New Life: ಹೊಸ ಹುರುಪಿನಲ್ಲಿ ನವಜೀವನ ಆರಂಭಿಸಿ


Team Udayavani, Jun 1, 2024, 12:50 PM IST

4-uv-fusion

ಪ್ರತಿ ಜೀವಿಗಳಲ್ಲೂ ಒಂದಲ್ಲ ಒಂದು ವಿಶೇಷ ಗುಣವಿದ್ದೆ ಇರುತ್ತದೆ. ಆ ವಿಶೇಷ ಗುಣವನ್ನು ಗುರುತಿಸುವ ಮನಸ್ಥಿತಿ, ಶಕ್ತಿ, ಸಾಮರ್ಥ್ಯ ನಮ್ಮಲ್ಲಿರಬೇಕು. ಅಂತಹ ಉದಾಹರಣೆಗಳಲ್ಲಿ ಈ ನಾಗಲಿಂಗ ಪುಷ್ಪ ಮತ್ತು ಜೇನುನೊಣದ ಚಿತ್ರಪಟ ವಿಶೇಷ ಅಂಶವೊಂದನ್ನು ತಿಳಿಸುತ್ತದೆ.

ಈ ಪುಷ್ಪ ತನ್ನದೇ ಆದ ವಿಶೇಷ ಸೌಂದರ್ಯ, ಸುವಾಸನೆಯೊಂದಿಗೆ ಮಕರಂಧವನ್ನು ಹೊಂದಿದೆ. ಆ ಸೌಂದರ್ಯ, ಸುವಾಸನೆ ಹಾಗೂ ಮಕರಂಧಕ್ಕೆ  ಆಕರ್ಷಣೆಗೊಂಡ ಸಾವಿರಾರು ಜೇನುನೊಣಗಳು ಹೂವಿನತ್ತ ಲಗ್ಗೆ  ಇಡುತ್ತವೆ. ಮಕರಂಧವನ್ನು ಹೀರಿದ ಆ ಜೇನುನೊಣಗಳು ಜೇನುಗೂಡನ್ನು ಕಟ್ಟಿ ಜೇನುತುಪ್ಪ ತಯಾರಿಸುತ್ತವೆ.

ಆ ಜೇನುನೊಣಗಳು ಏಕಭಾವದಿಂದ ಜೇನುಗೂಡಿನ ರೂಪದಲ್ಲಿ ತಮ್ಮ ಕುಟುಂಬವನ್ನು ರೂಪಿಸಿಕೊಂಡಿರುತ್ತವೆ. ಜೇನುತುಪ್ಪದ ಆಸೆಗಾಗಿ ಮನುಷ್ಯರು ತಮ್ಮ ಕುಟುಂಬವನ್ನೇ ಅಲ್ಲೋಲ ಕಲ್ಲೋಲ ಮಾಡುವರೆಂಬ ಸಣ್ಣ ಅನುಮಾನವು ಅವುಗಳಿಗೆ ಇರುವುದಿಲ್ಲ. ಕಾರಣ ನಂಬಿಕೆಯೇ ಜೀವನ ಅಂತಾರಲ್ಲ ಹಾಗೆ. ಅದೇ ನಂಬಿಕೆ ಮೇಲೆಯೇ ಅಲ್ಲವೇ ಜೇನುನೊಣಗಳು ಮನುಷ್ಯರು ಅದೆಷ್ಟೇ ಸಾರಿ ಗೂಡು ಹಾಳು ಮಾಡಿದರೂ ಪುನಃ ಗೂಡು ನಿರ್ಮಿಸಿ, ಜೇನುತುಪ್ಪ ತಯಾರಿಸುವುದು ಅವುಗಳ ಕಾಯಕವನ್ನಾಗಿಸಿಕೊಂಡಿರುವುದು.

ಇನ್ನೂ ಹೂವಿನ ವಿಚಾರಕ್ಕೆ ಬರುವುದಾದರೆ ಮಕರಂದವನ್ನು ಕಳೆದುಕೊಂಡು ಹೂವು ಬಾಡಿದರೂ ಕೂಡ ತನ್ನ ಬಳ್ಳಿ, ಗಿಡ, ಮರಗಳಲ್ಲಿ ನಾಳೆಯೆಂಬ ಭವಿಷ್ಯದಲ್ಲಿ ಅರಳಲಿರುವ ತನ್ನ ಕುಟುಂಬದ ಸದಸ್ಯನಾದ ಮತ್ತೂಂದು ಹೂವಿನ ಸಂತೋಷ ಕಂಡು ತನ್ನ ಗೈರುಹಾಜರಿಯನ್ನು ಇತರ ಹೂವುಗಳು ತುಂಬುವರೆಂಬ ಸಾರ್ಥಕತೆಯನ್ನು ಹೊಂದುತ್ತದೆ.

ಇದೇ ಸಂದರ್ಭದಲ್ಲಿ ಮನುಷ್ಯರ ಸ್ಥಿತಿ ಊಹಿಸಿಕೊಂಡರೆ  ಆಕಾಶವೇ ಕಳಚಿ ಬಿತ್ತೇನೋ ಎಂಬ  ಮನೋಭಾವದಿಂದ ಆತ್ಮಹತ್ಯೆಗೆ ಮುಂದಾಗುತ್ತಿದ್ದರು. ಇಂತಹ ಸಾವಿರಾರು ಉದಾಹರಣೆಗಳನ್ನು ನಾವು ದಿನನಿತ್ಯ ಮಾಧ್ಯಮಗಳಲ್ಲಿ ಬಿತ್ತರವಾಗುವುದು ಕಾಣುತ್ತಿದ್ದೇವೆ.  ಪ್ರತಿ ಮನುಷ್ಯನಲ್ಲೂ ಕೂಡ ಒಳ್ಳೆಯ ಗುಣಗಳು, ಧೈರ್ಯವು ಇದ್ದೇ ಇರುತ್ತದೆ.

ಆದರೆ ಕೆಲವರು ತಮ್ಮ ಸ್ವಾರ್ಥ ಸಾಧನೆಯಲ್ಲಿ ಪರೋಪಕಾರವನ್ನು ಮರೆತು ಯಾಂತ್ರಿಕವಾಗಿ ಜೀವನ ಸವೆಸುತ್ತಾರೆ. ಅಂತಹವರಿಗೆ ಅಂತಸ್ತು, ಆಸ್ತಿ ಎಂಬ ತಮ್ಮದೇ ಆದ ಚೌಕಟ್ಟಿನಲ್ಲಿ ಬದುಕು ನಡೆಸುತ್ತಿರುತ್ತಾರೆ ಹಾಗಾಗಿ ಅವರ ಮನಸ್ಥಿತಿ ಕೂಡ ಸೀಮಿತ ಹಾಗೂ ಸಂಕುಚಿತವಾಗಿರುತ್ತದೆ. ಇದರಿಂದಲೇ ಚಿಕ್ಕ-ಪುಟ್ಟ ವಿಷಯಗಳಿಗೂ ಮನುಷ್ಯರು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗುತ್ತಾರೆ.

ಈ ಹೂವು ಮತ್ತು ಜೇನುನೊಣದ ಒಂದು ದೃಷ್ಟಾಂತದ ಮೂಲಕವಾದರೂ ಮನುಷ್ಯರು ಜೀವನದಲ್ಲಾಗುವ ಸಣ್ಣ ಸಣ್ಣ ಏರುಪೇರುಗಳಿಗೆ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳದೇ ಹೊಸ ಹುರುಪಿನಲ್ಲಿ ನವಜೀವನ ಆರಂಭಿಸುವಂತಾಬೇಕು ಹಾಗೂ ಮನುಷ್ಯರು ಪರೋಪಕಾರವನ್ನು ಮೈಗೂಡಿಸಿಕೊಳ್ಳುವ ಮೂಲಕ ಇನ್ನಾದರೂ ಬದುಕಿರುವಷ್ಟು ದಿನಗಳಲ್ಲಿ ಯಾವುದೇ  ಫಲಾಪೇಕ್ಷೆ ಬಯಸದೇ ಪರರಿಗೂ, ಪರಿಸರಕ್ಕೂ ಒಳಿತನ್ನು ಮಾಡುವಂತಾಗಬೇಕು…..

- ವಿದ್ಯಾ

ಹೊಸಮನಿ, ಶಿರಹಟ್ಟಿ ಗದಗ ಜಿಲ್ಲೆ

ಟಾಪ್ ನ್ಯೂಸ್

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

eshwarappa

Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Mumbai: ಭಯೋತ್ಪಾದಕ ದಾಳಿ ಸಾಧ್ಯತೆ-ಗುಪ್ತಚರ ಇಲಾಖೆ: ಮುಂಬೈನಲ್ಲಿ‌ ಬಿಗಿ ಪೊಲೀಸ್ ಭದ್ರತೆ

Mumbai: ಭಯೋತ್ಪಾದಕ ದಾಳಿ ಸಾಧ್ಯತೆ-ಗುಪ್ತಚರ ಇಲಾಖೆ: ಮುಂಬೈನಲ್ಲಿ‌ ಬಿಗಿ ಪೊಲೀಸ್ ಭದ್ರತೆ

Belagavi; Letter to CM on division of Belgaum district after Dussehra: Hebbalkar

Belagavi; ದಸರಾ ಬಳಿಕ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಿಎಂಗೆ ಪತ್ರ: ಹೆಬ್ಬಾಳಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

eshwarappa

Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.