Krishna: ಯಾರು ಈ  ಕೃಷ್ಣ?


Team Udayavani, May 8, 2024, 4:55 PM IST

5-

ಕೃಷ್ಣನ ಕುರಿತಾದ ಯಾವುದಾದರೂ ಪುಸ್ತಕವನ್ನು ಓದಿದಾಗ ಅಥವಾ ನೋಡಿದಾಗ ಕೂಡಲೇ ಈ ಕೃಷ್ಣ ಯಾರು? ಆತನ ಜತೆಗಿರುವ ಈ ಹುಡುಗಿ ಯಾರು? ಎಂಬ ಪ್ರಶ್ನೆ ಮೂಡುತ್ತದೆ.

ತತ್‌ಕ್ಷಣದ ಉತ್ತರವೆಂದರೆ ಕೃಷ್ಣನು ದೇವೋತ್ತಮ. ಬೇರೆ ಮಾತಿನಲ್ಲಿ ಹೇಳುವುದಾದರೆ ಕೃಷ್ಣ ಎಲ್ಲ ರೀತಿಗಳಲ್ಲಿ ಆಕರ್ಷಕ ಆದುದರಿಂದ ಅವನು ದೇವೋತ್ತಮನು. ಸರ್ವಾಕರ್ಷಣೆಯ ತತ್ವದ ಆಚೆ ದೇವೋತ್ತಮ ಎನ್ನುವುದಕ್ಕೆ ಅರ್ಥವಿಲ್ಲ. ಒಬ್ಬ ವ್ಯಕ್ತಿಯು ಬಹಳ ಶ್ರೀಮಂತನಾಗಿದ್ದರೆ, ಬಹು ಐಶ್ವರ್ಯವಂತವನಾಗಿದ್ದರೆ ಅವನು ಜನಸಾಮಾನ್ಯರನ್ನು ಆಕರ್ಷಿಸುತ್ತಾನೆ.

ಹಾಗೆ ಒಬ್ಬ ಮನುಷ್ಯನಿಗೆ ಬಹಳ ಅಧಿಕಾರವಿದ್ದರೆ ಅವನು ಸುಂದರವಾಗಿದ್ದರೆ ಅಥವಾ ವಿವೇಕಶಾಲಿಯಾಗಿದ್ದರೆ ಅಥವಾ ಎಲ್ಲ ಸ್ವತ್ತುಗಳ ವಿಷಯದಲ್ಲಿ ನಿರ್ಲಿಪ್ತನಾಗಿದ್ದರೆ ಅವನೂ ಆಕರ್ಷಿಸುತ್ತಾನೆ. ಆದುದರಿಂದ ವಾಸ್ತವ ಅನುಭವದಿಂದ ಮನುಷ್ಯನ ಆಕರ್ಷಣೆಗೆ ಇವು ಕಾರಣ ಎಂದು ತಿಳಿಯಬಹುದು.

ಒಂದು ಶ್ರೀಮಂತಿಕೆ, ಎರಡು ಅಧಿಕಾರ, ಮೂರು ಕೀರ್ತಿ, ನಾಲ್ಕು ಸೌಂದರ್ಯ, ಐದು ವಿವೇಕ, ಆರು ತ್ಯಾಗ ಇವುಗಳನ್ನು ಏಕಕಾಲದಲ್ಲಿ ಅಮಿತವಾದ ಪ್ರಮಾಣದಲ್ಲಿ ಪಡೆದಿರುವವನು ದೇವೋತ್ತಮ ಪರಮಪುರುಷ. ಬಹು ದೊಡ್ಡ ವೇದ ಪಾರಂಗತರಾದ ಪರಶರ ಮುನಿಯ ದೇವೋತ್ತಮನ ಆರು ಶ್ರೀಮಂತಿಕೆಗಳನ್ನು ವರ್ಣಿಸಿದ್ದಾರೆ.

ಜಗತ್ತಿನಲ್ಲಿ ಬಹು ಶ್ರೀಮಂತರು, ಬಹು ಅಧಿಕಾರ ಉಳ್ಳವರು, ಬಹು ಕೀರ್ತಿವಂತರು, ಬಹು ಸುಂದರರು, ಬಹು ವಿದ್ವಾಂಸರು, ಭೌತಿಕ ಸ್ವತ್ತುಗಳಿಗೆ ಆಸೆ ಪಡದ ಸನ್ಯಾಸಿಗಳು ಬಹುಮಂದಿ ಇದ್ದಾರೆ. ಆದರೆ ಏಕಕಾಲದಲ್ಲಿ ಮತ್ತು ಮಿತಿ ಇಲ್ಲದ ಪ್ರಮಾಣದಲ್ಲಿ ಮನುಷ್ಯನ ಚರಿತ್ರೆಯಲ್ಲಿ ಕೃಷ್ಣನಂತೆ ಶ್ರೀಮಂತನು, ಅಧಿಕಾರ ಉಳ್ಳವನು, ಕೀರ್ತಿಶಾಲಿಯು, ಸುಂದರನು, ವಿವೇಕಿಯು ಮತ್ತು ನಿರ್ಲಿಪ್ತನು ಆದ ಒಬ್ಬ ವ್ಯಕ್ತಿಯನ್ನು ಕಾಣಲಾರೆವು.

ದೇವೋತ್ತಮ ಪರಮ ಪುರುಷನಾದ ಕೃಷ್ಣನು ಚಾರಿತ್ರಿಕ ವ್ಯಕ್ತಿ. ಈ ಜಗತ್ತಿನಲ್ಲಿ ಐದು ಸಾವಿರ ವರ್ಷಗಳ ಹಿಂದೆ ಕಾಣಿಸಿಕೊಂಡವನು. ಅವನು ಭೂಮಿಯ ಮೇಲೆ 125 ವರ್ಷಗಳ ಕಾಲ ಇದ್ದನು ಮತ್ತು ಮನುಷ್ಯನಂತೆ ನಡೆದುಕೊಂಡನು. ಆದರೆ ಅವನ ಚಟುವಟಿಕೆಗಳು ಅಸದೃಶ್ಯವಾದವು. ಅವನು ಕಾಣಿಸಿಕೊಂಡ ಕ್ಷಣದಿಂದ ನಿರ್ಗಮಿಸಿದ ಕ್ಷಣದವರೆಗೂ ಅವನ ಯಾವ ಚಟುವಟಿಕೆಗೂ ಜಗತ್ತಿನ ಚರಿತ್ರೆಯಲ್ಲಿ ಸದಸ್ಯವಿಲ್ಲ.

ಆದುದರಿಂದ ದೇವೋತ್ತಮ ಎಂದರೆ ನಮ್ಮ ಅರ್ಥವೇನು ಎಂದು ತಿಳಿದ ಯಾರೇ ಆಗಲಿ ಕೃಷ್ಣನು ದೇವೋತ್ತಮ ಪರಮ ಪುರುಷ ಎಂದು ಒಪ್ಪಿಕೊಳ್ಳುತ್ತಾರೆ.

ದೇವರನ್ನು ಕುರಿತು ಬೇರೆ ಬೇರೆ ರೀತಿಗಳಲ್ಲಿ ಮಾತನಾಡುವ, ಬೇರೆ ಬೇರೆ ವರ್ಗದ ಜನರು ಜಗತ್ತಿನಲ್ಲಿ ಇದ್ದಾರೆ. ಆದರೆ ವೈದ್ಯಕ ಸಾಹಿತ್ಯದ ಅಭಿಪ್ರಾಯದಲ್ಲಿ ಮತ್ತು ಶಂಕರ ರಾಮಾನುಜ ಮಧ್ವ ವಿಷ್ಣು ಸ್ವಾಮಿ ಚೈತನ್ಯ ಮಹಾಪ್ರಭು ಮೊದಲಾದ ಆಚಾರ್ಯರು ಮತ್ತು ಗುರು ಶಿಷ್ಯ ಪರಂಪರೆಯಲ್ಲಿ ಅವರ ಎಲ್ಲ ಅನುಯಾಯಿಗಳು ಕೃಷ್ಣನು ದೇವೋತ್ತಮ ಪರಮಪುರುಷ ಎಂದು ಒಮ್ಮತದಿಂದ ಒಪ್ಪಿಕೊಳ್ಳುತ್ತಾರೆ.

ವೈದ್ಯಕ ಸಂಸ್ಕೃತಿಯ ಅನುಯಾಯಿಗಳಾದ ನಮ್ಮ ಮಟ್ಟಿಗೆ ನಾವು ಇಡೀ ವಿಶ್ವದ ವೈದಿಕ ಇತಿಹಾಸವನ್ನು ಒಪ್ಪಿಕೊಳ್ಳುತ್ತೇವೆ. ವಿಶ್ವದಲ್ಲಿ ಬೇರೆ ಬೇರೆ ಲೋಕಗಳಿವೆ ಇವಕ್ಕೆ ಸ್ವರ್ಗ ಲೋಕಗಳು ಎಂದು ಹೆಸರು. ಹೀಗೆಂದರೆ ಉನ್ನತ ಲೋಕಗಳ ವ್ಯವಸ್ಥೆ ಮರ್ತ ಲೋಕ ಅಥವಾ ಮಧ್ಯದಲ್ಲಿರುವ ದುಃಖ ಮತ್ತು ಪಾತಾಳ ಲೋಕ ಭೂಮಿಯ ಆಧುನಿಕ ಇತಿಹಾಸಕಾರರು 5,000 ವರ್ಷಗಳಿಗೆ ಮೊದಲು ನಡೆದ ಚಾರಿತ್ರಿಕ ಘಟನೆಗಳ ಸಾಕ್ಷವನ್ನು ಕೊಡಲಾರರು.

40,000 ವರ್ಷಗಳ ಹಿಂದೆ ಹೋಮೋ ಸೇಪಿಯನ್ನರು ಎಂದರೆ ಯೋಚಿಸುವ ಶಕ್ತಿ ಇದ್ದ ಮನುಷ್ಯರು ಈ ಗ್ರಹದಲ್ಲಿ ಕಾಣಿಸಿಕೊಂಡಿರಲಿಲ್ಲ. ಏಕೆಂದರೆ ವಿಕಾಸವು ಆ ಬಿಂದುವನ್ನು ಮುಟ್ಟಿರಲಿಲ್ಲ ಎಂದು ಮಾನವ ವಿಜ್ಞಾನಿಗಳು ಹೇಳುತ್ತಾರೆ. ಆದರೆ ವೈಯಕ್ತಿಕ ಇತಿಹಾಸಗಳಾದ ಪುರಾಣಗಳು ಮತ್ತು ಮಹಾಭಾರತವೂ ಕೋಟ್ಯಂತರ ವರ್ಷಗಳ ಹಿಂದೆ ನಡೆದ ಮಾನವ ಚರಿತ್ರೆಗಳನ್ನು ಬಿತ್ತರಿಸುತ್ತದೆ.

ಕೃಷ್ಣನು ಸರ್ವಾಕರ್ಷಕನಾದ್ದರಿಂದ ಮನುಷ್ಯನು ತನ್ನ ಎಲ್ಲ ಬಯಕೆಗಳನ್ನು ಅವನಲ್ಲಿ ಕೇಂದ್ರೀಕರಿಸಬೇಕೆಂದು ತಿಳಿದುಕೊಳ್ಳಬೇಕು. ಒಂದು ದೇಹಕ್ಕೆ ಒಬ್ಬ ವ್ಯಕ್ತಿಯು ಯಜಮಾನ. ಆದರೆ ಪ್ರತಿಯೊಬ್ಬರ ಹೃದಯದಲ್ಲಿ ಪರಮಾತ್ಮನಾಗಿ ಇರುವ ಕೃಷ್ಣನು ಪ್ರತಿಯೊಂದು ದೇಹದ ಒಡೆಯ ಹೀಗಿರುವುದರಿಂದ ನಮ್ಮ ಒಲವಿನ ಪ್ರವೃತ್ತಿಗಳನ್ನು ಕೃಷ್ಣ ನಲ್ಲಿ ಮಾತ್ರ ಕೇಂದ್ರೀಕರಿಸಿದರೆ ಕೂಡಲೇ ವಿಶ್ವಪ್ರಿಯ ಏಕತೆ ಮತ್ತು ಮನ ಶಾಂತಿಗಳ ಸಾಕ್ಷಾತ್ಕಾರವಾಗುತ್ತದೆ. ಆದ್ದರಿಂದ ನಾವು ಮಾಡುವ ಪ್ರತಿಯೊಂದು ಕಾರ್ಯಗಳು ಒಳ್ಳೆಯದಾಗಿರಬೇಕು ಆಗ ಮಾತ್ರ ದೇವರು ನಮ್ಮ ಆಂತರ್ಯದಲ್ಲಿ ವಾಸಿಸುವ.

-ಕಾರ್ತಿಕ್‌ ಹಳಿಜೋಳ

ಎಂ.ಎಂ. ವಿದ್ಯಾಲಯ ಶಿರಸಿ

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.