UV Fusion: ಒಂಟಿತನದ ಗುಟ್ಟು ಸಂಗೀತದಲ್ಲಿ ಅಡಗಿದೆ


Team Udayavani, Jul 15, 2024, 4:45 PM IST

14-uvfusion

ಒಂಟಿತನವು ಜೀವನದ ಒಂದು ಅವಿಭಾಜ್ಯ ಭಾಗ ಎಂದರೆ ತಪ್ಪಿಲ್ಲ. ಇದು ಕೆಲವೊಮ್ಮೆ ತಾತ್ಕಾಲಿಕವಾಗಿರಬಹುದು ಆದರೆ ನಮ್ಮ ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಒಂಟಿತನಕ್ಕೆ ಹಲವಾರು ಕಾರಣಗಳಿರಬಹುದು ಮುಖ್ಯವಾಗಿ ಸಂಪರ್ಕದ ಕೊರತೆ ಅಂದರೆ ಕುಟುಂಬ, ಸ್ನೇಹಿತರು ಅಥವಾ ಸಮುದಾಯದೊಂದಿಗೆ ಜತೆಗೂಡಿ ಮಾತನಾಡಲು ಸಾಧ್ಯವಾಗದೇ ಇರುವುದು. ಹೊಸ ಜೀವನಶೈಲಿ, ನಿವೃತ್ತಿ, ಪ್ರಿಯ ವ್ಯಕ್ತಿಯ ಮರಣ, ಆತ್ಮವಿಶ್ವಾಸದ ಕೊರತೆ, ಆಧುನಿಕತೆಯೂ ಕೂಡ ಕಾರಣವಾಗಿರಬಹುದು.

ಸಂಗೀತ ಹೇಗೆ ಒಂಟಿತನ ನಿರ್ಮೂಲನೆಗೆ ಸಹಕಾರಿ

ಸಂಗೀತ ಯಾರಿಗಿಷ್ಟ ಇಲ್ಲ ಹೇಳಿ, ಕಿರಿಯರಿಂದ ಹಿರಿಯರ ವರೆಗೂ ಸಂಗೀತ ತುಂಬಾನೆ ಅಚ್ಚುಮೆಚ್ಚು. ಒಂಟಿತನವು ಒಂದು ಆಳವಾದ ಮತ್ತು ವಿಭಿನ್ನ ಭಾವನೆ. ಇದನ್ನು ಅರಿತುಕೊಳ್ಳಲು ಮತ್ತು ಸಮರ್ಥವಾಗಿ ನಿಭಾಯಿಸಲು ಅನೇಕ ಮಂದಿ ಸಂಗೀತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂಗೀತವು ಕೇವಲ ಮನೋರಂಜನೆಗೆ ಮಾತ್ರವಲ್ಲದೇ, ಅದು ನಮ್ಮ ಭಾವನೆಗಳನ್ನು ವ್ಯಕ್ತಗೊಳಿಸಲು ಶಕ್ತಿಯುತವಾದ ಸಾಧನವಾಗಿದೆ.

ಹೌದು ಯಾರೊಂದಿಗೂ ಬೆರೆಯಲು ಇಚ್ಚಿಸದವರು ತಮ್ಮ ಒಂಟಿತನವನ್ನು ದೂರವಾಗಿಸಲು ಸಂಗೀತದ ಮೊರೆ ಹೋಗುತ್ತಾರೆ. ಸಂಗೀತವು ಒಂಟಿತನದ ಜತೆಗೆ ಭಾವನೆಗಳನ್ನು ವ್ಯಕ್ತಗೊಳಿಸುತ್ತದೆ. ಸಂಗೀತವು ನಮ್ಮ ಹೃದಯದ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುವುದರ ಜತೆಗೆ ನಮ್ಮ ತಾಳಹೀನ ಭಾವನೆಗಳನ್ನು ಸಂಗೀತದ ಮೂಲಕ ವಿವರಿಸಬಹುದು.

ಕವನಗಳು, ರಾಗಗಳು ಮತ್ತು ಸ್ವರಗಳು ಒಟ್ಟಾಗಿ ನಮ್ಮ ಮನಸ್ಸಿನ ಭಾವನಾತ್ಮಕ ಸ್ಥಿತಿಯನ್ನು ಬಿಂಬಿಸುತ್ತವೆ.

ಕೆಲವೊಮ್ಮೆ ಸಂಗೀತದ ನಾದವು ನಮ್ಮ ಹೃದಯದ ಧ್ವನಿಯಂತೆ ಕೆಲಸ ಮಾಡುತ್ತದೆ. ಇದು ನಮ್ಮ ಆತ್ಮಕ್ಕೆ ಸ್ಪರ್ಶಿಸುವಂತಹ ಅನುಭೂತಿ ನೀಡುತ್ತದೆ. ದುಃಖಭರಿತ ಗೀತೆಗಳು ಅಥವಾ ಸಂತೋಷದ ಗೀತೆಗಳು ನಮ್ಮ ಮನಸ್ಸಿನ ಸ್ಥಿತಿಯನ್ನು ಬದಲಾಯಿಸುತ್ತವೆ ಎಂದರೆ ತಪ್ಪಿಲ್ಲ.

ಸಂಗೀತವು ನಾವು ಯಾರು, ನಾವು ಏನನ್ನು ಭಾವಿಸುತ್ತೇವೆ ಎಂಬುದನ್ನು ಇತರರೊಂದಿಗೆ ಹಂಚಿಕೊಳ್ಳುವ ಮಾಧ್ಯಮವಾಗಿದೆ. ಇದು ನಮ್ಮ ಒಂಟಿತನವನ್ನು ಕಡಿಮೆ ಮಾಡಲು ಮತ್ತು ಏಕಾಂತ ಅನುಭವಿಸಲು ಸಹಕರಿಸುತ್ತದೆ.

ಸಂಗೀತವು ನಮ್ಮ ಸೃಜನಾತ್ಮಕತೆಯನ್ನು ಹೆಚ್ಚಿಸುವುದರ ಜತೆಗೆ ಸ್ವಲ್ಪ ಸಮಯ ನಮ್ಮ ಸಮಸ್ಯೆಗಳಿಂದ ದೂರವಿದ್ದು, ಕಲ್ಪನಾತ್ಮಕ ಜಗತ್ತನ್ನು ಸೃಷ್ಟಿಸಿ ಖುಷಿಪಡಿಸುವಂತೆ ಮಾಡುತ್ತದೆ. ಸಂಗೀತ ಆಲಿಸುವದರಿಂದ ನಿರಾತಂಕತೆ ಮತ್ತು ನೆಮ್ಮದಿಯನ್ನು ಪಡೆಯಬಹುದು.

ಸಂಗೀತದಿಂದ ಏನೆಲ್ಲ ಸಾಧ್ಯ

ನಿಮ್ಮ ಹೃದಯವನ್ನು ಸ್ಪರ್ಶಿಸುವಂತಹ ಆಧುನಿಕ ಅಥವಾ ಸಾಂಪ್ರದಾಯಿಕ ಗೀತೆಗಳನ್ನು ಆರಿಸಿಕೊಳ್ಳುವುದರಿಂದ ತಾನು ಒಂಟಿತನದಲ್ಲಿ ಅನುಭವಿಸುತ್ತಿರುವ ವ್ಯಕ್ತಿಯ ಕಥೆಯನ್ನು ವಿವರಿಸುವಂತೆ ಭಾಸವಾಗುತ್ತದೆ. ಇದು ಮತ್ತಷ್ಟು ಪ್ರಭಾವ ಬೀರುತ್ತದೆ. ಅದೇ ರೀತಿ ತಾವು ವ್ಯಕ್ತಪಡಿಸಲು ಬಯಸುವ ಭಾವನೆಗಳನ್ನು ಗೀತೆಯಲ್ಲಿ ಬರೆದು, ಸ್ವರಗಳಲ್ಲಿ ಚಿತ್ರೀಕರಿಸುವುದು ಕೂಡ ಉತ್ತಮ ಹವ್ಯಾಸವಾಗಿದೆ. ಈ ಪ್ರಕ್ರಿಯೆಯು ಒಂದು ರೀತಿಯ ಮನೋ ಉಲ್ಲಾಸವನ್ನು ನೀಡುತ್ತದೆ. ಧ್ಯಾನಗೀತಗಳು ಅಥವಾ ಶಾಂತಿದಾಯಕ ಸಂಗೀತವು ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿರುತ್ತದೆ. ಧ್ಯಾನ ಮಾಡುವ ಮೂಲಕ ನಿಮ್ಮ ಮನಸ್ಸನ್ನು ಶಾಂತಗೊಳಿಸಬಹುದು.

ಒಂಟಿತನದ ಗುಟ್ಟು ಸಂಗೀತದಲ್ಲಿದೆ ಹಾಗೆಯೇ ಸಂಗೀತ ಎಂಬುದು ನಮ್ಮ ಭಾವನೆಗಳನ್ನು ಸಮರ್ಥವಾಗಿ ಹಂಚಿಕೊಳ್ಳುವ ಮತ್ತು ಪರಿಹರಿಸುವ ಒಂದು ಮಾರ್ಗವಾಗಿದೆ. ಸಂಗೀತದ ಮೂಲಕ ನಾವು ನಮ್ಮ ಒಂಟಿತನವನ್ನು ಮರೆಯಲು ಮತ್ತು ಜೀವನದಲ್ಲಿ ಹೊಸ ಹುರುಪವನ್ನು ತರಲು ಸಾಧ್ಯವಿದೆ. ಒಂಟಿತನವೆಂದು ನಮ್ಮ ಆತ್ಮಸ್ಥೆçರ್ಯ ಕುಗ್ಗಿಸಿಕೊಳ್ಳದೆ ಬಂದ ಕಷ್ಟಗಳನ್ನು ಎದುರಿಸಿ ಮುನ್ನಡೆದು ಗುರಿಯೆಡೆಗೆ ಸಾಗುವುದೇ ಜೀವನ.

  -ವಿಜಿತಾ ಅಮೀನ್‌

ಬಂಟ್ವಾಳ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

Ganesh Chaturthi: ಗಣೇಶ ಬಂದ

14-wayanad

Wayanad: ವಯನಾಡಿನ ಪ್ರಕೃತಿ ವಿಕೋಪ ಮತ್ತು ಮಾನವೀಯತೆ

13-

UV Fusion: ಅನಾಹುತಕಾರಿ ಮಾನವ

11

UV Fusion: ನಮ್ಮ ಔನ್ನತ್ಯವನ್ನು ನಾವೇ ನಿರ್ಧರಿಸಬೇಕಲ್ಲವೇ?

10-

Childhood: ಈ ಬಾಲ್ಯ ಮತ್ತೊಮ್ಮೆ ಮರುಕಳಿಸಬಾರದೇ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.