Kerala: ನೆಟ್ ವರ್ಕ್ ಸಮಸ್ಯೆಗೆ ಬೇಸತ್ತು ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಯುವಕ.!
Team Udayavani, Sep 3, 2023, 2:52 PM IST
ಸಾಂದರ್ಭಿಕ ಚಿತ್ರ
ಕೊಚ್ಚಿ: ನಮ್ಮ ಮೊಬೈಲ್ ನಲ್ಲಿ ನೆಟ್ ವರ್ಕ್ ಸರಿಯಾಗಿ ಸಿಕ್ತಾ ಇಲ್ಲ ಅಂದ್ರೆ ನೆಟ್ ವರ್ಕ್ ಸಿಗುವ ಜಾಗದ ಬಳಿ ನಮ್ಮ ಮೊಬೈಲ್ ಫೋನ್ ತೆಗೆದುಕೊಂಡು ಹೋಗುತ್ತೇವೆ. ಆಗಲೂ ಸರಿಯಾಗಿ ನೆಟ್ ವರ್ಕ್ ಸಿಕ್ತಾ ಇಲ್ಲ ಅಂದರೆ ಸ್ವಿಚ್ಡ್ ಆಫ್ ಮಾಡಿ ಒಂದು ಸಲಿ ಸಿಮ್ ತೆಗೆದು ಹಾಕುತ್ತೇವೆ.
ಆದರೆ ಇಲ್ಲೊಬ್ಬ ವ್ಯಕ್ತಿ ಮೊಬೈಲ್ ನಲ್ಲಿ ನೆಟ್ ವರ್ಕ್ ಸರಿಯಾಗಿ ಸಿಕ್ತಾ ಇಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾನೆ. ಕೇಳಲು ವಿಚಿತ್ರವಾದರೂ ಇಂಥದ್ದೊಂದು ಘಟನೆ ಕೇರಳದಲ್ಲಿ ನಡೆದಿದೆ.
ಕಳೆದ ಕೆಲ ದಿನಗಳಿಂದ ಮೊಬೈಲ್ ನಲ್ಲಿ ಸರಿಯಾಗಿ ನೆಟ್ ವರ್ಕ್ ಸಿಕ್ತಾ ಇಲ್ಲ. ಈ ಕಾರಣದಿಂದ ಫೋನ್ ಬಳಸಲು ಆಗುತ್ತಿಲ್ಲ. ಕರೆ ಮಾಡಲೂ ಕೂಡ ಆಗುತ್ತಿಲ್ಲ. ಇವತ್ತಲ್ಲ, ನಾಳೆ ಸರಿ ಆಗುತ್ತದೆಂದು ಕಾದು ಕೂತಿದ್ದ ಮೈಲಪುಳ ಮೂಲದ ಜೆರಿನ್ (29) ಎನ್ನುವ ಯುವಕ ನೆಟ್ ವರ್ಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾನೆ.
ಈ ಕಾರಣದಿಂದ 100 ಅಡಿ ಎತ್ತರದ ಮೊಬೈಲ್ ಟವರ್ ಗೆ ಹತ್ತಿ, ನೆಟ್ ವರ್ಕ್ ಸಮಸ್ಯೆಯನ್ನು ಹೇಳುತ್ತಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಇದರಿಂದ ಸ್ಥಳೀಯರು ಭೀತಿಯಿಂದ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ.
ಕಂಜಿಕುಜಿ ಪೋಲೀಸರು ಸ್ಥಳಕ್ಕೆ ತಲುಪಿ, ಯುವಕನ ಮನವೊಲಿಸಿ ಕೆಳಗಿಳಿಸಿದ್ದಾರೆ. ಮೊಬೈಲ್ ನಲ್ಲಿ ನೆಟ್ ವರ್ಕ್ ಕಾಣುತ್ತಿದ್ದಂತೆ ಯುವಕ ಕೆಳಗೆ ಇಳಿದಿದ್ದಾನೆ.
ಕಳೆದ ಕೆಲ ದಿನಗಳಿಂದ ಯುವಕನ ಊರಿನಲ್ಲಿ ನೆಟ್ ವರ್ಕ್ ಸಮಸ್ಯೆ ವಿಪರೀತವಗಿದೆ. ಹೆಚ್ಚಿನ ಗ್ರಾಹಕರ ಫೋನ್ಗಳಲ್ಲಿ ಯಾವುದೇ ನೆಟ್ವರ್ಕ್ ಇಲ್ಲದೆ ಇರುವುದರಿಂದ ಜನ ಇತರರೊಂದಿಗೆ ಫೋನ್ ನಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.