Sakrebyle Elephant Camp: ನಾ ಕಂಡ ಸಕ್ರೆಬೈಲ್‌ ಆನೆ ಬಿಡಾರ


Team Udayavani, Jun 22, 2024, 3:45 PM IST

11-elephnat

ಮಲೆನಾಡಿನ ಹೆಬ್ಟಾಗಿಲು ಪಶ್ಚಿಮ ಘಟ್ಟದ ಸಾಲಿನಲ್ಲಿ ಹರಿಯುವ ತುಂಗಾನದಿಯ ಮಡಿಲಲ್ಲಿರುವ ಪ್ರವಾಸಿತಾಣವೇ ಸಕ್ರೆಬೈಲ್‌ ಆನೆ ಬಿಡಾರ.  ಸಕ್ರೆಬೈಲ್‌ ಅಂದರೆ  ಸಕ್ಕರೆ ಹೊಲಗಳು ಎಂದರ್ಥ.

ಇದು ಶಿವಮೊಗ್ಗ ನಗರ ಪ್ರದೇಶದಿಂದ 14 ಕಿ.ಮೀ. ದೂರದಲ್ಲಿದ್ದು ಇಲ್ಲಿಗೆ ಮಳೆಗಾಲದ ಪ್ರವಾಸವು ಅತಿ ಸೊಗಸಾಗಿರುತ್ತದೆ. ಆನೆಗಳನ್ನು ಕಣ್ತುಂಬಿಕೊಳ್ಳಲೆಂದೇ ದೇಶಾದ್ಯಂತ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ನೀಳ, ಎತ್ತರದ, ಗಾಂಭಿರ್ಯದ ಆನೆಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದು.  ಕರ್ನಾಟಕದ ಪ್ರಮುಖ ಆನೆ ಶಿಬಿರಗಳೆಂದರೆ ಶಿವಮೊಗ್ಗದ ಸಮೀಪದಲ್ಲಿರುವ ಸಕ್ರೆಬೈಲ್‌ ಆನೆ ಶಿಬಿರ ಮತ್ತು ಕೊಡಗಿನ ದುಬಾರೆ ಆನೆ ಶಿಬಿರ.

ಸಕ್ರೆಬೈಲ್‌ ಆನೆ  ಬಿಡಾರ ಕರ್ನಾಟಕದಲ್ಲಿ ಸೆರೆ ಹಿಡಿಯಲ್ಪಟ್ಟ ಅಥವಾ ಬಂಧಿಸಲ್ಪಟ್ಟ ಆನೆಗಳಿಗೆ  ತರಬೇತಿ ನೀಡುವ ಅತ್ಯುತ್ತಮ ಬಿಡಾರವಾಗಿದ್ದು ಇಲ್ಲಿ ಸಾಮಾನ್ಯವಾಗಿ ಬೃಹತ್‌ ಗಾತ್ರದ ಆನೆಗಳನ್ನು ಅತಿ ಸಮೀಪದಿಂದ ನೋಡುವ ಅವಕಾಶ ಸಿಗುತ್ತದೆ. ಇದು  ಕರ್ನಾಟಕದಲ್ಲಿನ ಪರಿಸರ ಸ್ನೇಹಿ ಪ್ರವಾಸೋದ್ಯಮ ಕೇಂದ್ರಗಳ ಪೈಕಿಯೂ ಒಂದಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿರುವ ಪುಂಡ ಆನೆಗಳು, ಅಸ್ವಸ್ಥಗೊಂಡ, ನಡತೆಯ ಸಮಸ್ಯೆಯಿರುವ, ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿರುವ ಮುಂತಾದ ಅನೇಕ ಕಾರಣಗಳಿಂದ ಆನೆಗಳನ್ನು ಬಿಡಾರಕ್ಕೆ ಕರೆತಂದು ಅನುಭವ ಹೊಂದಿರುವ ಪಶು ವೈದ್ಯರಿಂದ ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಪ್ರತೀ  ದಿನ ಅವಕ್ಕೆ ನುರಿತ  ಮಾವುತರಿಂದ ತರಬೇತಿ ನೀಡಲಾಗುತ್ತದೆ. ಅನಂತರ ಪ್ರತೀ ದಿನ ಆನೆಗಳಿಗೆ ಮೇವು ಹಾಕುತ್ತಾರೆ ರಾತ್ರಿ ಮೇವು ತಿಂದು ಬಂದು ವಿಶ್ರಾಂತಿ ಪಡೆದ ಬಳಿಕ ಬೆಳಗ್ಗೆ ಏಳು ಗಂಟೆಗೆ ಅವುಗಳಿಗೆ ಸ್ನಾನ ಮಾಡಿಸಿ, ಪಶು ವೈದ್ಯರ ಸಲಹೆಯಂತೆ ಅವುಗಳಿಗೆ ಪುಷ್ಕಳ ಭೋಜನ ನೀಡಿ, ಅವುಗಳನ್ನು ಬಿಡಾರಕ್ಕೆ ಬಿಡಲಾಗುತ್ತದೆ.

ಆನೆ  ವೀಕ್ಷಣೆ ಸಮಯ ಬೆಳಗ್ಗೆ 8.30ರಿಂದ ಮಧ್ಯಾಹ್ನ 1ರ ವರೆಗೆ ಇದ್ದು, ಆನೆಗಳನ್ನು ಬೆಳಗ್ಗೆ ಕಾಡಿನಿಂದ ಬಿಡಾರಕ್ಕೆ ಕರೆತರುತ್ತಾರೆ.  ಇದನ್ನು ನೋಡಲು ತುಂಬಾ ಸೊಗಸಾಗಿದ್ದು  ಪ್ರವಾಸಿಗರು ಬೆಳಗ್ಗೆ ಬರುವುದು ಹೆಚ್ಚು. ಪ್ರವಾಸಿಗರು ಪ್ರವೇಶ ಶುಲ್ಕಗಳ ವಿವರಗಳನ್ನೊಳಗೊಂಡತೆ ಪ್ರವೇಶ ಪಡೆದು ಬಿಡಾರಕ್ಕೆ ಆಗಮಿಸಿ ಅಲ್ಲಿ ವಿವಿಧ ನಾಮಗಳೊಂದಿಗೆ ಆಟ ಆಡುತ್ತಿರುವ ಆನೆಗಳನ್ನು ನೋಡಬಹುದು. ಕಾಡಿನಿಂದ ಬಂದ ಆನೆಗಳನ್ನು ಮೊದಲು ತುಂಗಾನದಿ ದಡಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಮಾವುತನ ಕಣ್ಗಾವಲಿನಲ್ಲಿ ಪ್ರವಾಸಿಗರು ಆನೆಗಳಿಗೆ ಸ್ನಾನ ಮಾಡಿಸುತ್ತಾರೆ.  ಇಲ್ಲಿ ಪ್ರವಾಸಿಗರು ಆನೆಯ ಮೈ ಉಜ್ಜುತ್ತಾ ದಣಿದರೆ ಆನೆ ಆನಂದವಾಗಿ  ಸ್ನಾನ ಮಾಡುತ್ತದೆ. ಮತ್ತು ಆನೆಯು ವಿವಿಧ

ಆಟವನ್ನು ಆಡುತ್ತದೆ. ಉದಾಹರಣೆಗೆ ಸೊಂಡಿಲಿನಿಂದ ನೀರು ಚಿಮ್ಮಿಸುವುದು, ನೀರಿನಲ್ಲಿ ಬಿದ್ದು ಹೊರಳಾಡುವುದು ಮುಂತಾದವು. ಇದನ್ನು ನೋಡುತ್ತಾ, ಅನುಭವಿಸುತ್ತಾ ದೊಡ್ಡವರು ಚಿಕ್ಕವರಂತೆ ವರ್ತಿಸುತ್ತಾರೆ. ತದನಂತರ ಆನೆಗಳನ್ನು ಬಿಡಾರಕ್ಕೆ ಕರೆತರುತ್ತಾರೆ ಈ ಸಂದರ್ಭ ಆನೆಗಳ ಜತೆ ಛಾಯಾಚಿತ್ರ ತೆಗೆದುಕೊಳ್ಳುವವರೇ  ಹೆಚ್ಚು. ಬಿಡಾರಕ್ಕೆ ಆನೆಗಳನ್ನು ಕರೆತಂದಾಗ ಅಲ್ಲಿನ ಪ್ರವಾಸಿಗರು ಆನೆಗಳ ಆಟಗಳನ್ನು ನೋಡಿ ಸಂತೋಷಪಡುತ್ತಾರೆ ಮತ್ತು ಕೇವಲ ಪ್ರವೇಶ ಶುಲ್ಕ ಪಡೆದವರು ಆನೆ ಆಟವನ್ನು ನೋಡಿ ಆನೆಯ ಮುಂದೆ ನಿಂತು ಛಾಯಾಚಿತ್ರ ತೆಗೆದುಕೊಂಡು ಸಂತೋಷಪಡುತ್ತಾರೆ.

ಇಲ್ಲಿ ಆನೆಗಳನ್ನು ಮಾತ್ರವಲ್ಲದೆ ಅನೇಕ ಜಾತಿಯ ಮರಗಳನ್ನೂ ನೋಡಬಹುದು. ತೇಗ, ಬೀಟೆ, ಹೊನ್ನೆ, ಮತ್ತಿ, ನೀಲಗಿರಿ ಮುಂತಾದ ಮರಗಳು ಪರಿಸರಕ್ಕೆ ನೆರಳನ್ನು ನೀಡುತ್ತಿವೆ. ಇಲ್ಲಿಗೆ ಹತ್ತಿರವಾದ ಸ್ಥಳಗಳೆಂದರೆ ಜೋಗ ಜಲಪಾತ, ಗಾಜನೂರು ಅಣೆಕಟ್ಟು, ಆಗುಂಬೆ,ಕೊಡಾಚಾದ್ರಿ,ಹಿಡ್ಲುಮನೆ ಜಲಪಾತ, ಕುಪ್ಪಳ್ಳಿ  ಮುಂತಾದವು.

-ಶ್ರೀಕಾಂತ ಎಂ.

ದಾವಣಗೆರೆ

ಟಾಪ್ ನ್ಯೂಸ್

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

shivamogga

Shimoga; ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ ಸಚಿವ ಕುಮಾರಸ್ವಾಮಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.