UV Fusion: ಹೀಗ್ಯಾಕೆ!


Team Udayavani, Jan 15, 2024, 12:22 PM IST

5-uv-fusion

ಕಾಲವು ಕಳೆಯುವುದು ಸೂರ್ಯನ ಕಿರಣ ತಾಗಿರುವ ಮಂಜು ಕರಗಿದಂತೆ.  ಹಗಲಿರುಳಿದ್ದಂತೆ, ಬಾಳಲ್ಲಿ ನೋವು ನಲಿವಿದೆ, ನಿರಂತರ ಏಳು ಬೀಳಿನ ಹೋರಾಟವಿದೆ. ಇಲ್ಲಿ ಗೆಲುವು ಸೋಲಿನ ಜತೆಯಲ್ಲಿ ನಿರಂತರ ಕಾದಾಟ ಇದ್ದೇ ಇರುತ್ತದೆ.

ಬದುಕಿನ ಪುಟಗಳಲ್ಲಿ ಎಲ್ಲವೂ ಅಂದುಕೊಂಡಂತೆ ಪದಗಳ ಜೋಡಣೆ, ವಾಕ್ಯದ ರಚನೆ ಇರದು. ಇಲ್ಲಿ ನಗುವಿದೆ, ಅಳುವಿದೆ, ಜೀವನದಲ್ಲಿ ಗತಿಸುವ ಪ್ರತಿ ಸನ್ನಿವೇಶಗಳು ಅನುಭವ ಎನ್ನುವ ಆಗಸದಂಗಳದಲ್ಲಿ ಹಾರಾಡುವಂತೆ ಮಾಡುತ್ತವೆ. ಅಲ್ಲಿ ಹಾರಾಡುವ ಚಿಲಿಪಿಲಿಗುಟ್ಟುವ ಅನುಭವಗಳು ಸಂತಸದ ತೋರಣವಾಗಿರಬಹುದು, ಇಲ್ಲವೇ ದುಃಖದ ಹೊರಣವು ಆಗಿರಬಹುದು.

ಕಾಲವೇ ಪ್ರಶ್ನೆ ಕಾಲವೇ ಉತ್ತರ. ಕಾಲವೇ ಎಲ್ಲದರ ಮೂಲ. ಸುಖ ದುಃಖದ ಪ್ರಶ್ನೆಯ ಸರಣಿಗೆ ಕಾಲವೇ ಉತ್ತರಿಸುತ್ತದೆ. ಹುಟ್ಟು ಸಾವಿನ ನಡುವಿನ ಬದುಕ ಅದೆಷ್ಟೋ ನೀತಿ ನಿಯಮಗಳನ್ನು ಕಾಲದೊಂದಿಗೆ ಕಲಿತುಕೊಳ್ಳುತ್ತೇವೆ. ಇಲ್ಲಿ ಕಲಿತ ವಿಚಾರ, ಸಮಾಚಾರ, ಆಚಾರಗಳು ನಮ್ಮಯ ಬಾಳಿನ ಸಂಚಾರದಲ್ಲಿ ಸರಿ ತಪ್ಪುಗಳ ಬೇಟೆಗೆ ಸಹಕಾರಿಯಾಗುತ್ತವೆ.

ಆದದ್ದು ಆಗಿ ಹೋಗಲಿ. ಮುಂದೆ ಆಗಬೇಕಿರುವ ಬಗ್ಗೆ ಚಿಂತೆಯಿರಲಿ. ಆಗಿ ಹೋದ ಯೋಚನೆಯಲ್ಲಿಯೇ ದಿನಗಳನ್ನು ಕಳೆದು ನಿನ್ನ ಸಮಯವನ್ನು ಕೈ ಚೆಲ್ಲುವ ಬದಲು ಇಂದಿನ ದಿನಗಳಲ್ಲಿ ಏನಾಗಬೇಕೆಂದು ತಿಳಿ ಮೊದಲು. ನೆನೆದಷ್ಟು ನೆನಪಿನ ಆಳವನ್ನು ತೋಡುತ್ತಾ ಹೋಗುತ್ತದೆ.ಅದಕ್ಕೆ ಕೊನೆಯೆಂಬುದು ಇರದು. ನೆನೆದಷ್ಟು ನೆನಪುಗಳ ವ್ಯಾಪ್ತಿ ಹೆಚ್ಚಾಗಿ ನಮಗೆ ಮುಂದಿನ ದಿನಗಳಲ್ಲಿ ಏನನ್ನು ಮಾಡಬೇಕೆಂಬುದಾಗಿ ಅರಿಯಲು, ತಿಳಿಯಲು ತೊಡಕನ್ನು ಉಂಟುಮಾಡಬಹುದು. ಗತಿಸಿ ಹೋದ ಘಟನೆಗಳನ್ನು ಅಲ್ಲೇ ಬಿಟ್ಟು ಮುಂದುವರೆಯಿರಿ. ಅದರ  ಸುತ್ತಲೂ ಸುಮ್ಮನೆ ತಿರುಗುವುದು ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ.

ಯೋಚನೆಗಳು ಬೆನ್ನು ಬಿಡದೆ ಕಾಡಿದಾಗ ಅದರಿಂದ ಆಗುವ  ಸಂಕಟಗಳು ಹೆಚ್ಚು. ಅದರಿಂದ ಹೊರಬರಲೇಬೇಕು ಒಂದೊಮ್ಮೆ ಅದು ಅಸಾಧ್ಯವೆನಿಸಿದರೆ ಮುಂದಿನ ಒಳ್ಳೆಯ ದಿನಗಳನ್ನು ನಾವೇ ಕೈ  ಚೆಲ್ಲಿಕೊಂಡಂತೆ. ಮನ ಪರಿವರ್ತನೆ ಯಾತ್ರೆ ಮನದಲ್ಲಿ ಶುರುವಾದರೆ ಮಾತ್ರ ಎಲ್ಲವೂ ಸಾಧ್ಯ. ಇಲ್ಲಿ ಯಾವುದು ಅಸಾಧ್ಯವಲ್ಲ. ತಿಳಿದು ನೋಡು, ಕಹಿ ನೆನಪ ತುಳಿದು ನೋಡು.

-ಗಿರೀಶ್‌ ಪಿ.ಎಂ.

ವಿವಿ ಮಂಗಳೂರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.