Selfish: ನಿಸರ್ಗದಲ್ಲಡಗಿದೆ ಸ್ವಾರ್ಥ…


Team Udayavani, Jun 1, 2024, 10:49 AM IST

2-uv-fusion

ಸ್ವಾರ್ಥ, ಈ ಪದ ಎರಡಕ್ಷರದ್ದೇ ಆದರೂ ಇಡೀ ಪ್ರಪಂಚವನ್ನೇ ತಲೆ ಕೆಳಗೆ ಮಾಡುವ ಶಕ್ತಿಯನ್ನು ಹೊಂದಿದೆ. ಬುದ್ಧಿಜೀವಿಯಾದ ಮನುಷ್ಯ ಇಂದು ಸ್ವಾರ್ಥ ಎಂಬುದರ ಕೈಗೊಂಬೆಯಾಗಿದ್ದಾನೆ. ಕಾಮ, ಕ್ರೋಧ, ಲೋಭ, ಮದ, ಮೋಹ ಮತ್ತು ಮತ್ಸರ ಎಂಬ ಅರಿಷಡ್ವರ್ಗಗಳಿಗೆ ಪೈಪೋಟಿ ನೀಡುತ್ತಿರುವ ಸ್ವಾರ್ಥ ಇಂದು ನಮ್ಮನ್ನು ಆಳುತ್ತಿರುವುದು ವಿಪರ್ಯಾಸದ ಸಂಗತಿಯೇ!

ಆದರೆ, ಒಂದು ದೃಷ್ಟಿಕೋನದಿಂದ ನೋಡಿದರೆ ಸ್ವಾರ್ಥ ಎಂಬುದು ಸರ್ವಾಂತರ್ಯಾಮಿ. ಇದರ ಉಗಮ ಪ್ರಕೃತಿಯಲ್ಲಿಯೇ ಅಡಗಿರುವುದರಿಂದ ಮಾನವನೂ ಇದರಿಂದ ವಂಚಿತನಲ್ಲ. ನಿಸರ್ಗದಲ್ಲಿಯೇ ಈ ಗುಣ ಇದೆ ಎಂದಾದ ಮೇಲೆ ಅದರ ಭಾಗವಾಗಿರುವ ನಮ್ಮಲ್ಲಿ ಸ್ವಾರ್ಥ ಭಾವನೆ ಇರಲೇ ಬೇಕಲ್ಲವೇ?!

ಉದಾಹರಣೆಗೆಯೊಂದಿಗೆ ಹೇಳುವುದಾದರೆ, ಪ್ರಕೃತಿಯೇ ದೇವರು ಎಂದು ಪೂಜಿಸುತ್ತ ಬಂದಿರುವ ನಾಡು ನಮ್ಮದು. ಇಂದಿನ ಅಭಿವೃದ್ಧಿ ಹೆಸರಿನಲ್ಲಿ ಆಗುತ್ತಿರುವ ಪ್ರಕೃತಿಯ ವಿನಾಶದ ನಡುವೆಯೂ ದೇಶದ ಹಲವೆಡೆ ಇಂದಿಗೂ ಪ್ರಕೃತಿ ಪೂಜೆಯನ್ನು ಆಚರಿಸುತ್ತ ಬಂದಿದ್ದೇವೆ.

ಆ ಮೂಲಕವಾದರೂ ಇಂದು ಅಲ್ಲಿ-ಇಲ್ಲಿ, ಅಲ್ಪ-ಸ್ವಲ್ಪ ಹಸುರ ಹಾಸುಗೆ ಕಾಣಲು ಸಾಧ್ಯವಾಗಿದೆ. ಪ್ರಕೃತಿಯ ಸಮಾನಾರ್ಥಕವೋ ಎಂಬಂತಿರುವ ಮರಗಳು ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವ ಕಾಮಧೇನು ಎಂದರೂ ತಪ್ಪಾಗದು.

“ಪರೋಪಕಾರಾರ್ಥಂ ಇದಂ ಶರೀರಂ” ಎಂಬ ಮಾತಿನಂತೆ ಮರಗಳು ಯುಗ ಯುಗಾಂತರಗಳಿಂದ ಮಾನವನ ಮೂಲಭೂತ ಸೌಕರ್ಯಗಳಿಗೆ ಆಧಾರಸ್ತಂಭವಾಗಿ ನಿಂತಿವೆ. ಮರದಿಂದ ಸಿಗುವ ಹಣ್ಣಿನಿಂದ ಹಿಡಿದು ಕಾಂಡ, ಬೇರು, ಹೂವು, ಎಲೆ ಹೀಗೆ ಪ್ರತೀ ಭಾಗವು ಅದರದ್ದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.

ಅದರಲ್ಲೂ ಮರದಲ್ಲಿ ಬಿಡುವ ಹಣ್ಣಿಗೆ ಅದೆಷ್ಟೋ ಬೇಡಿಕೆ. ಮರಗಳು ಈ ಹಣ್ಣನ್ನೇ ತನ್ನ ವಂಶಾಭಿವೃದ್ದಿಯ ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತವೆ. ರಸವತ್ತಾದ ಹಣ್ಣಿನ ತಿರುಳುಗಳ ನಡುವೆ ಬೀಜಗಳನ್ನು ಬಂಧಿಯಾಗಿಸಿ ಅವುಗಳ ರಕ್ಷಣೆಯನ್ನು ಮಾಡುವುದಲ್ಲದೆ, ಬೀಜಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಹಣ್ಣಿನ ತಿರುಳುಗಳಲ್ಲಿ ಸಂಗ್ರಹಿಸಿಡುತ್ತವೆ.

ಇದನ್ನೇ ಮಾನವ ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿ ಮರ ಹಾಗೂ ತನಗೆ ನಿಸ್ವಾರ್ಥಿ ಎಂಬ ಹಣೆಪಟ್ಟಿಯನ್ನು ನೀಡುತ್ತಾನೆ. ಹಣ್ಣನ್ನು ನೀಡಿ ಮರ ನಿಸ್ವಾರ್ಥಿಯಾದರೆ ಕಸಿದುಕೊಂಡ ಹಣ್ಣಿನ ಹಾಗೂ ಅದರ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸಮಾಜಕ್ಕಾಗಿ ತನ್ನ ಕೊಡುಗೆ ಎಂದು ಹೇಳಿ ಮಾನವನು ನಿಸ್ವಾರ್ಥಿಯಾಗುತ್ತಾನೆ.

ಇದು ಕೇವಲ ಹಣ್ಣಿಗೆ ಮಾತ್ರ ಸೀಮಿತವಲ್ಲ. ಮರದ ಪ್ರತಿ ಭಾಗವನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸಿಕೊಳ್ಳುತ್ತೇವೆ. ಹೀಗೆ ಮರದ ಅಸ್ತಿತ್ವದಿಂದಾದ ಪ್ರಯೋಜನಗಳಿಗೆ ಪ್ರತಿಯಾಗಿ ಪ್ರಕೃತಿಪೂಜೆಯನ್ನು ಮಾಡುವ ಮೂಲಕ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಇಷ್ಟು ಮಾತ್ರವಲ್ಲದೆ ದೇವಸ್ಥಾನದ ಸುತ್ತ ಆಲದ ಮರ, ಅಶ್ವತ್ಥ ಮರ ಇವುಗಳನ್ನು ನಂಬಿಕೆಯ ಸಂಕೇತವಾಗಿ ಬೆಳೆಸಿರುವುದನ್ನು ನೋಡಿರುತ್ತೇವೆ.

ಆದರೆ ಈ ಬೆಳವಣಿಗೆಯ ಹಿಂದೆ ನಮ್ಮ ಆರೋಗ್ಯದ ಕಡೆಗಿನ ಲಕ್ಷ್ಯದ ನಡೆ ಎನ್ನುವ ವೈಜ್ಞಾನಿಕ ಕಾರಣವನ್ನು ಕಾಣಬಹುದಾಗಿದೆ. ಆದರೂ ಈ ನಡೆ ಪ್ರಕೃತಿಗೆ ಉತ್ತಮ ಕೊಡುಗೆಯಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಹೀಗಾಗಿ ತಮ್ಮ ಅಸ್ತಿತ್ವಕ್ಕಾಗಿ ಪ್ರತಿ ಜೀವಿಯು ಸ್ವಾರ್ಥಿಯಾಗುವುದು ಅನಿವಾರ್ಯವೇ ಆಗಿದೆ. ಇದೇ ಸ್ವಾರ್ಥದ ಹೆಜ್ಜೆ ಕೆಲವೂಮ್ಮೆ ತಮಗೆ ಅರಿಯದಂತೆ ಇನ್ನೊಬ್ಬರಿಗೆ ಒಳಿತನ್ನು ಮಾಡುತ್ತದೆ. ಸ್ವಾರ್ಥಿಯಾಗಿರುವುದು ತಪ್ಪಲ್ಲ, ಆದರೆ ಸ್ವಾರ್ಥದ ಸಾರಥ್ಯದಲ್ಲಿ ಸಮಾಜಕ್ಕೆ ಕೆಡುಕಾದರೆ ಅದು ತಪ್ಪು.

-ಮಧುರ

ಕಾಂಚೋಡು

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.