ಸಿಂಗರ್,ನಿರ್ದೇಶಕನನ್ನು ಪ್ರೀತಿಸಿ ಕೊನೆಗೆ ಬ್ಯಾಂಕರ್ ಕೈಹಿಡಿದ ಬಾಲಿವುಡ್ ಚೆಲುವೆ ಶೇಷಾದ್ರಿ!

ಅಂದಿನ ಯುವ ನಟ ಜಾಕಿಶ್ರಾಫ್ ಜತೆ ಹೀರೋ ಸಿನಿಮಾದಲ್ಲಿ ನಟಿಸುವಂತೆ ಅವಕಾಶ ಮಾಡಿಕೊಟ್ಟಿದ್ದರು.

ನಾಗೇಂದ್ರ ತ್ರಾಸಿ, May 9, 2020, 8:21 PM IST

ಸಿಂಗರ್,ನಿರ್ದೇಶಕನನ್ನು ಪ್ರೀತಿಸಿ ಕೊನೆಗೆ ಬ್ಯಾಂಕರ್ ಕೈಹಿಡಿದ ಬಾಲಿವುಡ್ ಚೆಲುವೆ ಶೇಷಾದ್ರಿ

ಮೀನಾಕ್ಷಿ ಶೇಷಾದ್ರಿ ಬಾಲಿವುಡ್ ನ ಚೆಲುವೆ ನಟಿ, ರೂಪದರ್ಶಿ. 1981ರಲ್ಲಿ ಜಪಾನ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಕಿರೀಟ ತೊಟ್ಟಿದ್ದ ಮೀನಾಕ್ಷಿ ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾದಲ್ಲಿ ನಟಿಸಿ ಮೂಲಕ ಜನಪ್ರಿಯತೆ ಪಡೆದಿದ್ದರು. 1983ರಲ್ಲಿ ಬಾಲಿವುಡ್ ನ ಪೈಂಟರ್ ಬಾಬು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. 1983ರಲ್ಲಿ ಸುಭಾಶ್ ಘಾಯ್ ನಿರ್ದೇಶನದ ಹೀರೋ ಸಿನಿಮಾದಲ್ಲಿ ಮೀನಾಕ್ಷಿ ನಟಿಸಿದ್ದು ಅತ್ಯಂತ ಜನಪ್ರಿಯತೆ ತಂದುಕೊಟ್ಟಿತ್ತು.

ಮೀನಾಕ್ಷಿ ಶೇಷಾದ್ರಿ ತಮಿಳು ಕುಟುಂಬದವರಾಗಿದ್ದು ಜಾರ್ಖಂಡ್ ನ (ಅಂದಿನ ಬಿಹಾರದ) ಧನ್ ಬಾದ್ ಸಮೀಪ ಇರುವ ಸಿಂದ್ರಿಯಲ್ಲಿ ಜನಿಸಿದ್ದರು. ಮೀನಾಕ್ಷಿ ಭರತನಾಟ್ಯಂ, ಕೂಚುಪುಡಿ, ಕಥಕ್ ಹಾಗೂ ಒಡಿಸ್ಸಿ ನೃತ್ಯ ಪ್ರವೀಣೆಯಾಗಿದ್ದರು. ಪೈಂಟರ್ ಬಾಬು ಸಿನಿಮಾ ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಸೋತುಹೋಗಿತ್ತು. ಇದು ತೆಲುಗು ಮತ್ತು ಹಿಂದಿ ಎರಡು ಭಾಷೆಯಲ್ಲಿ ತೆರೆಕಂಡಿತ್ತು. ಈ ವೇಳೆ ಮೀನಾಕ್ಷಿ ಶೇಷಾದ್ರಿ ನಟನೆಯನ್ನು ಬಿಡುವ ಹಂತಕ್ಕೆ ಬಂದಿದ್ದರು. ಆದರೆ ಸುಭಾಶ್ ಘಾಯ್ ಪ್ರೋತ್ಸಾಹಿಸಿ ಮತ್ತೊಬ್ಬ ಅಂದಿನ ಯುವ ನಟ ಜಾಕಿಶ್ರಾಫ್ ಜತೆ ಹೀರೋ ಸಿನಿಮಾದಲ್ಲಿ ನಟಿಸುವಂತೆ ಅವಕಾಶ ಮಾಡಿಕೊಟ್ಟಿದ್ದರು. ಈ ಸಿನಿಮಾ ಶೇಷಾದ್ರಿಯನ್ನು ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ನಟಿಯನ್ನಾಗಿ ಮಾಡಿಬಿಟ್ಟಿತ್ತು. ಇದಾದ ಬಳಿಕ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಜತೆ ನಟಿಸುವ
ಆಫರ್ ಶೇಷಾದ್ರಿಗೆ ಸಿಕ್ಕಿತ್ತು. ಹೀಗೆ ಅವಾರಾ ಬಾಪ್ ಸಿನಿಮಾದಲ್ಲಿ ಮೀನಾಕ್ಷಿ ದ್ವಿಪಾತ್ರದಲ್ಲಿ ನಟಿಸಿದ್ದರು.

ಕುಮಾರ್ ಸಾನು ಜತೆಗೆ ಲವ್, ಕೊನೆಗೆ ಬ್ಯಾಂಕರ್ ಕೈಹಿಡಿದ ಶೇಷಾದ್ರಿ!
80ರ ದಶಕದಲ್ಲಿ ಮೀನಾಕ್ಷಿ ಶೇಷಾದ್ರಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು. ಹೀರೋ ಸಿನಿಮಾದ ಮೂಲಕ ಜನಪ್ರಿಯತೆ ಪಡೆದಿದ್ದ ಮೀನಾಕ್ಷಿ ವೃತ್ತಿ ಬದುಕಿನಲ್ಲಿ ದಾಮಿನಿ ಸಿನಿಮಾ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. 1990ರ ದಶಕದಲ್ಲಿ ಮೀನಾಕ್ಷಿ ಶೇಷಾದ್ರಿ ಎಂಬ ಚೆಲುವೆಯ ಬದುಕಿನಲ್ಲಿ ಸಿಂಗರ್ ಕುಮಾರ್ ಸಾನು, ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಕಾಲಿಟ್ಟಿದ್ದರು.

ಮಹೇಶ್ ಭಟ್ ನಿರ್ದೇಶನದ “ಜುರ್ಮ್” ಸಿನಿಮಾದ ಪ್ರೀಮಿಯರ್ ಶೋ ವೇಳೆ ಮೀನಾಕ್ಷಿ ಶೇಷಾದ್ರಿ ಮತ್ತು ಕುಮಾರ್ ಸಾನು ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ಸಿನಿಮಾದ ಜಬ್ ಕೋಯಿ ಬಾತ್ ಬಿಗಡ್ ಜಾಯೇ ಹಾಡನ್ನು ಹಾಡಿದ್ದು ಕುಮಾರ್ ಸಾನು. ಮೀನಾಕ್ಷಿಯ ರೂಪಕ್ಕೆ ಕುಮಾರ್ ಸಾನು ಶರಣಾಗಿಬಿಟ್ಟಿದ್ದರು! ಹೀಗೆ ಸ್ನೇಹಿತರಾಗಿದ್ದ ಸಾನು, ಶೇಷಾದ್ರಿ ನಿಕಟರಾಗಿಬಿಟ್ಟಿದ್ದರು. ಸುಮಾರು ಮೂರು ವರ್ಷಗಳ ಕಾಲ ತಮ್ಮ ಸಂಬಂಧವನ್ನು ರಹಸ್ಯವಾಗಿ ಇಟ್ಟಿದ್ದರು!

ಬಾಲಿವುಡ್ ನ ಹೆಸರಾಂತ ಸಿಂಗರ್ ಆಗಿದ್ದ ಕುಮಾರ್ ಸಾನು ಅದಾಗಲೇ ರೀಟಾ ಭಟ್ಟಾಚಾರ್ಯಳನ್ನು ವಿವಾಹವಾಗಿದ್ದರು. ಕುಮಾರ್ ಸಾನು ಪ್ರಸಿದ್ಧ ನಟಿಯಾಗಿದ್ದ ಮೀನಾಕ್ಷಿ ಶೇಷಾದ್ರಿ ಜತೆ ಅಫೇರ್ ಇಟ್ಟುಕೊಂಡ ಬಗ್ಗೆ ಕುಮಾರ್ ಕಾರ್ಯದರ್ಶಿ ನೀಡಿದ್ದ ಸಂದರ್ಶನದಿಂದ ಬಯಲಾಗಿತ್ತು. ಕುಮಾರ್ ಸಾನು ಅವರಿಗೆ ಹಲವು ಪ್ರೇಯಸಿರು, ಆದರೆ ಈಗ ಖ್ಯಾತ ನಟಿ ಮೀನಾಕ್ಷಿ ಶೇಷಾದ್ರಿ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಸಂದರ್ಶನ ಓದಿದ ನಂತರ ಕುಮಾರ್ ಸಾನು ಪತ್ನಿ ಗಂಡನನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೂಡಲೇ ಯೂಟರ್ನ್ ಹೊಡೆದ ಕುಮಾರ್ ಸಾನು ಈ ಸಂದರ್ಶನದಲ್ಲಿ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಮೀನಾಕ್ಷಿ ಜತೆ ಯಾವುದೇ ಅಫೇರ್ ಇಲ್ಲ ಅಂತ ಹೇಳಿಕೆ ಕೊಟ್ಟುಬಿಟ್ಟಿದ್ದರು. ಮೀನಾಕ್ಷಿ ವಿರುದ್ಧ ಸಾನು ಪತ್ನಿ ರೀಟಾ ಕೀಳುಮಟ್ಟದಲ್ಲಿ ಬೈದುಬಿಟ್ಟಿದ್ದರು. ರೀಟಾ ಅವರ ಆರೋಪದ ಪ್ರಕಾರ, ಕುಮಾರ್ ಸಾನು ತನ್ನ ಎಲ್ಲಾ ಹಣವನ್ನು ಮೀನಾಕ್ಷಿಗೆ ವ್ಯಯಿಸಿದ್ದು, ಲೈಂಗಿಕವಾಗಿ ಕಾಲಕಳೆದಿದ್ದರು ಎಂದು ಹೇಳಿದ್ದರು. ಕೊನೆಗೆ 1994ರಲ್ಲಿ ರೀಟಾ ಮತ್ತು ಕುಮಾರ್ ಸಾನು ವಿವಾಹ ವಿಚ್ಚೇದನ ಪಡೆದುಕೊಳ್ಳುವಂತಾಯ್ತು!

ಅಹಿತಕರವಾದ ಡೈವೋರ್ಸ್ ನಿಂದ ಮೀನಾಕ್ಷಿ ಮತ್ತು ಕುಮಾರ್ ಸಂಬಂಧದ ನಡುವೆ ಸಮಸ್ಯೆ ತಂದುಬಿಟ್ಟಿತ್ತು. ರೀಟಾಳಿಂದ ಡೈವೋರ್ಸ್ ಪಡೆದ ನಂತರ ಕುಮಾರ್ ಸಾನು ಮೀನಾಕ್ಷಿ ನಡುವಿನ ಸಂಬಂಧವೂ ಹಳಸಿ ಹೋಗುವಂತಾಯ್ತು! ಏತನ್ಮಧ್ಯೆ 1990ರಲ್ಲಿ ಸನ್ನಿ ಡಿಯೋಲ್ ನಟನೆಯ ಘಾಯಲ್ ಸಿನಿಮಾದಲ್ಲಿ ನಟಿಸುವ ವೇಳೆ ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಜತೆ ಮೀನಾಕ್ಷಿ ಶೇಷಾದ್ರಿ ನಡುವೆ ಪ್ರೇಮ ಪುರಾಣ ಶುರುವಾಗಿತ್ತು. ಅದಕ್ಕೆ ಕಾರಣ ಘಾಯಲ್ ಸಿನಿಮಾ ಯಶಸ್ವಿಯಾದ ನಂತರ ಸಂತೋಷಿ ನೇರವಾಗಿ ಮೀನಾಕ್ಷಿ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರಂತೆ! ಮೀನಾಕ್ಷಿ ಈ ಪ್ರಸ್ತಾಪವನ್ನು ಪ್ರೀತಿಯಿಂದಲೇ ನಿರಾಕರಿಸಿದಾಗ ರಾಜ್ ಕುಮಾರ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರಂತೆ. ನಂತರ ಸಂದರ್ಶನದಲ್ಲಿ ಕೇಳಿದ್ದ ಪ್ರಶ್ನೆಗೆ, ಹೌದು ನಾನು ಮೀನಾಕ್ಷಿಯನ್ನು ಪ್ರೀತಿಸಿದ್ದೆ, ಆದರೆ ಆಕೆ ಅದನ್ನು ನಿರಾಕರಿಸಿದ್ದಳು. ಇಲ್ಲದಿದ್ದರೆ ನಾನು ಮದುವೆಯಾಗಬೇಕೆಂದಿದ್ದೆ ಎಂದು ಸ್ಪಷ್ಟೀಕರಣ ನೀಡಿದ್ದರು.

ಮೀನಾಕ್ಷಿ ಮತ್ತು ರಾಜ್ ಕುಮಾರ್ ಸಂತೋಷಿ ನಡುವೆ ದೀರ್ಘ ದೂರವಾಣಿ ಮಾತುಕತೆ, ದೂರ ಪ್ರಯಾಣ, ಸಹಲೆ, ಚರ್ಚೆ ನಡೆದಿದ್ದವು. ಕೊನೆಗೆ ರಾಜ್ ಕುಮಾರ್ ಪ್ರಪೋಸಲ್ ಅನ್ನು ಮೀನಾಕ್ಷಿ ಒಪ್ಪಿದ್ದಳು. ಅಲ್ಲದೇ ತನ್ನ ಆಘ್ ಔರ್ ಸುಹಾಗ್ ಸಿನಿಮಾಕ್ಕೆ ಆರ್ಥಿಕ ನೆರವು ನೀಡುವಂತೆ ಮೀನಾಕ್ಷಿ ರಾಜ್ ಕುಮಾರ್ ಬಳಿ ಕೇಳಿದಾಗ ಒಪ್ಪಿಕೊಂಡಿದ್ದರು. ಆದರೆ ಸಿನಿಮಾದ ಜಾಹೀರಾತು ಹೊರಬಿದ್ದಾಗ ರಾಜ್ ಕುಮಾರ್ ನೇರವಾಗಿ ಮೀನಾಕ್ಷಿ ತಾಯಿ ಜತೆ ಆಕ್ರೋಶಿತರಾಗಿ ಮಾತನಾಡಿದ್ದರು. ನಾನು ನಿಮ್ಮ ಮಗಳ ಬಳಿ ಮದುವೆಯಾಗು ಎಂದು ಕೇಳಿದ್ದೇನೆ ಹೊರತು ಬೇರೆ ಏನು ಆಫರ್ ಕೊಟ್ಟಿಲ್ಲ ಎಂದು ಕೂಗಾಡಿದ್ದರು. ಹೀಗೆ ಇಬ್ಬರ ನಡುವಿನ ಸಂಬಂಧವೂ ಬಿರುಕು ಬಿಟ್ಟು ಹೋಗಿತ್ತು.

ಅಂತೂ ಕೊನೆಗೆ ನಟನೆಗೆ ಗುಡ್ ಬೈ ಹೇಳಿದ ಮೀನಾಕ್ಷಿ ಶೇಷಾದ್ರಿ 1995ರಲ್ಲಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಹರೀಶ್ ಮೈಸೂರು ಅವರನ್ನು ವಿವಾಹವಾಗಿದ್ದರು. ಮೀನಾಕ್ಷಿ ಹರೀಶ್ ದಂಪತಿಗೆ ಇಬ್ಬರು ಗಂಡು ಹಾಗೂ ಒಬ್ಬಳು ಮಗಳು. ಶೇಷಾದ್ರಿ ಪ್ರಸ್ತುತ ಅಮೆರಿಕಾದ ಟೆಕ್ಸಾಸ್ ನಲ್ಲಿ ವಾಸವಾಗಿದ್ದಾರೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1

ಬಚ್ಚನ್, ಮೋಹನ್‌ಲಾಲ್‌ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.