UV Fusion: ಎಲ್ಲರೊಳಗೊಂದಾಗು ಮಂಕುತಿಮ್ಮ


Team Udayavani, Sep 10, 2024, 2:52 PM IST

2-uv-fusion

ಬಾಲ್ಯದಲ್ಲಿ ಇದ್ದ ಸಂತಸ ಯೌವನದ ಜೀವನನಲ್ಲಿ ಸಿಗಲಾರದು. ನೆಮ್ಮದಿ, ಸಂತೋಷ, ಆಟ-ಪಾಠ, ಮೋಜು-ಮಸ್ತಿ ಹೀಗೆ ಹತ್ತು ಹಲವಾರು ವಿಷಯದಲ್ಲಿ ಗೆಳೆಯರೊಂದಿಗೆ ನೆಮ್ಮದಿಯಾಗಿ ಕಳೆಯುವ ಕಾಲವೇ ಬಾಲ್ಯ. ದೊಡ್ಡವರಾದಂತೆ ಕೆಲಸ, ಸದ್ದಿಲ್ಲದೆ ಬರುವ ಕಷ್ಟಗಳು, ಜವಾಬ್ದಾರಿಯ ಜತೆಗೆ ನೆಮ್ಮದಿಯ ಜೀವನವು ಈ ಮಾಯಾ ನಗರಿಯಲ್ಲಿ ಕಳೆದು ಹೋಗಿದೆ.

ನಾವು ಚಿಕ್ಕವರಿದ್ದಾಗ ದೊಡ್ಡವವರಿಗೆ ಏನು ಚಿಂತೆ ಇರುವುದಿಲ್ಲ ಎಂದು ಯೋಜನೆ ಮಾಡಿದೇ ಹೆಚ್ಚು. ಆದರೆ ಈಗ ಜೀವನದ ಜಂಜಾಟದಲ್ಲಿ ಬಾಲ್ಯವೇ ಎಷ್ಟೋ ಚೆನ್ನಾಗಿಯ್ತು ಅನ್ನಿಸಲು ಶುರುವಾಗಿದೆ. ಈ ಬಾಲ್ಯವೇ ಹಿಂಗೆ. ಬಾಲ್ಯದಲ್ಲಿ ಕಲಿತ ಪಾಠ ಯಾವ ವಿಶ್ವವಿದ್ಯಾಲಯಗಳಲ್ಲಿ ಸಹ ಕಲಿಸಲು ಸಾಧ್ಯವಿಲ್ಲ. ಸ್ನೇಹಿತರೊಂದಿಗೆ ಕಳೆದ ಕ್ಷಣಗಳು ನೆನೆದಷ್ಟು ಮನಸ್ಸಿಗೆ ಬಾರವಾದರೂ ಇನ್ನೂ ಮನಸ್ಸಲ್ಲಿ ಮಾಸದೆ ಹಾಗೆ ಉಳಿದುಕೊಂಡಿವೆ. ಮರಳಿ ಬರಬಾರದೇ ಆ ಬಾಲ್ಯ ಎನ್ನಿಸಿದು ಹಲವು ಬಾರಿ. ಆ ಕ್ಷಣಗಳನ್ನು ನೆನದರೆ ನನಗೆ ಅರಿವಿಲದಂತೆ ಈಗಲೂ ಕಣ್ಣೀರು ಜಾರುತ್ತಿರುವುದು.

ನಾ ಮುಂದು ತಾ ಮುಂದು ಎಂದು ಹೊಗುತ್ತಿರುವ ಕಾಲದ ಕೈ ಗೊಂಬೆಯಾಗಿರುವ ನಾವುಗಳು ನೆಮ್ಮದಿಯ ಜೀವನ ಮರೆತ್ತಿದ್ದೇವೆ. ಆ ದಿನಗಳಲ್ಲಿ ಭಾರವಾದ ಶಾಲೆಯ ಬ್ಯಾಗ್‌ ಹೊತ್ತು ಗೆಳತಿಯರೊಂದಿಗೆ ಊರಿನಲ್ಲಿ ನಡೆಯುವ, ನಡೆಯತ್ತಿರುವ ಸುದ್ದಿಗಳನ್ನು ಗಾಸಿಪ್‌ ಮಾಡುತ್ತಾ ಶಾಲೆಗೆ ತಲುಪುವುದು, ಶಾಲೆಗೆ ಹೋಗುವುದು ತಡವಾದರೆ ಗುರುಗಳಿಂದ ಬೈಸುಗ್ಳೋ ಜೊತೆಗೆ ನಾಲ್ಕೈದು ಪಟ್ಟು ತಿನ್ನುವುದು, ಶಾಲೆಯಲ್ಲಿ ಕುಳಿತು ಬೇಸರವಾಯ್ತು ಎಂದು ಶಾಲೆ ಬಂಕ್‌ ಮಾಡಿ ಸ್ನೇಹಿತರೊಂದಿಗೆ ನಮ್ಮಾರ ಸಾಹುಕಾರನ ಹೊಲದ ಮಾವಿನ ಹಣ್ಣು ಕದ್ದು ತಿನ್ನುದ್ದು, ಆ ವಿಷಯ ಮನೆಯಲ್ಲಿ ಗೊತ್ತಾಗಿ ಬಸುಂಡೆ ಬರುವ ಹಾಗೆ ಹೊಡೆದರು ಏನು ಆಗಿಲ್ಲ ಎನ್ನುವ ಹಾಗೆ ನಗು ಮುಖದ ರಾಣಿಯಂತೆ ಇರುವುದು. ಮರ ಕೋತಿ, ಗೋಲಿ ಆಟ, ಕಣ್ಣಾ ಮುಚ್ಚಾಲೆ ಆಟ ಆಡುವುದು. ಅದರಲ್ಲಿ ಸೊತರೇ ಗೆಳತಿಯರನ್ನು ಬೈದು ಅವರ ಮೇಲೆ ಮುನಿಸಿಕೊಂಡು ಇಡೀ ದಿನ ಮಾತಾಡದೆ ಇರುವುದು, ಅನಂತರ ಮುನಿಸು ಮುರಿದು ಮತ್ತೆ ಅವರೊಂದಿಗೆ ಆಡುವುದು ಆ ಕ್ಷಣದ ಸಂತಸ ತುಂಬಾ ಹಿತ್ತ ಎನ್ನಿಸುವುದು.

ಮಳೆಗಾಲದಲ್ಲಿ ಅಂತೂ ಪಾಠ ಬಿಟ್ಟು ಮಳೆಯಲ್ಲಿ ಆಡುವುದೇ ಒಂದು ಮಜ. ಮಳೆಯಲ್ಲಿ ಜೊತೆಯಲ್ಲಿ ಎಂದು ಪ್ರೇಮಿಗಳಂತೆ ಕುಣಿವುದು. ಹೀಗೆ ಬಾಲ್ಯದಲ್ಲಿ ನಡೆದ ಅನೇಕ ಸಣ್ಣ ಸಣ್ಣ ವಿಷಯದಲೂ ಸಂತಸ ಕಂಡ ನಾವುಗಳು ದೊಡ್ಡವರಾದಂತೆ ಎಲ್ಲವು ಕೇವಲ ನೆನಪುಗಳಾಗಿ ಮನಸಿನಲ್ಲಿ ಮಾಸದೆ ಉಳಿದುಕೊಳ್ಳುತ್ತವೆ. ಹೀಗೆ ನನ್ನ ಬಾಲ್ಯದ ನೆನಪು ಮನದಲ್ಲಿ ಉಳಿದುಕೊಂಡಿದೆ.

ನಾವು ದೊಡ್ಡವರಾದಂತೆ ಎಲ್ಲರಂತೆ ಹಣ ಮಾಡಬೇಕು ಎಂದು ಹಣದ ಹಿಂದೆ ಹೋಗಿ ಬಿಡುವಿಲ್ಲದ ಕೆಲಸದ ಮಧ್ಯ ಸಿಲುಕಿ ನಮ್ಮನ್ನು ನಾವು ಕಳೆದುಕೊಳ್ಳುವುದರ ಜತೆಗೆ ನೆಮ್ಮದಿಯ ಜೀವನ ಸಹ ಕಳೆದುಕೊಳ್ಳುತ್ತೇವೆ. ಬಿಜಿ ಟೈಮ್‌ ಗೆ ಬಾಯ್‌ ಹೇಳಿ ನೆಮ್ಮದಿ ಹುಡುಕಲು ಶುರು ಮಾಡಿದಾಗ್ಲೇ ಅರಿವಾಗುವುದು. ನಮ್ಮ ನೆಮ್ಮದಿಯ ಜೀವನ ಬಾಲ್ಯದಲ್ಲೇ ಕಳೆದು ಹೋಗಿದೆ ಎಂದು.

ಇಂದು ಅವಸರವಾಗಿ ಹೋಗುತ್ತಿರುವ ಕಾಲದ ಜತೆಗೆ ನಮ್ಮ ಜೀವನ ಸಾಗಿಸುವುದು ಅನಿವಾರ್ಯವಾಗಿದೆ. ಸಮಯವು ಸ್ಪರ್ಧೆಗೆ ನಿಂತ ಕುದುರೆಯಂತೆ ಓಡುತ್ತಿದೆ. ಅದರಲ್ಲಿ ನಮ್ಮ ಪಾಡು ನಾಯಿ ಪಾಡಗಿ ಹೋಗಿದೆ. ಚಿಂತೆಯಿಲ್ಲದ, ನಿಷ್ಕಲ್ಮಶದ ಮನಸ್ಸು, ಮುಖದಲ್ಲಿ ಸದಾ ಸಂತಸ ತುಂಬಿ, ಎಲ್ಲರನ್ನು ಸಮಾನವಾಗಿ ನೋಡು ದೃಷ್ಟಿ, ಆಟ-ಪಾಠದಲ್ಲಿ ಏನೋ ಹುಮ್ಮಸ್ಸು, ಜೀವನದಲ್ಲಿ ಯಾವಾಗಲೂ ತೇಜಸ್ಸು ಇರುವ ಬಾಲ್ಯವೇ ದಯಮಾಡಿ ಮತ್ತೂಮ್ಮೆ ನಮ್ಮ ಬಾಳಿನಲ್ಲಿ ಮರುಳಿ ಬರುವೆಯಾ….?

- ನೀಲಾ ಹೊಸಮನಿ

ವಿಜಯಪುರ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.