Viral Video: ಮಗಳ ರಕ್ಷಣೆಗಾಗಿ ತಲೆ ಮೇಲೆ ಸಿಸಿಟಿವಿ ಅಳವಡಿಸಿದ ತಂದೆ.! ಎಲ್ಲಿ ಇದು?
Team Udayavani, Sep 8, 2024, 6:11 PM IST
ಕರಾಚಿ: ಹೆಣ್ಣು ಮಕ್ಕಳ ರಕ್ಷಣೆ ಅಣ್ಣ, ತಮ್ಮ,ಗಂಡ, ತಂದೆಯಿಂದಿಡಿದು ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಕರ್ತವ್ಯ. ಆದರೆ ಇಲ್ಲೊಬ್ಬ ತಂದೆ ತನ್ನ ಮಗಳ ರಕ್ಷಣೆಗಾಗಿ ಕೈಗೊಂಡ ಕ್ರಮ ನೋಡಿದರೆ ಒಮ್ಮೆ ಅಚ್ಚರಿ ಆಗುವುದು ಖಂಡಿತ.
ಯುವತಿಯೊಬ್ಬಳ ತಲೆ ಮೇಲೆ ತಂದೆಯೊಬ್ಬ ಸಿಸಿಟಿವಿ ಅಳವಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ವಿಡಿಯೋವೆಂದು ಹೇಳಲಾಗುತ್ತಿದ್ದು, ತಂದೆ ತನ್ನ ಮಗಳ ರಕ್ಷಣೆಗಾಗಿ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಯಾಕೆ ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಯುವತಿ, “ನನ್ನ ತಂದೆ ಇದನ್ನು ಆಳವಡಿಸಿದ್ದಾರೆ. ಇದರಿಂದ ಅವರಿಗೆ ನಾನು ಎಲ್ಲಿಗೆ ಹೋಗುತ್ತಿದ್ದೇನೆ. ಏನು ಮಾಡುತ್ತಿದ್ದೇನೆ ಎನ್ನುವುದು ಎಲ್ಲವೂ ಗೊತ್ತಾಗುತ್ತದೆ. ಈ ರೀತಿ ಅವರು ಮಾಡುವುದನ್ನು ನಾನು ವಿರೋಧಿಸಿಲ್ಲ” ಎಂದು ಯುವತಿ ಹೇಳಿದ್ದಾಳೆ.
Pakistan🫡😭
pic.twitter.com/Hdql8R2ejt— Ghar Ke Kalesh (@gharkekalesh) September 6, 2024
“ಕರಾಚಿಯಲ್ಲಿ ಅಪ್ಪ – ಮಗಳನ್ನು ಒಬ್ಬ ಶ್ರೀಮಂತ ಕಾರಿನಿಂದ ಢಿಕ್ಕಿ ಹೊಡೆದು ಪರಾರಿ ಆದರು. ಅವರ ಬಳಿ ಸಾಕ್ಷ್ಯಗಳಿದ್ದರೆ ಅವರನ್ನು ಹಿಡಿಯಬಹುದಿತ್ತು. ಇದರಿಂದಾಗಿ ನನ್ನ ಪೋಷಕರು ಇದನ್ನು ಹಾಕಿದ್ದಾರೆ” ಎಂದು ಯುವತಿ ಹೇಳಿದ್ದಾಳೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ “ಇದು ಕೇವಲ ಪಾಕಿಸ್ತಾನದಲ್ಲಿ ಮಾತ್ರ ಸಾಧ್ಯವೆಂದು” ಒಬ್ಬರು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ.
“ಗೂಗಲ್ ಶೀಘ್ರವೇ ಈಕೆಯನ್ನು ಹಾಗೂ ಈಕೆಯ ಕುಟುಂಬವನ್ನು ನೇಮಿಸಿಕೊಳ್ಳಬೇಕೆಂದು” ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
“ಇದರಲ್ಲಿ ಆಶ್ಚರ್ಯವೇನಿಲ್ಲ.. ಪಾಕ್ನ ಸ್ಥಿತಿ ಜಗತ್ತಿಗೆ ಗೊತ್ತಿದೆ.. ಆದರೆ ಅವಳಿಗೆ ಏನಾದರೂ ತೊಂದರೆಯಾದರೆ ಅವಳ ತಂದೆ ಸ್ಥಳದಲ್ಲೇ ಅವಳನ್ನು ರಕ್ಷಿಸುವುದು ಹೇಗೆ?” ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ತಾಜ್ ಮಹಲ್ ಆವರಣದಲ್ಲೇ ಮೂತ್ರ ವಿಸರ್ಜನೆ ಮಾಡಿದ ಪ್ರವಾಸಿಗರು; ತನಿಖೆಗೆ ಆದೇಶ
U.P: ಜ್ಯೂಸ್ಗೆ ಮೂತ್ರ ಬೆರೆಸಿ ನೀಡುತ್ತಿದ್ದ ವ್ಯಾಪಾರಿ: ಕ್ಯಾನ್ನಲ್ಲಿತ್ತು ಮಾನವ ಮೂತ್ರ!
Tragedy: ಒಂದೇ ದಿನ 23 ಹಲ್ಲನ್ನು ಕಿತ್ತುಹಾಕಿದ ವೈದ್ಯ… ಹೃದಯಾಘಾತದಿಂದ ವ್ಯಕ್ತಿ ಮೃತ್ಯು
Frog Leg: ಸಮೋಸಾದಲ್ಲಿ ಕಪ್ಪೆಯ ಕಾಲು ಪತ್ತೆ… ಕಂಗಾಲಾದ ಗ್ರಾಹಕ, ವಿಡಿಯೋ ವೈರಲ್
ಅಕ್ರಮ ಮದ್ಯದ ನಾಶದ ವೇಳೆಯೇ ಬಾಟಲಿ ದೋಚಿದ ಮದ್ಯಪ್ರಿಯರು, ಪೊಲೀಸರು ತಬ್ಬಿಬ್ಬು!
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.