Teenage: ನಾವಂದುಕೊಂಡಷ್ಟು ಸುಲಭವಲ್ಲ ಈ ಟೀನೇಜ್‌


Team Udayavani, Aug 7, 2024, 11:11 AM IST

4-teenage

ಕಂಡದ್ದೆಲ್ಲ ಕಲರ್‌ ಪುಲ್‌ ಆಗಿ ಕಾಣುವ, ತಾವು ಬಯಸಿದೆಲ್ಲಾ ಸಿಗಲೇಬೇಕು, ತಾವು ಮಾಡಿದ್ದೇ ಸರಿ, ತಮಗೆ ತಾವೇ ಹೀರೋ- ಹಿರೋಯಿನ್‌ ಎಂಬ ಭಾವನೆ ಮೂಡುವ ವಯಸ್ಸು ಈ ಹದಿಹರೆಯ. ಅದೇ ಇಂಗ್ಲಿಷ್‌ನಲ್ಲಿ ಬಹಳ ಸ್ಟೆ çಲ್‌ ಆಗಿ ನಾವು – ನೀವು ಹೇಳ್ತಿವಲ್ಲ ಟೀನೇಜ್‌ ಅಂತ ಅದೇ.

ದಿನ ಬೆಳಗಾದರೆ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಮ್ಮ ಮಕ್ಕಳ ಕುರಿತು ಗಮನ ಹರಿಸುವಲ್ಲಿ ಇಂದಿನ ಹೆತ್ತವರು ಹಿಂದುಳಿದು ಬಿಟ್ಟಿದ್ದಾರೆ. ಟೀನೇಜ್‌ ಅನ್ನೋದು ಬಹಳ ಜಾಗರೂಕತೆಯಿಂದ ಇರಬೇಕಾದ ವಯಸ್ಸು. ಹೆತ್ತವರು ತಮ್ಮ ಮಕ್ಕಳನ್ನು ಈ ಸಮಯದಲ್ಲಿ ಅದೆಷ್ಟು ಕಾಳಜಿ ಮಾಡಿದರು ಕಡಿಮೆಯೇ. ಈ ವಯಸ್ಸಿನಲ್ಲಿ ಪ್ರತಿಯೊಂದು ಮಗುವಿಗೂ ಹೆತ್ತವರ ಪ್ರೀತಿ ಬಹಳ ಮುಖ್ಯ. ಪ್ರೀತಿ ಪ್ರೇಮ ಎಂಬ ಇನ್ನಿತರೆ ಹುಚ್ಚಾಟಗಳು ಇದೇ ವಯಸ್ಸಿನಲ್ಲಿ ಶುರುವಾಗುವುದು. ದೈಹಿಕವಾಗಿ, ಮಾನಸಿಕವಾಗಿ ಹಾಗೂ ಕೆಲವೊಂದು ಬದಲಾವಣೆಗಳ ಕೋಲಾಹಲ ಏರ್ಪಡುವುದು ಇದೇ ಅವಧಿಯಲ್ಲಿ. ಕೆಲ ಮುಗª ಜೀವಗಳು ಈ ವಿಚಾರದಲ್ಲಿ ಅತೀ ಹೆಚ್ಚು ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಖನ್ನತೆಗೆ ಒಳಗಾಗುವುದುಂಟು. ಆದರೆ ಇವೆಲ್ಲವೂ ಆ ಮನಸ್ಸುಗಳಿಗೆ ಅರ್ಥವಾಗುವುದಿಲ್ಲ. ಇವುಗಳನ್ನೆಲ್ಲ ಅರ್ಥ ಮಾಡಿಕೊಳ್ಳಬೇಕಾಗಿರುವುದು ಪೋಷಕರು.

ಹದಿಹರೆಯದ ವಯಸ್ಸಿನಲ್ಲಿ ಮಕ್ಕಳ ಪ್ರಿ ಮೆಂಟಲ್‌ ಕಾರ್ಟೆಕ್ಸ್‌ ಆಯ್ಕೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಹೊಂದಿರುವುದಿಲ್ಲ. ಅವರಲ್ಲಿ ಅಧ್ಯಯನ ಮಾಡಲು ಹಿಂಜರಿಕೆ, ಸುಳ್ಳು ಹೇಳುವುದು, ಜವಾಬ್ದಾರಿ ಹೀನರಾಗುವುದನ್ನು ಕಾಣಬಹುದು. ಪೊಷಕರು ಈ ಅವಧಿಯಲ್ಲಿ ಮಕ್ಕಳ ಆನ್‌ಲೈನ್‌ ಹಾಗೂ ಸಾಮಾಜಿಕ ಬದುಕಿನ ಬಗ್ಗೆ ಗಮನವಿಡಬೇಕು. ಕೇವಲ ಸಮಾಜದ ಖುಷಿಗಾಗಿ ಅವರಿಗೆ ಇಷ್ಟವಿಲ್ಲದ ರೀತಿಯಲ್ಲಿ ಬದುಕಲು ಅವರ ಒತ್ತಡ ಹೇರುವುದು ಮಕ್ಕಳನ್ನು ಮಾನಸಿಕ ಸಮಸ್ಯೆಗೆ ದೂಡಬಹುದು.

ಮನೆಯೇ ಮೊದಲ ಪಾಠಶಾಲೆ ಎಂಬ ಮಾತಿದೆ ಆದರೆ ಮನೆಯಲ್ಲಿ ಪ್ರೀತಿ ಕೊರತೆ, ಇನ್ನಿತರ ಸಮಸ್ಯೆಗಳು ಅವರ ಮನಸ್ಸಿ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಅದೇ ರೀತಿ ಮಕ್ಕಳ ಮೇಲೆ ಒತ್ತಡ ಹೇರುವುದು, ಅಂದರೆ ಒಂದೇ ಸಮನೆ ಓದು ಓದು ಎಂದು ಪೀಡಿಸುವುದು, ಶಿಕ್ಷೆಗೆ ಒಳಪಡಿಸುವುದು ಅಥವಾ ತಂದೆ ತಾಯಿಯ ಪ್ರೀತಿಯಿಂದ ದೂರವಿರಿಸುವುದು ಇವೆಲ್ಲ ಮಕ್ಕಳ ಮೇಲೆ ಬಹಳಷ್ಟು ದುಷ್ಪರಿಣಾಮಗಳನ್ನು ಬೀರುತ್ತದೆ.

ಪರಿಹಾರಗಳೇನು?

ಮಕ್ಕಳು ದೊಡ್ಡವರಾದ ಹಾಗೆ ಪೋಷಕರು ಅವರನ್ನು ಮಕ್ಕಳಂತೆ ಕಾಣದೆ ಸ್ನೇಹಿತರಂತೆ ಕಂಡರೆ ಈ ಸಮಸ್ಯೆಗೆ ಅತೀದೊಡ್ಡ ಪರಿಹಾರವನ್ನು ನೀಡುತ್ತದೆ. ಅದೇ ರೀತಿ ನಮ್ಮ ಇಷ್ಟವನ್ನು ಅವರ ಮೇಲೆ ಹೇರದೆ ಅವರ ಇಷ್ಟ – ಕಷ್ಟಗಳನ್ನು ಅರಿತುಕೊಂಡರೆ ಉತ್ತಮ. ಯಾವುದೇ ಒಳ್ಳೆಯ ಅಥವಾ ಇತರೆ ವಿಷಯಗಳನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಯಪಡಿಸುವುದು, ಶಾಲೆಯ ಚಟುವಟಿಕೆಗಳನ್ನು ಅವರೊಂದಿಗೆ ಜತೆಗೂಡಿ ಮಾಡುವುದರಿಂದ ಅವರಲ್ಲಿ ಸ್ನೇಹ ಮನೋಭಾವ ಹೆಚ್ಚುತ್ತದೆ.

ಹದಿಹರೆಯದ ವಯಸ್ಸು ಬದುಕಿನ ಒಂದು ಮಹತ್ವದ ಘಟ್ಟ. ಅಲ್ಲಿ ಒಂದಷ್ಟು ರಾಶಿ ಆಸೆ ಕನಸುಗಳಿವೆ. ಆ ಕನಸು ಸಫ‌ಲರಾದಗ ಪ್ರಪಂಚವನ್ನೇ ಮರೆತು ಬದುಕುವ ಕಾಲಘಟ್ಟವದು. ಆದರೆ ಅದನ್ನೆಲ್ಲ ಪೋಷಕರು ತಮ್ಮದೇ ಅಳತೆಗೂಲಿನಿಂದ ಅಳೆಯುತ್ತಾರೆ ಅಷ್ಟೇ. ತಾವು ಅವರಂತಿರುವಾಗ ಅವರಂತೆಯೇ ತಪ್ಪು ಮಾಡಿದ್ದೇವೆ ಎಂದು ಒಮ್ಮೆಯೂ ಯೋಚಿಸುವುದಿಲ್ಲ.

ಒಟ್ಟಾಗಿ ಈ ವಯಸ್ಸಿನೊಂದಿಗೆ ನಾವೂ ಹೆಜ್ಜೆ ಹಾಕಬೇಕು, ಅವರೊಂದಿಗೆ ನಾವೂ ಪುನಃ ಬೆಳೆಯಬೇಕು. ಮಕ್ಕಳೊಂದಿಗೆ ಮಕ್ಕಳಾಗಿ ಅವರ ಸುಖಃ ದುಃಖಗಳಲ್ಲಿ ಭಾಗಿಯಾದಾಗ ಸಂಬಂಧವೂ ಗಟ್ಟಿಯಾಗುತ್ತದೆ. ಇಂತಹ ಸಮಸ್ಯೆಗಳು ಹಾಗೂ ಕಂದಕಗಳಿಗೆ ಪರಿಹಾರ ಕಾಣಲು ಸಾಧ್ಯ.

-ಕಾವ್ಯಾ ಜಯರಾಜ್‌

ಬಾಳೆಪುಣಿ

 

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.