UV Fuision: ಇರುವುದೆಲ್ಲವ ಬಿಟ್ಟು..!


Team Udayavani, Sep 15, 2024, 3:07 PM IST

12-uv-fusion

ಬದುಕು ಎಂದರೆ ಹೀಗೆ ಎಂದು ಹೇಳುವುದು ಎಷ್ಟು ಕಷ್ಟವೋ ಬದುಕಿನಲ್ಲಿ ಏನು ಬೇಕು ಎಂದು ಹೇಳುವುದು ಕೂಡ ಅಷ್ಟೇ ಕಷ್ಟ. ಮನುಷ್ಯನ ಆಸೆಗಳಿಗೆ ಎಂದೂ ಮಿತಿ ಇಲ್ಲ. ಒಬ್ಬನಿಗೆ ಹೊತ್ತು ಊಟದ ಚಿಂತೆಯಾದರೆ ಮತ್ತೂಬ್ಬನಿಗೆ ಹೊತ್ತು ಕಳೆಯುವ ಚಿಂತೆಯಾಗಿರುತ್ತದೆ ಬಡವ ಶ್ರೀಮಂತನನ್ನು ನೋಡಿ ಇದ್ದರೆ ಆತನಂತೆ ಇರಬೇಕು ಎಂದುಕೊಂಡರೆ ಶ್ರೀಮಂತನಿಗೆ ಅದೇ ಶ್ರೀಮಂತಿಕೆಯ ಬದುಕು ಬೇಸರ ಹಿಡಿಸುತ್ತದೆ. ಯಾರಿಗೆ ಗೊತ್ತು ಕೆಲವೊಮ್ಮೆ ಹಣ, ಜಮೀನು, ಐಶಾರಾಮಿ ಬದುಕು ನಡೆಸುತ್ತಿರುವನಿಗೆ ಇಲ್ಲದ ಖುಷಿ ನೆಮ್ಮದಿ ಹರಕು ಗುಡಿಸಿಲಿನಲ್ಲಿ ಮುದ್ದೆ ಉಣ್ಣುವ ಬಡವನಿಗಿರಬಹುದು. ಆದರೆ ನಮ್ಮಲ್ಲಿನ ವಸ್ತುಗಳಿಗಿಂತ ನಮಗೆ ಯಾವಾಗಲೂ ಪರರ ವಸ್ತುಗಳೇ ಸುಂದರದಂತೆ ತೋರುತ್ತಿರುತ್ತದೆ. ಪರರ ಸುಖ ನೆಮ್ಮದಿಯೆ ಚಂದ ಅನಿಸುತ್ತಿರುತ್ತದೆ.

ಲೋಕದ ಕಷ್ಟ ಸುಖಗಳು ಯಾವ ಮನುಷ್ಯನನ್ನು ಬಿಟ್ಟಿಲ್ಲ. ವಿಧಿಯ ಆಟಕ್ಕೆ ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಶರಣಾದವರೇ.ಆದರೆ ಶ್ರೇಷ್ಠ, ಕನಿಷ್ಠ ಎಂಬ ತರ್ಕಗಳು ಮನುಷ್ಯನನ್ನು ತನ್ನ ಬಳಿ ಇಲ್ಲದ ವಸ್ತುಗಳ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ಎಷ್ಟೋ ಭಾರಿ ದ್ವೇಷ, ಅಸೂಯೆ, ಮೌನ, ಕೋಪ ತಾಪಗಳು ನಮ್ಮಿಂದ ನಮ್ಮನ್ನೇ ಬಹು ದೂರ ಸರಿಸಿ ಈ ಕ್ಷಣದ ಸಣ್ಣ ಪುಟ್ಟ ಸುಖ ಸಂತೋಷಗಳನ್ನು ಅನುಭವಿಸದೇ ಇರುವಂತೆ ನಮ್ಮನ್ನು ಕಟ್ಟಿ ಹಾಕುತ್ತದೆ. ಎಷ್ಟೋ ಭಾರಿ ಬದುಕಿನ ಸುಂದರ ಕ್ಷಣಗಳನ್ನು ಕಟ್ಟಬೇಕಾದ ನಾವು ಯಾವುದೋ ಅತಿಯ ಚಿಂತೆಯಲ್ಲಿ ಮುಳುಗಿ ಅಮೂಲ್ಯ ಕ್ಷಣಗಳನ್ನೆಲ್ಲ ಹಾಳು ಮಾಡಿಕೊಂಡಿರುತ್ತೇವೆ.

ಈಗಿನ ಕಾಲದಲ್ಲಂತೂ ಬಹಳಷ್ಟು ಜನ  ಮಾನಸಿಕ  ಖನ್ನತೆಗೆ ಒಳಗಾಗಿ ಒಳಗೊಳಗೇ ನರಳುತ್ತಿರುತ್ತಾರೆ.ಕಡ್ಡಿಯಿಂದ ಹೋಗುವ ಕೆಲಸಕ್ಕೆ ಗುಡ್ಡದಷ್ಟು ಚಿಂತಿಸುತ್ತಿರುತ್ತಾರೆ. ಯಾರದೋ ಒಟ್ಟಿಗಿನ ಜಗಳವೋ, ಮನಸ್ತಾಪವೋ, ಅನುಮಾನವೋ, ಅಸಮಾಧಾನವೋ ಮನುಷ್ಯನ ಆಲೋಚನೆಗಳನ್ನು ನಿಯಂತ್ರಿಸಿಕೊಳ್ಳದಷ್ಟರ ಮಟ್ಟಿಗೆ ದುರ್ಬಲರನ್ನಾಗಿಸಿ ಬಿಡುತ್ತದೆ. ಆದರೆ ಆ ಕ್ಷಣದಲ್ಲಿ ಒಳಗೊಳಗೇ ಮರುಗಿ ದುಃಖ ಪಡುವ ಬದಲು ಒಂದು ಕ್ಷಣ ಮನಸು ಬಿಚ್ಚಿ ಮಾತಾಡಿದರೆ ಅಂದಿಗೆ ಕಳಚಿ ಹೋಗಬೇಕಿದ್ದ ಎಷ್ಟೋ ಸಂಬಂಧಗಳು ಮತ್ತೆ ಜತೆಗೂಡುತ್ತದೆ. ಸುಮ್ಮನೆ ಇಲ್ಲ ಸಲ್ಲದ ಆಲೋಚನೆಗಳಿಗೆ ಇರುವುದೆಲ್ಲವ ಬಿಟ್ಟು ಚಿಂತಿಸುತ್ತ ಕೂರುವ ಸಮಯ ಮುಗಿದು ಹೋಗುತ್ತದೆ.

ಚಿಂತಾಯಾಶ್ಚ ಚಿತಾಯಾಶ್ಚ ಬಿಂದುರೇಕೋ ವಿಶಿಷ್ಯತೇ ಚಿತಾ ದಹತಿ ನಿರ್ಜೀವಂ ಚಿಂತಾ ತು ಸಜೀವಕಂ ಎನ್ನುತ್ತಾರೆ. ಅಂದರೆ ಚಿಂತೆಗು ಚಿತೆಗು ಒಂದು ಸೊನ್ನೆಯಷ್ಟೇ ವ್ಯತ್ಯಾಸ ಆದರೆ ಚಿತೆ ಶವವನ್ನು ಸುಟ್ಟರೆ ಚಿಂತೆ ಜೀವಂತ ದೇಹವನ್ನು ಸುಡುತ್ತದೆ. ಕಾಲ ಸರಿದಂತೆ ನಮ್ಮ ಬದುಕಿನಲ್ಲಿ ಬರುವ ಜನಗಳು ಬರುತ್ತಾರೆ, ಬದಲಾಗುತ್ತಾರೆ. ಅದಕ್ಕೆ ತಕ್ಕ ಹಾಗೆ ನಮ್ಮ ಅಭಿರುಚಿಗಳು ಬದಲಾಗುತ್ತವೆ.ಇದು ನಮ್ಮೆಲ್ಲರ ಸ್ವಾಭಾವಿಕ ಗುಣ.ಜೀವನದಲ್ಲಿ ಹಣಕ್ಕಿಂತ ಗುಣ ಮೇಲು ಎಂದು ಈ ಕ್ಷಣ ನಾವು ಹೇಳಿದರೆ ಅರೆ ಗಳಿಗೆ ಬಿಟ್ಟು “ದುಡ್ಡೇ ದೊಡ್ಡಪ್ಪ’ಎಂದರೂ ಎನ್ನಬಹುದು. ಶ್ರೀಮಂತನ ಕಾರಿನ ಮೇಲೆ ಬಾರದ ಆಕರ್ಷಣೆ ಬಡವ ಮಾರುವ ಬಲೂನಿನ ಮೇಲೆ ಸುಳಿಯಬಹುದು.ಎಲ್ಲವೂ ಅವರವರ ಸನ್ನಿವೇಶ ಹಾಗೂ ದೃಷ್ಟಿಕೋನಕ್ಕೆ ಸಂಬಂಧಿಸಿದ್ದು.ಆದರೆ ಕಾರಿನ ಮೋಹಕ್ಕೆ ಸಿಲುಕಿದಾಗ ಬಲೂನು ಕೊಡುವ ಸಣ್ಣ ಖುಷಿಯನ್ನು ಮರೆಯಬಾರದು.

ಬದುಕನ್ನು ಸುಂದರಗೊಳಿಸುವುದು ಎಂದರೆ ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದು. ನಮಗೆ ಯಾವುದೋ ಒಂದು ವಿಷಯದಲ್ಲಿ ಸಂತೋಷ ಸಿಗುತ್ತದೆ ಎಂದರೆ ಇನ್ನೊಬ್ಬರ ಮಾತಿಗೆ ತಲೆ ಕೊಡದೇ ಅದನ್ನು ಒಪ್ಪಿಕೊಳ್ಳುವುದು. ಗಂಧ ತೇದಷ್ಟು ಪರಿಮಳವೇ. ಹಾಗೆ ನಮ್ಮದು ನಮ್ಮವರು ಎನ್ನುವವರು ನಮ್ಮ ಜೊತೆಗಿದ್ದಷ್ಟು ಸಂತೋಷವೇ.ಆಡಂಬರದ ಬದುಕು ಖುಷಿ ಕೊಡಬಹುದಷ್ಟೇ ನೆಮ್ಮದಿ ಕೊಡಲು ಸಾಧ್ಯವಿಲ್ಲ. ಇದ್ದುದ್ದನ್ನು ಉಳಿಸಿಕೊಳ್ಳುವ, ಜೋಪಾನವಾಗಿಸುವ ಜಾಣ್ಮೆ ನಮ್ಮಲ್ಲಿರಬೇಕು.ಏಕೆಂದರೆ ಇಂದು ನಾವು ಬದುಕುತ್ತಿರುವ ಬದುಕು ಅದೆಷ್ಟೋ ಜನರ ಕನಸಾಗಿರುತ್ತದೆ.ಇರುವುದೆಲ್ಲವ ಬಿಟ್ಟು ಇರದೇ ಇರುವುದಕ್ಕೆ ತುಡಿಯುವುದು ಕೇವಲ ಬದುಕು ಅಷ್ಟೇ. ಸಾರ್ಥಕತೆ ಅಲ್ಲ.

-ಶಿಲ್ಪಾ ಪೂಜಾರಿ

ಎಂ.ಎಂ., ಮಹಾವಿದ್ಯಾಲಯ ಶಿರಸಿ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.