ಅಧಿಕಾರಿಗಳು ತನ್ನ ಮನವಿ ತಿರಸ್ಕರಿಸಿದರೆಂದು ಕಚೇರಿಯೊಳಗೆ ಉಡ ತಂದು ಬಿಟ್ಟ ವ್ಯಕ್ತಿ…

ತನ್ನ ಮನವಿ ಈಡೇರಿಸದಿದ್ದರೆ ಕಚೇರಿಯೊಳಗೆ ಹಾವುಗಳನ್ನು ಬಿಡುವ ಬೆದರಿಕೆ

Team Udayavani, Jul 3, 2023, 5:06 PM IST

ತನ್ನ ಮನವಿ ತಿರಸ್ಕರಿಸಿದ ಅಧಿಕಾರಿ… ಕೋಪದಿಂದ ಕಚೇರಿ ಒಳಗೆ ಉಡ ಬಿಟ್ಟ ನೊಂದ ವ್ಯಕ್ತಿ

ಮಧ್ಯಪ್ರದೇಶ: ತಾನು ಸಲ್ಲಿಸಿದ ಮನವಿಯನ್ನು ಸರಕಾರಿ ಅಧಿಕಾರಿಯೊಬ್ಬರು ತಿರಸ್ಕರಿಸಿದ್ದಾರೆ ಎಂದು ಸಿಟ್ಟಿಗೆದ್ದ ವ್ಯಕ್ತಿಯೋರ್ವ ಸರಕಾರಿ ಅಧಿಕಾರಿಯ ಕಚೇರಿಯೊಳಗೆ ಉಡವನ್ನು ತಂದು ಬಿಟ್ಟಿರುವ ಪ್ರಸಂಗ ಮಧ್ಯಪ್ರದೇಶದ ಚಂದೇರಿಯಲ್ಲಿ ನಡೆದಿದೆ.

ಏನಿದು ಪ್ರಕರಣ: ಮಧ್ಯ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ತನಗೆ ವಾಸಕ್ಕೆ ಮನೆ ನಿರ್ಮಿಸಲು ಸರಕಾರಿ ಜಾಗ ಮಂಜೂರು ಮಾಡುವಂತೆ ಮುನ್ಸಿಪಲ್ ಅಧಿಕಾರಿಗಳಿಗೆ ಮನವಿಯನ್ನು ಕೊಟ್ಟಿದ್ದಾನೆ ಆದರೆ ಅಧಿಕಾರಿಗಳು ಮನೆ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲು ಕೊಟ್ಟಿದ್ದ ಮನವಿಯನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವ್ಯಕ್ತಿ ವಾಸ ಮಾಡಲು ಜಾಗವನ್ನು ಗುತ್ತಿಗೆ ನೀಡುವಂತೆಯೂ ಮನವಿ ಮಾಡಿಕೊಂಡಿದ್ದಾನೆ ಆದರೆ ಈತನ ಈ ಮನವಿಗೂ ಅಧಿಕಾರಿಗಳು ಬೆಲೆ ಕೊಡಲೇ ಇಲ್ಲ ಇದರಿಂದ ಕಚೇರಿಗೆ ಅಲೆದು ಅಲೆದು ಸುಸ್ತಾಗಿ ತನ್ನ ಮನವಿಗೆ ಯಾವುದೇ ರೀತಿಯಲ್ಲಿ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದು ಬೇಸರಗೊಂಡ ವ್ಯಕ್ತಿ ಅಧಿಕಾರಿಗೆ ಏನಾದರು ತೊಂದರೆ ಕೊಡಬೇಕೆಂದು ಆಲೋಚಿಸಿ ಕಚೇರಿ ಒಳಗೆ ಯಾವುದಾದರೂ ವಿಷಕಾರಿ ಸರಿಸೃಪವನ್ನು ಬೀಡಬೇಕೆಂದು ನಿರ್ಧರಿಸಿದ್ದಾನೆ, ಅಸಲಿಗೆ ಈ ವ್ಯಕ್ತಿ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವ ಪ್ರವೃತ್ತಿಯನ್ನೂ ಮಾಡುತ್ತಿದ್ದ ಎನ್ನಲಾಗಿದೆ.

ಅದರಂತೆ ಕಳೆದ ಶನಿವಾರ ಒಂದು ಉಡವನ್ನು ಚೀಲದೊಳಗೆ ತುಂಬಿಸಿಕೊಂಡು ಬಂದು ಮುನ್ಸಿಪಾಲಿಟಿ ಕಚೇರಿಯ ಅಧಿಕಾರಿಯ ಕಚೇರಿ ಒಳಗೆ ಬಿಡಲು ಬಂದಿದ್ದಾನೆ ಆದರೆ ಈ ವೇಳೆ ಕಚೇರಿಯಲ್ಲಿ ಅಧಿಕಾರಿ ಇರಲಿಲ್ಲ ಇದರಿಂದ ಕುಪಿತಗೊಂಡ ವ್ಯಕ್ತಿ ಇದೆ ಕಟ್ಟಡದಲ್ಲಿದ್ದ ಇನ್ನೋರ್ವ ಅಧಿಕಾರಿಯ ಕಚೇರಿಯೊಳಗೆ ಉಡವನ್ನು ಬಿಟ್ಟಿದ್ದಾನೆ.

ಇತ್ತ ಕಚೇರಿ ಒಳಗೆ ಉಡ ಕಾಣಿಸುತ್ತಿದ್ದಂತೆ ಅಧಿಕಾರಿಗಳು ಗಾಬರಿಗೊಂಡಿದ್ದಾರೆ ಬಳಿಕ ಅಧಿಕಾರಿಗಳು ವ್ಯಕ್ತಿಯ ಬಳಿ ಸಾಕಷ್ಟು ಮನವಿ ಮಾಡಿದ ಬಳಿಕ ಉಡವನ್ನು ಹಿಡಿದು ಅಲ್ಲಿಂದ ತೆರಳಿದ್ದಾನೆ, ವ್ಯಕ್ತಿ ತೆರಳುವ ವೇಳೆ ನನ್ನ ವಾಸಕ್ಕೆ ಜಾಗ ಮಂಜೂರು ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಷಕಾರಿ ಹಾವುಗಳನ್ನು ಬಿಡುವುದಾಗಿ ಹೇಳಿಕೊಂಡಿದ್ದಾನೆ.

ಅಧಿಕಾರಿಗಳು ಹೇಳೋದೇನು:
ಚಂದೇರಿ ಮುನ್ಸಿಪಲ್ ಕಾರ್ಪೊರೇಶನ್‌ನ ಸಿಎಂಒ ಸಂತೋಷ್ ಸೈನಿ, ಈ ಜಮೀನಿನಲ್ಲಿ ತೋಟರಾಮ್‌ಗೆ ವಸತಿ ಮಂಜೂರಾಗಿದ್ದು, ಈಗಾಗಲೇ ಅವರಿಗೆ ಒಂದು ಲಕ್ಷ ರೂಪಾಯಿಗಳನ್ನು ಮನೆ ನಿರ್ಮಾಣಕ್ಕೆ ಒದಗಿಸಲಾಗಿದೆ, ಆದರೆ ಆ ಹಣವನ್ನು ಆತ ಖರ್ಚು ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Cardless Cash: ಎಸ್‌ ಬಿಐನ ಪರಿಷ್ಕೃತ “YONO App” ನಲ್ಲಿ ಏನೇನು ಬದಲಾವಣೆಯಾಗಿದೆ…

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral: ತಾಜ್‌ ಮಹಲ್‌ ಆವರಣದಲ್ಲೇ ಮೂತ್ರ ವಿಸರ್ಜನೆ ಮಾಡಿದ ಪ್ರವಾಸಿಗರು; ತನಿಖೆಗೆ ಆದೇಶ

Viral: ತಾಜ್‌ ಮಹಲ್‌ ಆವರಣದಲ್ಲೇ ಮೂತ್ರ ವಿಸರ್ಜನೆ ಮಾಡಿದ ಪ್ರವಾಸಿಗರು; ತನಿಖೆಗೆ ಆದೇಶ

Juice Vendor Arrested For Mixing Urine In Drinks

U.P: ಜ್ಯೂಸ್‌ಗೆ ಮೂತ್ರ ಬೆರೆಸಿ ನೀಡುತ್ತಿದ್ದ ವ್ಯಾಪಾರಿ: ಕ್ಯಾನ್‌ನಲ್ಲಿತ್ತು ಮಾನವ ಮೂತ್ರ!

ಚಿಕಿತ್ಸೆಗೆ ಬಂದವನ 23 ಹಲ್ಲನ್ನು ಕಿತ್ತುಹಾಕಿದ ವೈದ್ಯ… ಹೃದಯಾಘಾತದಿಂದ ವ್ಯಕ್ತಿ ಮೃತ್ಯು

Tragedy: ಒಂದೇ ದಿನ 23 ಹಲ್ಲನ್ನು ಕಿತ್ತುಹಾಕಿದ ವೈದ್ಯ… ಹೃದಯಾಘಾತದಿಂದ ವ್ಯಕ್ತಿ ಮೃತ್ಯು

Frog Leg: ಸಮೋಸಾದಲ್ಲಿ ಕಪ್ಪೆಯ ಕಾಲು ಪತ್ತೆ… ಕಂಗಾಲಾದ ಗ್ರಾಹಕ, ವಿಡಿಯೋ ವೈರಲ್

Frog Leg: ಸಮೋಸಾದಲ್ಲಿ ಕಪ್ಪೆಯ ಕಾಲು ಪತ್ತೆ… ಕಂಗಾಲಾದ ಗ್ರಾಹಕ, ವಿಡಿಯೋ ವೈರಲ್

ಅಕ್ರಮ ಮದ್ಯದ ನಾಶದ ವೇಳೆಯೇ ಬಾಟಲಿ ದೋಚಿದ ಮದ್ಯಪ್ರಿಯರು, ಪೊಲೀಸರು ತಬ್ಬಿಬ್ಬು!

ಅಕ್ರಮ ಮದ್ಯದ ನಾಶದ ವೇಳೆಯೇ ಬಾಟಲಿ ದೋಚಿದ ಮದ್ಯಪ್ರಿಯರು, ಪೊಲೀಸರು ತಬ್ಬಿಬ್ಬು!

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.