UV Fusion: ಸ್ವಾತಂತ್ರ್ಯ ದಿನದ ಆ ನೆನಪು


Team Udayavani, Aug 21, 2024, 6:06 PM IST

16-uv-fusion

ಸ್ವತಂತ್ರ ಭಾರತದ ಏಳು ದಶಕಗಳ ಸಿಂಹಾವಲೋಕನ ಮಾಡಿದಾಗ ಭಾರತ ನಿಜಕ್ಕೂ ಸ್ವತಂತ್ರ ರಾಷ್ಟ್ರವೇ? ನಮ್ಮ ಹಲವು ಸ್ವಾತಂತ್ರ್ಯರ್ಯ ಹೋರಾಟಗಾರರು ಕಂಡ ನಮ್ಮ ಭಾರತದ ಕನಸು ನನಸಾಗಿದೆಯೇ? ಯುವ ಜನತೆ ಈ ದೇಶದ ಪ್ರಗತಿಯ ರೂಪಕ ಎಂದು ನಂಬಿದ್ದ ನಮ್ಮ ಪೂರ್ವಜರ ನಂಬಿಕೆ ಉಳಿಸಿಕೊಂಡಿದ್ದೇವಾ ಎಂದು ನಮ್ಮನ್ನು ನಾವು ಕೇಳಿಕೊಳ್ಳುವ ಮತ್ತು ಮರು ಅವಲೋಕಿಸುವ ಸಮಯ ಇದಾಗಿದೆ.

ಬಾಲ್ಯದಲ್ಲಿ ನಾವು ಆಚರಿಸುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯ ನೆನಪು ನಮ್ಮೆಲ್ಲರ ಎದೆಯಲ್ಲಿ ಮಾಸದೆ ಉಳಿಯುತ್ತದೆ. ಮದುವೆ ಮನೆಯು ಸಿಂಗಾರಗೊಂಡಂತೆ ಇಡೀ ಶಾಲೆಯು ಅಲಂಕೃತಗೊಂಡಿರುತ್ತಿತ್ತು. ಒಂದು ವಾರದ ಮೊದಲಿನಿಂದಲೇ ಹಾಡು, ನೃತ್ಯ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಭರ್ಜರಿ ತಯಾರಿ ಆರಂಭವಾಗುತ್ತಿತ್ತು.

ಶಾಲೆಯಲ್ಲಿ ಕೊಟ್ಟ ನೀಲಿ ಸಮವಸ್ತ್ರ ಸ್ವಾತಂತ್ರ್ಯ ದಿನಾಚರಣೆಗೆ ಎಂದೇ ಹೊಲಿಸಿ, ಸಿದ್ಧ ಮಾಡಿ ಇಟ್ಟಿರುತ್ತಿದ್ದೆವು. ಕೇಸರಿ, ಬಿಳಿ, ಹಸಿರು ಬಣ್ಣದ ಬಳೆ, ಸರ, ರಿಬ್ಬನ್‌ ಧರಿಸಿ ಶಾಲೆಗೆ ಹೋಗುತ್ತಿದ್ದೆವು. ಅಂದು ಬೆಳಗ್ಗೆ ಪ್ರಾರ್ಥನೆ ಮಾಡಿ ಹೆಮ್ಮೆಯಿಂದ ಧ್ವಜ ನೋಡಿ ಸೆಲ್ಯೂಟ್‌ ಮಾಡುವಾಗ ನಾವೇನೋ ಸೈನ್ಯದಲ್ಲಿ ಇದ್ದಂತಹ ಭಾವ! ಅನಂತರ ಶಾಲೆಯಿಂದ ಪಂಚಾಯಿತಿಯವರೆಗೆ ನಮ್ಮ ಪಥ ಸಂಚಲನ. ಒಂದು ಗುಂಪು ವಂದೇ ಎಂದರೆ ಮತ್ತೂಂದು ಗುಂಪು ಮಾತರಂ ಅನ್ನೋದು, ಬೋಲೋ ಭಾರತ್‌ ಮಾತಾ ಕಿ ಜೈ ಎಂಬಿತ್ಯಾದಿ ಘೋಷಣೆಗಳು. ಬ್ಯಾಂಡಿನ ಗೌಜಿನಲ್ಲಿ ಊರ ಪರ್ಯಟನೆಗೆ ಹೊರಡುತ್ತಿದ್ದೆವು. ಅಲ್ಲೂ ದ್ವಜಾರೋಹಣ ಮಾಡಿ ಸಿಹಿ ಮಿಠಾಯಿ ಚಾಕಲೇಟ್‌ ಗಳನ್ನು ಪಡೆದು ಸಂಭ್ರಮಿಸಿ ಮತ್ತೆ ಶಾಲೆಗೆ ಬರುತ್ತಿದ್ದೆವು. ಝಂಡಾ ಊಂಚಾ ರಹೇ ಹಮಾರ ಹಾಡು ಹಾಡುತ್ತಿದ್ದರೆ ಅದೊಂದು ಬಗೆಯ ರೋಮಾಂಚನವಾಗುತ್ತಿತ್ತು.

ಎಷ್ಟು ಸುಂದರ ಆ ಬಾಲ್ಯ!! ಸ್ವಾತಂತ್ರ್ಯ ದಿನ ಬಂತೆಂದರೆ ಸಾಕು ಎಲ್ಲ ಮಕ್ಕಳ ಬಾಯಿಯಲ್ಲೂ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು ಮತ್ತು ಅವರ ಗುಣಗಾನ. ನಂತರ ಸಾಂಸðತಿಕ ಕಾರ್ಯಕ್ರಮದ ಹಬ್ಬ ನೋಡಲೆರಡು ಕಣ್ಣು ಸಾಲದಾಗಿತ್ತು. ನಂತರ ರಾಶಿ ರಾಶಿ ಚಾಕೊಲೇಟ್‌ ತೆಗೆದುಕೊಂಡು ಮನೆಗೆ ಬಂದು ಹಂಚಿ ತಿನ್ನುವುದೇ ಸಂಭ್ರಮ. ಆ ಮುಗ್ದ ಸಂಭ್ರಮ ಈಗ ನೋಡಲು ಸಿಗುವುದೇ ಇಲ್ಲವಲ್ಲ…

ಆದರೆ ಇಂದು ಎಲ್ಲವೂ ಬದಲಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಮೀಸಲಾಗಿಟ್ಟು ತ್ಯಾಗ ಮತ್ತು ಬಲಿದಾನದಿಂದ ನಮಗೆ ಪ್ರೇರಣೆಯಾಗಿ ನಿಂತ ಮಹನೀಯರನ್ನು ನೆನೆಯುತ್ತಾ ಜತೆಗೆ ಪ್ರತಿದಿನವೂ ಹಗಲಿರುಳೆನ್ನದೆ ದೇಶದ ಗಡಿ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ನಮ್ಮೆಲ್ಲರ ಜೀವವನ್ನು ಕಾಪಾಡುತ್ತಿರುವ ಪ್ರತಿ ಸೈನಿಕರ ಅಪಾರವಾದ ಕೊಡುಗೆಯನ್ನು ಸ್ಮರಿಸೋಣ… ರಶ್ಮಿ ಉಡುಪ ಮೊಳಹಳ್ಳಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ  ಕಾಲೇಜು ಕುಂದಾಪುರ

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

akhilesh

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

1-sadsadasd

Ganesh festival; ಡೋಲು-ತಾಸೆಯವರ ಸಂಖ್ಯೆಗೆ NGT ನಿರ್ಬಂಧಕ್ಕೆ ಸುಪ್ರೀಂ ತಡೆ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಶಾರುಖ್‌ – ಅಟ್ಲಿ ʼಜವಾನ್‌ʼ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಸೂಪರ್‌ ಹಿಟ್ ʼಜವಾನ್‌ʼ

Good News: ಶೀಘ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ? ಪಂಕಜ್‌ ಜೈನ್

Good News: ಶೀಘ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ? ಪಂಕಜ್‌ ಜೈನ್

1-ffsdf

Chikkaballapur ನಗರಸಭೆ ಕೋಲಾಹಲ; ಡಾ.ಸುಧಾಕರ್ ಮೇಲುಗೈ: ಸವಾಲು ಹಾಕಿದ ಪ್ರದೀಪ್ ಈಶ್ವರ್!

HDK

Nagamangala Riots: ಗಲಭೆಗೆ ಕಾಂಗ್ರೆಸ್‌ ಸರಕಾರದ ತುಷ್ಟೀಕರಣ ನೀತಿಯೇ ಕಾರಣ: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

UV Fusion: ಅವ್ಯಕ್ತ ಬಂಧ

7-uv-fusion

Aparna: ಮಾತು ಮುಗಿಸಿದ ಕನ್ನಡದ ಅಪ್ಸರೆ

6-uv-fusion

Music: ಸಂಗೀತದ ಹಂಬಲ

4-uv-fusion

Distant Town: ದೂರದ ಊರಿನ ಬದುಕು

3-uv-fusion

War: ಯುದ್ಧ ಒಳ್ಳೆಯದೇ  ಅಥವಾ ಕೆಟ್ಟದೇ?

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

1-baghi

Hombale Films ಬಹು ನಿರೀಕ್ಷಿತ ಬಘೀರ ಚಿತ್ರದ ರಿಲೀಸ್ ಡೇಟ್ ಘೋಷಣೆ

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Ronny actress Samikshaa

Ronny ಗೆಲ್ಲುವ ಸಿನಿಮಾ: ನಟಿ ಸಮೀಕ್ಷಾ

akhilesh

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.