Women: ಹೆಣ್ಣು ಹೊರೆಯಲ್ಲ ಶಕ್ತಿ


Team Udayavani, Oct 12, 2024, 11:47 AM IST

4-uv-fusion

ಹೆಣ್ಣು ಶಿಶು ಹತ್ಯೆ ದೇಶಾದ್ಯಂತ ಹೆಚ್ಚಾಗುತ್ತಿದೆ. ಇತ್ತೀಚಿಗೆ ಅಲ್ಟ್ರಾ ಸೌಂಡ್‌ ಡಯಾಗ್ನೋಸ್ಟಿಕ್‌ ವಿಧಾನಗಳಂಥಹ ನವೀನ ತಾಂತ್ರಿಕತೆಯ ಬೆಳವಣಿಗೆಯಿಂದಾಗಿ ತಾಯಿ ಗರ್ಭದಲ್ಲಿ ಭ್ರೂಣಾವಸ್ಥೆಯಲ್ಲಿರುವಾಗಲೇ ಲಿಂಗ ಪತ್ತೆ ಹಚ್ಚಬಹುದಾಗಿರುವುದರಿಂದ ಹೆಣ್ಣು ಭ್ರೂಣ ಹತ್ಯೆಗೆ ರಾಜ ಮಾರ್ಗ ತೆರೆದಂತಾಗಿದೆ. ಭ್ರೂಣ ಪತ್ತೆ ಹಚ್ಚುವುದು ಭಾರತದಲ್ಲಿ ಕಾನೂನು ಬಾಹಿರವಾಗಿದ್ದರೂ, ಕಾನೂನಿನ ಕಣ್ಣಿಗೆ ಮಣ್ಣೆರೆಚುವ ಕೆಲಸಗಳು ಅಲ್ಲಲ್ಲಿ ನಡೆಯುತ್ತಿವೆ.

ಹೆಣ್ಣು ಭ್ರೂಣ ಹತ್ಯೆಯಂತಹ ಕರಾಳ ಕೃತ್ಯಗಳಿಗೆ ನಮ್ಮ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯೇ ಕಾರಣ. ಗಂಡು ಇಳಿವಯಸ್ಸಿನಲ್ಲಿ ಊರುಗೋಲಾಗುತ್ತಾನೆ, ಹೆಣ್ಣಾದರೆ ಮದುವೆಯಾಗಿ ಬೇರೆ ಮನೆಗೆ ಹೋಗುವವಳು ಎಂದು ಬಲವಾಗಿ ನಂಬುವವವರು ಹೆಣ್ಣೆಂದರೆ ಹೀಗಳೆಯುತ್ತಾರೆ.

ಇದಕ್ಕಿಂತಲೂ ದುರಾದೃಷ್ಟದ ಸಂಗತಿಯೆಂದರೆ, “ಹೆಣ್ಣೆಂದರೆ ಸೆರಗಿನಲ್ಲಿ ಕೆಂಡವನ್ನು ಕಟ್ಟಿಕೊಂಡಂತೆ’ ಎಂದು ನಂಬುವ ದೊಡ್ಡ ವರ್ಗವೇ ನಮ್ಮಲ್ಲಿದೆ. ಪ್ರತಿದಿನ ಮಾಧ್ಯಮಗಳಲ್ಲಿ ಕಂಡುಬರುವ ಹೆಣ್ಣಿನ ಮೇಲೆ ಅತ್ಯಾಚಾರ, ಕೊಲೆ, ಅವಮಾನದಂತಹ ಘಟನೆಗಳ ವರದಿಗಳೂ ಈ ಮನಃಸ್ಥಿತಿಗೆ ಕಾರಣವಾಗಿವೆ.

ಹೀಗಾಗಿ ಜನರಿಗೆ ಶಿಕ್ಷಣ ದೊರೆತು ತಿಳುವಳಿಕೆ ಹೆಚ್ಚಿದರೂ ಅದೆಷ್ಟೋ ದಂಪತಿ ಹೆಣ್ಣುಮಗುವನ್ನು ಬಯಸುವುದಿರಲಿ, ಮಗು ಹೆಣ್ಣು ಎಂದು ತಿಳಿದ ಕೂಡಲೇ ಭ್ರೂಣಹತ್ಯೆ ಮಾಡಿಸುವಂತಹ ನೀಚ ಕೃತ್ಯಕ್ಕೆ ಕೈಹಾಕುತ್ತಾರೆ.

21ನೇ ಶತಮಾನದ ನಾಲ್ಕನೇ ಒಂದು ಭಾಗ ಮುಗಿಯುತ್ತಾ ಬಂದರೂ ನಮ್ಮ ಜನಸಂಖ್ಯೆಯಲ್ಲಿ, ಹೆಣ್ಣು-ಗಂಡಿನ ಅನುಪಾತ ದಲ್ಲಿ ದೊಡ್ಡ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಹೆಣ್ಣು ಶಿಶು ಹತ್ಯೆಗಿಂತಲೂ ಹೆಣ್ಣು ಭ್ರೂಣ ಹತ್ಯೆಯ ಪರಿಣಾಮವಾಗಿ 1991 ಮತ್ತು 2001ರ ನಡುವಿನ ಅವಧಿಯಲ್ಲಿ ಆರು ವರ್ಷ ವಯೋಮಾನದ ಹೆಣ್ಣು ಗಂಡಿನ ಅನುಪಾತ ದಿನದಿಂದ ದಿನಕ್ಕೆ ದಾರುಣಾವಸ್ಥೆಗೆ ತಲುಪುತ್ತಿದೆ.

ಲಿಂಗ ತಾರತಮ್ಯದ ಧೋರಣೆಯನ್ನು ಅನುಸರಿಸಿಕೊಂಡು ಬರುತ್ತಿರುವುದರ ಪರಿಣಾಮವಾಗಿಯೇ ಭಾರತದ ಜನಸಂಖ್ಯೆಯಲ್ಲಿ 50 ಮಿಲಿಯನ್ನಷ್ಟು ಹುಡುಗಿಯರು ಮತ್ತು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಯುನಿಸೆಫ್‌ ವರದಿ ಮಾಡಿದೆ.

ಭಾರತದಲ್ಲಿ ಪ್ರತೀ ವರ್ಷ ಹುಟ್ಟುವ 12 ಮಿಲಿಯನ್‌ ಬಾಲಕಿಯರಲ್ಲಿ ಸುಮಾರು ಒಂದೂವರೆ ಮಿಲಿಯನ್‌ಗಿಂತಲೂ ಹೆಚ್ಚು ಬಾಲಕಿಯರು ಒಂದು ವರ್ಷದ ಒಳಗೆ ಅಸುನೀಗುತ್ತಿದ್ದಾರೆ. ಅಂದರೆ ಶೇ. 12.2ರಷ್ಟು ಹೆಣ್ಣು ಮಕ್ಕಳು ತಮ್ಮ ಮೊದಲನೇ ಜನ್ಮದಿನೋ ತ್ಸವವನ್ನು ಆಚರಿಸುವ ಮುಂಚೆಯೇ ಮಣ್ಣು ಸೇರಿರುತ್ತಾರೆ. ಕೇವಲ 9 ಮಿಲಿಯನ್‌ ಹೆಣ್ಣು ಮಕ್ಕಳು ಮಾತ್ರ ತಮ್ಮ 15ನೇ ಜನ್ಮ ದಿನೋತ್ಸವವನ್ನು ಆಚರಿಸಿಕೊಳ್ಳುವಷ್ಟು ಸುದೈವಿಗಳಾಗಿದ್ದಾರೆ.

ಹೆಣ್ಣು ಭ್ರೂಣ ಹತ್ಯೆಗೆ ನೇರ ಮತ್ತು ಮುಖ್ಯ ಕಾರಣವೆಂದರೆ, ಹೆಣ್ಣು ಮಗುವನ್ನು ಕುಟುಂಬದಲ್ಲಿ ಒಂದು ಹೊರೆಯೆಂದೇ ಪರಿಗಣಿಸುತ್ತಿರುವುದು. “ಹೆಣ್ಣು ಸಂಸಾರದ ಕಣ್ಣು’ ಎಂಬ ಮಾತನ್ನು ಅರ್ಥಮಾಡಿಕೊಂಡವರು ಕಡಿಮೆ. ವರದಕ್ಷಿಣೆ, ಕುಟುಂಬದ ಮರ್ಯಾದೆ, ಅವಳನ್ನು ಮದುವೆ ಮಾಡಿಕೊಡುವ ದೊಡ್ಡ ತಾಪತ್ರಯ ಮುಂತಾದ ಸಂಗತಿಗಳು ಕುಟುಂಬದ ಹಿರಿಯರನ್ನು ಸದಾ ಕಾಡುತ್ತವೆ.

ಒಟ್ಟಿನಲ್ಲಿ ಹೆಣ್ಣು ಮಗುವೇ ಬೇಡ ಎಂಬ ತೀರ್ಮಾನಕ್ಕೆ ಬರುವಂತೆ ಮಾಡುತ್ತಿದೆ. ಕುಟುಂಬದಲ್ಲಿ ಒಂದು ಗಂಡು ಮಗು ಜನಿಸಿದರೆ ಅದು ಸುದೈವ ಎಂದೇ ಪರಿಗಣಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಹೆಣ್ಣು ಮಗುವಿನ ಹುಟ್ಟು ದುರ್ದೈವದ ಸಂಕೇತವೆನಿಸುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಸರಕಾರ ಯಾವುದೇ ಯೋಜನೆಗಳನ್ನು ತರಲಿ, ಎಷ್ಟೇ ಜಾಗೃತಿ ಮೂಡಿಸಲಿ, ಹೆಣ್ಣು ಭ್ರೂಣ ಹತ್ಯೆ ದೇಶದಲ್ಲಿ ಅವ್ಯಾಹತವಾಗಿ ಸಾಗುತ್ತಲೇ ಇದೆ.

ಆಶಾ ಎ.ಆರ್‌.

ಮಂಗಳೂರು ವಿವಿ

ಟಾಪ್ ನ್ಯೂಸ್

Nagpur: Destructive agenda by many in the name of “alternative politics”: Mohan Bhagwat

Nagpur: ʼಪರ್ಯಾಯ ರಾಜಕೀಯʼ ಹೆಸರಲ್ಲಿ ಹಲವರಿಂದ ವಿನಾಶಕಾರಿ ಅಜೆಂಡಾ: ‌ಮೋಹನ್ ಭಾಗವತ್

Dream: ಒಬ್ಬೊಬ್ಬರ ಕನಸು ಒಂದೊಂದು ಬಗೆ…ಹೊಸ ತಲೆಮಾರಿನ ಕನಸು

Dream: ಒಬ್ಬೊಬ್ಬರ ಕನಸು ಒಂದೊಂದು ಬಗೆ…ಹೊಸ ತಲೆಮಾರಿನ ಕನಸು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

UP: 10 ವರ್ಷದ ಮಗಳನ್ನು ಹಗ್ಗದಿಂದ ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ

UP: 10 ವರ್ಷದ ಮಗಳನ್ನು ಹಗ್ಗದಿಂದ ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ

6-uv-fusion

UV Fusion: ಸಹವಾಸ ದೋಷ

Technology: ಇತ್ತೀಚಿನ ದಿನಗಳ ತಂತ್ರಜ್ಞಾನ- ಒಂದು ಪರಿಕಲ್ಪನೆ

Technology: ಇತ್ತೀಚಿನ ದಿನಗಳ ತಂತ್ರಜ್ಞಾನ- ಒಂದು ಪರಿಕಲ್ಪನೆ

ರೈತ ಪರ ಯೋಜನೆಗಳಿಲ್ಲ.. ಸರ್ಕಾರ ನನ್ನ ಗೋಳು ಕೇಳುತ್ತಿಲ್ಲ: ಹರಿಹಾಯ್ದ ಕಾಂಗ್ರೆಸ್ ಶಾಸಕ ಕಾಗೆ

ರೈತ ಪರ ಯೋಜನೆಗಳಿಲ್ಲ.. ಸರ್ಕಾರ ನನ್ನ ಗೋಳು ಕೇಳುತ್ತಿಲ್ಲ: ಹರಿಹಾಯ್ದ ಕಾಂಗ್ರೆಸ್ ಶಾಸಕ ಕಾಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

5-uv-fusion

UV Fusion: ಬೆಳವಣಿಗೆ ಯಾವುದು?

10-fonts

UV Fusion: ಫಾಂಟ್‌ ಎಂದು ಉಪೇಕ್ಷಿಸಬೇಡಿ

15-uv-fusion

UV Fusion: ಮೃಗಗಳ ಜಗತ್ತು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Nagpur: Destructive agenda by many in the name of “alternative politics”: Mohan Bhagwat

Nagpur: ʼಪರ್ಯಾಯ ರಾಜಕೀಯʼ ಹೆಸರಲ್ಲಿ ಹಲವರಿಂದ ವಿನಾಶಕಾರಿ ಅಜೆಂಡಾ: ‌ಮೋಹನ್ ಭಾಗವತ್

15

Wandse: ಬಗ್ವಾಡಿಯ ಮನೆ ಮನೆಗೂ ಶ್ರೀದೇವಿ

Dream: ಒಬ್ಬೊಬ್ಬರ ಕನಸು ಒಂದೊಂದು ಬಗೆ…ಹೊಸ ತಲೆಮಾರಿನ ಕನಸು

Dream: ಒಬ್ಬೊಬ್ಬರ ಕನಸು ಒಂದೊಂದು ಬಗೆ…ಹೊಸ ತಲೆಮಾರಿನ ಕನಸು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

UP: 10 ವರ್ಷದ ಮಗಳನ್ನು ಹಗ್ಗದಿಂದ ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ

UP: 10 ವರ್ಷದ ಮಗಳನ್ನು ಹಗ್ಗದಿಂದ ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.