Alarm Clock: ಟಿಕ್‌ ಟಿಕ್‌ ಅಲಾರಾಂ ಗಡಿಯಾರ ಎಲ್ಲಿಗೆ ಹೋಯಿತು ?


Team Udayavani, Sep 8, 2024, 2:00 PM IST

15-alarm-clock

“ಗಂಟೆಯ ನೆಂಟನೇ…ಓ ಗಡಿಯಾರ… ‘ಎಂಬ ಸಾಲುಗಳನ್ನು ಕೇಳಿದಾಗಲೆಲ್ಲ ಗೋಡೆಯ ಮೇಲೆ ಹೊರಳುವ ನಮ್ಮ ಕಣ್ಣುಗಳು ನಮ್ಮ ಜತೆಯೇ ಇರುವ ಪುಟ್ಟ ಅಲಾರಾಂ ಗಡಿಯಾರದ ಕಡೆ ನೋಡುವುದು ಸ್ವಲ್ಪ ಕಡಿಮೆ. ನಮ್ಮ ನಿತ್ಯ ಜೀವನದಲ್ಲಿ ಸಮಯವೆಷ್ಟು ಎಂದು ತೋರಿಸುವ ಗಡಿಯಾರಗಳಿಗೆ ಕೊಡುವ ಪ್ರಾಶಸ್ತ್ಯ ಸಮಯದ ಜಾಗೃತಿ ಮೂಡಿಸುವ ಅಲಾರಾಂ ಗಡಿಯಾರಗಳಿಗೆ ಈಗ ಇಲ್ಲ.

ಅಲಾರಾಂ ಗಡಿಯಾರಗಳೂ ಕೂಡ ಮನೆಯ ಮೂಲೆಯಲ್ಲೋ, ಟಿವಿ ಮೇಲಿನ ಗೊಂಬೆಗಳ ಜಾಗದಲ್ಲೋ, ಗುಜರಿ ಚೀಲದ ಮಧ್ಯದಲ್ಲೋ ಅವಿತು ಕುಳಿತು ಬಿಟ್ಟಿದೆ. ಈಗ ಅದರ ಅವಶ್ಯಕತೆ ಯಾರಿಗೂ ಇಲ್ಲ.ಇಂದಿನ ದಿನಮಾನದಲ್ಲಿ ಎಚ್ಚರಿಸುವಿಕೆಗೆ ಅಲಾರಾಂ ಗಡಿಯಾರವನ್ನು ನೆನೆಯುವವರು ಬಹಳವೆಂದರೆ ಬಹಳ ಕಡಿಮೆ.

ಕಾಲಮಾನಕ್ಕೆ ಹುದುಗಿ ಹೋದ ಪ್ರಾಚೀನ ವಸ್ತುಗಳ ಸಾಲಿಗೆ ಇದು ಸೇರದಿದ್ದರೂ ಬರುವ ಪೀಳಿಗೆಯಿಂದ ದೂರ ಸರಿಯುತ್ತಿರುವ ವಸ್ತುಗಳ ಗುಂಪಿನಲ್ಲಿ ನಾವಿದನ್ನು ಗುರುತಿಸಬಹುದು.

ಪ್ರತಿ ಮನೆಯ ಅಲಾರಾಂ ಗಡಿಯಾರಗಳಲ್ಲಿ ಒಂದು ಕಥೆ ಇರುತ್ತದೆ.ಯಾರದೋ ಪ್ರೀತಿಯ ಕಾಣಿಕೆಯ ನೆನಪಿರುತ್ತದೆ.ಯಾವುದೋ ಪರೀಕ್ಷೆ, ಸಂದರ್ಶನದ ಮಜಲಿರುತ್ತದೆ.ಕಾಲೇಜಿಗೊ, ಕಚೇರಿಗೊ ಗಂಡ ಮಕ್ಕಳನ್ನು ತಯಾರಿ ಮಾಡಿ ಕಳುಹಿಸುವ ಗೃಹಿಣಿಯೊಬ್ಬಳ ದಿನನಿತ್ಯದ ಪ್ರೀತಿ ಇರುತ್ತದೆ.ಅಷ್ಟೇ ಏಕೆ ನಿದ್ದೆಗೆ ಭಂಗ ಬಂದಿತ್ತಲ್ಲ ಎಂಬ ಅಸಮಾಧಾನಕ್ಕೆ ಅದರ ತಲೆ ಮೇಲೆ ಕುಟ್ಟಿ ಹಲುಬಿದ ವಾರಸುದಾರರ ಬೈಗುಳಗಳೂ ಸೇರಿ ಹೋಗಿರುತ್ತದೆ.

ಆದರೆ ಈಗ ಸಾಕಷ್ಟು ಮನೆಯಲ್ಲಿ ಅಲಾರಾಂ ಗಡಿಯಾರಗಳ ಸದ್ದು ನಿಂತು ಹೋಗಿದೆ.ಒಂದು ಕಾಲದ ಸಮೀಕ್ಷೆಯ ಪ್ರಕಾರ ಅಲಾರಾಂ ಗಡಿಯಾರಗಳು ಐ ಫೋನ್‌, ಟಿವಿಗಳನ್ನು ದಿನನಿತ್ಯ ಬಳಕೆಯ ವಸ್ತುಗಳ ಪಟ್ಟಿಯಲ್ಲಿ ಹಿಂದಿಕ್ಕಿತ್ತಂತೆ.ಈಗಲೂ ಹುಡುಕಿದರೆ ಶುಭೋದಯಕ್ಕೆ ಈ ಗಡಿಯಾರವನ್ನೇ ನಂಬಿಕೊಂಡ ಜನರನ್ನು ನಾವು ಹುಡುಕಬಹುದು.

ಹುಡುಕಿ ಹೊರಟರೆ ಈ ಪುಟ್ಟ ಗಡಿಯಾರಗಳಿಗೂ ಕೂಡ ಒಂದು ಇತಿಹಾಸವಿದೆ.ಕೆಲವು ಶತಮಾನಗಳ ಹಿಂದೆ ಗ್ರೀಕ್‌ ಪ್ರಜೆಗಳ ಬಳಿ ದೊಡ್ಡ ಶಬ್ದ ಮಾಡುವ ಜಲತರಂಗ ವಾದ್ಯದ ಯಂತ್ರವಿದ್ದಿತ್ತಂತೆ.ಆದರೆ ಅದರ ಶಬ್ದಕ್ಕೆ ನಿದ್ದೆಯ ಸಮಯದಲ್ಲಿ ಬೆಚ್ಚಿ ಬೀಳುವ ಸಾಧ್ಯತೆ ಇದ್ದಿದ್ದರಿಂದ ಅದರ ಧ್ವನಿ ಚಿಕ್ಕದರಿಂದ ಕ್ರಮೇಣ ಏರು ಗತಿಗೆ ಬರುವ ಹಾಗೆ ಸಿದ್ದಪಡಿಸಿ ಬಳಸಲು ಶುರು ಮಾಡಿದರು.ಕಾಲ ಕಳೆದ ಹಾಗೆ ತಂತ್ರಜ್ಞಾನ, ಆಧುನಿಕ ಸ್ಪರ್ಷಕ್ಕೆ ಬದಲಾದ ಅಲಾರಾಂ ಗಡಿಯಾರಗಳು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ, ವಿನ್ಯಾಸದಲ್ಲಿ ಜನರನ್ನು ತನ್ನತ್ತ ಆಕರ್ಷಿಸತೊಡಗಿದವು.

ಮೇಜಿನ ಮೇಲೆ ಇಡುವಂತಹ ಈ ಚಿಕ್ಕ ಸಾಧನ ನಾವು ಗುರುತಿಸುವ ಸಮಯಕ್ಕೆ ಸದ್ದು ಮಾಡಿ ನಮ್ಮನ್ನು ಎಚ್ಚರಿಸುತ್ತದೆ.ಸಾಮಾನ್ಯವಾಗಿ ಅಲಾರಾಂ ಗಡಿಯಾರಗಳು ಒಂದು ಅಥವಾ ಎರಡು ರೀತಿಯ ಸದ್ದು ಮಾಡಿದರೂ ಡಿಜಿಟಲ್‌ ಮತ್ತು ಇಲೆಕ್ಟ್ರಾನಿಕ್‌ ಗಡಿಯಾರಗಳಲ್ಲಿ ಇದು ಹಲವು ರೀತಿಯ ಧ್ವನಿಯನ್ನು ಸೇರಿಸುತ್ತದೆ.ಮೆಕ್ಯಾನಿಕಲ್‌ ಗಡಿಯಾರಗಳಲ್ಲಿ ಒಂದು ಮುಖ್ಯ ಸ್ಪ್ರಿಂಗ್‌, ಒಂದು ಸಣ್ಣ ತಮಟೆ, ಮತ್ತು ಒಂದು ಗೈರ್‌ ಬಾಕ್ಸ್ ಇರುತ್ತದೆ.ಇಲೆಕ್ಟ್ರಾನಿಕ್‌ ಗಡಿಯಾರಗಳಲ್ಲಿ  ಮ್ಯಾಗ್ನೆನೆಟಿಕ್‌ ಸರ್ಕ್‌ಯುಟ್‌  ಮತ್ತು ಅರ್ಮೆಚುರ್‌ ಅಲಾರಾಂ ಧ್ವನಿ ಬರುವಂತೆ ಕಾರ್ಯ ನಿರ್ವಹಿಸುತ್ತದೆ.

ಆದರೆ ಈಗ ಅಲಾರಾಂ ಗಡಿಯಾರಗಳ ಸ್ಥಾನವನ್ನು ಮೊಬೈಲ್‌ಗ‌ಳು ಅಲಂಕರಿಸಿವೆ.ಈಗ ಯಾರೂ ಅಲಾರಾಂ ಗಡಿಯಾರಗಳನ್ನು ಅವಲಂಬಿಸಿ ಬದುಕುವುದಿಲ್ಲ.‌ ಮೊಬೈಲ್‌ಗ‌ಳಲ್ಲಿ ಸಮಯ ನಿಗದಿಪಡಿಸಿ ಮಲಗಿದರೆ ಬೇಕಾದ ರೀತಿಯ ಹಾಡು ಹಾಡಿ ಬೆಳಿಗ್ಗೆ ಎಚ್ಚರಿಸಿ ಬಿಡುತ್ತದೆ. ಒಂದೇ ಸದ್ದಿಗೆ ಎಚ್ಚರವಾಗಲು  ಕಷ್ಟಪಡುವ ಜನರು ಐದೈದು ನಿಮಿಷಕ್ಕೆ ಅಲಾರಾಂ ಭಾರಿಸುವಂತೆ ಸೆಟ್‌ ಮಾಡಿ ಮಲಗಿ ಬಿಡುತ್ತಾರೆ.

ಇದಕ್ಕೆಲ್ಲ ಈಗಿನ ಮೊಬೈಲ್‌ ಗಳು ಅವಕಾಶ ಮಾಡಿ ಕೊಟ್ಟಿದೆ. ಈಗ ಸಾಮಾನ್ಯ ಗಡಿಯಾರಗಳ, ಕ್ಯಾಲೆಂಡರ್‌ಗಳ ಸ್ಥಾನವನ್ನು ಕೂಡ ಸಾಕಷ್ಟರ  ಮಟ್ಟಿಗೆ ಈ ಮೊಬೈಲ್‌ ಆಕ್ರಮಿಸಿ ಬಿಟ್ಟಿದೆ.ವಾಚ್‌ಗಳಲ್ಲೂ ಕೂಡ ಸ್ಮಾರ್ಟ್‌ ವಾಚ್‌ಗಳ ಬಳಕೆ ಹೆಚ್ಚಾಗಿದ್ದು ಎಲ್ಲೋ ನಮ್ಮ ನಡುವೆ ‘ಟಿಕ್‌ ಟಿಕ್‌ ‘ಎಂದು ಶಬ್ದ ಉಸುರುವ ಗಡಿಯಾರವೆಂಬ ಗೆಳೆಯರೂ ನಮಗೆ ಅರಿವಿಲ್ಲದಂತೆ ನಮ್ಮಿಂದ ಬಹು ಸಾಗುತಿದ್ದಾರೆ.ಬದಲಾದ ಕಾಲ ನಮ್ಮನ್ನು ಹೊಸತಕ್ಕೆ ಹೊಂದಿಕೊಳ್ಳುವಂತೆ ಎಚ್ಚರಿಸುತ್ತಿದೆ.ಆದರೆ ಕಾಲಕ್ಕೆ ತಕ್ಕಂತೆ ನಮ್ಮನ್ನು ಎಚ್ಚರಿಸುತಿದ್ದ ಅಲಾರಾಂ ಗಡಿಯಾರಗಳು ಶಾಶ್ವತವಾಗಿ ನಿಂತು ಹೋಗುವ ಯೋಜನೆ ಹಾಕಿಕೊಳ್ಳುತ್ತಿದೆ.

- ಶಿಲ್ಪಾ ಪೂಜಾರಿ

ಎಂ.ಎಂ. ಮಹಾವಿದ್ಯಾಲಯ, ಶಿರಸಿ

ಟಾಪ್ ನ್ಯೂಸ್

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುವ ರೈತರಿಗೆ ಪೊಲೀಸ್ ಬ್ರೆಕ್

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುತ್ತಿದ್ದ ರೈತರಿಗೆ ಪೊಲೀಸ್ ಬ್ರೇಕ್

ಕಲ್ಯಾಣ ಕರ್ನಾಟಕ ಉತ್ಸವ: ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ತಳಿಗೆ ಸಿಎಂ ಮಾಲಾರ್ಪಣೆ

Kalaburagi: ಕಲ್ಯಾಣ ಕರ್ನಾಟಕ ಉತ್ಸವ… ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

3

Bantwal: ಬಿ.ಸಿ.ರೋಡು ಪ್ರಕರಣ; ಎರಡು ಪ್ರತ್ಯೇಕ ಪ್ರಕರಣ ದಾಖಲು

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

6

Crime: ಏಕಮುಖ ರಸ್ತೆಯಲ್ಲಿ ಬಂದಿದ್ದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಧಮ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.