Technology: ತಂತ್ರಜ್ಞಾನ ಅನಿವಾರ್ಯ ಆಗಬಾರದು


Team Udayavani, Aug 7, 2024, 10:45 AM IST

3-technology

ದಿನದಿಂದ ದಿನಕ್ಕೆ ಜಗತ್ತು ತಂತ್ರಜ್ಞಾನಗಳ ಆವಿಷ್ಕಾರದಲ್ಲಿ ಪ್ರಗತಿ ಹೊಂದುತ್ತಿದೆ. ಮನುಷ್ಯನ ಶ್ರಮ ಕಡಿತಗೊಳಿಸುವಲ್ಲಿ ಇಂತಹ ಸಂಶೋಧನೆಗಳು ಅಗತ್ಯವಾಗಿವೆ. ಇದರಿಂದ ಮಾನವನ ಸಮಯ, ಶ್ರಮ, ವೆಚ್ಚ ಮುಂತಾದ ಎಲ್ಲವನ್ನೂ ಉಳಿಸಬಹುದು. ಆದರೆ ತಂತ್ರಜ್ಞಾನ ನಮ್ಮ ಜೀವನದ ಅನಿವಾರ್ಯತೆ ಆಗಬಾರದು.

ಅರ್ಧ ಶತಮಾನದ ಹಿಂದಿನಿಂದ ಈ ತಂತ್ರಜ್ಞಾನ, ಡಿಜಿಟಲ್‌ ಎಂಬ ವೈಜ್ಞಾನಿಕ ಕ್ಷೇತ್ರವು ವೇಗವಾಗಿ ಬೆಳವಣಿಗೆ ಹೊಂದಿತು. ಅದಕ್ಕೂ ಪೂರ್ವದಲ್ಲಿ ಮಾನವನು ಕೆಲಸಗಳಿಗೆ, ಮನೋರಂಜನೆಗೆ ತನ್ನ ಕ್ರಿಯಾತ್ಮಕತೆಯನ್ನೇ ಬಳಸುತ್ತಿದ್ದ. ಇದರಿಂದ ದೈಹಿಕ ಹಾಗು ಮಾನಸಿಕ ಶಕ್ತಿ, ಸಾಮರ್ಥ್ಯ ಅಧಿಕವಾಗುತ್ತಿತ್ತು. ತಂತ್ರಜ್ಞಾನ, ಡಿಜಿಟಲ್‌ ಎಂಬುದು ಮಾನವನನ್ನು ನಿರಾಸಕ್ತಿಗೆ ಗುರಿ ಮಾಡುತ್ತಿವೆ. ಸೋಮಾರಿಯಾದ ಜೀವಿಯಲ್ಲಿ ನಕಾರಾತ್ಮಕ ಗುಣಲಕ್ಷಣಗಳು ಬೆಳೆಯುತ್ತಿವೆ. ಜೀವನ ಉತ್ಸಾಹವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಇದಕ್ಕೆ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ದೈಹಿಕ ಹಾಗೂ ಸ್ಮರಣ ಶಕ್ತಿಯ ಸಾಮರ್ಥ್ಯ ಹಿರಿಯರಿಗಿಂತ ಕಡಿಮೆಯಾಗುತ್ತಿದೆ. ಅವರಲ್ಲಿರುವ ಜೀವನ ಚೈತನ್ಯ, ಉತ್ಸಾಹ ಇಂದಿನ ಪೀಳಿಗೆಗಳಲ್ಲಿ ಉಳಿದಿಲ್ಲ. ಇದಕ್ಕೆÇÉಾ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವೇ ನಾವು ತಂತ್ರಜ್ಞಾನವನ್ನು ಬದುಕಿಗೆ ಅಳವಡಿಸಿಕೊಂಡ ರೀತಿ.

ನಮ್ಮನ್ನು ಡಿಜಿಟಲ್‌ ಎಷ್ಟರ ಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ನಿದ್ದೆಗೆ ಜಾರುವ ಮುನ್ನ ಹಾಗೂ ನಿದ್ದೆಯಿಂದ ಎದ್ದ ತತ್‌ ಕ್ಷಣ ದೇವರನ್ನು ಸ್ಮರಿಸುತ್ತೇವೋ ಇಲ್ಲವೋ ಮೊಬೈಲ್‌ ಫೋನ್‌ ತಪ್ಪದೇ ಬಳಸುತ್ತೇವೆ. ಅದೇನು ಮಹಾ ಅಪರಾಧವಲ್ಲ ಆದರೆ ಕಣ್ಣಿನ ಆರೋಗ್ಯಕ್ಕೆ ಹಾನಿಯನ್ನು ಖಂಡಿತ ಇದು ಉಂಟುಮಾಡುತ್ತದೆ.

ಇದನ್ನು ಗಮನಿಸಿದಾಗ ಅರಿವಾಗುವುದೇನೆಂದರೆ ಮಾನವನ ದಿನದ ಆರಂಭ ಮತ್ತು ಕೊನೆ ಎರಡು ತಂತ್ರಜ್ಞಾನವೇ ನಿರ್ಧರಿಸುತ್ತಿದೆ ಎಂದರೆ ಇನ್ನೂ ಇಡೀ ದಿನವನ್ನು ಇದು ನಿಯಂತ್ರಿಸದೆ ಹೋದಿತೆ? ಒಂದು ಮೋಬೈಲ್‌ ನಮ್ಮ ಮೇಲೆ ಇಷ್ಟೊಂದು ಪರಿಣಾಮ ಬೀರುತ್ತದೆ ಎಂದರೆ ನಾವು ನಿತ್ಯ ಬಳಸುವ ಅದೆಷ್ಟೋ ತಾಂತ್ರಿಕ ಉಪಕರಣಗಳು ಮಾನವನನ್ನು ಹೇಗೆ ಆವರಿಸಿವೆ ಎನ್ನುವುದನ್ನು ಚಿಂತಿಸಲೇಬೇಕು.

ಸಂಪೂರ್ಣವಾಗಿ ತಾಂತ್ರಿಕ ಮುಕ್ತಜೀವನ ಪ್ರಸ್ತುತ ದಿನಗಳಲ್ಲಿ ಅಸಾಧ್ಯ. ಆದರೆ ಅದಕ್ಕೆ ಅವಲಂಬಿತವಾಗುವುದಕ್ಕೂ, ಅಗತ್ಯಕ್ಕೆ ಮಾತ್ರ ಉಪಯೋಗಿಸುವುದಕ್ಕೂ ವ್ಯತ್ಯಾಸವಿದೆ. ಹೀಗಾಗಿ ಅನಿವಾರ್ಯತೆಗೆ ತಕ್ಕಂತೆ ಬಳಸುವುದರಿಂದ ಯಾವ ಕಷ್ಟ ನಷ್ಟಗಳು ಉಂಟಾಗುವುದಿಲ್ಲ. ಸಣ್ಣ ಪ್ರಯತ್ನದಿಂದ ಆರಂಭಿಸಿ ಅನಂತರ ಎಲ್ಲವನ್ನೂ ಖಂಡಿತ ಸಾಧ್ಯವಾಗಿಸಬಹುದು.

ಪೂಜಾ ಹಂದ್ರಾಳ

ಶಿರಸಿ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.