War: ಯುದ್ಧ ಒಳ್ಳೆಯದೇ  ಅಥವಾ ಕೆಟ್ಟದೇ?


Team Udayavani, Sep 12, 2024, 3:15 PM IST

3-uv-fusion

ಯುದ್ಧ ಒಳ್ಳೆಯದೇ ಅಥವಾ ಕೆಟ್ಟದೇ ಎಂಬ ಪ್ರಶ್ನೆಯನ್ನು ಕೇಳಿದಾಗ ಆದಷ್ಟ ಜನ  ಯುದ್ಧ ಕೆಟ್ಟದು ಎಂಬ ಉತ್ತರವನ್ನೇ ನೀಡುತ್ತಾರೆ.ಹೌದು, ನನ್ನ ಬಳಿ ಈ ಪ್ರಶ್ನೆ ಕೇಳಿದರೆ ನಾನು ಕೂಡ ಈ ಉತ್ತರವನ್ನೇ ನೀಡುತ್ತೇನೆ. ಯುದ್ಧದಿಂದ ಆದ ಪರಿಣಾಮ ಏನು?ಯುದ್ಧದಿಂದ ಆದಂತಹ ಪ್ರಯೋಜನ ಏನು ಎಂಬುದನ್ನು ತಿಳಿದುಕೊಳ್ಳೋಣ.

ಭಾರತದಲ್ಲಿ ಆದಂತಹ ಸ್ವಾತಂತ್ರ್ಯ ಹೋರಾಟಗಳೇ ಆಗಿರಬಹುದು ಅಥವಾ ಪ್ರಪಂಚದಲ್ಲಿ ನಡೆದಂತಹ ಜಾಗತಿಕ ಯುದ್ಧಗಳೇ  ಆಗಿರಬಹುದು, ಈ ಎಲ್ಲ ಯುದ್ಧಗಳಲ್ಲಿ ಪುರುಷರು ಹೋರಾಡಿ ವೀರ ಮರಣ ಹೊಂದಿದರು ಎಂಬ ವಿಷಯವನ್ನು ನಾವು ಓದಿಕೊಂಡೆ ಬಂದಿದ್ದೇವೆ, ಆದರೆ ಪುರುಷನು ಯುದ್ಧದಲ್ಲಿ ಹೋರಾಡುವಾಗ  ಮಹಿಳೆಯರ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ನಾವು ಪ್ರಶ್ನಿಸಲು ಹೋಗುವುದಿಲ್ಲ.

ಪುರುಷ ಯುದ್ಧದ ಸಮಯದಲ್ಲಿ ಜೈಲಿಗೋ ಅಥವಾ ಮರಣ ಹೊಂದಿದರೆ, ತನ್ನ ಕುಟುಂಬದ ಜವಾಬ್ದಾರಿಯನ್ನು ಮಹಿಳೆ ತನ್ನ ತಲೆಯ ಮೇಲೆ ಹೊತ್ತು ಸಾಗಬೇಕಿತ್ತು. ಮಹಿಳೆ ಸ್ವಾವಲಂಬಿಯಾಗಿ ಇಂದು ಈ ಪ್ರಪಂಚದಲ್ಲಿ ದುಡಿಯಲು ಅವಕಾಶವನ್ನು ಕಲ್ಪಿಸಿಕೊಟ್ಟದು ಈ ಯುದ್ಧವೇ ಆಗಿದೆ. ಮಹಿಳೆಗೆ ದುಡಿಯುವ ಅನಿವಾರ್ಯತೆಯನ್ನು ಯುದ್ಧ ಹೆಚ್ಚಿಸಿತ್ತು.

ಈ ಕಾರಣದಿಂದಾಗಿ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ನರ್ಷ್‌ ಎಂಬ ವೃತ್ತಿಯ ಪರಿಚಯವಾಯಿತು. ನರ್ಷ್‌ ಮಾತ್ರವಲ್ಲ ಯುದ್ಧ ಅನೇಕ ಸಂಶೋಧನೆಗಳಿಗೂ ಕೂಡ ಕಾರಣವಾಯಿತು. ರಕ್ತದಾನ ಎಂಬ ಪರಿಕಲ್ಪನೆ ಕೂಡ ಪ್ರಾರಂಭವಾದದ್ದು ಈ ಯುದ್ಧದಿಂದಲೇ, ಯುದ್ಧದಲ್ಲಿ ಬದುಕುಳಿದ ಹಲವು ಸೈನಿಕರಿಗೆ ರಕ್ತದ ಅನಿವಾರ್ಯತೆ ಇರುತ್ತಿತ್ತು.

ಈ ಕಾರಣದಿಂದ ವಿಜ್ಞಾನ ವಿಭಾಗದಲ್ಲಿ ಅನೇಕ ಸಂಶೋಧನೆ ನಡೆದು ಒಬ್ಬ ವ್ಯಕ್ತಿಯ ರಕ್ತವನ್ನು ಅದೇ ಗುಂಪಿನ ಇನ್ನೊಂದು ವ್ಯಕ್ತಿಗೆ ನೀಡಬಹುದು ಎಂಬ ಪರಿಕಲ್ಪನೆ ಬೆಳೆಯಿತು. ಅಷ್ಟೇ ಅಲ್ಲ ನಾವು ಇಂದು ಬಳಸುವ ಪೆನ್ನು ಕೂಡ ಯುದ್ಧದ ಸಂದರ್ಭದಲ್ಲಿ ಸೃಷ್ಟಿಯಾದ ವಸ್ತು. ಫ್ರಿಜ್‌ ಕೂಡ  ಯುದ್ಧದ ಸಂದರ್ಭದಲ್ಲಿ ರಕ್ತವನ್ನು ಹಾಳಾಗದಂತೆ ಸಂಸ್ಕರಿಸಿ ಇಡಲು ಅನ್ವೇಷಿಸಿದ ವಸ್ತು. ಹೀಗೆ ಅನೇಕ ವಸ್ತುಗಳು ಯುದ್ಧದ ಸೃಷ್ಟಿ.

ಯುದ್ಧ ಕೆಡುಕನ್ನು ಸೃಷ್ಟಿಸಿದೆ, ಒಳಿತನ್ನು ಸೃಷ್ಟಿಸಿದೆ. ಆದುದರಿಂದ ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆ, ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಸನ್ನಿವೇಶ, ಒಳಿತನ್ನು ಸೃಷ್ಟಿಸುತ್ತದೆ, ಕೆಡುಕನ್ನು ಸೃಷ್ಟಿಸುತ್ತದೆ ಎಂಬುದನ್ನು ಯುದ್ಧ ಎಂಬ ನಿದರ್ಖನದಿಂದ ನಾವು ಅರ್ಥಮಾಡಿ ಕೊಳ್ಳಬಹುದು.

ಇಷ್ಟೆಲ್ಲ ಒಳಿತುಗಳನ್ನು ಯುದ್ಧ ಸೃಷ್ಟಿಸಿದರೂ, ಯುದ್ಧಕ್ಕಿಂತ ಅಹಿಂಸೆ ಒಳ್ಳೆ ಯದು, ಅಹಿಂಸೆ ಸಾಮಾನ್ಯ ಜನರ ಜೀವ ಉಳಿಸು ತ್ತದೆ, ಒಬ್ಬಳು ತಾಯಿಗೆ ತನ್ನ ಮಗನನ್ನು, ಹೆಂಡತಿಗೆ ತನ್ನ ಗಂಡನನ್ನು, ಮಗಳಿಗೆ ತನ್ನ ತಂದೆಯನ್ನು ಉಳಿಸಿಕೊಡುವ ಶಕ್ತಿ ಅಹಿಂಸೆಗೆ ಇದೆ ಎಂಬುವುದನ್ನು ಕೂಡ ನಾವು ಮರೆಯುವಂತಿಲ್ಲ.

  - ನಿಖಿತಾ ಕಡೇಶಿವಾಲಯ

ಸರಕಾರಿ ಮಹಿಳಾ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Payan

Movie Release: ರಾಜ್ಯಾದ್ಯಂತ “ಪಯಣ್‌’ ಸಿನೆಮಾ ಸೆ.20ರಂದು ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25-uv-fusion

UV Fusion: ಬದುಕೆಂಬ ಪುಸ್ತಕದ ಪ್ರತಿ ಪುಟವೂ ಸುಂದರ

24-uv-fusion

UV Fusion: ಬಾಂಧವ್ಯದ ಬಂಧವನ್ನು ಬೆಸೆಯೋಣ…

23-uv-fusion

UV Fusion: ಮಾತಿನ ಅರ್ಥ ಒಳಾರ್ಥಗಳು..!

21-uv-fusion

UV Fusion: ಹೊತ್ತು ಮಾಗುವ ಮುನ್ನ ನಿಮ್ಮನ್ನು ನೀವು ಅರಿಯಿರಿ!

20-uv-fusion

UV Fusion: ಬದುಕಬೇಕು ಅಂತರಾಳ ಒಪ್ಪುವಂತೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.