UV Fusion: ಒಂಟಿತನದ ಗುಟ್ಟು ಸಂಗೀತದಲ್ಲಿ ಅಡಗಿದೆ


Team Udayavani, Jul 15, 2024, 4:45 PM IST

14-uvfusion

ಒಂಟಿತನವು ಜೀವನದ ಒಂದು ಅವಿಭಾಜ್ಯ ಭಾಗ ಎಂದರೆ ತಪ್ಪಿಲ್ಲ. ಇದು ಕೆಲವೊಮ್ಮೆ ತಾತ್ಕಾಲಿಕವಾಗಿರಬಹುದು ಆದರೆ ನಮ್ಮ ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಒಂಟಿತನಕ್ಕೆ ಹಲವಾರು ಕಾರಣಗಳಿರಬಹುದು ಮುಖ್ಯವಾಗಿ ಸಂಪರ್ಕದ ಕೊರತೆ ಅಂದರೆ ಕುಟುಂಬ, ಸ್ನೇಹಿತರು ಅಥವಾ ಸಮುದಾಯದೊಂದಿಗೆ ಜತೆಗೂಡಿ ಮಾತನಾಡಲು ಸಾಧ್ಯವಾಗದೇ ಇರುವುದು. ಹೊಸ ಜೀವನಶೈಲಿ, ನಿವೃತ್ತಿ, ಪ್ರಿಯ ವ್ಯಕ್ತಿಯ ಮರಣ, ಆತ್ಮವಿಶ್ವಾಸದ ಕೊರತೆ, ಆಧುನಿಕತೆಯೂ ಕೂಡ ಕಾರಣವಾಗಿರಬಹುದು.

ಸಂಗೀತ ಹೇಗೆ ಒಂಟಿತನ ನಿರ್ಮೂಲನೆಗೆ ಸಹಕಾರಿ

ಸಂಗೀತ ಯಾರಿಗಿಷ್ಟ ಇಲ್ಲ ಹೇಳಿ, ಕಿರಿಯರಿಂದ ಹಿರಿಯರ ವರೆಗೂ ಸಂಗೀತ ತುಂಬಾನೆ ಅಚ್ಚುಮೆಚ್ಚು. ಒಂಟಿತನವು ಒಂದು ಆಳವಾದ ಮತ್ತು ವಿಭಿನ್ನ ಭಾವನೆ. ಇದನ್ನು ಅರಿತುಕೊಳ್ಳಲು ಮತ್ತು ಸಮರ್ಥವಾಗಿ ನಿಭಾಯಿಸಲು ಅನೇಕ ಮಂದಿ ಸಂಗೀತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂಗೀತವು ಕೇವಲ ಮನೋರಂಜನೆಗೆ ಮಾತ್ರವಲ್ಲದೇ, ಅದು ನಮ್ಮ ಭಾವನೆಗಳನ್ನು ವ್ಯಕ್ತಗೊಳಿಸಲು ಶಕ್ತಿಯುತವಾದ ಸಾಧನವಾಗಿದೆ.

ಹೌದು ಯಾರೊಂದಿಗೂ ಬೆರೆಯಲು ಇಚ್ಚಿಸದವರು ತಮ್ಮ ಒಂಟಿತನವನ್ನು ದೂರವಾಗಿಸಲು ಸಂಗೀತದ ಮೊರೆ ಹೋಗುತ್ತಾರೆ. ಸಂಗೀತವು ಒಂಟಿತನದ ಜತೆಗೆ ಭಾವನೆಗಳನ್ನು ವ್ಯಕ್ತಗೊಳಿಸುತ್ತದೆ. ಸಂಗೀತವು ನಮ್ಮ ಹೃದಯದ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುವುದರ ಜತೆಗೆ ನಮ್ಮ ತಾಳಹೀನ ಭಾವನೆಗಳನ್ನು ಸಂಗೀತದ ಮೂಲಕ ವಿವರಿಸಬಹುದು.

ಕವನಗಳು, ರಾಗಗಳು ಮತ್ತು ಸ್ವರಗಳು ಒಟ್ಟಾಗಿ ನಮ್ಮ ಮನಸ್ಸಿನ ಭಾವನಾತ್ಮಕ ಸ್ಥಿತಿಯನ್ನು ಬಿಂಬಿಸುತ್ತವೆ.

ಕೆಲವೊಮ್ಮೆ ಸಂಗೀತದ ನಾದವು ನಮ್ಮ ಹೃದಯದ ಧ್ವನಿಯಂತೆ ಕೆಲಸ ಮಾಡುತ್ತದೆ. ಇದು ನಮ್ಮ ಆತ್ಮಕ್ಕೆ ಸ್ಪರ್ಶಿಸುವಂತಹ ಅನುಭೂತಿ ನೀಡುತ್ತದೆ. ದುಃಖಭರಿತ ಗೀತೆಗಳು ಅಥವಾ ಸಂತೋಷದ ಗೀತೆಗಳು ನಮ್ಮ ಮನಸ್ಸಿನ ಸ್ಥಿತಿಯನ್ನು ಬದಲಾಯಿಸುತ್ತವೆ ಎಂದರೆ ತಪ್ಪಿಲ್ಲ.

ಸಂಗೀತವು ನಾವು ಯಾರು, ನಾವು ಏನನ್ನು ಭಾವಿಸುತ್ತೇವೆ ಎಂಬುದನ್ನು ಇತರರೊಂದಿಗೆ ಹಂಚಿಕೊಳ್ಳುವ ಮಾಧ್ಯಮವಾಗಿದೆ. ಇದು ನಮ್ಮ ಒಂಟಿತನವನ್ನು ಕಡಿಮೆ ಮಾಡಲು ಮತ್ತು ಏಕಾಂತ ಅನುಭವಿಸಲು ಸಹಕರಿಸುತ್ತದೆ.

ಸಂಗೀತವು ನಮ್ಮ ಸೃಜನಾತ್ಮಕತೆಯನ್ನು ಹೆಚ್ಚಿಸುವುದರ ಜತೆಗೆ ಸ್ವಲ್ಪ ಸಮಯ ನಮ್ಮ ಸಮಸ್ಯೆಗಳಿಂದ ದೂರವಿದ್ದು, ಕಲ್ಪನಾತ್ಮಕ ಜಗತ್ತನ್ನು ಸೃಷ್ಟಿಸಿ ಖುಷಿಪಡಿಸುವಂತೆ ಮಾಡುತ್ತದೆ. ಸಂಗೀತ ಆಲಿಸುವದರಿಂದ ನಿರಾತಂಕತೆ ಮತ್ತು ನೆಮ್ಮದಿಯನ್ನು ಪಡೆಯಬಹುದು.

ಸಂಗೀತದಿಂದ ಏನೆಲ್ಲ ಸಾಧ್ಯ

ನಿಮ್ಮ ಹೃದಯವನ್ನು ಸ್ಪರ್ಶಿಸುವಂತಹ ಆಧುನಿಕ ಅಥವಾ ಸಾಂಪ್ರದಾಯಿಕ ಗೀತೆಗಳನ್ನು ಆರಿಸಿಕೊಳ್ಳುವುದರಿಂದ ತಾನು ಒಂಟಿತನದಲ್ಲಿ ಅನುಭವಿಸುತ್ತಿರುವ ವ್ಯಕ್ತಿಯ ಕಥೆಯನ್ನು ವಿವರಿಸುವಂತೆ ಭಾಸವಾಗುತ್ತದೆ. ಇದು ಮತ್ತಷ್ಟು ಪ್ರಭಾವ ಬೀರುತ್ತದೆ. ಅದೇ ರೀತಿ ತಾವು ವ್ಯಕ್ತಪಡಿಸಲು ಬಯಸುವ ಭಾವನೆಗಳನ್ನು ಗೀತೆಯಲ್ಲಿ ಬರೆದು, ಸ್ವರಗಳಲ್ಲಿ ಚಿತ್ರೀಕರಿಸುವುದು ಕೂಡ ಉತ್ತಮ ಹವ್ಯಾಸವಾಗಿದೆ. ಈ ಪ್ರಕ್ರಿಯೆಯು ಒಂದು ರೀತಿಯ ಮನೋ ಉಲ್ಲಾಸವನ್ನು ನೀಡುತ್ತದೆ. ಧ್ಯಾನಗೀತಗಳು ಅಥವಾ ಶಾಂತಿದಾಯಕ ಸಂಗೀತವು ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿರುತ್ತದೆ. ಧ್ಯಾನ ಮಾಡುವ ಮೂಲಕ ನಿಮ್ಮ ಮನಸ್ಸನ್ನು ಶಾಂತಗೊಳಿಸಬಹುದು.

ಒಂಟಿತನದ ಗುಟ್ಟು ಸಂಗೀತದಲ್ಲಿದೆ ಹಾಗೆಯೇ ಸಂಗೀತ ಎಂಬುದು ನಮ್ಮ ಭಾವನೆಗಳನ್ನು ಸಮರ್ಥವಾಗಿ ಹಂಚಿಕೊಳ್ಳುವ ಮತ್ತು ಪರಿಹರಿಸುವ ಒಂದು ಮಾರ್ಗವಾಗಿದೆ. ಸಂಗೀತದ ಮೂಲಕ ನಾವು ನಮ್ಮ ಒಂಟಿತನವನ್ನು ಮರೆಯಲು ಮತ್ತು ಜೀವನದಲ್ಲಿ ಹೊಸ ಹುರುಪವನ್ನು ತರಲು ಸಾಧ್ಯವಿದೆ. ಒಂಟಿತನವೆಂದು ನಮ್ಮ ಆತ್ಮಸ್ಥೆçರ್ಯ ಕುಗ್ಗಿಸಿಕೊಳ್ಳದೆ ಬಂದ ಕಷ್ಟಗಳನ್ನು ಎದುರಿಸಿ ಮುನ್ನಡೆದು ಗುರಿಯೆಡೆಗೆ ಸಾಗುವುದೇ ಜೀವನ.

  -ವಿಜಿತಾ ಅಮೀನ್‌

ಬಂಟ್ವಾಳ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.