![10](https://www.udayavani.com/wp-content/uploads/2024/06/10-20-415x249.jpg)
Video: ಚಲಿಸುತ್ತಿದ್ದ ಶಾಲಾ ವ್ಯಾನ್ ನಿಂದ ಹೊರಗೆ ಬಿದ್ದ ಬಾಲಕಿಯರು… ಚಾಲಕನ ಬಂಧನ
Team Udayavani, Jun 22, 2024, 11:36 AM IST
![Video: ಚಲಿಸುತ್ತಿದ್ದ ಶಾಲಾ ವ್ಯಾನ್ ನಿಂದ ಹೊರಗೆ ಬಿದ್ದ ಬಾಲಕಿಯರು… ಚಾಲಕನ ಬಂಧನ](https://www.udayavani.com/wp-content/uploads/2024/06/van-620x375.jpg)
ಗುಜರಾತ್: ಚಲಿಸುತ್ತಿದ್ದ ಶಾಲಾ ವ್ಯಾನ್ ನಿಂದ ಇಬ್ಬರು ಬಾಲಕಿಯರು ಹೊರಬಿದ್ದು ಗಾಯಗೊಂಡ ಘಟನೆ ಗುಜರಾತ್ ನ ವಡೋದರದಲ್ಲಿ ನಡೆದಿರುವುದಾಗಿ ವರದಿಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಕಳೆದ ಬುಧವಾರ (ಜೂನ್ 19)ದಂದು ನಡೆದಿದ್ದು, ಮಾರುತಿ ಇಕೋ ವಾಹನದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ವೇಳೆ ವಾಹನದ ಹಿಂಬದಿಯ ಬಾಗಿಲು ತೆರೆಯಲ್ಪಟ್ಟು ಇಬ್ಬರು ಬಾಲಕಿಯರು ರಸ್ತೆಗೆ ಬಿದ್ದಿದ್ದಾರೆ ಅದೃಷ್ಟವಶಾತ್ ರಸ್ತೆಯಲ್ಲಿ ಬೇರೆ ಯಾವುದೇ ವಾಹನಗಳು ಇಲ್ಲದ ಪರಿಣಾಮ ಸಂಭವನೀಯ ಅವಘಡ ತಪ್ಪಿದೆ,
ಘಟನೆಯಿಂದ ಓರ್ವ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವಘಡದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಬಂದಿದ್ದ ವಾಹನ ಚಾಲಕ ಮಕ್ಕಳನ್ನು ಕುಳ್ಳಿರಿಸಿ ಹಿಂಬದಿ ಬಾಗಿಲನ್ನು ಸರಿಯಾಗಿ ಹಾಕದ ಪರಿಣಾಮ ಕೆಲವೇ ದೂರ ಪ್ರಯಾಣಿಸುವ ವೇಳೆ ಬಾಗಿಲು ತೆರೆದು ಇಬ್ಬರು ಬಾಲಕಿಯರು ರಸ್ತೆಗೆ ಬಿದ್ದಿದ್ದಾರೆ ಕೂಡಲೇ ಅಲ್ಲಿದ್ದ ಮನೆ ಮಂದಿ ಬಾಲಕಿಯರ ಸಹಾಯಕ್ಕೆ ಧಾವಿಸಿದ್ದಾರೆ, ಬಳಿಕ ವಾಹನ ಚಾಲಕನಿಗೆ ವಾಹನದ ಬಾಗಿಲು ತೆರೆದಿರುವುದು ಗೊತ್ತಾಗಿದೆ.
ವಾಹನ ಚಾಲಕನ ಅಜಾಗರೂಕತೆಗೆ ಸಾರ್ವಜನಿಕರು, ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು ಅಲ್ಲದೆ ಪೋಷಕರು ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.
વડોદરા ની ઘટના!
ચાલુ સ્કૂલ વાન નો દરવાજો અચાનક ખુલતા 2 છોકરીઓ રોડ પર પટકાઈ!#vadodara #schoolvanpic.twitter.com/pBRCA07ies
— My Vadodara (@MyVadodara) June 21, 2024
ಟಾಪ್ ನ್ಯೂಸ್
![10](https://www.udayavani.com/wp-content/uploads/2024/06/10-20-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Ayodhya: ರಾಮಪಥದ ಕಳಪೆ ಕಾಮಗಾರಿ-6 ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಯೋಗಿ](https://www.udayavani.com/wp-content/uploads/2024/06/Leakage-150x100.jpg)
Ayodhya: ರಾಮಪಥದ ಕಳಪೆ ಕಾಮಗಾರಿ-6 ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಯೋಗಿ
![tamilnadu](https://www.udayavani.com/wp-content/uploads/2024/06/tamilnadu-150x83.jpg)
Tamil Nadu: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ… ನಾಲ್ವರು ಮೃತ್ಯು, ನೆರವು ಘೋಷಿಸಿದ ಸಿಎಂ
![Flash Floods: ಸೇನಾ ತರಬೇತಿ ವೇಳೆ ಹಠಾತ್ ಪ್ರವಾಹ.. ಓರ್ವ ಯೋಧ ಹುತಾತ್ಮ, ನಾಲ್ವರು ನಾಪತ್ತೆ](https://www.udayavani.com/wp-content/uploads/2024/06/ladak1-150x99.jpg)
Flash Floods: ಸೇನಾ ಸಮರಾಭ್ಯಾಸದ ವೇಳೆ ಹಠಾತ್ ಪ್ರವಾಹ… ಐವರು ಯೋಧರು ಹುತಾತ್ಮ
![Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ](https://www.udayavani.com/wp-content/uploads/2024/06/dharmapuri-150x84.jpg)
Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ
![NEET Paper Leak case: ಸಿಬಿಐನಿಂದ ಜಾರ್ಖಂಡ್ ಕಾಲೇಜಿನ ಪ್ರಾಂಶುಪಾಲರ ಬಂಧನ](https://www.udayavani.com/wp-content/uploads/2024/06/CBI-3-150x84.jpg)
NEET Paper Leak case: ಸಿಬಿಐನಿಂದ ಜಾರ್ಖಂಡ್ ಕಾಲೇಜಿನ ಪ್ರಾಂಶುಪಾಲರ ಬಂಧನ
MUST WATCH
ಹೊಸ ಸೇರ್ಪಡೆ
![10](https://www.udayavani.com/wp-content/uploads/2024/06/10-20-150x90.jpg)
ಸ್ತನ ಕ್ಯಾನ್ಸರ್ ಕಾಡಿದ ಚಿತ್ರರಂಗದ ಸುಂದರಿಯರಿವರು.. ಕಾಯಿಲೆಯನ್ನೇ ಗೆದ್ದ ದಿಟ್ಟೆಯರು..
![12-thekkatte](https://www.udayavani.com/wp-content/uploads/2024/06/12-thekkatte-150x90.jpg)
ಯಡಾಡಿ ಮತ್ಯಾಡಿ(ಗುಡ್ಡೆಅಂಗಡಿ)ಸರಕಾರಿ ಹಿ.ಪ್ರಾ.ಶಾಲೆ:ನೂತನ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮ
![](https://www.udayavani.com/wp-content/uploads/2024/06/ravi-150x83.jpg)
BJP Protest; ರೈತರಿಗೆ ಬರೆ ಹಾಕುವ ಸರಕಾರದ ನೀತಿ ನಿರ್ಧಾರ ಬದಲಿಸಲಿ: ಎನ್.ರವಿಕುಮಾರ್
![11-uv-fusion](https://www.udayavani.com/wp-content/uploads/2024/06/11-uv-fusion-3-150x90.jpg)
Rajeev Taranath: ಸರೋದ್ ಸ್ವರ ಮಾಂತ್ರಿಕನ ಸ್ವರ್ಗಾರೋಹಣ
![UAE ರಾಸ್ ಅಲ್ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು](https://www.udayavani.com/wp-content/uploads/2024/06/Compe01-150x100.jpg)
UAE ರಾಸ್ ಅಲ್ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.