UV Fusion: ನಮ್ಮೊಳಗಿನ ಮೌನ ಮಾತಾದಾಗ


Team Udayavani, Sep 7, 2024, 1:30 PM IST

7-

ಪ್ರತಿಯೊಬ್ಬರೂ ತಮ್ಮ ಜೀವನದ ಕೆಲವು ಸಮಯವನ್ನು ಮೌನದಿಂದ ಕಳೆದಿರುತ್ತಾರೆ. ತಿಳಿದೋ ಅಥವಾ ತಿಳಿಯದೆ ಮಾಡುವ ಕೆಲವೊಂದು ತಪ್ಪುಗಳು, ಆಲೋಚನೆಗಳು ನಮ್ಮನ್ನು ಮೌನಿಯನ್ನಾಗಿಸಿ ಬಿಡುತ್ತದೆ. ಈ ಮೌನ ಆಂತರಿಕ ಗೊಂದಲ, ಆತ್ಮಾವಲೋಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ನಮ್ಮ ದೈನಂದಿನ ಜೀವನವು ಹಲವಾರು ನಿರೀಕ್ಷಿತ, ಅನಿರೀಕ್ಷಿತ ವಿಷಯಗಳಿಂದ ಕೂಡಿದೆ. ಮನಸ್ಸಿನ ತುಂಬಾ ಸಾವಿರಾರು ಉತ್ತರ ಸಿಗದ ಪ್ರಶ್ನೆಗಳು ನಮ್ಮ ನೆಮ್ಮದಿ ಕೆಡಿಸಿ ಮೌನಿಯಾಗಿ ಇರುವಂತೆ ಮಾಡಿರುತ್ತದೆ. ಆದರೆ ಆ ಮೌನದಲ್ಲೂ ಕೂಡ ನಮಗೂ ಅರ್ಥವಾಗದಷ್ಟು ಉಳಿದಿರುವ ಆಳವಾದ ಸತ್ಯಗಳು ಅಡಗಿರುತ್ತವೆ. ಅಂತಹ ಹಲವಾರು ರಹಸ್ಯಗಳಿಗೆ ಮೌನವೇ ಮಾತಾಗಿರುತ್ತದೆ, ಕೋಣೆಯ ಗೋಡೆ, ಕಿಟಕಿ ಕಿವಿಯಾಗಿ, ಕಣ್ಣ ರೆಪ್ಪೆ ಸಾಕ್ಷಿಯಾಗಿರುತ್ತದೆ. ನಾವು ಮಾತ್ರ ನಾವಾಗಿರುವಂತೆ ಭಾವಿಸುತ್ತದೆ. ಮೌನವನ್ನು ಅರ್ಥಮಾಡಿಕೊಂಡಷ್ಟು ಇಷ್ಟವಾಗುತ್ತಾ ಹೋಗುತ್ತದೆ.

ನಮ್ಮೊಳಗಿನ ಮೌನವನ್ನು ಅರಿಯಲು ಪ್ರಾರಂಭಿಸಿದಾಗ, ಆರಂಭದಲ್ಲಿ ಭಾರವಾಗಿ ಕಂಡರೂ ನಿಧಾನವಾಗಿ ಅದರಲ್ಲಿ ಅಸ್ತಿತ್ವದ ಅರ್ಥವನ್ನು ಹುಡುಕಲು ಶುರುಮಾಡಬಹುದು. ನಮ್ಮ ಭಾವನೆಗಳು, ಆಸೆಗಳು, ಭಯ, ಖುಷಿ, ದುಃಖ ಎಲ್ಲವೂ ಆ ಮೌನದಲ್ಲಿ ಕಾಣಿಸಿಕೊಂಡು ಹೋಗುತ್ತವೆ. ಆಧ್ಯಾತ್ಮಿಕ ಒಲವು ಕೂಡ ಮೌನದ ಮಾತಾಗಿದೆ. ಮೌನದಿಂದ ಆಧ್ಯಾತ್ಮಿಕತೆಯನ್ನು ಕೂಡ ಅನುಭವಿಸಬಹುದು.

ಒಂದೊಂದು ಬಾರಿ ಅದೆಷ್ಟು ಪ್ರಯತ್ನಿಸಿದರೂ ಸಿಗದ ನೆಮ್ಮದಿ, ನಿರಾಳತೆ, ತೃಪ್ತಿ ಮೌನದಿಂದ ಸಿಗುವುದಂತು ಖಂಡಿತ. ನಮ್ಮೊಳಗಿನ ಮೌನದ ಆಧ್ಯಾತ್ಮಿಕ ಯಾತ್ರೆ ಜೀವನದ ನಿಜವಾದ ಅರ್ಥವನ್ನು ಅರಿತುಕೊಳ್ಳಲು ಸಹಾಯ ಮಾಡುವುದರ ಜತೆಗೆ, ನಮ್ಮ ಹೃದಯದಾಳದ ಮಾತನ್ನು ಕಣ್ಣೀರಿನ ರೂಪದಲ್ಲಿ, ಹಾಸ್ಯದ ರೂಪದಲ್ಲಿ ಅಥವಾ ವಿಭಿನ್ನ ಭಾವನೆಯ ರೂಪದಲ್ಲಿ ವ್ಯಕ್ತವಾಗದೇ ಉಳಿದ ಭಾವನೆಗಳನ್ನು ಮೌನದ ಮೂಲಕ ಹೊರ ಬರುವಂತೆ ಮಾಡುತ್ತದೆ. ಈ ಮೌನವು ನಮಗೆ ಆತ್ಮೀಯತೆ, ಅನುಭೂತಿ ಮತ್ತು ಸಹಜತೆಯನ್ನು ನೀಡುತ್ತದೆ. ಮೌನವು ನಮ್ಮ ಅಂತರಾಳದ ಸಮಸ್ಯೆಗಳನ್ನು ಪರಿಹರಿಸಲು, ನಿಜವಾದ ಪರಿಹಾರವನ್ನು ಹುಡುಕಲು ಪ್ರೇರೇಪಿಸುತ್ತದೆ. ಮೌನಕ್ಕೆ ಸಂಗೀತವು ನಿತ್ಯ ಸಹಕಾರಿ. ಹೊಸದಾಗಿ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದರ ಜತೆಗೆ ಸಹನೆ, ತಾಳ್ಮೆ ಹೆಚ್ಚಿಸುತ್ತದೆ.

ಅತಿಯಾದರೆ ಅಮೃತವೂ ವಿಷವಂತೆ ಹಾಗೆ ನಮ್ಮ ಬದುಕು ಕೂಡ ನಮ್ಮದಲ್ಲದ ವಸ್ತುವನ್ನಾಗಲಿ, ವ್ಯಕ್ತಿಯನ್ನಾಗಲಿ ಅವುಗಳ ಮೇಲೆ ಮೋಹ ಸಲ್ಲದು. ಅತಿಯಾಸೆಯೇ ನಮ್ಮನ್ನು ಮೌನದ ಕೂಪಕ್ಕೆ ತಳ್ಳುವಂತೆ ಮಾಡುತ್ತದೆ. ಎಲ್ಲರೂ ಇದರಿಂದ ಹೊರ ಬರಲಾರರು, ಬಂದವರು ತಮ್ಮ ಹೊಸ ಬದುಕಿನ ಯಾನವನ್ನು ಆರಂಭಿಸುವುದಂತು ಖಂಡಿತ. ವಿಜಿತ ಅಮೀನ್‌ ಬಂಟ್ವಾಳ

ಟಾಪ್ ನ್ಯೂಸ್

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.