UV Fusion: ಬೆಳವಣಿಗೆ ಯಾವುದು?


Team Udayavani, Oct 12, 2024, 12:05 PM IST

5-uv-fusion

ಪ್ರತಿಯೊಬ್ಬ ಮನುಜನ ಜೀವನದಲ್ಲೂ ಬಾಲ್ಯ, ಯೌವ್ವನ, ಮುಪ್ಪು ಎಂಬ ಮೂರು ಹಂತಗಳಿರುತ್ತವೆ. ಈ ಎಲ್ಲ ಹಂತದಲ್ಲಿನ ನಮ್ಮ ನಡೆಗೆಯ ಅಖೈರು ಮೊತ್ತವೆ ಸಾರ್ಥಕ ಜೀವನ. ಬಾಲ್ಯ ನಮ್ಮಿಡೀ ಜೀವನದ ಅಡಿಪಾಯ ಎಂದರೆ ತಪ್ಪಾಗಲಾರದು.

ಬಾಲ್ಯದಲ್ಲಿ ನಾವು ಬೆಳೆಸಿಕೊಳ್ಳುವ ಹವ್ಯಾಸಗಳು ಅಥವಾ ಪೋಷಕರು ನಮಗೆ ನೀಡುವ ಸಂಸ್ಕಾರ, ನಾವು ಬೆಳೆಯುವ ವಾತಾವರಣ, ಎಲ್ಲವೂ ನಮ್ಮ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತವೆ. ಹಿಂದೆಲ್ಲ ಹೆತ್ತವರು ಈಗಿನ ರೀತಿ ಅಗತ್ಯಕ್ಕಿಂತ ಹೆಚ್ಚಿನ ಕಾಳಜಿ ಮಾಡಿ ಮಕ್ಕಳನ್ನು ಬೆಳೆಸುತ್ತಿರಲಿಲ್ಲ. ಮೂರು ನಾಲ್ಕು ಮಕ್ಕಳು, ಮನೆಯ ಆರ್ಥಿಕ ಪರಿಸ್ಥಿತಿಗಳ ಬವಣೆಯ ನಡುವೆಯೂ ಒಂದು ನೆಮ್ಮದಿಯ ಬದುಕು ಕಂಡುಕೊಳ್ಳಲು ಸಫ‌ಲರಾಗುತ್ತಿದ್ದರು. ಅಣ್ಣ-ತಮ್ಮ, ಅಕ್ಕ-ತಂಗಿಯರ ನಡುವೆ ಇದ್ದುದರÇÉೇ ಹೊಂದಿಕೊಂಡು ಬೆಳೆಯುವ ಮಕ್ಕಳಿಗೆ ಸ್ವಾಭಾವಿಕವಾಗಿ ಮನೆಯ ಕಷ್ಟ ನಷ್ಟ ಆಗು ಹೋಗುಗಳ ಪರಿಚಯ ಇರುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಮಕ್ಕಳ ಮೇಲಿನ ಅತಿಯಾದ ವ್ಯಾಮೋಹವನ್ನೇ ಹೆತ್ತವರು ತಾವು “ಮಾಡುವ ಕಾಳಜಿ’ ಎಂದು ತಪ್ಪಾಗಿ ತಿಳಿದುಕೊಂಡು ಅವರ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದಾರೆ. ತತ್ಪರಿಣಾಮ ಮಕ್ಕಳು ಸೀಮಿತ ಅಥವಾ ಸಂಕುಚಿತ ವಾತಾವರಣದಲ್ಲಿ ಬೆಳೆದು ಹೈಬ್ರಿಡ್‌ ತಳಿಗಳಂತೆ ತಯಾರಾಗುತ್ತಿದ್ದಾರೆ.

ಹೊಸ ಸವಾಲುಗಳು, ಪ್ರತಿಕೂಲ ಸಂದರ್ಭಗಳು ಬಂದಾಗ ಎದುರಿಸಿ ನಿಲ್ಲುವ ಸಾಮರ್ಥ್ಯ ಕಳೆದುಕೊಂಡು ಕುಸಿದು ಕೂರುತ್ತಿದ್ದಾರೆ. ಕೇಳಲು ಇದು ತಮಾಷೆ ಎನಿಸಿದರೂ ಸತ್ಯವೇ. ಸಂಬಂಧಗಳ ಮೌಲ್ಯಗಳ ಅರಿವು ಸಿಗದಾಗುತ್ತಿದೆ. ಇದರ ಮದ್ಯೆ ಆಧುನಿಕ ತಂತ್ರಜ್ಞಾನ, ಗ್ಯಾಜೆಟ್‌ಗಳ ದಾಳಿಗೆ ಸಿಲುಕಿ ಮನುಷ್ಯ ಮನುಷ್ಯರ ನಡುವೆ ಇದ್ದ ಆತ್ಮೀಯತೆಯ ಕೊಂಡಿ ಕಳಚಿಕೊಳ್ಳುತ್ತಾ ಬದುಕಿನಲ್ಲಿ ದಕ್ಕಿದ ಕೆಲವು ಸಂಬಂಧಗಳ ಮಾಧುರ್ಯದ ಬೆಲೆ ತಿಳಿಯದಾಗುತ್ತಿದೆ. ಸುತ್ತಲಿನ ಸೌಂದರ್ಯ ಸವಿಯುತ್ತಾ ಜೀವನ ಕಲೆ ಕಲಿಯುವ ಮಾಂತ್ರಿಕತೆಯಿಂದ, ಸದಾ ಅಂತರ್ಜಾಲದೊಳಗೆ ಮುಳುಗಿ ಯಾಂತ್ರಿಕತೆಯ ಕಡೆಗೆ ಸಾಗುತ್ತಿದ್ದೇವೆ. ಇಂತ ವಾತಾವರಣದಲ್ಲಿ ಬೆಳೆದ ನಮ್ಮ ಮುಂದಿನ ತಲೆಮಾರುಗಳು ಕಲಿಯುವುದಾದರು ಇನ್ನೇನನ್ನು..? ಇದನ್ನೇ ತಾನೇ.

ಈಗಿನ ಮಕ್ಕಳಿಗೆ ಹಿರಿಯರೆಂದರೆ ಗೌರವ ಇಲ್ಲ, ಸಂಸ್ಕೃತಿ ಸಂಪ್ರದಾಯ ಗೊತ್ತಿಲ್ಲ, ಯಾವುದರಲ್ಲೂ ಆಸಕ್ತಿ ಇಲ್ಲ, ಗಟ್ಟಿತನ ಇಲ್ಲ. ಜೆನರೇಶನ್‌ ಗ್ಯಾಪ್‌ ಸೃಷ್ಟಿಯಾಗುತ್ತಿದೆ ಎಂದೆಲ್ಲ ದೂರುವ ಮೊದಲು, ನಾವು ನಮ್ಮ ಮಕ್ಕಳಿಗೆ ಇದನ್ನೆಲ್ಲ ಆಸಕ್ತಿಯಿಂದ ಕಲಿಸುತ್ತಿದ್ದೇವೆಯೇ?, ಜನರೊಂದಿಗೆ ಬೆರೆತು ನಲಿಯುವುದನ್ನು ತಿಳಿಸಿಕೊಡುತ್ತಿದ್ದೇಯೇ ? ಮೊದಲು ನಾವದನ್ನು ಪಾಲಿಸುತ್ತಿದ್ದೇವೆಯೇ?, ಆಯ್ಕೆಯ ಸ್ವಾತಂತ್ರ್ಯ ಕೊಟ್ಟು ಅವರಿಷ್ಠದ ಬದುಕು ಪೊರೆಯುವ ಕಲೆ ಕಲಿಯಲು ಪ್ರೋತ್ಸಾಹಿಸುತ್ತಿದ್ದೇವೆಯೇ? ಎಂಬುದನ್ನು ಯೋಚಿಸಬೇಕು ಅಲ್ಲವೇ.

ಅದೇ ಹಳೆ ಮೊಂಡುವಾದ ವಿಷಯಗಳಿಗೆ ಅಂಟಿಕೂರುವ, ಸದಾ ಇತರರನ್ನು ಮತ್ತು ಸುತ್ತಲಿನ ಪರಿಸ್ಥಿತಿಯನ್ನು ದೂರುತ್ತಾ ಕೂರುವ ಬದಲು, ಇನ್ನಾದರೂ ಬಿಗುಮಾನವನ್ನು ಕಡಿಮೆ ಮಾಡಿಕೊಂಡು, ನಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಬದುಕಿನ ಹೊಸತನಗಳಿಗೆ ತೆರೆದುಕೊಳ್ಳುತ್ತಾ, ಕಲಿಯುತ್ತಾ ಮತ್ತು ನಾವು ಕಲಿತ ಜೀವನಪಾಠಗಳ ಸಾರವನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತಾ ಚಲನಶೀಲರಾಗಿ ಬದುಕುವುದನ್ನು ರೂಢಿಸಿಕೊಳ್ಳೋಣ. ಹಳೇ ಬೇರಿಗೆ ಹೊಸಚಿಗುರು ಮೆರಗು ನೀಡಲಿ. ಜೀವನ ಹಸುರಾಗಿ ನಳನಳಿಸುವಂತೆ ನೋಡಿಕೊಳ್ಳೋಣ. ಇದೇ ನಮ್ಮ ನಿಜವಾದ ಬೆಳವಣಿಗೆ. ಏನಂತೀರಿ?

-ಪಲ್ಲವಿ ಚೆನ್ನಬಸಪ್ಪ

ಗಡಿಹಳ್ಳಿ, ಚಿಕ್ಕಮಗಳೂರು

ಟಾಪ್ ನ್ಯೂಸ್

10-

Sirwar: ಸಂಗೊಳ್ಳಿ ರಾಯಣ್ಣಗೆ ಅಪಮಾನ: ಮೂವರ ಬಂಧನ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Hubli: State govt working to breed terrorists: Aravind Bellad

Hubli: ರಾಜ್ಯ ಸರ್ಕಾರವು ಭಯೋತ್ಪಾದಕರನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿದೆ: ಬೆಲ್ಲದ್

Hong Kong Cricket Sixes: Team India announced; Captained by Robin Uthappa

Hong Kong Cricket Sixes: ಟೀಂ ಇಂಡಿಯಾ ಪ್ರಕಟ; ರಾಬಿನ್‌ ಉತ್ತಪ್ಪ ನಾಯಕತ್ವ

9-karkala

KBC: ಕೆಬಿಸಿಯಲ್ಲಿ 12.5 ಲ.ರೂ.ಗೆದ್ದ ಕಾರ್ಕಳ ಮೂಲದ ಡಾ| ಶ್ರೀಶ್‌ ಶೆಟ್ಟಿ

Forest: ಕಾಡುದಾರಿ ಸೃಷ್ಟಿಸುವವರಾಗೋಣ ಕಾಲುದಾರಿಯಲ್ಲಿ ಸಾಗುವವರಲ್ಲ…

Forest: ಕಾಡುದಾರಿ ಸೃಷ್ಟಿಸುವವರಾಗೋಣ; ಕಾಲುದಾರಿಯಲ್ಲಿ ಸಾಗುವವರಲ್ಲ…

8-ucchila

Udupi Uchila Dasara 2024: ವೈಭವದ ಶೋಭಾಯಾತ್ರೆಗೆ ಅಂತಿಮ ಸಿದ್ಧತೆ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

4-uv-fusion

Women: ಹೆಣ್ಣು ಹೊರೆಯಲ್ಲ ಶಕ್ತಿ

10-fonts

UV Fusion: ಫಾಂಟ್‌ ಎಂದು ಉಪೇಕ್ಷಿಸಬೇಡಿ

15-uv-fusion

UV Fusion: ಮೃಗಗಳ ಜಗತ್ತು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

10-

Sirwar: ಸಂಗೊಳ್ಳಿ ರಾಯಣ್ಣಗೆ ಅಪಮಾನ: ಮೂವರ ಬಂಧನ

Davanagere: Dussehra festival grand procession

Davanagere: ದಸರಾ ಹಬ್ಬದ ಬೃಹತ್ ಶೋಭಾಯಾತ್ರೆ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Hubli: State govt working to breed terrorists: Aravind Bellad

Hubli: ರಾಜ್ಯ ಸರ್ಕಾರವು ಭಯೋತ್ಪಾದಕರನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿದೆ: ಬೆಲ್ಲದ್

Hong Kong Cricket Sixes: Team India announced; Captained by Robin Uthappa

Hong Kong Cricket Sixes: ಟೀಂ ಇಂಡಿಯಾ ಪ್ರಕಟ; ರಾಬಿನ್‌ ಉತ್ತಪ್ಪ ನಾಯಕತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.