UV Fusion: ಪ್ರಕೃತಿಯ ಶಾಪವೋ… ಮಾನವನ ಕರ್ಮವೋ?


Team Udayavani, Sep 8, 2024, 11:44 AM IST

9-

“ಪ್ರಕೃತಿ’ ಮಾನವನ ಜೀವನಕ್ಕೆ ಜೀವಕಲೆ ತುಂಬುವ ಚೇತನ. ನಿಸರ್ಗಕ್ಕೆ ನಾನಾ ಹೆಸರಿದ್ದರೂ ಅರ್ಥ, ಆಂತರ್ಯ ಒಂದೇ. ಮಾನವನ ಜೀವನ ಆರಂಭವಾಗುವುದರಿಂದ ಹಿಡಿದು ಆತನ ಏಳು-ಬೀಳು, ದುಃಖ-ಖುಷಿ, ಕೊನೆಗೆ ಈ ಲೋಕದ ಎಲ್ಲ ಕರ್ಮ ಮುಗಿಸಿ ಪರಲೋಕಕ್ಕೆ ಸಾಗುವ ತನಕ ನಮ್ಮನ್ನು ಪೊರೆಯುವ ಶಕ್ತಿ ಇರುವುದು ಆ ಮಹಾತಾಯಿಗಷ್ಟೇ.

ಮನುಷ್ಯನ ಏಳಿಗೆಗಾಗಿ ತನ್ನ ಸರ್ವಸ್ವವನ್ನು ಕರಗಿಸಿಕೊಳ್ಳುವ ಮಾತೃಹೃದಯಿ, ಕರುಣಾಮಯಿ ಆಕೆ. ಆದರೆ ಮಾನವ ತನ್ನ ಇತಿ-ಮಿತಿಗಳನ್ನು ದಾಟಿ ಅವಳ ಒಡಲನ್ನೇ ಬಗೆಯುತ್ತಿದ್ದಾನೆ. ಅವಳಾದರು ಮಾಡುವುದನೇನನ್ನು? ತಾನು ಮಿತಿಯಿಲ್ಲದೆ ಕೊಟ್ಟದಕ್ಕಾಗಿ ಅನುಭವಿರಬೇಕಷ್ಟೆ! ಎಲ್ಲವನ್ನು ಕೊಟ್ಟ ತಾಯಿ, ತನ್ನ ಮಕ್ಕಳ ತಪ್ಪನ್ನೆಲ್ಲ ಮನ್ನಿಸುವುದು ಅಸಾಧ್ಯವೇ.

ಸಾಧ್ಯವಿದ್ದರೂ ಸಹನೆಗೆ ಮಿತಿ ಎಂಬುದಿದೆ ಅಲ್ಲವೇ? ಆಕೆ ಕೆಲವೊಮ್ಮೆ ತನ್ನ ಭೂಗರ್ಭದಿಂದ ಭಯ ಹುಟ್ಟಿಸಿದರೆ, ಇನ್ನೂ ಕೆಲವೊಮ್ಮೆ ಗಂಭೀರ ಹಾನಿಯನ್ನೇ ಮಾಡಿಬಿಡುತ್ತಾಳೆ. ಇದಕ್ಕೆಲ್ಲ ಮಾನವರು ದೂರುವುದು ಪ್ರಕೃತಿಯನ್ನಾದರೂ ಆಗಿರುವ ಅನಾಹುತಕ್ಕೆ ತಾವೇ ಕಾರಣಿಗರು ಎಂಬುವುದನ್ನು ಮರೆತಿದ್ದಾರೆ.

ಒಂದು ಹೆಣ್ಣು ತನ್ನ ಮೇಲಾಗುವ ದೌರ್ಜನ್ಯವನ್ನು ಹೆಚ್ಚು ಕಾಲ ಸಹಿಸಲಾರಳು. ತಾಳ್ಮೆಗೆಟ್ಟು ಕೊನೆಗೊಂದು ದಿನ ಅವಳಿಗವಳೇ ಧ್ವನಿಯಾಗುವಳು. ಅಂತೆಯೇ ಪ್ರಕೃತಿಮಾತೆ; ಆಕೆಯೂ ಹೆಣ್ಣಿನ ಪ್ರತಿರೂಪವಲ್ಲವೇ. ಆಕೆಯನ್ನು ಧಿಕ್ಕರಿಸಿ, ಅವಳಿಗೆ ವಿರುದ್ಧವಾಗಿ ನಡೆದರೆ ಏನಾಗಬಹುದು ಎಂಬುದಕ್ಕೆ ಇತ್ತೀಚಿನ ಘಟನೆಗಳೇ ಸಾಕ್ಷಿ.

ಇದೆಲ್ಲವೂ ಮಾನವನ ಅತೀ ಬುದ್ಧಿವಂತಿಕೆಯ ಫಲ. ವೈಜ್ಞಾನಿಕ ಯಂತ್ರ-ತಂತ್ರಗಳು ಭೂ ತಾಯಿಗೆ ತಡೆಯಾಗಿ ನಿಲ್ಲುವುದೆಂದರೆ ಅಪಹಾಸ್ಯವೇ ಸರಿ. ಪ್ರಕೃತಿಗೆ ಇವುಗಳನ್ನೆಲ್ಲ ಕ್ಷಣದಲ್ಲೇ ಕೊನೆ ಮಾಡುವ ಶಕ್ತಿಯಿದೆ. ಹಾಗಿದ್ದರೂ ಆಕೆ ಮೌನವಾಗಿರುತ್ತಾಳೆ. ಆದರೆ ಆಕೆ ಮೌನ ಮುರಿದು ರೌದ್ರಾವತಾರ ತಾಳಿದರೆ ಯಾರಿಂದಲೂ ಎದುರಿಸಲಾಗದು. ಆಕೆ ತಾನು ನೀಡಿದ್ದೆಲ್ಲವನ್ನೂ ಪಂಚಭೂತಗಳಲ್ಲಿ ಸೇರಿಸಿಕೊಂಡು ತನಗಾದ ದೌರ್ಜನ್ಯದ ನೋವನ್ನು ಮಾನವರೂ ಅನುಭವಿಸುವಂತೆ ಮಾಡುವಳು. ಈ ಮೂಲಕ ಆಕೆಯ ಭೂ ಗರ್ಭದ ವೇದನೆಯನ್ನು ಶಮನಮಾಡಿಕೊಳ್ಳುತ್ತಾಳೆ.

ಇತ್ತೀಚೆಗೆ ನಡೆದ ಸಾವು-ನೋವುಗಳನ್ನು ನೆನಪಿಸಿಕೊಂಡರೆ ಮನ ಕದಡುತ್ತದೆ. ಇದು ಮಾನವನ ಸಹಜ ಗುಣ. ಹಾಗೆಯೇ “ಪ್ರಕೃತಿ’ ಎಂಬವಳಿಗೂ ಮನಸೆಂಬುದು ಇರಲೇಬೇಕಲ್ಲಾ! ಏಕೆಂದರೆ ಆಕೆಯೇ ನಮ್ಮನ್ನೆಲ್ಲ ಪೊರೆದ ತಾಯಿ. ಆಕೆ ತನ್ನೊಡಲಿಗೆ ಕೊಡಲಿಪೆಟ್ಟು ಬೀಳುತ್ತಿರುವುದನ್ನು ನೋಡಿಯೂ ಸುಮ್ಮನಿರಬೇಕೇ? ಆಕೆಗೂ ಬದುಕಬೇಕು, ಉಸಿರಾಡಬೇಕು, ಜೀವಸಂಕುಲಕ್ಕೆ ಉಸಿರಾಗಬೇಕಿದೆ.

ಹೀಗಾಗಿ ಮನುಷ್ಯ ಈಗಾಗಲೇ ನಡೆದಿರುವ ಅನಾಹುತಗಳಿಂದ ಪಾಠ ಕಲಿಯಬೇಕಿದೆ. ತಪ್ಪೇ ಮಾಡದೆ ಅವಗ‌ಡಗಳಲ್ಲಿ ಜೀವ ಕಳೆದುಕೊಂಡಿರುವ ಮುಗ್ಧ ಪ್ರಾಣಗಳಿಗೆ ಹೊಣೆ ಯಾರು? ಪರಿಸರವನ್ನು ನಾವು ರಕ್ಷಿಸದ ಹೊರತು, ಪ್ರಕೃತಿ ನಮ್ಮನ್ನು ರಕ್ಷಿಸದು. ಇನ್ನಾದರೂ ಎಚ್ಚೆತ್ತುಕೊಂಡು ಪರಿಸರ ಸ್ನೇಹಿಯಾಗಿ ಬಾಳ್ವೆ ಮಾಡೋಣ.

-ವಿನುತಾ ಕೆಯ್ಯೂರು

ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು

ಟಾಪ್ ನ್ಯೂಸ್

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

1-asdadasd

Cricketer of the Month :ಎರಡೂ ಪ್ರಶಸ್ತಿ ಶ್ರೀಲಂಕಾ ಪಾಲು

1-HB

Harry Brook ಹೆಗಲಿಗೆ ಇಂಗ್ಲೆಂಡ್‌ ನಾಯಕತ್ವ

1-reasas

Americaದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿರುವ ಧೋನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.