Conversation: ವೃದ್ಧಾಪ್ಯರ ಸಂವಾದ ಕೇಳಿದಾಗ


Team Udayavani, Jun 1, 2024, 1:45 PM IST

5-uv-fusion

ಹೀಗೆ ಒಂದು ದಿನ ಗೆಳೆಯರಿಗೆ ಕಾಯುತ್ತಾ ದೇವಸ್ಥಾನದಲ್ಲಿ ಕುಳಿತಿರುವಾಗ, ಪಕ್ಕದಲ್ಲಿಯೇ ಒಂದು ವೃದ್ಧಾಪ್ಯರ ಗುಂಪೊಂದು ಕುಳಿತಿತ್ತು. ಅವರನ್ನು ನೋಡಿದಾಗ ಅದೆಷ್ಟೋ ಅನುಭವಗಳನ್ನು ತುಂಬಿಕೊಂಡು ಕುಳಿತಿರಬಹುದು ಎಂದು ಆಸಕ್ತಿಯಿಂದ ಸುಮ್ಮನೆ ಅವರ ಸಂವಾದ ಆಲಿಸುತ್ತಾ ಕುಳಿತೆ.

ಜೀವನದಲ್ಲಿನ ಅನುಭವಗಳು ಹಾಗೂ ಅವರ ಕುಟುಂಬದ ಮೇಲಿನ ಕಾಳಜಿಯೇ ನನ್ನ ಗಮನ ಸೆಳೆಯಿತು. ವೃದ್ಧಾಪ್ಯರು ಇನ್ನೇನೂ ಕೊನೆ ಉಸಿರೆಳೆಯುವ ಸಂದರ್ಭದಲ್ಲಿಯೂ ಸಹ ಜೀವನದ ಮೇಲಿನ ಅವರ ಆಸಕ್ತಿ ಮತ್ತು ಹುಮ್ಮಸ್ಸು ನೋಡಿ ನನಗೆ ನಾಚಿಕೆಯಾಯಿತು. ಜೀವನವಿಡೀ ದುಡಿದು ದಣಿದ ದೇಹಗಳವು ಆದರೂ ಸಹ ಮತ್ತಷ್ಟು ತಮ್ಮ ಕುಟುಂಬದವರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಆ ಕಾಳಜಿಗೆ ಸರಿಸಾಟಿಯಾದ ಬೇರೊಂದು ಕಾಳಜಿ ಇಲ್ಲ ಅಂದೆನಿಸಿತು.

ಅವರ ಸಂವಾದದಲ್ಲಿ ಜೀವನದುದ್ದಕ್ಕೂ ಮಾಡಿದ ಸಾಧನೆ ಕುರಿತಾದ ಅಹಂಕಾರವಾಗಲಿ ಉತ್ಪ್ರೇಕ್ಷೆಯಾಗಲಿ ಕಾಣಲಿಲ್ಲ. ಕೇವಲ ನಿಷ್ಕಲ್ಮಶವಾದ ಕುಟುಂಬದ ಮೇಲಿನ ಕಾಳಜಿ ಮತ್ತು ಮತ್ತಷ್ಟು ಕೊಡುಗೆ ನೀಡಬೇಕೆಂಬ ಹಂಬಲ ಕಾಣುತಿತ್ತು. ಹಾಗೂ ಅವರ ಮಕ್ಕಳು ಮಾಡಿದ ಸಾಧನೆಯ ವರ್ಣನೆ ಕೇಳಿ ಬರುತ್ತಿತ್ತು.

ಈ ಸಂವಾದ ಕೇಳಿದಾಗ ನಮ್ಮ ಪೋಷಕರು ನಮಗಾಗಿ ಜೀವನವಿಡೀ ದುಡಿದು, ತಮ್ಮ ಸುಖ ಸಂತೋಷವನ್ನು ನಮ್ಮ ಖುಷಿಯಲ್ಲಿ ಕಾಣುವ ಪ್ರೇಮ ಕಾಳಜಿ ನನ್ನ ಗಮನ ಸೆಳೆಯಿತು. ಇದಕ್ಕೆ ಪ್ರತಿಯಾಗಿ ಅವರಿಗೆ ನಾವು ಕೊಡಲು ಸಾಧ್ಯ ಎಂದು ಚಿಂತೆಯೂ ಕಾಡತೊಡಗಿತು.

ನಮ್ಮ ಚಿಕ್ಕ ವಯಸ್ಸಿನಲ್ಲಿ ಹಿರಿಯರೇ ನಮಗೆ ಪ್ರಪಂಚ ಆದರೆ ಬೆಳೆಯುತ್ತಾ ದೊಡ್ಡವರಾದಂತೆ, ಅವರ ಮುಗ್ಧ ಮನಸನ್ನು ಕಡೆಗಣಿಸಿ ಬಿಡುತ್ತೇವೆ ಎಂಬುದು ಬೇಸರದ ಸಂಗತಿ. ಹಿರಿಯರ ಮನಸ್ಸಿನ ಭಾವನೆಯನ್ನು ಸಹ ಅರಿತುಕೊಳ್ಳದೇ ವರ್ತಿಸತೊಡಗುತ್ತೇವೆ.

ಆಧುನಿಕ ಪ್ರಪಂಚದಲ್ಲಿ ಈ ಸನ್ನಿವೇಶವನ್ನು ಅನೇಕ ರೀತಿಯ ಜನರಲ್ಲಿ ಕಾಣುತ್ತೇವೆ. ಕೆಲವು ಜನರು ವಯಸ್ಸಾದವರನ್ನು ಆಶ್ರಮಗಳಲ್ಲಿ ಬಿಟ್ಟು ಹೋಗುವುದು ಮತ್ತು ಮನೆಯಿಂದ ಹೊರಹಾಕುವುದನ್ನು ಕಾಣುತ್ತೇವೆ. ಇದು ಅದೆಷ್ಟರ ಮಟ್ಟಿಗೆ ಯೋಗ್ಯ ಎಂದು ಮನಗಾನುವ ಸನ್ನಿವೇಶ ಸೃಷ್ಟಿಯಾಗಿದೆ.

ನಮ್ಮ ಹಿರಿಯರು ತಮ್ಮ ಜೀವನವಿಡೀ ಕುಟುಂಬದವರ ಶಾಂತಿ ಮತ್ತು ಸುಖಕರ ಜೀವನ ನಡೆಸಲು ದುಡಿದರೇ ಹೊರತು ತಮ್ಮ ಸ್ವಾರ್ಥಕ್ಕಾಗಿ ಅಲ್ಲ ಎಂದು ಆ ವೃದ್ಧಾಪ್ಯರ ಸಂವಾದ ಕೇಳಿದಾಗ, ನಾವು ಕೂಡ ಮುಂದಿನ ದಿನಗಳಲ್ಲಿ ವೃದ್ಧಾಪ್ಯ ಹಂತವನ್ನು ನಾವು ತಲುಪಿದಾಗ ಅವರ ಮಹತ್ವ ಅರಿಯಬಹುದು ಎಂದು ನನ್ನ ಮನಕೆ ಕನವರಿಕೆಯಾಯಿತು. ಇದರಿಂದ ಜೀವನವಿಡೀ ನಮಗಾಗಿ ನಮ್ಮ ಏಳಿಗೆಗಾಗಿ ಶ್ರಮಿಸಿದ ನಮ್ಮ ಹಿರಿಯರಿಗೆ ಒಂದಿಷ್ಟು ಕಾಳಜಿ ವಹಿಸುವುದು ಅಗತ್ಯ ಎಂದೆನಿಸಿತು.

ಮಡು ಮೂಲಿಮನಿ,

ಧಾರವಾಡ ಕೆಯುಡಿ

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.