UV Fusion: ಮಳೆಯೇ ಮಾಯ


Team Udayavani, Sep 24, 2023, 12:03 PM IST

9–fusion-rain

ಮಳೆಗಾಲ ಎಂದರೆ ಮನಸ್ಸಿಗೆ ಎನೋ ಒಂದು ರೀತಿಯ ಆನಂದ. ಹನಿಗಳ ಸದ್ದು, ಮಣ್ಣಿನ ಗಮ, ತಂಪು ಗಾಳಿ ಎಂದಿಗೂ ಹರುಷ ಉಂಟು ಮಾಡುತ್ತವೆ. ಅದರಲ್ಲೂ ಮಲೆನಾಡಿನ ಮಳೆಗಾಲವಂತು ಮನಮೋಹಕ. ಎತ್ತ ನೋಡಿದರೂ ಹಚ್ಚಹಸುರಿನಿಂದ ತುಂಬಿರುವ ಗಿಡ ಮರಗಳು, ತೋಟ ಗದ್ದೆಗಳಲ್ಲಿ ಚುರುಕಾಗಿ ಸಾಗುವ ವ್ಯವಸಾಯ, ಕಚ್ಚೆ ಸೀರೆಯನ್ನುಟ್ಟು ನಾಟಿ ಮಾಡುವ ಹೆಂಗಸರು, ಖುಷಿಯಿಂದ ಕೃಷಿಯಲ್ಲಿ ತೊಡಗಿದ ರೈತರು ಆಹಾ ಎಂತಃ ಮನಮೋಹಕ ದೃಶ್ಯಗಳಿವು.

ಕಣ್ಣಿಗೆ ತಂಪು ತರುವ ಮಳೆಗಾಲವನ್ನು ಎಂದಿಗೂ ಮರೆಯಲು ಅಸಾಧ್ಯ. ಆದರೆ ಮಲೆನಾಡಿನಲ್ಲಿ ವಾಡಿಕೆಯಂತೆ ಈ ಬಾರಿ ವರುಣನ ಅಬ್ಬರವಿಲ್ಲ. ನಾನು ಹುಟ್ಟಿದಾಗಿನಿಂದ ಎಂದು ಕಾಣದಂತ ಬಿರು ಬಿಸಿಲನ್ನು ಈ ಮಳೆಗಾಲದಲ್ಲಿ ಕಾಣುವಂತಾಗಿದೆ. ದೇವರ ಶಾಪವೋ, ಮನುಷ್ಯನ ಪಾಪವೋ ತಿಳಿಯುತ್ತಿಲ್ಲ ಇಂತಹ ದುಸ್ಥಿತಿ ಎದುರಾಗಿದೆ. ಮನುಷ್ಯನು ಪ್ರಕೃತಿಯನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾನೆ ಆದರೆ ಉಳಿಸುವ, ಬೆಳೆಸುವ ಕಾರ್ಯವನ್ನು ಮಾತ್ರ ಮಾಡುತ್ತಿಲ್ಲ. ಅದರ ಪರಿಣಾಮ ಇಂದು ತಿಳಿಯುವಂತಾಗಿದೆ. ಮಲೆನಾಡಿಗೆ ಇಂತಹ ಪರಿಸ್ಥಿತಿ ಎದುರಾದರೆ ಇನ್ನೂ ಉಳಿದ ಪ್ರದೇಶಗಳ ಗತಿ ಏನು? ವರುಣನನ್ನೇ ನಂಬಿಕೊಂಡು ವ್ಯವಸಾಯಕ್ಕೆ ಬಿತ್ತನೆ ಬೀಜ , ಗೊಬ್ಬರ, ಕೀಟನಾಶಕ ಎಂದೆಲ್ಲಾ ವೆಚ್ಚ ಮಾಡಿದ ರೈತನ ಪಾಡೇನು?. ಹೀಗೆ ಮುಂದುವರೆದಲ್ಲಿ ಎಲ್ಲ ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗುವುದರಲ್ಲಿ ಸಂದೇಹವಿಲ್ಲ. ಮೂರು ಹೊತ್ತು ಹೊಟ್ಟೆಯನ್ನು ತುಂಬಿಸಿಕೊಳ್ಳಲು ಹೊರೆಯಾಗುವ ಸ್ಥಿತಿ ಎದುರಾದರೆ? ಎನ್ನುವುದೇ ಭಯ. ಮುಂದಿನ ಬೇಸಿಗೆ ಕಾಲಕ್ಕೆ ಬರಗಾಲ ಕಟ್ಟಿಟ್ಟ ಬುತ್ತಿ.

ಸಮೃದ್ಧ ಪರಿಸರವಿದ್ದಲ್ಲಿ ಈ ಸಮಸ್ಯೆ ತಲೆದೊರುತ್ತಿರಲಿಲ್ಲ. ಅರಣ್ಯವನ್ನು ಅಭಿವೃದ್ಧಿಯ ಹೆಸರಲ್ಲಿ ಕಡಿದು ಹಾಕುತ್ತಿ ರುವುದು ತನ್ನದೇ ವಿನಾಶಕ್ಕೆ ಮುನ್ನುಡಿ ಬರೆದಂತೆ ಎಂದು ಮನುಜ ಇನ್ನೂ ಅರಿತಿಲ್ಲ. ಪ್ರಕೃತಿ ಮುಂದೆ ಮನುಷ್ಯ ತೃಣಕ್ಕೆ ಸಮಾನ. ಇಂದಿನ ಪರಿಸ್ಥಿತಿಯು ಮನುಷ್ಯನು ಮಾಡುತ್ತಿರುವ ತಪ್ಪುಗಳ ಪ್ರತಿಫ‌ಲ. ಅದನ್ನು ಅನುಭವಿಸದೆ ಬೇರೆ ವಿಧಿ ಇಲ್ಲ.

ಪೂಜಾ ಹಂದ್ರಾಳ,

ಶಿರಸಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

Ganesh Chaturthi: ಗಣೇಶ ಬಂದ

14-wayanad

Wayanad: ವಯನಾಡಿನ ಪ್ರಕೃತಿ ವಿಕೋಪ ಮತ್ತು ಮಾನವೀಯತೆ

13-

UV Fusion: ಅನಾಹುತಕಾರಿ ಮಾನವ

11

UV Fusion: ನಮ್ಮ ಔನ್ನತ್ಯವನ್ನು ನಾವೇ ನಿರ್ಧರಿಸಬೇಕಲ್ಲವೇ?

10-

Childhood: ಈ ಬಾಲ್ಯ ಮತ್ತೊಮ್ಮೆ ಮರುಕಳಿಸಬಾರದೇ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.