Insect World: ಕೀಟ ಜಗತ್ತಿನ ಸಹಜೀವನ


Team Udayavani, Aug 6, 2024, 5:24 PM IST

8-uv-fusion

ತಮ್ಮ ಮನೆಯ ಹೂ ಕುಂಡಗಳಲ್ಲೋ ಅಥವಾ ನೆಲದಲ್ಲಿ ನೆಟ್ಟ ಹೂವಿನ ಗಿಡ ಅಥವಾ ಹಣ್ಣಿನ ಗಿಡಗಳಲ್ಲಿ ಬಿಳಿ ಬಣ್ಣದ ತೆಪೆಯಂತೆ ಕಾಣುವ ಜೀವಿಗಳ ಸಮೂಹವನ್ನು ಎಲ್ಲರೂ ಗಮನಿಸಿರಬಹುದು. ಈ ಬಿಳಿಯ ತೇಪೆಗಳಂತೆ ಕಂಡು ಬರುವುದು ಆಫಿಡ್‌ ಕೀಟಗಳು (ಬಿಳಿ ಸಸ್ಯ ಹೇನುಗಳು). ಇವು ಸಸ್ಯಗಳ ರಸವನ್ನೇ ಆಹಾರವನ್ನಾಗಿಸಿಕೊಂಡು ಬದುಕುವ ಜೀವಿಗಳು. ಈ ಕೀಟಗಳು ಬರೀ ಸಸ್ಯಗಳ ಜೀವ ಸತ್ವವನ್ನು ಹೀರುವುದು ಮಾತ್ರವಲ್ಲ, ಹಲವು ಸಸ್ಯಗಳ ರೋಗಗಳಿಗೆ ಮೂಲವೂ ಆಗಿರುತ್ತವೆ.

ಇರುವೆಗಳಿಗೆ ಈ ಕೀಟಗಳನ್ನು ಕಂಡರೆ ಒಂದುತರಹದ ಪ್ರೀತಿ. ಇದಕ್ಕೂ ಒಂದು ಬಲವಾದ ಕಾರಣವಿದೆ. ವಿಷಯ ಏನೆಂದರೆ ಈ ಕೀಟಗಳು ಸಸ್ಯ ರಸವನ್ನು ಭಕ್ಷಿಸಿದ ಅನಂತರ ವಿಸರ್ಜಿಸುವ ‘ಹನಿಟ್ನೂ’ ಎಂಬ ಸಿಹಿ ದ್ರವವು ಇರುವೆಗಳ ಪಾಲಿನ ಪಂಚಾಮೃತ. ಹೆಸರೇ ಹೇಳುವಂತೆ ಈ ‘ಹನಿ ಟ್ನೂ’ ರುಚಿಯಲ್ಲಿ ಸಿಹಿಯಾಗಿರುವುದಲ್ಲದೇ ಇದರಲ್ಲಿರುವ ಶರ್ಕರಗಳು ಇರುವೆಗಳಿಗೆ ನೆಚ್ಚಿನ ಆಹಾರವಾಗಿದೆ. ಇದು ಇರುವೆಯ ಗುಂಪು ಹಾಗೂ ರಾಣಿ ಇರುವೆಗೆ ಶಕ್ತಿ ನೀಡುವ ಆಹಾರ ಕೂಡ ಆಗಿದೆ. ಇದೇ ಕಾರಣದಿಂದ ಈ ‘ಹನಿ ಟ್ನೂ’ವನ್ನು ಹಲವು ತಳಿಯ ಇರುವೆಗಳು ಏಫಿಡ್‌ಗಳ ಹೊಟ್ಟೆಯ ಭಾಗವನ್ನು ತನ್ನ ಮೀಸೆಗಳಿಂದ (ಆ್ಯಂಟೆನಾ) ಮೃದುವಾಗಿ ಒತ್ತುವ ಮೂಲಕ ಏಫಿಡ್‌ಗಳು ‘ಹನಿ ಟ್ನೂ’ ವಿಸರ್ಜಿಸುವಂತೆ ಮಾಡುತ್ತವೆ, ಹಾಗೂ ಈ ರಸವನ್ನು ಇರುವೆಗಳು ಸಂಗ್ರಹಿಸುತ್ತವೆ.

ತನಗೆ ಉಪಕಾರ ಮಾಡಿದ ಏಫಿಡ್‌ಗಳನ್ನು ಇರುವೆಗಳೂ ಮರೆಯುವುದಿಲ್ಲ. ತನಗೆ ಆಹಾರ ನೀಡಿದ ಏಫಿಡ್‌ಗಳನ್ನು ಇರುವೆಗಳು ಜೋಪಾನವಾಗಿ ನೋಡಿಕೊಳ್ಳುತ್ತವೆ. ಹಾಗೂ ಶತ್ರುಗಳಿಂದ ರಕ್ಷಿಸಿಕೊಳ್ಳುತ್ತವೆ. ಅಷ್ಟೇ ಅಲ್ಲದೇ ಎಷ್ಟೋ ಇರುವೆಗಳ ಪ್ರಜಾತಿಗಳು ಕಾಲಾನುಕಾಲಕ್ಕೆ ಏಫಿಡ್‌ಗಳನ್ನು ತಮ್ಮ ನೆಲೆಗಳತ್ತ, ಹೆಚ್ಚು ಸಸ್ಯ ರಸವನ್ನು ನೀಡಬಲ್ಲ ಸಸ್ಯಗಳತ್ತ ಹೊತ್ತೂಯ್ಯುವ ಕೆಲಸವನ್ನೂ ಮಾಡುತ್ತವೆ.

ಒಟ್ಟಿನಲ್ಲಿ ಏಫಿಡ್‌ಗಳು ಸಸ್ಯಗಳಿಗೆ ಅಪಕಾರಿಯಾದರೂ, ಇರುವೆಗಳ ಪಾಲಿಗೆ ಉಪಕಾರಿಯಾಗಿವೆ. ಈ ಮೂಲಕ ನಿಸರ್ಗದ ಜಟಿಲ ವ್ಯವಸ್ಥೆಯಲ್ಲಿ, ಪ್ರಕೃತಿ ಸೃಷ್ಟಿಸಿದ ಎಲ್ಲ ಜೀವಿಗಳು ಕೂಡ ನಿಸರ್ಗ ವ್ಯವಸ್ಥೆಗೆ ಅಗತ್ಯ ಎಂಬ ಸಂದೇಶ ನೀಡುತ್ತವೆ.

-ಅನುರಾಗ್‌ ಗೌಡ

ಮೂಡಿಗೆರೆ

ಟಾಪ್ ನ್ಯೂಸ್

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

uUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22-food

UV Fusion: ಬನ್ನಿ ಅಡುಗೆ ಮಾಡೋಣ!

21-uv-fusion

UV Fusion: ನೆನಪುಗಳನ್ನು ಹಸಿರಾಗಿಸುವ ಮಳೆ

20-uk

UV Fusion: ಗುಡ್ಡದ ಭೂತದಲ್ಲಿ ಸಿಲುಕಿದ ಉತ್ತರಕನ್ನಡ

19-uv-fusion

Protect Environment: ಪ್ರಕೃತಿ ರಕ್ಷತಿ ರಕ್ಷಿತಃ

15-alarm-clock

Alarm Clock: ಟಿಕ್‌ ಟಿಕ್‌ ಅಲಾರಾಂ ಗಡಿಯಾರ ಎಲ್ಲಿಗೆ ಹೋಯಿತು ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿPilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.