Devotion: ಭಕ್ತಿಯ ಅರ್ಥವಾದರೂ ಏನು?


Team Udayavani, Apr 27, 2024, 10:37 AM IST

3-uv-fusion

ಸರ್ವವೂ ನಿನ್ನದೇ ಸಕಲವು ನಿನ್ನದೇ ಎಂಬ ಸಮರ್ಪಣ ಭಾವಕ್ಕೆ ಭಕ್ತಿಯೆಂಬ ಹೆಸರಿರಬಹುದೇ ಹೌದಲ್ಲ ದೇವರೆಂಬುವ ಆ ಅನಾದಿ ಅಚಿಂತ್ಯ ರೂಪನಿಗೆ ನಮ್ಮ ಸಮರ್ಪಣ ಭಾವವೇ ಭಕ್ತಿಯೆನ್ನಬಹುದೇನೋ, ಭಕ್ತಿಗೆ ಅರ್ಥವಾಗಲಿ ವ್ಯಾಖ್ಯಾನವಾಗಲಿ ಇದೇ ಎಂದು ಹೇಳುವುದು ಅಸಾಧ್ಯವೇ ಸರಿ.

ಒಂದೊಂದು ಮತದಲ್ಲಿ ಒಂದೊಂದು ನಂಬಿಕೆ ಆಚರಣೆ ಎಲ್ಲ ಬೇರಾಗಿ ಹರಿವ ನದಿಯಾದರೂ ಕೊನೆಗೆ ಸೇರುವ ಸಾಗರ ಆ ಭಗವಂತನ ಶರಣಾಗತಿಯೊಂದೆ ಅದಕ್ಕೆ ಬಹುಬಗೆಯ ಪದಗಳಾದರು ಎಲ್ಲವೂ ಸೇರಿಸಿ ಭಕ್ತಿಯೆನ್ನಬಹುದೇನೋ, ಶ್ರೀಮದ್‌ ಭಗವತ್‌ ಪುರಾಣದಲ್ಲಿ, ಪ್ರಹ್ಲಾದನು ತನ್ನ ಗುರುಗಳು ತನಗೆ ಕಲಿಸಿದ ಭಕ್ತಿಯ ಒಂಬತ್ತು ರೂಪಗಳನ್ನು ತನ್ನ ತಂದೆ ಹಿರಣ್ಯ ಕಶ್ಯಪುವಿಗೆ ವಿವರಿಸುತ್ತಾನೆ.

ಹರಕೆಯೆಂಬ ಆಡಂಬರದ ಆಸೆ ತೋರಿ ದೇವರಿಂದ ಏನನ್ನೋ ಪಡೆಯುವ ಆಸೆಗೆ ಭಕ್ತಿಯೆಂಬ ಹೆಸರಿಟ್ಟುಕೊಂಡು ಬಿಟ್ಟಿದ್ದೇವೆ, ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಸದಾ ನಮ್ಮ ಮೋಜು ಮಸ್ತಿಯಲ್ಲಿ ಕಾಣದ ದೇವರ ಭಕ್ತಿ ಸೋತಾಗ ನೊಂದಾಗ ಮಾತ್ರ ನೆನಪಾಗುವಂತಾಗಿದೆ.

ಭಕ್ತಿಯೆಂದರೆ ಏನು ಅಲ್ಪಾಯುಷಿ ಮಾರ್ಕಂಡೇಯ ಶಿವ ಭಕ್ತಿಯಿಂದ ಸಾವನ್ನೇ ಗೆದ್ದು ಚಿರಂಜೀವಿಯಾದನಲ್ಲವೇ ಅದು ಭಕ್ತಿ ತಾನೆ? ಭಕ್ತಿಯೆಂದರೆ ಸಮರ್ಪಣ ಭಾವವೆಂದಿಟ್ಟುಕೊಂಡರೆ ಭಕ್ತನ ಭಾವ ಹೇಗಿರಬೇಕು ಬರಿ ಬಯಸುವ ಇಂದಿನ ಆಸೆಗಿಟ್ಟ ಇನ್ನೊಂದು ಹೆಸರಲ್ಲ ತಾನೆ?

ಭಕ್ತನೆಂದರೆ ಹೇಗಿರುತ್ತಾನೆಂದು ನಮ್ಮಂತೆ ಅಂದು ಕೃಷ್ಣನ ಆತ್ಮೀಯ ಸ್ನೇಹಿತ ಉದ್ದವನೂ ಕೇಳಿದ್ದ ಉದ್ಧವನ ಪ್ರಶ್ನೆಗೆ ಉತ್ತರಿಸುತ್ತಾ ಶ್ರೀಕೃಷ್ಣ ಹೇಳುತ್ತಾನೆ “ಭಕ್ತನಾದವನು ಕೃಪೆಯ ಮೂರ್ತಿಯಾಗಿರುತ್ತಾನೆ. ಆತ ಯಾವ ಪ್ರಾಣಿಯಲ್ಲಿಯೂ ವೈರಭಾವವನ್ನು ಹೊಂದಿರುವುದಿಲ್ಲ. ಸತ್ಯವೇ ಅವನ ಜೀವಾಳವಾಗಿರುತ್ತದೆ. ಬಹುದೊಡ್ಡ ದುಃಖವನ್ನೂ ಆತ ಸಂತಸದಿಂದಲೇ ಸ್ವೀಕರಿಸುತ್ತಾನೆ. ಯಾವ ವಿಧದ ಪಾಪವಾಸನೆಯೂ ಅವನ ಮನಸ್ಸಿನಲ್ಲಿ ಹುಟ್ಟುವುದಿಲ್ಲ.

ಅಲ್ಲದೆ ಆತ ಸಮದರ್ಷಿಯಾಗಿದ್ದು, ಎಲ್ಲರಿಗೂ ಒಳಿತನ್ನೇ ಮಾಡುವವನಾಗಿರುತ್ತಾನೆ. ಆತನ ಬುದ್ಧಿಯನ್ನು ಕಾಮನೆಗಳು ನಿಯಂತ್ರಿಸುವುದಿಲ್ಲ. ಸಂಯಮಿಯೂ ಮೃದುಸ್ವಭಾವದವನೂ, ಆಗಿರುತ್ತಾನೆ. ಸಂಗ್ರಹಪರಿಗ್ರಹಗಳಿಂದ ದೂರವಿರುತ್ತಾನೆ. ಮಿತವಾದ ಆಹಾರ ಸೇವನೆ ಮಾಡುವವನೂ ಶಾಂತಮನದವನೂ ಸ್ಥಿರವಾದ ಬುದ್ಧಿಯವನೂ ಆಗಿರುತ್ತಾನೆ.

“ಎಂದು ಆದರೆ ಇಂದು ಭಕ್ತಿಯ ಹಾಗಿಲ್ಲ, ಭಕ್ತ ಸಹ ಹಾಗಿಲ್ಲ ಇವತ್ತು ನನಗೆ ಆ ಕೆಲಸ ಕೊಡಿಸು ದೇವರೆ ನಿನಗೆ ನಾನು ಬಂಗಾರ ಮಾಡಿಸುತ್ತೇನೆ ಬೆಳ್ಳಿಯ ಕಿರೀಟ ತೊಡಿಸುತ್ತೇನೆ ಅನ್ನುವ ಮಟ್ಟಕ್ಕೆ ದೇವರಿಗೆ ಆಸೆ ಹುಟ್ಟಿಸಿ ಕೆಲಸ ಮಾಡಿಸಿಕೊಳ್ಳುವ ದೇವರನ್ನೇ ಭ್ರಷ್ಟಾಚಾರಕ್ಕೆಳೆಯುವ ಹುಚ್ಚುತನಕ್ಕಿಳಿದಿದ್ದೇವೆ.

ಇಷ್ಟೆಲ್ಲ ದೇವರಿಗೆ ಕೊಟ್ಟು ಪಡೆಯುವ ವ್ಯಾವಹಾರಿಕ ಭಕ್ತಿಗಿಳಿದಿರೋ ನಾವು ಯಾಕೆ ಯೋಚಿಸುತ್ತಿಲ್ಲ ನಮ್ಮ ಹೆತ್ತಮ್ಮ ಎಂದಾದರು ನಾವೇನೋ ಕೊಡುವ ಆಸೆಯಲ್ಲೋ ಏನನ್ನೋ ಪಡೆಯುವ ಆಸೆಯಲ್ಲೋ ನಮ್ಮನ್ನ ಸಾಕಿ ಸಲಹಿದಳೇ? ನೋವಲ್ಲಿ ಸಾಂತ್ವನ ನೀಡಿದಳೆ? ಇಲ್ಲವೆಂದ ಮೇಲೆ ದೇವರು ಯಾಕೆ ನಮ್ಮ ಕಾಗದದ ನೋಟಿಗೂ ಯಾವುದೋ ಬಣ್ಣದ ಧಾತುವಿನ ಮೋಹಕ್ಕೋ ನಮ್ಮ ಆಸೆ ಪೂರೈಸುತ್ತಾನೆ ಎಂದು ಕೊಳ್ಳುತ್ತೇವೆ?

ಇನ್ನು ಸಮರ್ಪಣೆ, ಸಮರ್ಪಣೆಯ ಅರ್ಥ ನಮಗೆಲ್ಲಿದೆ ನಾವೇ ನಮಗೆ ಒಂದಿಷ್ಟು ಕಲ್ಪನೆಯ ಗೆರೆ ಹಾಕಿ ನಮ್ಮದೇ ಒಂದು ಕಾಲ್ಪನಿಕ ಪ್ರಪಂಚದೊಳಗೆ ಉಳಿದು ಬಿಟ್ಟಿದ್ದೇವೆ, ನಮಗೆ ಈಗ ಭಕ್ತಿ ಅರ್ಥವಾಗಬೇಕಾದರೆ ಬಸವಣ್ಣ ಕನಕದಾಸರಂತಹ ಮಹಾನ್‌ ದಾಸರ, ಶರಣರ ಪರಿಚಯವಾಗಬೇಕಿದೆ ಓದು ನಮ್ಮ ಹವ್ಯಾಸವಾಗಬೇಕಿದೆ.

-ದೇವಿಪ್ರಸಾದ ಶೆಟ್ಟಿ

ಡಾ| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ

ಟಾಪ್ ನ್ಯೂಸ್

Siddanna 2

CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ

apple

Apple New Shop; ಬೆಂಗಳೂರು ಸೇರಿ 4 ನಗರದಲ್ಲಿ ಮಳಿಗೆ: ಆ್ಯಪಲ್‌ ಘೋಷಣೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Supreme Court

Supreme Court;ಒಳ ಮೀಸಲಾತಿ ಸರಿ, ಆ. 1ರ ತೀರ್ಪು ಪುನರ್‌ಪರಿಶೀಲನೆ ಮಾಡುವುದಿಲ್ಲ

Exam

Journalism; ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಅರ್ಜಿ ಅಹ್ವಾನ

muniratna

Munirathna ಡಿಎನ್‌ಎ, ಜಾಮೀನು ಅರ್ಜಿ ವಿಚಾರಣೆ ಅ. 8ಕ್ಕೆ

supreme-Court

Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಮೃಗಗಳ ಜಗತ್ತು

14-uv-fusion

Women: ಕ್ಷಮಯಾ ಧರಿತ್ರಿ

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Siddanna 2

CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ

apple

Apple New Shop; ಬೆಂಗಳೂರು ಸೇರಿ 4 ನಗರದಲ್ಲಿ ಮಳಿಗೆ: ಆ್ಯಪಲ್‌ ಘೋಷಣೆ

mob

Social Media: ಇನ್‌ಸ್ಟಾದಂತೆ ವಾಟ್ಸ್‌ಆ್ಯಪ್‌ನಲ್ಲಿ ಇನ್ನು ಲೈಕ್‌, ಮೆನ್ಷನ್‌ ಆಯ್ಕೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Supreme Court

Supreme Court;ಒಳ ಮೀಸಲಾತಿ ಸರಿ, ಆ. 1ರ ತೀರ್ಪು ಪುನರ್‌ಪರಿಶೀಲನೆ ಮಾಡುವುದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.