹಾಡೊಂದು ಕೇಳ ತೊಡಗಿತು. ಓ ನನ್ನ ಜಂಗಮವಾಣಿ ನನ್ನನ್ನು ಕರೆಯುತ್ತಿರುವುದೆಂದು ಅಲ್ಲಿಂದ ಎದ್ದೋಡಿದೆ. ಅಲ್ಲಿ ನೋಡಿದರೆ ನನ್ನ ಸ್ನೇಹಿತ ನನ್ನೊಂದಿಗೆ ಮಾತನಾಡಲು ಕಾತುರದಿಂದ ಕಾದು ನಿಂತು ಕರೆ ಮಾಡಿದ್ದ.

ಹಲೋ ಗೆಳೆಯ ಹೇಳ್ಳೋ ಎಂದೆನು, ಅಲ್ಲಿಂದ ಆತ ಭಾರವಾದ ಧ್ವನಿಯಿಂದ ಅವನಿಗೆ ದೊರೆಯದ ಉದ್ಯೋಗದ ಕಥೆಯನ್ನು ಹೇಳತೊಡಗಿದ. “ನನ್ನಿಂದ ನಗಲು ಆಗುತ್ತಿಲ್ಲ, ಹಾಗಂತ ಅಳಲಾರೆ. ನನ್ನ ಅಕ್ಕ ಪಕ್ಕ ಇರುವವರೆಲ್ಲ ಖುಷಿಯಿಂದ ಇರುವರು. ಅವರನ್ನು ನೋಡಿ ಖುಷಿ ಪಡುವುದೋ, ನನ್ನ ನೋವನ್ನು ನೆನೆದು ಅಳುವುದೋ ತಿಳಿಯುತ್ತಿಲ್ಲ. ಅಕ್ಕ ಪಕ್ಕದವರಿಗೆ ಇರುವ ಖುಷಿ ನನಗೇಕೆ ಇಲ್ಲ. ನಾನೇನು ಅಂತಹ ತಪ್ಪು ಮಾಡಿದೆ. ಅವರೊಟ್ಟಿಗೆ ಅವರಂತೆ ಎಲ್ಲ ಕೆಲಸವನ್ನು ಶ್ರದ್ದೆಯಿಂದ ಮಾಡಿರುವೆ. ಆದರೆ ನಾನು ಆ ಉದ್ಯೋಗಕ್ಕೆ ಅನರ್ಹ ಎಂದರು.’ ಎಂದು ದುಃಖ ಪಡುತ್ತಿದ್ದನು.

ಇಂತಹ ಸಮಯದಲ್ಲಿ ಅವನನ್ನು ಸಮಾಧಾನ ಮಾಡುವ ಜವಾಬ್ದಾರಿ ನನ್ನ ಮೇಲಿತ್ತು. “ಅಯ್ಯೋ ಅದಕ್ಕೆ ಯಾಕೆ ನೊಂದುಕೊಳ್ಳುವೆ, ಜೀವನ ಒಂದು ಗಡಿಯಾರ ಇದ್ದಂತೆ. ರಾತ್ರಿ ಕಳೆದ ಮೇಲೆ ಹಗಲು ಬರಲೇಬೇಕು. ಹಾಗೆಯೇ ಕಷ್ಟದ ದಿನಗಳು ಕಳೆದ ಮೇಲೆ ಖುಷಿಯ ದಿನಗಳು ಬರುತ್ತವೆ. ನೀನೇಕೆ ನೊಂದುಕೊಳ್ಳುತ್ತಿರುವೆ, ನಿನಗೆ ಕಷ್ಟದ ದಿನಗಳು ಕಳೆದಿವೆ ಎಂದರೆ ಖುಷಿಯ ದಿನಗಳು ಸ್ವಾಗತಿಸುತ್ತಿವೆ ಎಂದು ತಿಳಿದುಕೋ.

ಈ ಕಷ್ಟದ ದಿನಗಳಲ್ಲಿ ನಿನ್ನಿಂದ ಆಗಿರುವ ತಪ್ಪುಗಳನ್ನು ನೀನು ಸರಿಪಡಿಸಿಕೋ ಏಕೆಂದರೆ, ನೀನು ಪ್ರತಿಭಾವಂತ ಮತ್ತು ನಿನಗೆ ಕೊಟ್ಟ ಕೆಲಸವನ್ನು ನೀನು ಶ್ರದ್ಧೆಯಿಂದ ಸಮಯಕ್ಕೆ ಸರಿಯಾಗಿ ಮಾಡಿರಬಹುದು, ಅದು ನಿನಗೆ ಗೊತ್ತು. ನಿನ್ನ ಮೇಲಾಧಿಕಾರಿಗಳಿಗೆ ಅದು ತಿಳಿದು ಬಂದಿಲ್ಲ. ನಿನ್ನನು ನೀನು ಗುರುತಿಸಿಕೊಂಡರೆ ಮಾತ್ರ ಅವರು ನಿನ್ನನ್ನು ಆಯ್ಕೆ ಮಾಡಿಕೊಳ್ಳಬಹುದಲ್ಲವೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ.

ನಾವು ನಮಗಾಗಿ ಬದುಕಿದರೆ ನಾವು ಸಂಪಾದಿಸಿರುವುದರಲ್ಲಿ ನಮ್ಮ ಮುಂದಿನ ಜೀವನಕ್ಕೆ ಉಳಿಯುತ್ತದೆ, ಅದೇ ಅಕ್ಕ-ಪಕ್ಕದಲ್ಲಿರುವವರನ್ನು ನೋಡಿ ನಾವು ಬದುಕು ಕಟ್ಟಿಕೊಳ್ಳಲು ಹೋದರೆ ನಮ್ಮ ದುಡಿಮೆಯ ಜತೆಗೆ ಸಾಲದ ಹೊರೆಯನ್ನು ಹೊರಬೇಕಾಗುತ್ತದೆ, ಆಸೆ ರಾಜನನ್ನು ಗುಲಾಮನನ್ನಾಗಿಸುತ್ತದೆ, ತಾಳ್ಮೆ ಗುಲಾಮನನ್ನು ರಾಜನನ್ನಾಗಿಸುತ್ತದೆ.

ನಾವು ಮಾಡುವ ಕೆಲಸ ಯಾವುದೇ ಇರಲಿ ಒಳ್ಳೆಯ ಉದ್ದೇಶ ಇರಲಿ, ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ, ಯಶಸ್ಸಿಗಾಗಿ ಕಾಯುವ ತಾಳ್ಮೆ ಇರಲಿ, ಇಂದಲ್ಲ ನಾಳೆ ಖುಷಿಯ ದಿನಗಳು ಯಶಸ್ಸಿನೊಂದಿಗೆ ನಿನ್ನತ್ತ ಬರುತ್ತವೆ. ಎಷ್ಟೋ ಸಾಧಕರನ್ನು ಕಂಡಿಲ್ಲವೇ. ಸಾಧನೆ ಎನ್ನುವುದು ತತ್‌ಕ್ಷಣ ಒಳಿಯುವುದಿಲ್ಲ. ಎಷ್ಟೋ ವರ್ಷಗಳ ತಾಳ್ಮೆಯ, ಛಲದ ಪ್ರತಿಫ‌ಲವಾಗಿರುತ್ತದೆ. ನನ್ನ ಗುರಿಯನ್ನು ಸಾಧಿಸುವೆ ಎಂಬ ನಂಬಿಕೆ ಇಟ್ಟು ಪ್ರತೀ ದಿನವೂ ಅದರತ್ತ ನಡೆಯಬೇಕು ಎಂದು ಧೈರ್ಯ ತುಂಬಿದೆ.

ಗೆಳೆಯಾ ಇಲ್ಲಿ ಯಾರೂ ಕಷ್ಟಪಡದೆ ಅಬ್ದುಲ್‌ ಕಲಾಂ, ವಿಶ್ವೇಶ್ವರಯ್ಯ ಆಗಿಲ್ಲ. ಅವರವರ ಜೀವನಕ್ಕೆ ಅವರೇ ನಾಯಕ. ಆದರೆ ಯಾರೂ ಕಷ್ಟ ಪಡುತ್ತಾ ಮೇಲೆ ಬಂದಿದ್ದಾರೋ, ಅವರು ಜಗತ್ತಿಗೆ ನಾಯಕರಾಗಿ ನಿಂತಿದ್ದಾರೆ. ಅವರೇ ನಿಜವಾದ ನಕ್ಷತ್ರ (ರಿಯಲ್‌ ಸ್ಟಾರ್‌) ಆಗಿದ್ದಾರೆ.

ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆತನ…

- ಭರತ್‌ ವಾಸು ನಾಯ್ಕ

ಮಾಳಂಜಿ, ಶಿರಸಿ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.